ದ್ವಿತೀಯ ಪಿಯುಸಿ ಕನ್ನಡ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ನೋಟ್ಸ್ | 2nd Puc Kannada Innu Huttadeyirali Nariyarennavolu Notes

2nd Puc Kannada Innu Huttadeyirali Nariyarennavolu Notes Question and Answer Summery Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಕನ್ನಡ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ನೋಟ್ಸ್ ಪ್ರಶ್ನೋತ್ತರಗಳು Innu huttadeyirali nariyarennavolu summary in Kannada second puc innu huttadeyirali nariyarennavolu kannada question answer ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಸಾರಾಂಶ 2nd Puc Kannada Notes ದ್ವಿತೀಯ ಪಿಯುಸಿ ಕನ್ನಡ ನೋಟ್ಸ್‌ 2nd puc kannada innu huttadeyirali nariyarennavolu saramsha 2nd puc kannada 3rd poem summary 2nd puc kannada 3rd poem question answer

– ಕುಮಾರವ್ಯಾಸ

Innu Huttadeyirali Nariyarennavolu

ಕವಿ ಪರಿಚಯ:

ಕುಮಾರವ್ಯಾಸ ಕವಿಯು ಕನ್ನಡ ನಾಡಿನ ಅದ್ವಿತೀಯ ಕವಿ ಎಂದು ಪ್ರಸಿದ್ದನಾಗಿದ್ದಾನೆ. ‘ಕುಮಾರವ್ಯಾಸ’ ಎಂಬುದು ಗದುಗಿನ ನಾರಣಪ್ಪನ ಅಂಕಿತ, ವ್ಯಾಸರ ಮಹಾಭಾರತವನ್ನು ತನ್ನದೇ ಆದ ರೀತಿಯಲ್ಲಿ ನೋಡಿ ಅದನ್ನು ‘ಕರ್ಣಾಟ ಭಾರತ ಕಥಾಮಂಜರಿ’ಯನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಅತ್ಯಂತ ನಮ್ರತೆಯಿಂದ ಕವಿ ತನ್ನನ್ನು ‘ವ್ಯಾಸರ ಕುಮಾರ’ ಎಂದು ಕರೆದುಕೊಂಡಿರುವುದು ಸಮಂಜಸವಾಗಿದೆ. ಕುಮಾರವ್ಯಾಸ ಕವಿಯು ಗದುಗಿನ ಬಳಿ ಇರುವ ಕೋಳಿವಾಡ ಎಂಬ ಗ್ರಾಮದವನು. ಇವನ ಕಾಲ ಕ್ರಿ.ಶ. ಹದಿನೈದನೆಯ ಶತಮಾನವೆಂದು ಬಹುಜನ ವಿದ್ವಾಂಸರು ಒಪ್ಪಿದ್ದಾರೆ. ಕುಮಾರವ್ಯಾಸ ಕವಿಯು ವ್ಯಾಸರ ಮೊದಲ ಹತ್ತು ಪರ್ವಗಳ ಕಥೆಯನ್ನು ಮಾತ್ರ ಕನ್ನಡಿಸಿದ್ದಾನೆ.

ಕುಮಾರವ್ಯಾಸ ಕವಿ ಜನತಾಕವಿ; ಸಾಮಾನ್ಯ ಜನರು ಇವನ ಕಾವ್ಯಕ್ಕೆ ಮಾರುಹೋಗಿರುವಷ್ಟು ಇತರ ಯಾವ ಕವಿಗಳ, ಯಾವ ಕಾವ್ಯಕ್ಕೂ ಮಾರುಹೋಗಿಲ್ಲ. ಇವನು ರಚಿಸಿದ ಈ ಹಾಡುಗಬ್ಬದ ಪದ್ಯಗಳನ್ನು ಕೇಳದ-ಹಾಡದ ಕನ್ನಡಿಗರೇ ಇಲ್ಲವೆನ್ನುವುದು ಉತ್ಪ್ರೇಕ್ಷೆಯಲ್ಲ. ಭಾಮಿನಿ ಷಟ್ಟದಿಯಲ್ಲಿ ಇಡೀ ಕಾವ್ಯವನ್ನು ರಚಿಸಿರುವ ಕುಮಾರವ್ಯಾಸ ರೂಪಕಾಲಂಕಾರಗಳನ್ನು ಬಳಸುವುದರಲ್ಲಿ ನಿಪುಣನೆನಿಸಿದ್ದನು. ಆದುದರಿಂದ ಇವನನ್ನು ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎನ್ನುತ್ತಾರೆ. ನಡುಗನ್ನಡ ಭಾಷೆಯನ್ನು ಕಾವ್ಯಕ್ಕೆ ದುಡಿಸಿಕೊಂಡ ಕುಮಾರವ್ಯಾಸನ ಶೈಲಿ, ಭಾಷೆ, ಪದಪ್ರಯೋಗ, ಚಿತ್ರ ನಿರ್ಮಾಣ ಶಕ್ತಿ, ನೂತನ ಸನ್ನಿವೇಶ ರಚನೆಗಳನ್ನು ಮಾಡುವುದರಲ್ಲಿ ಅದ್ಭುತ ಪ್ರತಿಭೆಯನ್ನು ತೋರಿರುವನು. ಆದುದರಿಂದಲೇ ಕುವೆಂಪು ಅವರು ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು. ಭಾರತ ಕಣ್ಣಲಿ ಕುಣಿಯುವುದು, ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು ಎಂದು ಹೇಳಿದ್ದಾರೆ. ಶ್ರೇಷ್ಠ ಕವಿಗಳು ಒಂದು ದೇಶದಲ್ಲಿ ಭುವನದ ಭಾಗ್ಯದಿಂದ ಹುಟ್ಟುವರೆಂಬ ಮಾತು ಕುಮಾರವ್ಯಾಸನ ವಿಷಯದಲ್ಲಿ ಸಂಪೂರ್ಣ ಸತ್ಯವೆನಿಸುತ್ತದೆ.

ಆಕರ: ‘ಕರ್ಣಾಟ ಭಾರತ ಕಥಾಮಂಜರಿ’.

ಕಾವ್ಯಭಾಗದ ಹಿನ್ನೆಲೆ

ಪ್ರಸ್ತುತ ಕಾವ್ಯಭಾಗವನ್ನು ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬ ಮಹಾಕಾವ್ಯದ ವಿರಾಟಪರ್ವದಿಂದ ಆಯ್ದುಕೊಳ್ಳಲಾಗಿದೆ. ಪಾಂಡವರು ವನವಾಸವನ್ನು ಪೂರೈಸಿ ಕೊನೆಯ ಒಂದು ವರ್ಷದ ಅಜ್ಞಾತವಾಸವನ್ನು ವಿರಾಟರಾಯನ ಆರಮನೆಯಲ್ಲಿ ಕಳೆಯಬಯಸುತ್ತಾರೆ. ವಿವಿಧ ವೇಷಗಳೊಂದಿಗೆ ಪಾಂಡವರು ವಿರಾಟನ ಆರಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಾಗ ದೌಪದಿಯು ‘ಸೈರಂಧ್ರಿ’ ಎಂಬ ಹೆಸರಿನಲ್ಲಿ ಸುದೇಷ್ಣೆಯ ಕೇಶಶೃಂಗಾರ ಮಾಡುವವಳಾಗಿ ಸೇರಿಕೊಳ್ಳುತ್ತಾಳೆ. ಸುದೇಷ್ಟೆಯ ತಮ್ಮನಾದ ಕೀಚಕನ ಕಾಮದೃಷ್ಟಿ ಬ್ರೌಪದಿಯ ಮೇಲೆ ಬಿದ್ದು ಅವಳನ್ನು ಕಾಡತೊಡಗುತ್ತಾನೆ. ಸೈರಂದ್ರಿಯು ವಿರೋಧಿಸಿದಾಗ ಕೀಚಕನು ಅವಳ ಗಂಡರೆದುರೇ ಕಾಲಿನಿಂದ ಒದೆಯುವನು. ಇದರಿಂದ ತೀವ್ರವಾಗಿ ನೊಂದ ದೌಪದಿಯು ಕೀಚಕನ ಉಪಟಳದಿಂದ ಪಾರು ಮಾಡೆಂದು ತನ್ನ ಗಂಡನಾದ ಭೀಮನನ್ನು ಕೆರಳಿಸುವ ಸಂದರ್ಭವನ್ನು ಪ್ರಸ್ತುತ ಕಾವ್ಯಭಾಗದಲ್ಲಿ ಕಾಣಬಹುದು

೧) ಎನ್ನವೊಲು ಮುನ್ನಾರು ನವೆದವರುಂಟು.

ಈ ಮೇಲಿನ ವಾಕ್ಯವನ್ನು ಕುಮಾರವ್ಯಾಸನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದ ‘ಇನ್ನ ಹುಟ್ಟಿದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಿಂದ ಸ್ವೀಕರಿಸಲಾಗಿದೆ.

ಕೀಚಕನ ಉಪಟಳದಿಂದ ನೊಂದಿರುವ ಬ್ರೌವದಿಯು ಹೇಳಿರುವ ಮಾತಿದು, ತನ್ನ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಲಿ? ಯಾರ ಬಳಿ ಹೋಗಲಿ? ಯಾರನ್ನು ಕೇಳಲಿ? ಯಾರನ್ನು ಬೇಡಲಿ? ಎಂದೆಲ್ಲಾ ಗೋಳಿಡುವ ಬ್ರೌಪದಿಯು ಹೆಣ್ಣು ಜನ್ಮವನ್ನು ಸುಡಲಿ ಎಂದುಕೊಳ್ಳುತ್ತಾಳೆ, ಇದುವರೆಗೆ ಯಾರೂ ನನ್ನಂತೆ ಕಷ್ಟಗಳನ್ನು ಅನುಭವಿಸಿದವರಿಲ್ಲ ಎರದ. ಯೋಚಿಸುವ ಆಕೆ ತನಗೆ ಮರಣವಾದರೂ ಬರಬಾರದೇಕೆ ಎಂದು ಹಂಬಲಿಸುವ ಸಂದರ್ಭವಿದಾಗಿದೆ.

೨) ಯಮಸುತಂಗರುಹುವೆನೆ ಧರ್ಮಕ್ಷಮೆಯ ಗರಹೊಡೆದಿಹುದು.

‘ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಲ್ಲಿ ಬ್ರೌಪದಿಯು ತನ್ನಲ್ಲಿಯೇ ಈ ವಾಕ್ಯವನ್ನು ಹೇಳಿಕೊಳ್ಳುತ್ತಾಳೆ.

ಕೀಚಕನ ಕಾಟದಿಂದ ಪಾರುಮಾಡೆಂದು ಕೇಳಲು ತನ್ನ ಗಂಡಂದಿರಲ್ಲಿ ಮೊದಲು ಧರ್ಮಜನನ್ನು ನೆನಪಿಸಿಕೊಳ್ಳುತ್ತಾಳೆ. ಯಮಸುತನಾದ ಅವನ ಬಳಿ ಹೇಳೋಣವೆಂದರೆ ಅವನಿಗೆ ಧರ್ಮ ಮತ್ತು ಕ್ಷಮೆಗಳೆಂಬ ಗ್ರಹ ಹಿಡಿದಿದೆ ಎಂದು ದ್ರೌಪದಿ ಹೇಳಿಕೊಳ್ಳುತ್ತಾಳೆ. ಯುಧಿಷ್ಠಿರ ಯಾವಾಗಲೂ ಧರ್ಮಮಾರ್ಗದಲ್ಲಿ ನಡೆಯುವವನು ಮತ್ತು ಇತರರನ್ನು ಕ್ಷಮಿಸುವ ಗುಣವುಳ್ಳವನು. ಅವನ ಬಳಿ ಕೀಚಕನ ಬಗ್ಗೆ ದೂರು ಸಲ್ಲಿಸಿದರೆ ಉಪಯೋಗವಿಲ್ಲವೆಂದು ದ್ರೌಪದಿ ಯೋಚಿಸುವು ಸಂದರ್ಭವಿದಾಗಿದೆ.

೩) ಕಲಿ ಭೀಮನೇ ಮಿಡುಕುಳ್ಳ ಗಂಡನು.

‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಲ್ಲಿ ದ್ರೌಪದಿಯು ಹೇಳುವ ಈ ಮೇಲಿನ ವಾಕ್ಯವನ್ನು ಕಾಣಬಹುದು.

ಕೀಚಕನ ಕಾಟವನ್ನು ನಿವಾರಿಸಲು ತನ್ನ ಪತಿಗಳಲ್ಲಿ ಯಾರು ಸಮರ್ಥರೆಂದು ದ್ರೌಪದಿಯು ತನ್ನಲ್ಲಿಯೇ ಚಿಂತಿಸುತ್ತಾಳೆ. ಅವಳಿಗೆ ಧರ್ಮರಾಯ, ಅರ್ಜುನ, ನಕುಲ-ಸಹದೇವರಿಂದ ಈ ವಿಚಾರದಲ್ಲಿ ತನಗೆ ಪ್ರಯೋಜನ ವಿಲ್ಲವೆಂಬುದು ಅರಿವಾಗುತ್ತದೆ. ನಂತರ ಅವಳು ಐವರಲ್ಲಿ ಕಲಿಭೀಮನೇ ಪೌರುಷವಂತನಾದ ಸಹಾನುಭೂತಿಯುಳ್ಳ ಗಂಡನು ಅವನಿಂದ ಈ ತೊಂದರೆ ನಿವಾರಣೆಯಾಗಬಹುದು ಎಂಬ ಭರವಸೆ ಮೂಡುವ ಸಂದರ್ಭದಲ್ಲಿ ಈ ವಾಕ್ಯ ಮೂಡಿಬಂದಿದೆ.

೪) ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ.

ಕವಿ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದ ‘ಇನ್ನು ಹುಟ್ಟಿದೆಯಿರಲಿ ನಾರಿಯರನ್ನವೊಲು’ ಎಂಬ ಕಾವ್ಯಭಾಗದಲ್ಲಿ ದ್ರೌಪದಿಯು ಹೇಳುವ ಈ ಮೇಲಿನ ಮಾತುಗಳಿವೆ.

ದ್ರೌಪದಿಯು ಕೀಚಕನು ಕಾಲಿನಿಂದ ಒದ್ದು ಮಾಡಿದ ಅಪಮಾನದಿಂದ ನೊಂದಿದ್ದಾಳೆ. ಯಾರು ತನ್ನನ್ನು ಇದರಿಂದ ಪಾರುಮಾಡಬಲ್ಲರೆಂಬುದನ್ನು ಯೋಚಿಸುವಾಗ ಅವಳಿಗೆ ಅಂತಿಮವಾಗಿ ತನ್ನ ಐವರು ಪತಿಗಳಲ್ಲಿ ಭೀಮನೇ ಇದಕ್ಕೆ ಅರ್ಹನಾದವನೆನಿಸುತ್ತದೆ. ಅವನು ಒಂದು ವೇಳೆ ಈ ಕಷ್ಟದಿಂದ ಪಾರುಮಾಡದೆ ಹೋದರೆ ನಾನು ಘೋರತರವಾದ ವಿಷವನ್ನು ಕುಡಿದು ಪ್ರಾಣಬಿಡುವೆನೆಂದು ಅವಳು ಯೋಚಿಸುತ್ತಾಳೆ. ನೊಂದ ಹೆಣ್ಣಿನ ಅಸಹಾಯಕತೆ ಇಲ್ಲಿ ವ್ಯಕ್ತವಾಗಿದೆ.

೫) ನೀನಲ್ಲುಳಿದವರುಚಿತ ಬಾಹಿರರು.

‘ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಲ್ಲಿ ದ್ರೌಪದಿಯು ಭೀಮನನ್ನು ಉದ್ದೇಶಿಸಿ ಈ ವಾಕ್ಯವನ್ನಾಡುತ್ತಾಳೆ.

ಕೀಚಕನನ್ನು ಕೊಲ್ಲಲು ಭೀಮನೇ ಸಮರ್ಥನೆಂದು ಅವನನ್ನು ಹೊಗಳುವ ದ್ರೌಪದಿಯು, ತನ್ನ ಉಳಿದ ನಾಲ್ವರು ಗಂಡಂದಿರನ್ನು ಭೀಮನೆದುರು ಹೀಯಾಳಿಸುತ್ತಾಳೆ. ನೀನೊಬ್ಬನೇ ನನಗೆ ತಕ್ಕ ಗಂಡ. ಉಳಿದವರು ನನ್ನೊಂದಿಗೆ ರಮಿಸುತ್ತಾರೆ. ಆದರೆ ನನ್ನ ಮಾನ ಕಾಪಾಡುವ ಸಂದರ್ಭ ಬಂದಾಗ ಮಾತ್ರ ಹೇಳದೆ ಕೇಳದೆ ಓಡುತ್ತಾರೆ. ಅವರಾರೂ ಯೋಗ್ಯರಲ್ಲ. ನೀನೊಬ್ಬನೇ ನನಗೆ ಯೋಗ್ಯನಾದ ಗಂಡನೆಂದು ಭೀಮನಿಗೆ ಹೇಳುವ ಸಂದರ್ಭವಿದಾಗಿದೆ.

೬) ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು.

ಕವಿ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದ ‘ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಇದನ್ನು ಭೀಮನು ದ್ರೌಪದಿಗೆ ಹೇಳುತ್ತಾನೆ.

ದ್ರೌಪದಿಯು ತನಗೆ ಸಹಾಯ ಮಾಡೆಂದು ಭೀಮನನ್ನು ಕೇಳುತ್ತಾಳೆ. ಆಗ ಭೀಮನು “ನಿನಗೆ ಇನ್ನೂ ನಾಲ್ವರು ಪತಿಗಳಿರುವರು. ಅವರೆಲ್ಲ ನಿನ್ನೊಂದಿಗೆ ರಮಿಸಲು ಮಾತ್ರ ಉತ್ಸುಕರು. ಕಷ್ಟದಿಂದ ಪಾರುಮಾಡಲು ನಾನೇ? ‘ಯಾರೋ ಕಷ್ಟಪಟ್ಟು ಗಳಿಸಿದರೆ, ಇನ್ಯಾರೋ ಅದನ್ನು ಉಂಡು ಜಾರಿಕೊಳ್ಳುವರೆಂಬ’ ಮಾತಿನಂತಾಗಿದೆ” ಎಂದು ಉಳಿದ ಸಹೋದರರ ವರ್ತನೆಯನ್ನು ಗಾದೆಮಾತಿನ ಮೂಲಕ ಭೀಮನು ವಿಡಂಬಿಸಿದ್ದಾನೆ.

೭) ಒಬ್ಬಳನಾಳಲಾರಿರಿ ಗಂಡರೋ ನೀವ್ ಭಂಡರೋ.

‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಲ್ಲಿ ದ್ರೌಪದಿಯು ಭೀಮನಿಗೆ ಹೇಳುವ ಮಾತಿದು. ಭೀಮನು ಧರ್ಮಜನ ಭಯ ತನಗಿರುವುದರಿಂದ ದ್ರೌಪದಿಗೆ ನೆರವು ನೀಡಲಾರೆನೆಂದಾಗ ದ್ರೌಪದಿಗೆ ರೋಷಮೂಡಿ ‘ಒಬ್ಬ ಗಂಡನಿದ್ದರೂ ಹೆಂಡತಿಯ ಮಾನದ ರಕ್ಷಣೆಯ ವಿಚಾರ ಎದುರಾದಾಗ ಶತ್ರುವಿನೊಡನೆ ಹೋರಾಡುತ್ತಾನೆ, ಇಲ್ಲವೇ ಸಾಯುತ್ತಾನೆ. ನನಗೆ ಮೂರುಲೋಕದ ವೀರರಾದ ಐವರು ಗಂಡರಿದ್ದೀರಿ. ನನ್ನೊಬ್ಬಳನ್ನು ಆಳಲಾರಿರಿ. ನೀವೇನು ಗಂಡಸರೋ ಇಲ್ಲ ಭಂಡರೋ?” ಎಂದು ಕೋಪಾವಿಷ್ಟಳಾಗಿ ನುಡಿಯುವಳು.

೮) ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಭಂಗಿತರು.

ಕುಮಾರವ್ಯಾಸ ಕವಿಯು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದ ಈ ಮೇಲಿನ ವಾಕ್ಯವನ್ನು ಇದೇ ಶೀರ್ಷಿಕೆಯ ಕಾವ್ಯಭಾಗದಿಂದ ಸ್ವೀಕರಿಸಿದೆ. ದ್ರೌಪದಿಯು ಹತಾಶೆಯಿಂದ ಭೀಮನೆದುರು ನುಡಿಯುವ ಮಾತುಗಳಿವು.

ಭೀಮನು ತನ್ನ ಅಣ್ಣನಾದ ಧರ್ಮರಾಯನ ಆಜ್ಞೆಯ ಹಗ್ಗವು ತನ್ನನ್ನು ಕಟ್ಟಿಹಾಕಿರುವುದರಿಂದ ನೆರವು ನೀಡಲಾಗದೆಂದು ದ್ರೌಪದಿಗೆ ಹೇಳುತ್ತಾನೆ. ಹತಾಶಳಾದ ದ್ರೌಪದಿಯು ಗೋಳಿಡುತ್ತ, ಇನ್ನು ಈ ಭೂಮಿಯ ಮೇಲೆ ತನ್ನಂತೆ ಕಷ್ಟಪಡುವ ಯಾವ ಹೆಣ್ಣೂ ಹುಟ್ಟದಿರಲಿ ಎನ್ನುತ್ತಾಳೆ. ತನಗೊದಗಿದ ಇಂತಹ ಕಷ್ಟಗಳು-ಅಪಮಾನ ನೋವುಗಳು ಇನ್ನು ಯಾರಿಗೂ ಬರಬಾರದೆಂಬ ಆಶಯ ಅವಳ ಈ ಮಾತಿನಲ್ಲಿದೆ.

೯) ಕೂಳುಗೇಡಿಂಗೊಡಲ ಹೊರುವಿರಿ.

ಕವಿ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದ ‘ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಿಂದ ಸ್ವೀಕರಿಸಿರುವ ಈ ಮೇಲಿನ ವಾಕ್ಯವನ್ನು ದ್ರೌಪದಿಯು ಕೋಪದಿಂದ ಭೀಮನಿಗೆ ಹೇಳುತ್ತಾಳೆ

“ಪಾಂಡವರು ಮನಸ್ಸು ಮಾಡಿದರೆ ಕೆರಳಿದ ಯಮನನ್ನೇ ನಾಶಮಾಡುವ ಪರಾಕ್ರಮಿಗಳು. ಆದರೆ ಒಬ್ಬ ಹೆಂಡತಿಯನ್ನು ರಕ್ಷಿಸಲಾಗದ ಪಾಪಿಗಳು. ಅಪಕೀರ್ತಿಗೂ ಹೆದರದವರು. ನಿಮಗೆ ತೋಳ್ಬಲ ಬೇರೆ ಕೇಡಿಗೆ. ನೀವೇಕೆ ಕ್ಷತ್ರಿಯ ವಂಶದಲ್ಲಿ ಜನಿಸಿದಿರಿ? ನಿಮಗೆ ಅನ್ನ ಹಾಕುವುದೂ ದಂಡಕ್ಕೆ” ಎಂದು ಕೋಪ-ಉದ್ವೇಗಗಳಿಂದ ನುಡಿವಳು.

೧೦) ಹಗೆಗಳನ್ನು ಹಿಂಡಿದನು ಮನದೊಳಗೆ.

ಕುಮಾರವ್ಯಾಸ ಕವಿಯ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದು ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲ್ಲ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.

ದ್ರೌಪದಿಯು ಕೀಚಕನ ಉಪಟಳವನ್ನು ಭೀಮನಿಗೆ ಹೇಳಿ ದುಃಖವನ್ನು ತೋಡಿಕೊಂಡಾಗ ಭೀಮನು ಮೊದಲಿಗೆ ಧರ್ಮಜನ ಆಜ್ಞೆಯ ಪ್ರಸ್ತಾಪ ಮಾಡುವನು. ದ್ರೌಪದಿಯು ಭೀಮನ ಮತ್ತು ಉಳಿದ ಪಾಂಡವರ ಪೌರುಷವನ್ನು ಮೂದಲಿಸಿ ಮಾತನಾಡಿದಾಗ ಭೀಮನ ಅಂತಃಕರಣದ ರೋಷದ ಘನತೆ ಹೆಚ್ಚಿತು ಅವನು ಹಗೆಗಳನ್ನು ತನ್ನ ಮನದೊಳಗೆ ಹಿಂಡಿಹಾಕುವಂತೆ ಕಲ್ಪಿಸಿಕೊಂಡನು. ಬ್ರೌಪದಿಗಾದ ಅಪಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ನಿರ್ಧಾರಕ್ಕೆ ಬಂದು ಆಕೆಯನ್ನು ಸಂತೈಸುವ ಸಂದರ್ಭವಿದಾಗಿದೆ.

೧೧) ಎಮ್ಮಣ್ಣನಾಜ್ಞೆಯ ಗೆರೆಯ ದಾಂಟಿದೆ ದಾಂಟಿದೆನು.

ಕುಮಾರವ್ಯಾಸ ಭಾರತದಿಂದಾಯ್ದಿರುವ ‘ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಿಂದ ಈ ಮೇಲಿನ ಮಾತನ್ನು ಸ್ವೀಕರಿಸಲಾಗಿದೆ. ಭೀಮನು ದ್ರೌಪದಿಯನ್ನುದ್ದೇಶಿಸಿ ಹೇಳುವ ಮಾತಾಗಿದೆ

ದ್ರೌಪದಿಯು ಕೀಚಕನ ಉಪಟಳದಿಂದ ಪಾರುಮಾಡದಿದ್ದರೆ ತಾನು ಘೋರವಾದ ವಿಷವನ್ನು ಕುಡಿದು ಪ್ರಾಣಬಿಡುವುದಾಗಿ ಪರಿಪರಿಯಾಗಿ ಭೀಮನ ಮುಂದೆ ದುಃಖಿಸಿದಳು. ದ್ರೌಪದಿಯ ಮಾತಿನಿಂದ ಭೀಮನ ಮನಸ್ಸು ಕರಗಿತಲ್ಲದೆ, ಅವನೂ ಕಂಬನಿದುಂಬಿದನು. ದ್ರೌಪದಿಯ ಅಳುವನ್ನು ತೊಡೆದುಹಾಕುತ್ತಾ “ರಾಣಿ, ಇನ್ನು ಸಿಟ್ಟನ್ನು ಬಿಟ್ಟುಬಿಡು, ನಾನು ಹೆಚ್ಚಿಗೆ ಏನನ್ನು ಹೇಳಲಾರೆ. ನಮ್ಮಣ್ಣನ ಆಜ್ಞೆಯ ಗೆರೆಯನ್ನು ದಾಟಿದೆ ದಾಟಿದೆ’ ಎಂದು ಹೇಳುವ ಮೂಲಕ ಎಲ್ಲ ಅಡ್ಡಿಗಳನ್ನೂ ದಾಟಿ ತಾನು ದ್ರೌಪದಿಯ ನೆರವಿಗೆ ಬರುವುದಾಗಿ ಹೇಳಿರುವ ಸಂದರ್ಭವಿದಾಗಿದೆ

೧೨) ರಾಯನಾಜ್ಞೆಯ ಕಣ್ಣಿಯಲಿ ಬಿಗಿವಡೆದು ಕೆಡೆದೆವು.

ಕವಿ ಕುಮಾರವ್ಯಾಸನು ಬರೆದಿರುವ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದ ‘ಇನ್ನು ಹುಟ್ಟಿದ ಇರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಲ್ಲಿ ಭೀಮನು ದ್ರೌಪದಿಯನ್ನುದ್ದೇಶಿಸಿ ಈ ಮೇಲಿನ ಮಾತನ್ನು ಆಡುತ್ತಾನೆ.

ಕೀಚಕನ ಉಪಟಳದಿಂದ ತನ್ನನ್ನು ಪಾರುಮಾಡಬೇಕೆಂದು ದ್ರೌಪದಿಯು ಭೀಮನನ್ನು ಪರಿಪರಿಯಾಗಿ ಬೇಡುತ್ತಾಳೆ. ದ್ರೌಪದಿಗೆ ಉತ್ತರಿಸುತ್ತ ಭೀಮನು ದ್ರೌಪದಿಯು ಅಣ್ಣನಾದ ಧರ್ಮಜನಿಗೆ ದೂರನ್ನು ಹೇಳಬೇಕೆ೦ದು ತಿಳಿಸುವನಲ್ಲದೆ, ಅಣ್ಣನ ಆಜ್ಞೆಯೆಂಬ ಹಗ್ಗ (ಕಾಲಕಟ್ಟಲೆ) ನನ್ನನ್ನು ಕಟ್ಟಿಹಾಕಿದೆ. ನಾನು ಆದರೊಳಗೆ ಬಿದ್ದಿರುವವನು ಎಂದು ತನ್ನ ಅಸಹಾಯಕತೆಯನ್ನು ದ್ರೌಪದಿಗೆ ವಿವರಿಸುವಾಗ ಈ ಮೇಲಿನ ಮಾತು ಬಂದಿದೆ.

(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿರಿ).

೧) ಧರ್ಮರಾಯನಿಗೆ ಎಂಥ ಗರ ಹೊಡೆದಿದೆ?

ಧರ್ಮ – ಕ್ಷಮೆಯ

೨) ಅಣ್ಣನಾಜ್ಞೆಯಲಿ ಭ್ರಮಿತನಾದವನು ಯಾರು?

ಪಾರ್ಥ/ಅರ್ಜುನ

೩) ಪಾಂಚಾಲನಂದನೆ ಎಂದರೆ ಯಾರು?

ದ್ರೌಪದಿ

೪) ರಾಜಸಭೆಯೊಳಗೆ ಬ್ರೌಪದಿಯನ್ನು ಒದೆದವರು ಯಾರು?

ಕೀಚಕ

೫) ಯಾರನ್ನು ಯಮಲೋಕಕ್ಕೆ ಕಳಿಸಲು ಬ್ರೌಪದಿ ಭೀಮನಿಗೆ ಹೇಳುತ್ತಾಳೆ?

ಕೀಚಕ

೬) ‘ಗಂಡರೋ ನೀವ್ ಭಂಡರೋ’ ಎಂದು ಕೇಳಿದವರಾರು?

ದ್ರೌಪದಿ

೭) ‘ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನವೊಲು’ ಎಂದವರಾರು?

ದ್ರೌಪದಿ

೮) ಅರಣ್ಯವಾಸದಲ್ಲಿದ್ದಾಗ ದ್ರೌಪದಿಯನ್ನು ಎಳೆದೊಯ್ದವರಾರು?

ಸೈಂಧವ

೯) ಮನದೊಳಗೆ ಹಗೆಗಳನ್ನು ಹಿಂಡಿದವರಾರು?

ಭೀಮ

೧೦) ಯಾರ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ?

ಕೀಚಕನ

ಹೆಚ್ಚುವರಿ ಪ್ರಶ್ನೆಗಳು:

೧೧) ದ್ರೌಪದಿಯನ್ನು ಮಂದೆಗೆಳಸಿದ ಪಾಪಿ ಯಾರು?

ದುರ್ಯೋಧನ

೧೨) ಕೊಲಲಕ್ಷಮರೆಂದು ಬ್ರೌಪದಿ ಯಾರನ್ನು ಕುರಿತು ಹೇಳಿದ್ದಾಳೆ?

ನಕುಲ ಮತ್ತು ಸಹದೇವ

೧೩) ಭೀಮನಿಗೆ ಯಾರ ಆಜ್ಞೆಯ ಭಯವಿದೆ?

ಧರ್ಮರಾಯ

೧೪) ‘ಉಳಿದರಿಬ್ಬರು ರಮಣರಿವರೀ ನಾಯ ಕೊಲಲಕ್ಷಮರು’ ಇದರ ತಾತ್ಪರ್ಯ

ಭೀಮನಷ್ಟು ಪರಾಕ್ರಮಿಗಳಲ್ಲ

೧೫) ದ್ರೌಪದಿ ಎಷ್ಟು ಬಾರಿ ಅವಮಾನಕ್ಕೆ ಒಳಗಾಗಿದ್ದೇನೆಂದು ಹೇಳಿದ್ದಾಳೆ?

ಮೂರು

೧೬. “ಯಮಸುತಂಗರುಹುವೆನೆ ಧರ್ಮ

ಕ್ಷಮೆಯ ಗರ ಹೊಡೆದಿಹುದು ಪಾರ್ಥನು

ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ

ಭ್ರಮಿತನಾಗಿಹನು” – ಈ ಪದ್ಯಭಾಗದಲ್ಲಿ ಬ್ರೌಪದಿ ಧರ್ಮರಾಯನನ್ನು ಕುರಿತು ಏನೆಂದು ಚಿಂತಿಸುತ್ತಾಳೆ?

೧೭) ದ್ರೌಪದಿಯ ಮುಂದಲೆ ಹಿಡಿದವರಾರು?

ದುಶ್ಯಾಸನ

೧೮) ಯಮಸುತಂಗರುಹುವೆನೆ ಧರ್ಮ

ಕ್ಷಮೆಯ ಗರ ಹೊಡೆದಿಹುದು ಪಾರ್ಥನು

ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ

ಭ್ರಮಿತನಾಗಿಹನು – ಈ ಪದ್ಯಭಾಗದಲ್ಲಿ ದ್ರೌಪದಿ ಧರ್ಮರಾಯನನ್ನು ಕುರಿತು ಏನೆಂದು ಚಿಂತಿಸುತ್ತಾಳೆ?

ಧರ್ಮ ಮತ್ತು ಕ್ಷಮೆಯ ದೆವ್ವ ಹಿಡಿದವನು

೧೯) ಮೆಲ್ಲಮೆಲ್ಲನೆ ಮುಸುಕ ಸಡಿಲಿಸಿ

ಗಲ್ಲವನು ಹಿಡಿದಲುಗಲಪ್ರತಿ

ಮಲ್ಲನೆದ್ದನು ನೋಡಿದನು ಪಾಂಚಾಲನಂದನೆಯ – ಈ ಪದ್ಯಭಾಗದಲ್ಲಿ ‘ಪ್ರತಿಮಲ್ಲ’ ಎಂದರೆ ಯಾರು?

ಭೀಮ

೨೦) ಕಲಹಕಾದೊಡೆ ನಾವು ರಮಿಸುವ

ರುಳಿದವರು ಬಳಿಕೇನು ಗಾದೆಯ

ಬಳಕೆ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು

– ಈ ಪದ್ಯದಲ್ಲಿ ಭೀಮನು ದೌಪದಿಯನ್ನು ಕುರಿತು ತನ್ನ ಆಗತ್ಯದ ಬಗ್ಗೆ ಏನೆಂದು ತಿಳಿಸಿದ್ದಾನೆ?

ಯುದ್ಧ ಜಗಳಕ್ಕಾಗಿ ಮಾತ್ರ

೨೧) “ಬಸುರ ಬಗೆವೆನು ಕೀಚಕನ ನಸು

ಮಿಸುಕಿದೊಡೆ ವೈರಾಟ ವಂಶದ

ಹೆಸರ ತೊಡೆವೆನು ನಮ್ಮನರಿದೊಡೆ ಕೌರವವ್ರಜವ

ಕುಸುರಿದರಿವೆನು”

ದ್ರೌಪದಿಯ ರಕ್ಷಣೆಗೆ ಭೀಮನ ಪ್ರತಿಜ್ಞೆಯನ್ನು ಹೇಳುತ್ತದೆ

೨೨) “ಮೆಲ್ಲಮೆಲ್ಲನೆ ಮುಸುಕ ಸಡಲಿಸಿ

ಗಲ್ಲವನು ಹಿಡಿದಲುಗಲಪ್ರತಿ

ಮಲ್ಲನೆದ್ದನು” – ಈ ಪದ್ಯದಲ್ಲಿ ಎದ್ದವನು ಯಾರು?

ಭೀಮ

೨೩) “ಎಲ್ಲರೊಳು ಕಲಿಭೀಮನೇ ಮಿಡು

ಕುಳ್ಳ ಗಂಡನು ಹಾನಿ ಹರಿಬಕೆ

ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು”

– ಈ ಪದ್ಯಭಾಗದಲ್ಲಿ ಬ್ರೌಪದಿ ಯಾರನ್ನು ‘ಮಿಡುಕುಳ್ಳ ಗಂಡ’ ಎಂದು ಕರೆದಿದ್ದಾಳೆ?

ಭೀಮ

೨೪) “ಅರಸಿ ಬಿಡು ಬಿಡು ಖಾತಿಯನು ವಿ

ಸ್ತರಿಸಬೇಕೆಮ್ಮಣ್ಣನಾಜ್ಞೆಯ

ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ”

– ಈ ಪದ್ಯಭಾಗದಲ್ಲಿ ಭೀಮ ಯಾರ ಗೆರೆಯನ್ನು ದಾಟಿದೆನೆಂದು ಹೇಳುತ್ತಾನೆ?

ಅಣ್ಣ ಧರ್ಮರಾಯನ ಆಜ್ಞೆ

೨೫) “ಎಲ್ಲರೊಳು ಕಲಿಭೀಮನೇ ಮಿಡು

ಕುಳ್ಳ ಗಂಡನು ಹಾನಿ ಹರಿಬಕೆ

ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು

ಖುಲ್ಲನಿವನುಪಟಳವನಾತಂ

ಗೆಲ್ಲವನು ಹೇಳುವೆನು ಬಳಿಕವ

ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ”

– ಈ ಪದ್ಯದಲ್ಲಿ ದ್ರೌಪದಿಯ ಅನಿಸಿಕೆ ಏನು?

ಭೀಮ ತನ್ನ ಮೇಲೆ ವಿಶೇಷ ಪ್ರೀತಿವುಳ್ಳವನು

೨೬) “ಬಸುರ ಬಗೆವೆನು ಕೀಚಕನ ನಸು

ಮಿಸುಕಿದೊಡೆ ವೈರಾಟ ವಂಶದ

ಹೆಸರ ತೊಡೆವೆನು ನಮ್ಮನರಿದೊಡೆ ಕೌರವವ್ರಜವ

ಕುಸುರಿದರಿವೆನು” – ಈ ಪದ್ಯಭಾಗದಲ್ಲಿ ಕಂಡುಬರುವ ಮಾತುಗಳನ್ನು ಯಾರು, ಯಾರಿಗೆ ಹೇಳಿದರು?

ಭೀಮ – ದ್ರೌಪದಿಗೆ

೨೭) “ಕಾಲಯಮ ಕೆರಳಿದೊಡೆ ಮುರಿವೆ

ಚ್ಚಾಳುತನದವರೆನ್ನನೊಬ್ಬಳ

ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ”

– ಈ ಪದ್ಯಭಾಗದಲ್ಲಿ ದೌಪದಿ ‘ಪಾಪಿಗಳಿರ’ ಎಂದು ಯಾರನ್ನು ಉದ್ದೇಶಿಸಿ ಹೇಳಿದ್ದಾಳೆ?

ಪಾಂಡವರನ್ನು

೨೮) “ಆರಸಿ ಬಿಡು ಬಿಡು ಖಾತಿಯನು ವಿ

ಸ್ತರಿಸಲೇಕೆಮ್ಮಣ್ಣನಾಜ್ಞೆಯ

ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ”

– ಈ ಪದ್ಯಭಾಗದಲ್ಲಿ ಭೀಮನು ಬ್ರೌಪದಿಗೆ ಏನೆಂದು ಅಭಯ ನೀಡುತ್ತಾನೆ?

ಅಣ್ಣ ಧರ್ಮರಾಯನ ಆಜ್ಞೆಯನ್ನು ಮೀರಿಯಾದರೂ ದ್ರೌಪದಿಗೆ ಒದಗಿದ ಕಷ್ಟವನ್ನು ಪರಿಹರಿಸುತ್ತೇನೆ ಎಂದು

೨೯) “ಎಲ್ಲರೊಳು ಕಲಿಭೀಮನೇ ಮಿಡು

ಕುಳ್ಳ ಗಂಡನು ಹಾನಿ ಹರಿಬಕೆ

ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು”

– ಈ ಪದ್ಯಭಾಗದಲ್ಲಿ ದ್ರೌಪದಿ ಭೀಮನನ್ನು ಕುರಿತು ಏನೆಂದು ಚಿಂತಿಸುತ್ತಾಳೆ?

ಕಾಳಜಿ ಮತ್ತು ಸ್ವಾಭಿಮಾನದ ಜಿದ್ದುವುಳ್ಳವನು

೩೦) “ಮುಂದೆಗೆಳೆಸಿದ ಪಾಪಿ ಕೌರವ

ನಂದು ಮುಂದಲೆವಿಡಿದು ಸೈಂಧವ

ಬಂದು ಬಳಿಹಾರಣ್ಯವಾಸದೊಳೆನ್ನನೆಳದೊಯ್ದ”

– ಈ ವಾಕ್ಯದಲ್ಲಿ ಅರಣ್ಯವಾಸದಲ್ಲಿದ್ದಾಗ ಬ್ರೌಪದಿಯನ್ನು ಎಳೆದೊಯ್ದವರು ಯಾರು?

ಸೃಂಧವ

೩೧) “ಯಮಸುತಂಗರುಹುವೆನೆ ಧರ್ಮ

ಕ್ಷಮೆಯ ಗರ ಹೊಡೆದಿಹುದು” – ಈ ಸಾಲಿನಲ್ಲಿ ದ್ರೌಪದಿ ಧರ್ಮರಾಯನನ್ನು ಕುರಿತು ಏನೆಂದು ಚಿಂತಿಸುತ್ತಾಳೆ?

ಧರ್ಮ ಪರಿಪಾಲನಾ ನಿರತ

೩೨) “ಇನ್ನು ಹುಟ್ಟಿದೆಯಿರಲಿ ನಾರಿಯ

ರೆನ್ನವೊಲು ಭಂಗಿತರು ಭುವನದೊ

ಳಿನ್ನು ಜನಿಸಲುಬೇಡ ಗಂಡರು ಭೀಮಸನ್ನಿಭರು” – ಈ ಪದ್ಯಭಾಗವು ಕೆಳಗಿನ ಈ ಹೇಳಿಕೆಯನ್ನು ಸಮರ್ಥಿಸುತ್ತದೆ

ಹೆಣ್ಣಿನ ಅವಮಾನ

೩೩) “ಗಂಡರೈವರು ಮೂರುಲೋಕದ

ಗಂಡರೊಬ್ಬಳನಾಳಲಾರಿರಿ

ಗಂಡರೋ ನೀವ್‌ ಭಂಡರೋ ಹೇಳೆಂದಳಿಂದುಮುಖಿ” – ಇಲ್ಲಿ ಮೂರು ಲೋಕದ ಗಂಡರು ಎಂದರೆ ಯಾರು?

ಪಾಂಡವರು

೩೪) “ಬಸುರ ಬಗೆವೆನು ಕೀಚಕನ ನಸು

ಮಿಸುಕಿದೊಡೆ ವೈರಾಟ ವಂಶದ

ಹೆಸರ ತೊಡೆವೆನು ನಮ್ಮನರಿದೊಡೆ ಕೌರವ ಪ್ರಜವ

ಕುಸುರಿದರಿವೆನು” – ಇಲ್ಲಿ ‘ನಮ್ಮನು’ ಎಂದರೆ ಯಾರು?

ಪಾಂಡವರು

೩೫) “ವಲ್ಲಭೆಯೆ ಬರವೇನು ಮುಖದಲಿ

ತಲ್ಲಣವೆ ತಲೆದೋರುತಿದೆ ತಳು

ವಿಲ್ಲದುಸುರಿರುಳೇಕೆ ಬಂದೆ ಲತಾಂಗಿ ಹೇಳೆಂದ” – ಹೀಗೆಂದು ಬ್ರೌಪದಿಯನ್ನು ಪ್ರಶ್ನಿಸಿದವರು ಯಾರು?

ಭೀಮ

೩೬) “ಎಲ್ಲರೊಳು ಕಲಿಭೀಮನೇ ಮಿಡು

ಕುಳ್ಳ ಗಂಡನು ಹಾನಿ ಹರಿಬಕೆ

ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು” – ಈ ಪದ್ಯಭಾಗದಲ್ಲಿ ಭೀಮನ ಕುರಿತು ಬ್ರೌಪದಿಯ ಅಭಿಪ್ರಾಯ

ಎಲ್ಲಾ ಪಾಂಡವರಲ್ಲಿ ಭೀಮನೇ ಶ್ರೇಷ್ಠ

೧) ಕೊಲಲಕ್ಷಮರೆಂದು ದ್ರೌಪದಿ ಯಾರನ್ನು ಕುರಿತು ಹೇಳಿದ್ದಾಳೆ?

ನಕುಲ ಮತ್ತು ಸಹದೇವರು ಕೀಚಕನೆಂಬ ನಾಯಿಯನ್ನು ಕೊಲ್ಲಲು ಅಕ್ಷಮರೆಂದು ಬ್ರೌಪದಿ ಹೇಳಿದ್ದಾಳೆ.

೨) ಮಲಗಿರುವ ಭೀಮನನ್ನು ದ್ರೌಪದಿ ಹೇಗೆ ಎಬ್ಬಿಸಿದಳು?

ಮಲಗಿದ್ದ ಭೀಮನ ಬಳಿ ಬಂದ ದ್ರೌಪದಿಯು ಮೆಲ್ಲಮೆಲ್ಲನೆ ಅವನ ಮುಸುಕನ್ನು ಸರಿಸಿದಳು ಮತ್ತು ಅವನ ಗಲ್ಲವನ್ನು ಹಿಡಿದು ಅಲುಗಿಸಿ ಅವನನ್ನೆಬ್ಬಿಸಿದಳು.

೩) ತಾನು ಘೋರತರ ವಿಷ ಕುಡಿಯುವುದಾಗಿ ದ್ರೌಪದಿ ಏಕೆ ಹೇಳುತ್ತಾಳೆ?

ಭೀಮನು ಕೀಚಕನ ಉಪಟಳದಿಂದ ತನ್ನನ್ನು ಪಾರುಮಾಡದೆ ಹೋದರೆ, ತಾನು ಘೋರತರ ವಿಷವನ್ನು ಕುಡಿದು ಸಾಯುವುದಾಗಿ ದೌಪದಿಯು ಹೇಳುತ್ತಾಳೆ.

೪) ಉಳಿದ ನಾಲ್ವರು ಪಾಂಡವರ ಭಿನ್ನ ಸ್ವಭಾವಗಳ ಬಗ್ಗೆ ದ್ರೌಪದಿಯ ಅಭಿಪ್ರಾಯವೇನು?

ದ್ರೌಪದಿಯ ಪ್ರಕಾರ ಭೀಮನನ್ನುಳಿದ ಪಾಂಡವರು ತನ್ನೊಡನೆ ರಮಿಸಲು ಮಾತ್ರ ಮುಂದಾಗುವವರು. ಹೆಂಡತಿಯ ಮಾನರಕ್ಷಣೆಯ ಸಂದರ್ಭ ಬಂದಾಗ ಕಾಲ್ತೆಗೆಯುವವರು. ಆದ್ದರಿಂದ ಅವರೆಲ್ಲರೂ ‘ಗಂಡ’ ಎನಿಸಿಕೊಳ್ಳಲು ಅಯೋಗ್ಯ ರೆಂಬುದು ದ್ರೌಪದಿಯ ಅಭಿಪ್ರಾಯವಾಗಿದೆ.

೫. ಗಂಡರೈವರು ಮೂರು ಲೋಕದ ಗಂಡರಾರು? ಹೆಸರಿಸಿ.

ದೌಪದಿಯ ಐದು ಜನ ಗಂಡರೆಂದರೆ ಕ್ರಮವಾಗಿ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವರು. ಇವರು ಮಹಾ ಪರಾಕ್ರಮಿಗಳೆಂದು ಮೂರು ಲೋಕದಲ್ಲಿ ಪ್ರಸಿದ್ಧರಾದವರು.

೬. ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಏನು ಮಾಡುತ್ತಾನೆ?

ಹೆಂಡತಿಯ ಮಾನರಕ್ಷಣೆಯ ಪ್ರಶ್ನೆ ಬಂದಾಗ ಗಂಡಸು ಏಕಾಂಗಿಯಾಗಿ ಶತ್ರುಗಳೊಂದಿಗೆ ಕಾದಾಡುತ್ತಾನೆ. ಇಲ್ಲವೇ ತಾನೂ ಸಾವಿಗೆ ಶರಣಾಗುತ್ತಾನೆ.

ಹೆಚ್ಚುವರಿ ಪ್ರಶ್ನೆಗಳು:

೭) ನಿದ್ದೆಯಿಂದ ಎಬ್ಬಿಸುವ ಕ್ಷಣ ಭೀಮನ ಪ್ರತಿಕ್ರಿಯೆ ಹೇಗಿರಬಹುದೆಂದು ಬ್ರೌಪದಿ ಯೋಚಿಸುತ್ತಾಳೆ?

ಎಬ್ಬಿಸಿದ ಕೂಡಲೇ ಭೀಮನು ಸಿಟ್ಟಾಗುವನೋ? ಅಥವಾ ಒಬ್ಬಳೇ ಈ ಇರುಳೇಕೆ ಬಂದೆ? ಮುಖವೇಕೆ ಬಾಡಿದೆ? ಎಂದು ಸಂತೈಸುವನೋ ಎಂದೆಲ್ಲಾ ದೌಪದಿ ಭೀಮನ ಪ್ರತಿಕ್ರಿಯೆ ಕುರಿತು ಯೋಚಿಸುತ್ತಾಳೆ.

೮) ಭೀಮನೇ ಮಿಡುಕುಳ್ಳ ಗಂಡನೆಂದು ಬ್ರೌಪದಿ ಏಕೆ ಭಾವಿಸಿದಳು?

ತನ್ನ ಗಂಡಂದಿರಲ್ಲಿ ಭೀಮನೆ ಶೌರ್ಯವಂತ. ಕಷ್ಟ-ಅಗತ್ಯಗಳಿಗೆ ಬೆಂಬಲ ನೀಡುವ ಛಲದ ಗುಣವಿರುವುದರಿಂದ ಭೀಮನೇ ಮಿಡುಕುಳ್ಳ ಗಂಡ ಎಂದು ಬ್ರೌಪದಿ ಭಾವಿಸುತ್ತಾಳೆ.

೯) ಸೋದರರ ಬಗ್ಗೆ ಭೀಮನು ವ್ಯಕ್ತಪಡಿಸಿದ ಅಭಿಪ್ರಾಯ ಯಾವುದು?

ಜಗಳ, ಯುದ್ಧಗಳ ಸಂದರ್ಭಗಳಲ್ಲಿ ಸೋದರರು ನನ್ನನ್ನು ಬಳಸಿಕೊಳ್ಳುತ್ತಾರೆ. ಉಳಿದ ಸಂದರ್ಭಗಳಲ್ಲಿ ತಾವು ಸಂತೋಷವನ್ನು ಅನುಭವಿಸುತ್ತಾರೆ. ಇದು “ಕೆಲವರು ದುಡಿದು ತಂದರೆ ಮತ್ತೆ ಕೆಲವರು ಅದನ್ನು ಉಂಡು ಖರ್ಚು ಮಾಡುವರು” ಎಂಬ ಗಾದೆ ಮಾತಿನಂತಿದೆ ಎಂದು ಭೀಮನು ತನ್ನ ಸೋದರರ ಬಗ್ಗೆ ಅಭಿಪ್ರಾಯಪಟ್ಟನು.

೧೦) ತೋಳಹೊರೆ ನಿಮಗೇಕೆ ಎಂದು ಬ್ರೌಪದಿ ಹೇಳಲು ಕಾರಣವೇನು?

ಕಾಲಯಮ ಕೆರಳಿದರೆ ಅವನನ್ನು ಮೆಟ್ಟಿನಿಲ್ಲಬಲ್ಲ ಹೆಚ್ಚುಗಾರಿಕೆಯಿರುವ ತನ್ನ ಗಂಡಂದಿರಿಂದ ತನ್ನನ್ನೊಬ್ಬಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ನಿಮಗೆ ತೋಳಹೊರೆ(ತೋಳ್ಬಲ)ಯಾದರೂ ಏಕೆ ಬೇಕು? ಅದು ನಿಷ್ಟ್ರಯೋಜಕ ಎಂದು ದೌಪದಿಯು ಭೀಮನನ್ನು ಉದ್ದೇಶಿಸಿ ಹೇಳುತ್ತಾಳೆ.

(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):

೧) ತನಗೊದಗಿದ ಸಂಕಟವನ್ನು ಹೇಳಿಕೊಳ್ಳುವ ಬ್ರೌಪದಿಯ ಸ್ವಗತದ ನುಡಿಗಳಾವುವು?

‘ಇನ್ನು ಹುಟ್ಟಿದೆಯಿರಲಿ ನಾರಿಯರೆನ್ನವೊಲು’ ಕಾವ್ಯಭಾಗದ ಆರಂಭದಲ್ಲಿಯೇ ತನಗೊದಗಿದ ಸಂಕಟದಲ್ಲಿ ತೊಳಲಾಡುವ ದ್ರೌಪದಿಯ ಸ್ವಗತದ ನುಡಿಗಳಿವೆ. ತನಗೆ ಒದಗಿರುವ ಈ ಸಂಕಟವನ್ನು ಯಾರೊಂದಿಗೆ ಹೇಳಿಕೊಳ್ಳಲಿ? ಯಾರ ಬಳಿ ಹೋಗಲಿ? ಯಾರನ್ನು ಬೇಡಲಿ? ಎಂದೆನ್ನುವ ಆಕೆ ಈ ಬಗೆಯ ಹೆಣ್ಣು ಜನ್ಮ ಯಾರಿಗೂ ಬೇಡ, ನನ್ನಂತಹ ಘೋರಪಾತಕಿಯಾಗಲೀ, ಕಷ್ಟದಲ್ಲಿ ಕೊರಗಿದವರಾಗಲೀ ಬೇರೊಬ್ಬರಿಲ್ಲ. ಮರಣವಾದರೂ ತನಗೆ ಒದಗಬಾರದೇ? ಎಂದು ಗೋಳಾಡುತ್ತಾಳೆ. ತನ್ನ ಐವರು ಗಂಡಂದಿರಲ್ಲಿ ಧರ್ಮಜನಿಗೆ ಧರ್ಮ-ಕ್ಷಮೆಗಳ ಗರ ಹೊಡೆದಿದೆ. ಅರ್ಜುನನಿಗೆ ನನ್ನ ಮೇಲೆ ಪ್ರೀತಿಯಿರುವುದಾದರೂ ಆತ ಅಣ್ಣನ ಆಜ್ಞೆಯನ್ನು ಮೀರಿ ನಡೆಯುವವನಲ್ಲ. ನಕುಲ-ಸಹದೇವರು ಒಂದು ನಾಯಿಯನ್ನು ಕೊಲ್ಲಲೂ ಅಸಮರ್ಥರು. ಈ ಎಲ್ಲರಿಗಿಂತ ಭೀಮನೊಬ್ಬನೆ ಪೌರುಷವುಳ್ಳವನು, ಅವನಿಗೆ ಹೇಳಿದರೆ ತನ್ನನ್ನು ಈ ಕಷ್ಟದಿಂದ ಪಾರುಮಾಡಬಹುದೆಂದು ಯೋಚಿಸುತ್ತಾಳೆ. ಅವನ ನೆರವು ದೊರಕದಿರೆ ತಾನು ಘೋರತರ ವಿಷವನ್ನು ಕುಡಿದು ಪ್ರಾಣಬಿಡುವುದಾಗಿ ದ್ರೌಪದಿಯು ಯೋಚಿಸುತ್ತಾಳೆ. ಭೀಮನು ತನ್ನನ್ನು ಹೇಗೆ ಸಂತೈಸಬಹುದೆಂಬುದನ್ನು ಸ್ವಗತದಲ್ಲಿಯೇ ಚಿಂತಿಸುತ್ತಾ ದ್ರೌಪದಿಯು ಭೀಮನಲ್ಲಿಗೆ ತೆರಳುತ್ತಾಳೆ. ಅವಳಾಡುವ ಸ್ವಗತದ ನುಡಿಗಳಲ್ಲಿ ಆಕೆಗೊದಗಿದ ಸಂಕಟ ಪರಂಪರೆಗಳ ಘೋರ ಚಿತ್ರಣವಿದೆ.

೨) ತನಗಾದ ಅವಮಾನವನ್ನು ದ್ರೌಪದಿ ಭೀಮನಿಗೆ ಹೇಳಿಕೊಂಡ ಬಗೆಯನ್ನು ವಿವರಿಸಿ.

ಮಲಗಿದ್ದ ಭೀಮನನ್ನು ಎಬ್ಬಿಸಿದ ದ್ರೌಪದಿಯು ಅವನೊಂದಿಗೆ ತನಗಾದ ಅವಮಾನವನ್ನು ಕುರಿತು ಹೇಳುತ್ತಾಳೆ. ಕೀಚಕನು ರಾಜಸಭೆಯಲ್ಲಿ ಭೀಮನೆದುರಲ್ಲೇ ತನ್ನನ್ನು ಎಡಕಾಲಿನಿಂದ ಒದ್ದು ಬೀಳಿಸಿದ್ದನ್ನು ನೆನಪಿಸಿ, ನಿನಗೆ ಇದು ಸಹ್ಯವೇ? ಎಂದು ಪ್ರಶ್ನಿಸುತ್ತಾಳೆ. ಕೀಚಕ ತನ್ನ ಬೆನ್ನು ಹತ್ತದೆ ಬಿಡುವವನಲ್ಲವಾದ್ದರಿಂದ ತಾನಿನ್ನು ಬದುಕುವುದಿಲ್ಲವೆಂದು ಕಣ್ಣೀರಿಡುತ್ತಾಳೆ. ಉಳಿದ ಪಾಂಡವರು ತನ್ನೊಂದಿಗೆ ರಮಿಸಲು ಮಾತ್ರ ಮುಂದೆ ಬರುತ್ತಾರೆ. ಮಾನದ ಪ್ರಶ್ನೆ ಎದುರಾಗಲು ಕಾಲ್ತೆಗೆಯುತ್ತಾರೆ ಅವರು ಗಂಡರೆನಿಸಲು ಆಯೋಗ್ಯರು. ಆದ್ದರಿಂದ ನೀನು ಕೀಚಕನನ್ನು ಯಮಲೋಕಕ್ಕಟ್ಟಿ ತನ್ನನ್ನು ಕಾಯಬೇಕೆಂದು ಕೈಮುಗಿದು ಬೇಡಿಕೊಳ್ಳುತ್ತಾಳೆ. ಭೀಮನು ಪ್ರೋತ್ಸಾಹದ-ಸಂತೈಕೆಯ ಮಾತುಗಳನ್ನಾಡದಿದ್ದಾಗ ಅವನ ಪೌರುಷವನ್ನು ತನ್ನ ರೋಷದ-ಮೂದಲಿಕೆಯ ಮಾತುಗಳಿಂದ ಕೆಣಕುತ್ತಾಳೆ. ಮೂರು ಲೋಕದ ವೀರರಾದ ನಿಮ್ಮಿಂದ ಹೆಂಡತಿಯೊಬ್ಬಳನ್ನು ಆಳಲಾಗದೆಂದು ಹೀಯಾಳಿಸುತ್ತಾಳೆ. ದುಶ್ಯಾಸನ-ಸೈಂಧವ-ಕೀಚಕರಿಂದ ತನಗಾದ ಅವಮಾನವನ್ನು ನೆನಪಿಸಿ, ತನ್ನಂತಹ ದುಃಖಿಗಳು ಇನ್ಯಾರೂ ಇಲ್ಲವೆಂದು ಗೋಳಾಡುತ್ತಾಳೆ. ಅಂತಿಮವಾಗಿ ಕೀಚಕನನ್ನು ಕೊಲ್ಲುವ ಕೆಲಸಕ್ಕೆ ಭೀಮನನ್ನು ಪ್ರೇರೇಪಿಸುವಲ್ಲಿ ಸಫಲಳಾಗುತ್ತಾಳೆ.

೩) ಭೀಮನು ಬ್ರೌಪದಿಯನ್ನು ಹೇಗೆ ಸಂತೈಸಿದನು?

ದೌಪದಿಯ ಸಂಕಟದ ಮಾತುಗಳನ್ನು ಕೇಳಿದ ಭೀಮನು ಮೊದಲಿಗೆ ನೆರವಾಗಲು ಹಿಂಜರಿದರೂ ಅಂತಿಮವಾಗಿ ಕಣ್ಣೀರಿಡುತ್ತಿರುವ ದ್ರೌಪದಿಗಾಗಿ ಅವನ ಅಂತಃಕರಣ ಕರಗುತ್ತದೆ. ಮನದಲ್ಲಿಯೇ ಹಗೆಗಳನ್ನು ಹಿಂಡಿ ಪುಳಕಗೊಳ್ಳುವ ಆತ ಮೆಲ್ಲಗೆ ದ್ರೌಪದಿಯನ್ನು ಅಪ್ಪಿಕೊಂಡು ತನ್ನ ಉತ್ತರೀಯದ ಸೆರಗಿನಿಂದ ಅವಳ ಕಣ್ಣೀರನ್ನು ಒರೆಸುವನು. ಅವಳ ಮುಂದಲೆಯ ಕೂದಲನ್ನು ನೇವರಿಸಿ, ಗಲ್ಲವನ್ನು ಸವರಿ ಮುದ್ದಾಡುವನು. ತನ್ನ ಮಂಚದ ಪಕ್ಕವಿದ್ದ ಗಿಂಡಿಯ ನೀರಿನಲ್ಲಿ ದ್ರೌಪದಿಯ ಮುಖತಾವರೆಯನ್ನು ತೊಳೆದು, ತಾನು ಅಣ್ಣನಾಜ್ಞೆಯ ಗೆರೆಯನ್ನು ದಾಟಿ, ನೆರವಿಗೆ ಧಾವಿಸುವುದಾಗಿ ಹೇಳುವನು. ಅಲ್ಲದೆ ಕೀಚಕನ ಬಸುರನ್ನು ಬಗೆದು, ಎದುರಾಡಿದರೆ ವಿರಾಟನ ವಂಶವನ್ನು ನಿರ್ವಂಶ ಮಾಡುವ, ಅಜ್ಞಾತವಾಸದಲ್ಲಿರುವ ತಮ್ಮ ಗುರುತು ಹಿಡಿದರೆ ಕೌರವರನ್ನು ನಾಶಮಾಡುವ, ಮಿಸುಕಾಡಿದರೆ ದೇವಸಂತತಿಯನ್ನೇ ಅಮರಾದ್ರಿಯ ಬಂಡೆಕಲ್ಲಿಗೆ ತಿಕ್ಕುವ ತನ್ನ ನಿರ್ಧಾರವನ್ನು ದೌಪದಿಯ ಎದುರಿಗೆ ಪ್ರಕಟಿಸಿ, ಅವಳನ್ನು ಸಂತೈಸಿ ಕಳಿಸುವ ಭೀಮನ ಮಾತುಗಳನ್ನು ಇಲ್ಲಿ ಗಮನಿಸಬಹುದು.

೪) ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿರಿ.

‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಲ್ಲಿ ದ್ರೌಪದಿಯು ತನಗಾದ ಮೂರು ಅವಮಾನದ ಪ್ರಸಂಗಗಳನ್ನು ಭೀಮನೆದುರು ಪ್ರಸ್ತಾಪಿಸುವುದನ್ನು ಗಮನಿಸಬಹುದು. ಅವುಗಳಲ್ಲಿ ಮೊದಲನೆಯದು, ಜೂಜಿನಲ್ಲಿ ಯುಧಿಷ್ಠಿರ ಸೋತಾಗ ಒತ್ತೆಯಾಳಾದ ದ್ರೌಪದಿಯನ್ನು ದುರ್ಯೋಧನ ತುಂಬಿದ ಸಭೆಗೆ ಎಳೆತರಿಸಿ ದುಶ್ಯಾಸನನಿಂದ ವಸ್ತ್ರಾಪಹರಣ ಮಾಡಿಸಿರುತ್ತಾನೆ. ದುಶ್ಯಾಸನನು ತಾಯಿಸಮಾನಳಾದ ಅತ್ತಿಗೆ ದ್ರೌಪದಿಯ ಮುಂದಲೆಯನ್ನು ಹಿಡಿದೆಳೆದು ತಂದು ಅವಮಾನಿಸಿರುತ್ತಾನೆ.

ಎರಡನೆಯದು, ವನವಾಸದ ಅವಧಿಯಲ್ಲಿ ದುಶ್ಯಳೆಯ ಗಂಡನಾದ ಜಯದ್ರಥ ಅಥವಾ ಸೈಂಧವನು ದ್ರೌಪದಿಯನ್ನು ಅಪಹರಿಸಿಕೊಂಡು ಹೋಗಿ ಅವಮಾನಿಸಿರುತ್ತಾನೆ. ಮೂರನೆಯದು, ಕೀಚಕನು ರಾಜಸಭೆಯಲ್ಲೇ ದ್ರೌಪದಿಯನ್ನು ಅವಳ ಗಂಡಂದಿರೆದುರೇ ಎಡಗಾಲಿನಿಂದ ಒದ್ದು ಬೀಳಿಸಿದ ಅವಮಾನಿಸಿರುತ್ತಾನೆ. ಈ ಮೂರು ಅವಮಾನಗಳು ದ್ರೌಪದಿಯ ಸಂಕಟ-ನೋವು-ದುಃಖಗಳಿಗೆ ಕಾರಣಗಳಾಗಿವೆ.

೫) ಈ ಕಾವ್ಯಭಾಗದಲ್ಲಿ ಮೂಡಿಬಂದಿರುವ ಭೀಮ-ದ್ರೌಪದಿಯರ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ.

‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಲ್ಲಿ ಭೀಮ-ದ್ರೌಪದಿಯರ ಸಂಭಾಷಣೆಯು ಸ್ವಾರಸ್ಯಕರವಾಗಿ ಮೂಡಿಬಂದಿದೆ. ದ್ರೌಪದಿಯು ತನ್ನ ಐವರು ಗಂಡಂದಿರಲ್ಲಿ ಭೀಮನೇ ತನ್ನ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಬಲ್ಲ ಪೌರುಷವಂತನೆಂದು ನಿರ್ಧರಿಸಿ. ಅವನ ಬಳಿ ಬಂದು ತನ್ನ ಸಂಕಟವನ್ನು ತೋಡಿಕೊಳ್ಳುತ್ತಾಳೆ. ಭೀಮನು ಮೊದಲಿಗೆ ನೆರವಿಗೆ ಬರಲು ಒಪ್ಪದಿದ್ದಾಗ ಅವನ ಗಂಡಸುತನವನ್ನು ಪ್ರಶ್ನಿಸುವ ಮೂದಲಿಕೆಯ ಮಾತುಗಳನ್ನು ದ್ರೌಪದಿಯು ಆಡುತ್ತಾಳೆ. ಭೀಮನು ಉಳಿದ ತನ್ನ ಸಹೋದರರ ನಡೆಯನ್ನು ಟೀಕಿಸುತ್ತಾನಾದರೂ ಅಂತಿಮವಾಗಿ ತನ್ನಣ್ಣನಾಜ್ಞೆಯ ಗೆರೆಯನ್ನು ದಾಟಿ ದ್ರೌಪದಿಯ ನೆರವಿಗೆ ಬರಲು ನಿರ್ಧರಿಸುತ್ತಾನೆ. ತನಗೊದಗಿದ ಆಪತ್ತಿನಿಂದ ಪಾರಾಗಲು ದ್ರೌಪದಿಯು ತೋರುವ ಧೈರ್ಯ, ಚಾಣಾಕ್ಷತೆಗಳು ಈ ಸಂಭಾಷಣೆಯಲ್ಲಿ ಮುಖ್ಯವಾದ ಸಂಗತಿಗಳು, ಅಂತೆಯೇ ಹೆಂಡತಿಯನ್ನು ಸಮಾಧಾನಪಡಿಸಿ, ಭೀಮನು ತನ್ನ ನಿರ್ಧಾರವನ್ನು ಪ್ರಕಟಿಸುವ ಸಂದರ್ಭದಲ್ಲಾಡುವ ಪೌರುಷದ ಗಂಡು ನುಡಿಗಳು ನೆನಪಿನಲ್ಲುಳಿಯುವಂತೆ ಕವಿ ಚಿತ್ರಿಸಿದ್ದಾನೆ.

ಹೆಚ್ಚುವರಿ ಪ್ರಶ್ನೆಗಳು:

೬) ತನಗೊದಗಿದ ಅಪಾಯವನ್ನು ನಿವಾರಿಸಿಕೊಳ್ಳುವ ದ್ರೌಪದಿಯ ಜಾಣೆಯನ್ನು ವಿವರಿಸಿ.

ದ್ರೌಪದಿಯು ಶೋಷಣೆಗೊಳಗಾದ ದುಖತೆಯಾಗಿ ಚಿತ್ರಿತೆಯಾಗಿದ್ದರೂ, ತನಗೊದಗಿರುವ ಅಪಾಯವನ್ನು ಜಾಣತನದಿಂದ ನಿವಾರಿಸಿಕೊಳ್ಳುವ ಜಾಣ್ಮೆಯನ್ನು ಮೆರೆದು, ಉತ್ತಮ ರಾಜತಾಂತ್ರಿಕ ನೈಪುಣ್ಯತೆಯನ್ನು ಮೆರೆಯುತ್ತಾಳೆ. ಕೀಚಕನನ್ನು ಕೊಲ್ಲಲು ಭೀಮನೇ ಸಮರ್ಥನೆಂದು ಗುರುತಿಸುವಲ್ಲಿ, ಉಪಾಯದಿಂದ ಭೀಮನನ್ನು ಕೆರಳಿಸಲು, ವಿಷಕುಡಿವುದಾಗಿ ಹೆದರಿಸಿ, ಅತ್ತು-ಕರೆದು, ರೋಷ ಹುಟ್ಟಿಸುವಲ್ಲಿ, ಅಣ್ಣನ ಆಜ್ಞೆಯನ್ನು ಮೀರಿ ಭೀಮ ಶತ್ರುಸಂಹಾರ ಮಾಡುವೆನೆಂದು ಹೇಳುವಲ್ಲಿ ದ್ರೌಪದಿಯು ತೋರುವ ಜಾಣ್ಮೆಯು ಮೆಚ್ಚಲರ್ಹವಾಗಿದೆ. ಭೀಮನ ರೋಷವನ್ನು ಕೆಣಕಿ, ಅವನ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ದ್ರೌಪದಿಯು ತೋರುವ ಬುದ್ದಿವಂತಿಕೆಯು ಅಸಾಧಾರಣವಾದುದು. ಕೀಚಕನ ಕಾಟದಿಂದ ಪಾರಾಗಲು ಸಾಯುವುದೊಂದೇ ದಾರಿ ಎನಿಸಿದ ವಿಷಮ ಪರಿಸ್ಥಿತಿಯಲ್ಲೂ ಆಕೆ ಸುಲಭವಾಗಿ ತನಗೊದಗಿದ ವಿಪತ್ತಿನಿಂದ ಪಾರಾಗಿ ಜಯಿಸುತ್ತಾಳೆ. ಇಲ್ಲಿ ಅವಳ ಜಾಣ್ಮೆಯ ಅಗಾಧತೆಯನ್ನು ಅರ್ಥಮಾಡಿಕೊಳ್ಳಬಹುದು.

೭) ದ್ರೌಪದಿಯ ಪಾತ್ರದ ಹಿನ್ನೆಲೆಯಲ್ಲಿ ಹೆಣ್ಣಿನ ಅಸಹಾಯಕತೆ ಹಾಗೂ ಶೋಷಣೆಯ ರೂಪಗಳನ್ನು ವಿವರಿಸಿ.

ಕುಮಾರವ್ಯಾಸ ಕವಿಯು ಬ್ರೌಪದಿಯ ಮೂಲಕ ಹೆಣ್ಣಿನ ಅಸಹಾಯಕತೆಯನ್ನೂ ಹೆಣ್ಣು ಅನುಭವಿಸುವ ಶೋಷಣೆಯ ರೂಪವನ್ನೂ ವಿವರಿಸಲು ಪ್ರಯತ್ನಿಸಿದ್ದಾನೆ. ದ್ರೌಪದಿಯು ಇಲ್ಲಿ ಕೀಚಕನಿಂದ ಪೀಡನೆಗೊಳಗಾದ ಹೆಣ್ಣು. ಅವಳ ರೂಪವೇ ಅವಳಿಗೆ ಶತ್ರುವಾಗಿದೆ. ಯಾವ ತಪ್ಪನ್ನು ಮಾಡದಿದ್ದರೂ ಕೀಚಕ ಅವಳ ಮೇಲೆರಗಿ ಬರುತ್ತಾನೆ. ಕೈಗೆ ಸಿಗದಿದ್ದಾಗ ತುಂಬಿದ ಸಭೆಯಲ್ಲಿ ಕಾಲಿನಿಂದ ಒದೆಯುತ್ತಾನೆ. ದ್ರೌಪದಿಯು ಐವರು ಗಂಡಂದಿರೆದುರು ಅಸಹಾಯಕಳಾಗಿ ಈ ಅವಮಾನವನ್ನು ಸಹಿಸಬೇಕಾಗುತ್ತದೆ. ಪುರುಷನ ಈ ಶೋಷಣೆಯಿಂದ ಪಾರಾಗಲು ಪುರುಷರನ್ನೇ ಬೇಡಬೇಕಾದ ಸ್ಥಿತಿಗೆ ಆಕೆ ತಲುಪುತ್ತಾಳೆ. ಯಾವ ತಪ್ಪು ಮಾಡದಿದ್ದರೂ ದುಃಖ-ಅವಮಾನಕ್ಕೆ ಗುರಿಯಾಗುವ ಹೆಣ್ಣಿನ ವಿಷಮ ಸಂದರ್ಭಕ್ಕೆ ಈ ಕಾವ್ಯಭಾಗದ ನಾಯಕಿಯಾದ ಬ್ರೌಪದಿಯು ಉದಾಹರಣೆಯಾಗಿ, ಸ್ವೀಕುಲವು ಪುರುಷರಿಂದ ಅನುಭವಿಸುವ ಶೋಷಣೆಗೆ ಸಂಕೇತವಾಗಿದ್ದಾಳೆ.

ಭಾಷಾಭ್ಯಾಸ:

೧) ಇವುಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ:

ಕಲಹ : ಜಗಳ, ಹೊಡೆದಾಟ.

ರಮಣ : ಪ್ರಿಯತಮ, ಗಂಡ, ಇನಿಯ, ವಲ್ಲಭ,

ಹರಿ : ವಿಷ್ಣು, ಕೃಷ್ಣ, ವಾಸುದೇವ, ನಾರಾಯಣ.

ಕುಂದು : ಕೊರತೆ, ಕುಗ್ಗು, ಬಾಡು.

ವಲ್ಲಭೆ : ಹೆಂಡತಿ, ರಮಣಿ, ಪ್ರಿಯತಮೆ, ಇನಿಯಳು.

ಮೊರೆ : ಗೋಳಾಟ, ಆರ್ತನಾದ, ಚೀರು.

ಖತಿ : ಕೋಪ, ಮುನಿಸು, ಆಕ್ರೋಶ, ಆಗ್ರಹ.

ಚಿತ್ತ : ಮನಸ್ಸು, ಬಗೆ.

ಕಾಂತೆ : ಪ್ರಿಯೆ, ಹೆಂಡತಿ, ಮನದನ್ನೆ.

ಕಾಲ : ಸಮಯ, ಹೊತ್ತು.

ನಾರಿ : ಹೆಣ್ಣು, ಮಾನಿನಿ, ಸ್ತ್ರೀ, ಮಹಿಳೆ.

ಗಂಡ : ಯಜಮಾನ, ಒಡೆಯ, ಪತಿ.

೨) ಈ ಪದಗಳನ್ನು ಸ್ವಂತ ವಾಕ್ಯದಲಿ ಬರೆಯಿರಿ:

ಪರಾಭವ : ಪಾಂಡವರಿಂದ ಕೌರವರು ಪರಾಭವ ಹೊಂದಿದರು.

ಭ್ರಮಿತನಾಗು : ಪಾರ್ಥನು ಅಣ್ಣನಾಜ್ಞೆಯಲ್ಲಿ ಭ್ರಮಿತನಾಗಿದ್ದನು.

ಹುರುಳು : ಆಡುವ ಮಾತಿನಲ್ಲಿ ಹುರುಳು ಇಲ್ಲದಿದ್ದರೆ ಅದಕ್ಕೆ ಬೆಲೆ ಇರುವುದಿಲ್ಲ.

ಬಸುರಬಗೆ : ಭೀಮನು ಕೀಚಕನ ಬಸುರನ್ನು ಬಗೆಯಲು ಯೋಚಿಸಿದನು.

ಗಂಡುಗೂಸು : ಗಂಡಸು ಎಂಬ ಪದದ ಮೂಲರೂಪವು ಗಂಡುಗೂಸು ಎಂಬುದಾಗಿದೆ.

ಕಡಿಖಂಡ : ಭೀಮನು ಶತ್ರುಗಳನ್ನು ಕಡಿಖಂಡ ಮಾಡಲು ನಿರ್ಧರಿಸಿದನು.

ಹೀಹಾಳಿಯುಳ್ಳವ : ಭೀಮನೊಬ್ಬನೇ ಹೀಹಾಳಿಯುಳ್ಳ ಗಂಡನೆಂದು ದೌಪದಿ ಯೋಚಿಸಿದಳು.

೩) ‘ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು’ ಈ ಗಾದೆ ಮಾತನ್ನು ವಿಸ್ತರಿಸಿ.

ಪ್ರಸ್ತುತ ಕಾವ್ಯಭಾಗದಲ್ಲಿ ಭೀಮನು ದ್ರೌಪದಿಯೊಂದಿಗೆ ಸಂಭಾಷಿಸುವಾಗ ಈ ಮೇಲಿನ ಗಾದೆಮಾತನ್ನು ಬಳಸುವುದನ್ನು ಗಮನಿಸುತ್ತೇವೆ. “ಕಷ್ಟಪಟ್ಟು ಗಳಿಸುವವರು ಒಬ್ಬನಾದರೆ, ಅದನ್ನು ಉಂಡು ಸುಖಿಸುವವನು ಮತ್ತೊಬ್ಬ” ಎಂಬುದು ಈ ಗಾದೆ ಮಾತಿನ ಅರ್ಥವಾಗಿದೆ. ಕಷ್ಟಪಟ್ಟವರಿಗೆ ಪ್ರತಿಫಲ ಸಲ್ಲದೆ ಅದು ಮತ್ತಾರಿಗೋ ಸಲ್ಲುವುದನ್ನು ಈ ಗಾದೆಮಾತು ವಿವರಿಸುತ್ತದೆ. ರೈತನು ಕಷ್ಟಪಟ್ಟು ಬೆಳೆಯನ್ನು ಬೆಳೆಯುತ್ತಾನೆ. ಆದರೆ ಅದರ ಪ್ರತಿಫಲವನ್ನು ದಲ್ಲಾಳಿಗಳು ಅನುಭವಿಸುತ್ತಾರೆ. ಕಷ್ಟಪಟ್ಟು ಬೆಳೆ ಬೆಳೆದವರಿಗೆ ಲಾಭಾಂಶ ಸಿಗುವುದೇ ಇಲ್ಲ. ಇದನ್ನೇ ಮೇಲಿನ ಗಾದೆ ಮಾತು ಹೇಳಿದೆ. ಭೀಮ ತನ್ನ ಸಹೋದರರ ನಡತೆಯನ್ನು ವಿಮರ್ಶಿಸುವಾಗ ಈ ವಾಕ್ಯವನ್ನಾಡುತ್ತಾನೆ.

ಕೆಳಗಿನ ಪದ್ಯಗಳ ಭಾವಾರ್ಥವನ್ನು ಬರೆಯಿರಿ

೧) ಎಲ್ಲರೊಳು ಕಲಿಭೀಮನೇ ಮಿಡು

ಕುಳ್ಳ ಗಂಡನು ಹಾನಿ ಹರಿಬಕೆ

ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು

ಖುಲ್ಲನಿವನುಪಟಳವನಾತಂ

ಗೆಲ್ಲವನು ಹೇಳುವೆನು ಬಳಿಕವ

ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ

ಕವಿ ಕುಮಾರವ್ಯಾಸನು ಬರೆದಿರುವ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದ ‘ಇನ್ನು ಹುಟ್ಟದೆ ಇರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಿಂದ ಆಯ್ದುಕೊಳ್ಳಲಾಗಿದೆ.

ದ್ರೌಪದಿಯು ಈ ಐದು ಜನ ಗಂಡ೦ದಿರಲ್ಲಿ ತನ್ನನ್ನು ಕೀಚಕನ ಕಾಟದಿಂದ ಪಾರುಮಾಡಬಲ್ಲವರಾರು ಎ೦ದು ಯೋಚಿಸುತ್ತಾಳೆ. ಉಳಿದ ನಾಲ್ವರಿಗಿಂತ ಭೀಮನೆ ತಕ್ಕವನೆಂದು ನಿರ್ಧರಿಸುವ ಸಂದರ್ಭವಿದಾಗಿದೆ.

“ಎಲ್ಲರೊಳಗೆ ವೀರನಾದ ಭೀಮನೇ ಪೌರುಷವುಳ್ಳವನು. ಅವಮಾನ – ಸೋಲಿನಲ್ಲಿ ಇರದೆ ಸಹಾಯಕ್ಕೆ ಧಾವಿಸಿ ಬರುವವನು. ಪ್ರೀತಿಯುಳ್ಳವನು. ದುಷ್ಟನಾದ ಕೀಚಕನ ಕಾಟದಿಂದ ಪಾರುಮಾಡಬಲ್ಲವನು ಇವನೊಬ್ಬನೇ. ಇವನ ನೆರವಿನಿಂದ ಆ ನೀಚನ ಕಾಟದಿಂದ ಪಾರಾಗುವೆನು. ಭೀಮನಲ್ಲಿ ನನ್ನ ಕಷ್ಟವನ್ನು ಹೇಳಿ ನೋಡುವೆನು. ಅವನೂ ನೆರವಿಗೆ ಬರದಿರೆ ಘೋರವಾದ ವಿಷವನ್ನು ಕುಡಿದು ಪ್ರಾಣಬಿಡುವೆನೆಂದು’ ದ್ರೌಪದಿಯು ತೀರ್ಮಾನಿಸುತ್ತಾಳೆ.

ತನ್ನ ಐವರು ಗಂಡಂದಿರಲ್ಲಿ ದ್ರೌಪದಿಗೆ ಭೀಮನ ಬಗ್ಗೆ ಭರವಸೆಯಿದೆ. ಭೀಮನ ಸಹಾಯ ಸಿಗದಿದ್ದರೆ ತಾನು ವಿಷ ಕುಡಿದು ಸಾಯಲು ನಿರ್ಧರಿಸುತ್ತಾಳೆ. ಆದರೆ ಮೊದಲು ಒಮ್ಮೆ ಪ್ರಯತ್ನ ಮಾಡಿ ನೋಡುತ್ತಾಳೆ. ಇಲ್ಲಿ ಅವಳ ತಾಳ್ಮೆ ಮತ್ತು ಜಾಣೆಗಳೆರಡೂ ಮುಖ್ಯವಾಗಿದೆ.

೨) ರಮಣ ಕೇಳುಳಿದವರು ತನ್ನನು

ರಮಿಸುವರು ಮಾನಾರ್ಥವನೆ ನಿ

ರ್ಗಮಿಸುವರು ನೀನಲ್ಲದುಳಿದವರುಚಿತ ಬಾಹಿರರು

ಮಮತೆಯಲಿ ನೀ ನೋಡು ಚಿತ್ತದ

ಸಮತೆಯನು ಬೀಳ್ಕೊಡು ಕುಠಾರನ

ಯಮನ ಕಾಣಿಸಿ ಕರುಣಿಸೆಂದಳು ಕಾಂತೆ ಕೈಮುಗಿದು

ಕವಿ ಕುಮಾರವ್ಯಾಸನು ಬರೆದಿರುವ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದ ಸ್ವೀಕರಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ.

ದ್ರೌಪದಿಯು ಕೀಚಕನ ಕಾಟದಿಂದ ಪಾರು ಮಾಡುವಂತೆ ಭೀಮನನ್ನು ವಿನಂತಿಸುತ್ತಾಳೆ. ಭೀಮನು ಅದಕ್ಕೆ ಪ್ರತಿಕ್ರಿಯಿಸದೆ ಸುಮ್ಮನಿರುತ್ತಾನೆ. ಅದನ್ನು ಕಂಡು ದ್ರೌಪದಿಯು ಆಡುವ ಮಾತುಗಳು ಈ ಮೇಲಿನ ಪದ್ಯದಲ್ಲಿ ಚಿತ್ರಿತವಾಗಿದೆ.

“ಪ್ರಿಯತಮನೆ ಕೇಳು, ಉಳಿದ ಗಂಡಂದಿರು ತನ್ನೊಡನೆ ರಮಿಸಲು ಬರುತ್ತಾರೆ. ಆದರೆ ನನ್ನ ಮಾನ ಕಾಯುವ ವಿಷಯ ಬಂದಾಗ ಮಾತ್ರ ಹಿಂದೆ ಸರಿಯುತ್ತಾರೆ. ಆದ್ದರಿಂದ ಈ ಕಾರ್ಯಕ್ಕೆ ನೀನಲ್ಲದೆ ಉಳಿದವರು ಯೋಗ್ಯರಲ್ಲ. ನಿನ್ನ ಮನದ ಸಮಾಧಾನ ಸ್ಥಿತಿಯನ್ನು ಬಿಟ್ಟುಕೊಟ್ಟು, ಕೋಪಗೊಂಡು ಹೆಣ್ಣಿನ ಮಾನವೆಂಬ ಮರಕ್ಕೆ ಕೊಡಲಿಯಂತಿರುವ ಕೀಚಕನನ್ನು ಕೊಂದು, ಯಮನ ಬಳಿಗೆ ಅಟ್ಟು” ಎಂದು ದ್ರೌಪದಿಯು ಭೀಮನಿಗೆ ಹೇಳಿದಳು.

ಸಮಾಧಾನಿಯಾಗಿದ್ದ ಭೀಮನನ್ನು ಹೊಗಳಿ, ಅವನು ಕೆರಳುವಂತೆ ಮಾಡುವ ದ್ರೌಪದಿಯ ಜಾಣ್ಮೆಯನ್ನು ಇಲ್ಲಿ ಗಮನಿಸಬಹುದು. ಭೀಮನೇ ಈ ಕೆಲಸಕ್ಕೆ ತಕ್ಕವನೆಂದು ಆತನನ್ನು ಹುರಿದುಂಬಿಸಲು, ಉಳಿದ ಅವನ ಸಹೋದರರನ್ನು ಹಿಯಾಳಿಸಿ ಮಾತನಾಡುತ್ತಾಳೆ. ಇದು ಕೂಡ ಅವಳ ತಂತ್ರಗಳಲ್ಲಿ ಒಂದಾಗಿದ್ದು ಜಾಣೆಯ ಪ್ರತೀಕವಾಗಿದೆ ಎನ್ನಬಹುದು.

೩) ಇನ್ನು ಹುಟ್ಟದೆಯಿರಲಿ ನಾರಿಯ

ರೆನ್ನವೊಲು ಭಂಗಿತರು ಭುವನದೊ

ಳಿನ್ನು ಜನಿಸಲುಬೇಡ ಗಂಡರು ಭೀಮಸನ್ನಿಭರು

ಎನ್ನವೊಲು ಪಾಂಡವರವೊಲು ಸಂ

ಪನ್ನ ದುಃಖಿಗಳಾರು ನವೆದರು

ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು.

ಕುಮಾರವ್ಯಾಸ ಕವಿಯು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬ ಮಹಾಕಾವ್ಯದ ವಿರಾಟಪರ್ವದಿಂದ ಸ್ವೀಕರಿಸಿರುವ ‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ.

ಕೀಚಕನ ಕಾಟದಿಂದ, ತುಂಬಿದ ಸಭೆಯಲ್ಲಿ ಆತ ಕಾಲಿಂದ ಜಾಡಿಸಿ ಒದ್ದುದರಿಂದಾದ ಅಪಮಾನದಿಂದ ನೊಂದಿರುವ ದ್ರೌಪದಿಯು ಇನ್ನು ತನ್ನಂತೆ ಅಪಮಾನ-ದುಃಖಗಳನ್ನು ಅನುಭವಿಸಿದ ಹೆಣ್ಣುಗಳು ಹುಟ್ಟಿದಿರಲಿ ಎಂದು ಆಶಿಸುವ ಸಂದರ್ಭವನ್ನು ಕವಿಯು ಇಲ್ಲಿ ಚಿತ್ರಿಸಿದ್ದಾನೆ.

ದ್ರೌಪದಿಯು ಅತ್ಯಂತ ವೇದನೆಯಿಂದ ಆಡಿರುವ ಮಾತುಗಳು ಈ ಪದ್ಯಭಾಗದಲ್ಲಿದೆ. “ನನ್ನಂತೆ ಅವಮಾನದಿಂದ ಭಂಗಿತಳಾದ ಹೆಣ್ಣುಗಳು ಇನ್ನು ಈ ಭೂಮಿಯಲ್ಲಿ ಹುಟ್ಟದಿರಲಿ. ಭೀಮ ಸದೃಶರಾದ ಗಂಡಂದಿರು, ಪಾಂಡವರು ಮತ್ತು ನನ್ನಂತೆ ಅತಿ ದುಃಖದಿಂದ ಬಳಲಿ ನವೆದವರು ಹಿಂದೆ ಯಾರೂ ಈ ಭೂಮಿಯಲ್ಲಿ ಹುಟ್ಟಿರಲಿಲ್ಲವೆನ್ನಿಸುತ್ತದೆ, ಮುಂದೆಯೂ ಹುಟ್ಟದಿರಲಿ” ಎಂದು ದ್ರೌಪದಿಯು ದುಃಖದಿಂದ ಹೇಳಿಕೊಂಡಿದ್ದಾಳೆ. ಅವಳು ಅನುಭವಿಸಿರುವ ಅಪಮಾನ-ದುಃಖದ ತೀವ್ರತೆಯನ್ನು ಇಲ್ಲಿ ಗಮನಿಸಬಹುದು.

೪) ಕುರುಳ ನೇವರಿಸಿದನು ಗಲ್ಲವ

ನೊರೆಸಿ ಮುಂಡಾಡಿದನು ಮಂಚದ

ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ

ಅರಸಿ ಬಿಡು ಬಿಡು ಖಾತಿಯನು ವಿ

ಸ್ತರಿಸಲೇಕಮ್ಮಣ್ಣನಾಜ್ಞೆಯ

ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ

ಕವಿ ಕುಮಾರವ್ಯಾಸನು ಬರೆದಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬ ಕಾವ್ಯದಿಂದಾಯ್ದ ‘ಇನ್ನು ಹುಟ್ಟದೆ ಇರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಆಯ್ದುಕೊಳ್ಳಲಾಗಿದೆ.

ದ್ರೌಪದಿಯನ್ನು ಭೀಮನು ಹೇಗೆ ಸಮಾಧಾನ ಪಡಿಸುವೆನೆಂಬ ಬಗೆಯನ್ನು ಕವಿ ಇಲ್ಲಿ ಚಿತ್ರಿಸಿರುವನು. ಭೀಮನು ದ್ರೌಪದಿಯ ವಿಚಾರದಲ್ಲಿ ಹೊಂದಿದ್ದ ಪ್ರೇಮದ ದ್ಯೋತಕವೆಂಬಂತೆ ಈ ಚಿತ್ರಣವಿದೆ.

“ಭೀಮನು ದ್ರೌಪದಿಯನ್ನು ಅಪ್ಪಿಕೊಂಡು ಅವಳ ತಲೆಯನ್ನು ನೇವರಿಸಿದನು. ಗಲ್ಲವನ್ನು ಸವರಿ ಮುದ್ದಾಡಿದನು. ನಂತರ ಮಂಚದ ಪಕ್ಕದಲ್ಲಿದ್ದ ತಂಬಿಗೆಯನ್ನು ಕೈಗೆತ್ತಿಕೊಂಡು ಅದರಲ್ಲಿದ್ದ ನೀರಿನಿಂದ ದ್ರೌಪದಿಯ ಮುಖ ತಾವರೆಯನ್ನು ತೊಳೆದನು. ಆನಂತರ ಆಕೆಯನ್ನು ಕುರಿತು “ಅರಸಿಯೇ ಕೋಪವನ್ನು ಬಿಟ್ಟುಬಿಡು. ಹೆಚ್ಚಿನ ಮಾತೇಕೆ? ನಾನು ನಮ್ಮಣ್ಣನ ಆಜ್ಞೆಯ ಗೆರೆಯನ್ನು ದಾಟಿದ್ದೇನೆ. ಇನ್ನು ಸಮಾಧಾನದಿಂದ ನೀನು ಹೋಗಬಹುದು” ಎಂಬುದಾಗಿ ಭೀಮನು ಹೇಳುತ್ತಾನೆ.

ಅದುವರೆಗೂ ಅಣ್ಣನ ಆಜ್ಞೆಯ ನೆಪವೊಡ್ಡಿ ಸುಮ್ಮನಿದ್ದ ಭೀಮನು ದ್ರೌಪದಿಯ ದುಃಖ ಮತ್ತು ಕೋಪವನ್ನು ನೋಡಿ ಮರುಗಿ, ಅಣ್ಣನಾಜ್ಞೆಯ ಗೆರೆಯನ್ನು ದಾಟಿ ಅವಳ ನೆರವಿಗೆ ಬರುವ ಭರವಸೆ ನೀಡಿ ಸಂತೈಸುತ್ತಾನೆ. ಇದು ಅವನು ದ್ರೌಪದಿಯ ವಿಚಾರದಲ್ಲಿ ಹೊಂದಿದ್ದ ಪ್ರೀತಿಯ ಸಂಕೇತವಾಗಿದೆ.

೫) ಹೆಂಡತಿಯ ಹರಿಬದಲಿಯೊಬ್ಬನೆ

ಗಂಡುಗೂಸೆ ವೈರಿಯನು ಕಡಿ

ಖಂಡವನು ಮಾಡುವನು ಮೇಣ್ ತನ್ನೊಡಲನಿಕ್ಕುವನು

ಗಂಡರೈವರು ಮೂರುಲೋಕದ ಗಂಡರೊಬ್ಬಳನಾಳಲಾರಿರಿ

ಗಂಡರೋ ನೀವ್ ಭಂಡರೊ ಹೇಳೆಂದಳಿಂದುಮುಖಿ

ಯುಗಪ್ರವರ್ತಕ ಕವಿಯೆಂದು ಪಂಡಿತ-ಪಾಮರರಿಂದ ಪ್ರಶಂಸಿಸಲ್ಪಟ್ಟ ಕವಿ ಕುಮಾರವ್ಯಾಸನು ರಚಿಸಿರುವ ‘ಕರ್ಣಾಟ ಭಾರತ ಕಥಾಮಂಜರಿ’ ಎಂಬ ಷಟ್ಟದಿ ಕಾವ್ಯದಿಂದಾಯ್ದ ‘ಇನ್ನು ಹುಟ್ಟದೆ ಇರಲಿ ನಾರಿಯರೆನ್ನವೊಲು’ ಎಂಬ ಕಾವ್ಯಭಾಗದಿಂದ ಈ ಮೇಲಿನ ಪದ್ಯವನ್ನು ಸ್ವೀಕರಿಸಲಾಗಿದೆ.

ಕೀಚಕನ ಕಾಟದಿಂದ ತನ್ನನ್ನು ಪಾರುಮಾಡಬೇಕೆಂದು ಬ್ರೌಪದಿಯು ಭೀಮನನ್ನು ಕೇಳುತ್ತಾ, ಪತಿಯಾಗಿ ಭೀಮನ ಕರ್ತವ್ಯವೇನಾಗಬೇಕಿತ್ತೆಂಬುದನ್ನು ಸೂಕ್ಷ್ಮವಾಗಿ ಬಿರುನುಡಿಗಳಿಂದ ಚುಚ್ಚುವ ಸಂದರ್ಭವನ್ನು ಕವಿಯು ಈ ಪದ್ಯದಲ್ಲಿ ವರ್ಣಿಸಿರುವನು.

‘ಒಬ್ಬನೇ ಗಂಡನಾದರೆ ಹೆಂಡತಿಗೆ ಅವಮಾನ ಮಾಡಿದವನನ್ನು ಕಡಿದು ತುಂಡುತುಂಡು ಮಾಡಿ ಎಸೆಯುತ್ತಾನೆ, ಇಲ್ಲವೇ ಅವನೊಂದಿಗೆ ಹೋರಾಡಿ ಸಾಯುತ್ತಾನೆಯೇ ಹೊರತು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಆದರೆ ನನಗೆ ಒಬ್ಬನಲ್ಲ ಐವರು ಗಂಡಂದಿರು. ಅದೂ ಮೂರುಲೋಕದಲ್ಲೂ ಪರಾಕ್ರಮಿಗಳೆನಿಸಿಕೊಂಡವರು. ಒಬ್ಬಳನ್ನು ಕಾಪಾಡಲಾರದ ನೀವು ವೀರರೋ ಇಲ್ಲವೇ ಭಂಡಜೀವಿಗಳೋ ಹೇಳು ಎಂದು ದ್ರೌಪದಿಯು ಭೀಮನನ್ನು ಕೇಳಿದಳು. ಇದು ಈ ಪದ್ಯದ ಭಾವಾರ್ಥವಾಗಿದೆ.

ಐದು ಜನ ಗಂಡಂದಿರಿದ್ದೂ ಕೀಚಕನಿಂದ ತನಗೊದಗಿದ ಅಪಮಾನವನ್ನೂ, ಅದನ್ನು ನೋಡಿಕೊಂಡು ಸುಮ್ಮನಿರುವ ಗಂಡಂದಿರನ್ನೂ ದೌಪದಿಯು ತರಾಟೆಗೆ ತೆಗೆದುಕೊಂಡಿದ್ದಾಳೆ. ಗಂಡನಾಗಿ ಹೆಂಡತಿಯ ಮಾನಕಾಯುವುದು ಭೀಮಾದಿಗಳ ಆದ್ಯ ಕರ್ತವ್ಯವೆಂಬುದನ್ನು ದ್ರೌಪದಿಯು ಮಾರ್ಮಿಕವಾಗಿ ತಿಳಿಸುವುದು ಇಲ್ಲಿನ ಸ್ವಾರಸ್ಯವಾಗಿದೆ.

ಕಾವ್ಯಭಾಗದ ಸಾರಾಂಶ ಮತ್ತು ವಿಮರ್ಶೆ

ಕೀಚಕನ ಉಪಟಳದಿಂದ ನೊಂದಿರುವ ದ್ರೌಪದಿಯ ಅಸಹಾಯಕತೆಯ ಅಳಲನ್ನು ಈ ಪದ್ಯದಲ್ಲಿ ಕಾಣಬಹುದು. ತನ್ನ ಸಂಕಟವನ್ನು ಯಾರ ಬಳಿ ಹೇಳಿಕೊಳ್ಳಲಿ? ಯಾರು ತನಗೆ ನೆರವಾಗುವರೆಂದು ಅವಳು ದುಃಖಿಸುವುದರೊಂದಿಗೆ ಈ ಪದ್ಯವು ಆರಂಭಗೊಳ್ಳುವುದು.

೧) ಆರಿಗುಸುರುವೆನಾರ ಸಾರುವೆ

ನಾರಿಗೊರಲುವೆನಾರಿಗರುಹುವೆ

ನಾರ ಬೇಡುವೆನಕಟ ಹೆಂಗಸು ಜನ್ಮವನು ಸುಡಲಿ

ಘೋರ ಪಾತಕಿಯೆನ್ನವೊಲು ಮು

ನ್ಯಾರು ನವೆದವರುಂಟು ಮರಣವು

ಬಾರದೆಂದೊದಲಿದಳು ಬಳುರನು ಹೊಯ್ದು ಶಶಿವದನೆ

ಕೀಚಕನ ಕಾಟದಿಂದ ಮೊಂದಿರುವ ದ್ರೌಪದಿಯ ಏಕಾಂಗಿ ರೋದನ ಇಲ್ಲಿ ಚಿತ್ರಿತಗೊಂಡಿದೆ. ತನ್ನ ಸಂಕಟ ನೋವುಗಳನ್ನು ಯಾರಿಗೆ ಹೇಳಲಿ? ಯಾರ ಬಳಿ ಹೋಗಲಿ? ಯಾರಿಗೆ ತನ್ನ ದುಃಖವನ್ನು ಹೇಳಿಕೊಳ್ಳಲಿ? ನನ್ನನ್ನು ಕಾಪಾಡಿರಿ ಎಂದು ಯಾರನ್ನು ಬೇಡಿಕೊಳ್ಳಲಿ? ಅಯ್ಯೋ ಆ ಹೆಣ್ಣು ಜನ್ಮವನ್ನು ಸುಡಬೇಕು. ಮಹಾಪಾಪಿಯಯಾದ ನನ್ನಂತೆ ಈ ಹಿಂದೆ ಯಾರು ಕಷ್ಟದಿಂದ ಸೊರಗಿದವರಿದ್ದಾರೆ? ನನಗೆ ಮರಣವಾದರೂ ಬರುವುದಿಲ್ಲವೇಕೆ? ಎಂದು ಮುಂತಾಗಿ ಚಿಂತೆಯಿಂದ ದುಃಖಿಸುತ್ತಾ ದ್ರೌಪದಿಯು ತನ್ನ ಹೊಟ್ಟೆಯನ್ನು ಹೊಡೆದುಕೊಂಡು ರೋದಿಸಿದಳು.

ಶಬ್ಧಾರ್ಥ: ಉಸುರು – ಹೇಳು; ಸಾರು – ಹತ್ತಿರ ಬರು, ಸಮೀಪಿಸು; ಒರಲು – ಕೂಗಿ ಹೇಳು; ನವೆ – ನರಳು, ಸೊರಗು; ಹೊಯ್ದು – ಹೊಡೆದುಕೊಂಡು: ಶಶಿವದನೆ – ದ್ರೌಪದಿ, ಚಂದ್ರನಂತೆ ಮುಖವುಳ್ಳವಳು.

೨) ಯಮಸುತಂಗರುಹುವೆನೆ ಧರ್ಮ

ಕ್ಷಮೆಯ ಗರ ಹೊಡೆದಿಹುದು ಪಾರ್ಥನು

ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ

ಭ್ರಮಿತನಾಗಿಹನುಳಿದರಿಬ್ಬರು

ರಮಣರಿವರೀ ನಾಯ ಕೊಲಲ

ಕ್ಷಮರು ನಿಸ್ಸಂದೇಹವೆಂದಳು ತನ್ನ ಮನದೊಳಗೆ

ತನ್ನ ಐವರು ಗಂಡಂದಿರಲ್ಲಿ ಯಾರು ತನ್ನ ದುಃಖವನ್ನು ತೊಡೆಯಲು ಯೋಗ್ಯರೆಂದು ದ್ರೌಪದಿಯು ಮನದಲ್ಲೇ ಯೋಚಿಸುವ ವಿವರಗಳು ಈ ಪದ್ಯದಲ್ಲಿವೆ. ಹಿರಿಯವನಾದ ಯುಧಿಷ್ಠಿರನಿಗೆ ಹೇಳೋಣವೆಂದರೆ ಅವನಿಗೆ ಧರ್ಮ ಮತ್ತು ಕ್ಷಮೆಗಳೆಂಬ ಗ್ರಹ ಬಡಿದಿದೆ. ಅರ್ಜುನನಿಗೆ ನನ್ನ ಮೇಲೆ ಮಮತೆಯಿದೆಯೆಂದುಕೊಳ್ಳೋಣವೆಂದರೆ ಅವನಿಗೆ ಅಣ್ಣನಾಜ್ಞೆಯ ಹುಚ್ಚು ಹಿಡಿದಿದೆ. ಇನ್ನು ನಕುಲ-ಸಹದೇವರಿಗೆ ಹೇಳೋಣವೆಂದರೆ ಅವರಲ್ಲಿ ಈ ನಾಯಿಯನ್ನು ಕೊಲ್ಲುವ ಸಾಮರ್ಥ್ಯವಿಲ್ಲ. ಇದರಲ್ಲಿ ಯಾವ ಸಂದೇಹವೂ ಇಲ್ಲವೆಂದು ತನ್ನೊಳಗೇ ಯೋಚಿಸಿದಳು.

ಶಬ್ದಾರ್ಥ: ಯಮಸುತ -ಧರ್ಮರಾಯ; ಗರ – ಗ್ರಹ, ದೆವ್ವ, ಭ್ರಮಿತ – ಭ್ರಮೆಗೆ ಸಿಲುಕಿದ, ಕಂಗೆಟ್ಟಿ; ಪಾರ್ಥ – ಅರ್ಜುನ; ಅಕ್ಷಮರು – ಅಸಮರ್ಥರು; ನಾಯ-ನಾಯಿಯನ್ನು (ಕೀಚಕನನ್ನು); ರಮಣರು-ಪತಿಗಳು

೩) ಎಲ್ಲರೊಳು ಕಲಿಭೀಮನೇ ಮಿಡು

ಕುಳ್ಳ ಗಂಡನು ಹಾನಿ ಹರಿಬಕೆ

ನಿಲ್ಲವಂಗೈಸುವನು ಕಡು ಹೀಹಾಳಿಯುಳ್ಳವನು

ಖುಲ್ಲನಿವನುಪಟಳವನಾತಂ

ಗೆಲ್ಲವನು ಹೇಳುವೆನು ಬಳಿಕವ

ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ

ದ್ರೌಪದಿಯು ಯುಧಿಷ್ಠಿರ, ಅರ್ಜುನ, ನಕುಲ-ಸಹದೇವರು ತನ್ನ ಕಷ್ಟವನ್ನು ನಿವಾರಿಸುವುದಿಲ್ಲವೆಂದು ಯೋಚಿಸಿ ಅಂತಿಮವಾಗಿ ಭೀಮನೇ ಇದಕ್ಕೆ ತಕ್ಕವನೆಂದು ತೀರ್ಮಾನಿಸುವ ಸಂದರ್ಭ ಇಲ್ಲಿ ಚಿತ್ರಿತಗೊಂಡಿದೆ. “ನನ್ನ ಗಂಡಂದಿರಲ್ಲಿ ಭೀಮನೇ ಶೌರ್ಯಶಾಲಿಯಾದವನು ಅವನು ಕಷ್ಟ, ಅಗತ್ಯಗಳಿಗೆ ಬೆಂಬಲವಾಗಿ ಬರುವವನು, ಮಹಾ ಛಲಗಾರನಾತ. ಕೀಚಕನ ಉಪಟಳವನ್ನು ಅವನಿಗೆ ಹೇಳುತ್ತೇವೆ. ಅವನೂ ನನ್ನ ನೆರವಿಗೆ ಬಾರದೆ ವಿಮುಖನಾದರೆ ಘೋರ ವಿಷವನ್ನು ಕುಡಿದು ಸಾಯುತ್ತೇನೆ” ಎಂದು ದ್ರೌಪದಿಯು ನಿಶ್ಚಯಿಸುವಳು.

ಶಬ್ದಾರ್ಥ: ಮಿಡುಕುಳ್ಳ-ಧೈರಶಾಲಿ; ಹರಿಬ-ಕಾರ್ಯ, ಪಾಲನೆ, ಸಂಕಷ್ಟ, ತೊಂದರೆ; ಅಂಗೈಸು -ಕಾಳಜಿತೋರು; ಹೀಹಾಳಿ-ಸ್ವಾಭಿಮಾನದ ಜಿದ್ದು; ಹುರುಳು – ಕೆಚ್ಚು ಸಾಮರ್ಥ್ಯ: ಖುಲ್ಲ – ದುಷ್ಟ, ಕ್ಷುಲ್ಲಕ (ಕೀಚಕ),

೪) ಎಬ್ಬಿಸಲು ಭುಗಿಲೆಂಬನೋ ಮೇ

ಣೊಬ್ಬಳೇತಕೆ ಬಂದೆ ಮೋರೆಯ

ಮಬ್ಬಿದೇಕೆಂದೆನ್ನ ಸಂತೈಸುವನೊ ಸಾಮದಲಿ

ತುಬ್ಬುವುದೊ ತಾ ಬಂದ ಬರವಿದು

ನಿಬ್ಬರವಲಾ ಜನದ ಮನಕಿ

ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ

ಭೀಮನಿಗೆ ತನ್ನ ಸಂಕಟವನ್ನು ಹೇಳಿಕೊಂಡು ಅವನ ಸಹಾಯ ಪಡೆಯುವ ಸಲುವಾಗಿ ದ್ರೌಪದಿಯು ಭೀಮನನ್ನು ಹುಡುಕಿಕೊಂಡು ಅವನಿದ್ದ ಪಾಠಶಾಲೆಗೆ ಬರುವಳು. ಅಲ್ಲಿ ನಿದ್ರಿಸುತ್ತಿದ್ದ ಭೀಮನನ್ನು ನೋಡಿದ ದ್ರೌಪದಿಯು “ಎಬ್ಬಿಸಿದ ಕೂಡಲೇ ಭೀಮನು ಸಿಟ್ಟಾಗುವನೇನೋ? ಅಥವಾ ಒಬ್ಬಳೇ ಏಕೆ ಬಂದೆ, ಮುಖವೇಕೆ ಕುಂದಿದೆ ಎಂದು ಸಮಾಧಾನ ಪಡಿಸುವನೋ? ನಾನು ಇಲ್ಲಿಗೆ ಬಂದಿರುವುದು ಬೇರೆ ಯಾರಿಗಾದರೂ ತಿಳಿದರೆ ಗತಿಯೇನು?” ಎಂದು ಯೋಚಿಸಿದಳು. ಕೊನೆಗೆ ಎಬ್ಬಿಸಿ ನೋಡಿಯೇ ಬಿಡುತ್ತೇನೆಂದು ಭೀಮನ ಬಳಿಗೆ ಬಂದಳು.

ಶಬ್ದಾರ್ಥ: ಮೋರೆ-ಮುಖ; ಮಬ್ಬು-ಕಳಾಹೀನತೆ (ಸಪ್ಪಗಿನ ಮುಖ); ಸಾಮ-ಸಮಾಧಾನ, ತಾಳ್ಮೆ; ತುಬ್ಬುವುದೋ -ಅರಿಯುವುದೋ (ಅವನ ಮನಸ್ಸನ್ನು); ನಿಬ್ಬರವು-ಅಕಾಲಿಕ ಆಗಮನ, ಬರವಲ್ಲದ ಬರವು; ವಲ್ಲಭ-ಗಂಡ, ನಲ್ಲ, ಒಡೆಯ,

೫) ಮೆಲ್ಲಮೆಲ್ಲನೆ ಮುಸುಕ ಸಡಿಲಿಸಿ

ಗಲ್ಲವನು ಹಿಡಿದಲುಗಲಪ್ರತಿ

ಮಲ್ಲನೆದ್ದನು ನೋಡಿದನು ಪಾಂಚಾಲನಂದನೆಯ

ವಲ್ಲಭೆಯ ಬರವೇನು ಮುಖದಲಿ

ತಲ್ಲಣವೆ ತಲೆದೋರುತಿದೆ ತಳು

ವಿಲ್ಲದುಸುರಿರುಳೇಕೆ ಬಂದೆ ಲತಾಂಗಿ ಹೇಳೆಂದ

ಭೀಮನ ಬಳಿ ಸಾರಿದ ದ್ರೌಪದಿಯು ಮೆಲ್ಲನೆ ಅವನ ಮುಸುಕನ್ನು ತೆಗೆದು ಹಾಕಿ, ನಿಧಾನವಾಗಿ ಗಲ್ಲವನ್ನು ಹಿಡಿದು ಅಲುಗಿಸಿದಾಗ ಮಹಾಮಲ್ಲನಾದ ಭೀಮನು ಎಚ್ಚರಗೊಂಡು ಮೇಲೆದ್ದನು. ಪಾಂಚಾಲನಂದನೆಯಾದ ದ್ರೌಪದಿಯ ಆಗಮನವನ್ನು ನೋಡಿ “ಏಕೆ ಬಂದೆ? ಮುಖದಲ್ಲಿ ಭಯ-ಉದ್ವೇಗಗಳು ಎದ್ದು ಕಾಣುತ್ತಿದೆಯೇಕೆ? ಈ ರಾತ್ರಿಯ ವೇಳೆಯಲ್ಲೇಕೆ ಬಂದೆ? ತಡಮಾಡದೆ ಹೇಳು” ಎಂದು ಅವಸರಿಸಿದನು

ಶಬ್ದಾರ್ಥ: ಅಪ್ರತಿಮಲ್ಲ-ಸರಿಸಾಟಿಯಿಲ್ಲದ ಜಟ್ಟಿ, ಧೀರ, ಭೀಮ; ಪಾಂಚಾಲನಂದನೆ – ಪಾಂಚಾಲ ದೇಶದ ಅರಸುಪುತ್ರಿ, ದ್ರೌಪದಿ; ವಲ್ಲಭೆ-ಪ್ರಿಯೆ, ಪತ್ನಿ; ತಲ್ಲಣ-ಹೆದರಿಕೆ, ಕಳವಳ; ಲತಾಂಗಿ-ಬಾಗಿ ಬಳುಕುವ ಅಂಗಾಂಗವುಳ್ಳವಳು, ದ್ರೌಪದಿ; ತಳವು-ತಡ.

೬) ನಿನ್ನೆ ಹಗಲರೆಯಟ್ಟಿ ಕೀಚಕ

ಕುನ್ನಿಯೊಡೆದನು ರಾಜಸಭೆಯಲಿ

ನಿನ್ನ ವಂದಿಗರಿರಲು ಪರಿಭವವುಚಿತವೇ ತನಗೆ

ಎನ್ನನವ ಬೆಂಬಳಿಯ ಬಿಡ ನಾ

ನಿನ್ನು ಬದುಕುವಳಲ್ಲ ಪಾತಕ

ನಿನ್ನ ತಾಗದೆ ಮಾಣದೆನಲಾ ಭೀಮ ಖತಿಗೊಂಡ

ದ್ರೌಪದಿಯು ಕೀಚಕನಿಂದ ತನಗಾದ ತೊಂದರೆ – ಅಪಮಾನಗಳನ್ನು ವಿವರಿಸಿ, “ಕೀಚಕನೆಂಬ ನಾಯಿಯು, ರಾಜ ಸಭೆಯೆದುರಿನಲ್ಲೇ, ನಿನ್ನೆಯ ದಿನ ನನ್ನನ್ನು ಕಾಲಲ್ಲಿ ಹೊಸಕಿ ಒದ್ದದ್ದನ್ನು ನೀನೇ ನೋಡಿದೆ. ನಿನ್ನಂತಹವನಿರುವಾಗ ನನಗೆ ಈ ಅಪಮಾನ ಉಚಿತವಾದುದೇ? ಅವನು ನನ್ನ ಬೆನ್ನು ಹತ್ತದೆ ಬಿಡುವುದಿಲ್ಲ. ನಾನು ಬದುಕುವವಳಲ್ಲ. ನಾನು ಸತ್ತುಹೋದರೆ ಆ ಪಾಪ ನಿನಗೆ ತಟ್ಟದೆ ಬಿಡುವುದಿಲ್ಲ’ ಎಂದು ದ್ರೌಪದಿಯು ಹೇಳಲು ಭೀಮನು ಕೋಪಗೊಂಡನು.

ಶಬ್ದಾರ್ಥ: ಅರೆಯಟ್ಟಿ-ಬೆನ್ನಟ್ಟಿ; ವಂದಿಗರು-ಜತೆಯವರು; ಪರಿಭವ-ಅವಮಾನ, ಅನಾದರ; ಪಾತಕ-ಪಾಪ; ಖತಿ-ಕೋಪ; ಮಾಣದು-ಬಿಡದು; ಬೆಂಬಳಿಯ ಬಿಡ-ಬೆನ್ನು ಹತ್ತದೆ ಬಿಡಲಾರನು.

೭) ರಮಣ ಕೇಳುಳಿದವರು ತನ್ನನು

ರಮಿಸುವರು ಮಾನಾರ್ಥವೆನೆ ನಿ

ರ್ಗಮಿಸುವರು ನೀನಲ್ಲದುಳಿದವರುಚಿತ ಬಾಹಿರರು

ಮಮತೆಯಲಿ ನೀ ನೋಡು ಚಿತ್ತದ

ಸಮತೆಯನು ಬೀಳ್ಕೊಡು ಕುಠಾರನ

ಯಮನ ಕಾಣಿಸಿ ಕರುಣಿಸೆಂದಳು ಕಾಂತೆ ಕೈಮುಗಿದು

ಭೀಮ ಕೋಪಗೊಂಡಿರುವುದನ್ನು ನೋಡಿ ದ್ರೌಪದಿಯು ತನ್ನ ಮಾತುಗಳನ್ನು ಈ ರೀತಿ ಮುಂದುವರಿಸಿದಳು. “ರಮಣನೇ ಕೇಳು. ಉಳಿದ ನಿನ್ನ ಸಹೋದರರು ನನ್ನೊಡನೆ ರಮಿಸಿ ಸಂತೋಷಿಸುತ್ತಾರೆ. ನನ್ನ ಮಾನ ಕಾಪಾಡುವ ವಿಚಾರ ಬಂದಾಗ ಎತ್ತಲೋ ಹೋಗಿ ಬಿಡುತ್ತಾರೆ. ನಿನ್ನನ್ನು ಬಿಟ್ಟರೆ, ಉಳಿದವರೆಲ್ಲ ನನಗೆ ಪತಿಗಳೆನಿಸಲು ಯೋಗ್ಯತೆ ಇರದ ಬಾಹಿರರು. ನೀವಾದರೂ ನನ್ನನ್ನು ಇವಳು ನನ್ನವಳೆಂಬ ದೃಷ್ಟಿಯಿಂದ ನೋಡು. ಬುದ್ದಿ, ಮನಸ್ಸಿನ ಸಮತೆಯನ್ನು ಬಿಡು. ನೀಚನಾದ ಕೀಚಕನಿಗೆ ಯಮಲೋಕವನ್ನು ಕಾಣಿಸುವ ಕರುಣೆ ತೋರಿಸು” ಎಂದು ದ್ರೌಪದಿಯು ಭೀಮನಿಗೆ ಕೈಮುಗಿದು ಬೇಡಿಕೊಂಡಳು.

ಶಬ್ದಾರ್ಥ: ಮಾನಾರ್ಥ-ಮಾನದ ವಿಷಯ; ಬಾಹಿರ-ಅದಕ್ಕೆ ಹೊರತಾದ; ಸಮತೆ-ಶಾಂತಸ್ಥಿತಿ; ಕುಠಾರ – ಕ್ರೂರಿ.

೮) ಕಲಹಕಾದೊಡೆ ನಾವು ರಮಿಸುವ

ರುಳಿದವರು ಬಳಿಕೇನು ಗಾದೆಯ

ಬಳಕೆ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು

ಅಳುಕಿ ನಡೆವವರಲ್ಲ ನಿನ್ನಯ

ಹಳಿವು ಹರಿಬವ ಹೇಳಿ ಚಿತ್ತವ

ತಿಳುಹಿಕೊಂಬುದು ನಾವು ಭೀತರು ಧರ್ಮಜನ ಹೊರೆಗೆ

ದ್ರೌಪದಿಯ ಮಾತುಗಳನ್ನು ಕೇಳಿಸಿಕೊಂಡ ಭೀಮನು ನೆರವು ನೀಡಲು ತಕ್ಷಣವೇ ಒಪ್ಪಲಿಲ್ಲ. ಬದಲಿಗೆ ಹೀಗೆಂದು ನುಡಿದನು. ”ಜಗಳ-ಹೊಡೆದಾಟಕ್ಕಾದರೆ ನಾನು ಬೇಕು. ಉಳಿದವರೆಲ್ಲ ಬರೀ ನಿನ್ನೊಂದಿಗೆ ರಮಿಸಲು ಇರುವರು. ‘ದುಡಿವವನು ಯಾರೋ, ತಿನ್ನುವವರು ಯಾರೋ’ ಎಂದು ಗಾದೆ ಹೇಳುತ್ತಾರಲ್ಲ ಹಾಗಾಯ್ತು. ನಾನು ಹೆದರಿ ಬಾಳುವವನಲ್ಲ. ನಿನ್ನ ಮಾನ ರಕ್ಷಣೆಗೆ ನೀನೇನು ಮಾಡಬೇಕೆಂದು ಯೋಚಿಸಿ ಸಮಾಧಾನ ಮಾಡಿಕೋ. ನಾನು ನಿನಗೆ ಸಹಾಯ ಮಾಡಲಾರೆ ಏಕೆಂದರೆ ಅಣ್ಣನಾದ ಧರ್ಮಜನ ಭಯ ನನಗಿದೆ” ಎಂದು ತನ್ನ ಅಸಹಾಯಕತೆಯನ್ನು ಭೀಮನು ತಿಳಿಸಿದನು.

ಶಬ್ದಾರ್ಥ: ಹಳಿವು-ಕೆಟ್ಟಮಾತು; ಹೊರೆ-ಜೊತೆ, ಪಕ್ಕ.

೯) ಹೆಂಡತಿಯ ಹರಿಬದಲಿಯೊಬ್ಬನೆ

ಗಂಡುಗೂಸೆ ವೈರಿಯನು ಕಡಿ

ಖಂಡವನು ಮಾಡುವನು ಮೇಣ್ ತನ್ನೊಡಲನಿಕ್ಕುವನು

ಗಂಡರೈವರು ಮೂರುಲೋಕದ

ಗಂಡರೊಬ್ಬಳನಾಳಲಾರಿರಿ

ಗಂಡರೋ ನೀವ್ ಭಂಡರೊ ಹೇಳೆಂದಳಿಂದುಮುಖಿ

ಭೀಮನ ಮಾತುಗಳನ್ನು ಕೇಳಿದ ದ್ರೌಪದಿಗೆ ತುಂಬಾ ದುಃಖವಾಯಿತು. ಅವಳು ಭೀಮನನ್ನು ಉದ್ದೇಶಿಸಿ “ಒಬ್ಬ ಗಂಡನಾಗಿದ್ದರೆ ಹೆಂಡತಿಯ ಮಾನರಕ್ಷಿಸುವ ಪ್ರಸಂಗ ಬಂದಾಗ ಶತ್ರುವನ್ನು ಕಡಿದು ಹಾಕುತ್ತಾನೆ. ಇಲ್ಲದಿದ್ದರೆ ಹೋರಾಡಿ ತಾನಾದರೂ ಸಾಯುತ್ತಾನೆ. ನನಗೆ ಒಬ್ಬನಲ್ಲ, ಮೂರುಲೋಕದ ವೀರರೆನಿಸಿದ ಐವರು ಗಂಡರಿದ್ದೀರಿ. ನನ್ನೊಬ್ಬಳನ್ನು ಆಳಲಾರಿರಿ. ನೀವೇನು ಗಂಡಸರೋ, ಇಲ್ಲವೆ ಭಂಡರೋ ಹೇಳಿರಿ?” ಎಂದು ದ್ರೌಪದಿಯು ದುಃಖದಿಂದಲೂ ಹತಾಶೆಯಿಂದಲೂ ಉದ್ಗರಿಸಿದಳು.

ಶಬ್ದಾರ್ಥ: ಹರಿಬ-ಕರ್ತವ್ಯ, ರಕ್ಷಣೆ; ಕಡಿಖಂಡ-ಕಡಿದು ತುಂಡುಮಾಡು.

೧೦) ಹೆಣ್ಣು ಹರಿಬಕ್ಕೋಸುಗವೆ ತ

ಮ್ಮಣ್ಣನಾಜ್ಞೆಯ ಮೀರಿ ಕುಂತಿಯ

ಚಿಣ್ಣ ಬದುಕಿದನೆಂದು ನುಡಿವರು ಕುಜನರಾದವರು

ಅಣ್ಣನವರಿಗೆ ದೂರುವುದು ನಾ

ವುಣ್ಣದುರಿಯಿವು ರಾಯನಾಜ್ಞೆಯ

ಕಣ್ಣಿಯಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳೆಂದ

ದ್ರೌಪದಿಯ ಮಾತುಗಳಿಗೆ ಉತ್ತರಿಸುತ್ತಾ ಭೀಮನು “ಹೆಂಡತಿಯ ಮಾತು ಕೇಳಿದ ಭೀಮನು ಅಣ್ಣನಾಜ್ಞೆಯನ್ನು ಮೀರಿದನೆಂದು ಕೆಟ್ಟ ಜನರು ನಾಳೆ ಮಾತನಾಡುತ್ತಾರೆ. ಆದ್ದರಿಂದ ನೀನು ಅಣ್ಣನಾದ ಧರ್ಮಜನಿಗೆ ದೂರು ಹೇಳು. ಇದು ನನಗೆ ನುಂಗಲಾರದ ಬಿಸಿ ಕೆಂಡವಾಗಿದೆ. ಅಣ್ಣನ ಆಜ್ಞೆಯೆಂಬ ಕಾಲಕಟ್ಟಲೆ (ಹಗ್ಗ) ನನ್ನನ್ನು ಕಟ್ಟಿಹಾಕಿದೆ. ನಾನು ಅದರಲ್ಲಿ ಬಿದ್ದಿದ್ದೇನೆ” ಎಂದು ಭೀಮ ತನ್ನ ಅಸಹಾಯಕತೆಯನ್ನು ದ್ರೌಪದಿಗೆ ಹೇಳಿದನು.

ಶಬ್ದಾರ್ಥ: ಕುಜನ-ಕೆಟ್ಟಜನ; ಕಣ್ಣಿ-ಬಂಧನ, ಹಗ್ಗದ ಗಂಟು.

೧೧) ಇನ್ನು ಹುಟ್ಟದೆಯಿರಲಿ ನಾರಿಯ

ರೆನ್ನವೊಲು ಭಂಗಿತರು ಭುವನದೊ

ಇನ್ನು ಜನಿಸಲುಬೇಡ ಗಂಡರು ಭೀಮಸನ್ನಿಭರು

ಎನ್ನವೊಲು ಪಾಂಡವರವೊಲು ಸಂ

ಪನ್ನ ದುಃಖಿಗಳಾರು ನವೆದರು

ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು.

ಭೀಮನಾಡಿದ ಮಾತುಗಳನ್ನು ಕೇಳಿ ದ್ರೌಪದಿಗೆ ತುಂಬಾ ದುಃಖವಾಯಿತು. ಆಕೆಯು “ನನ್ನಂತೆ ಅಪಮಾನಕ್ಕೊಳಗಾದ ಹೆಂಗಸರು ಇನ್ನು ಮೇಲೆ ಭೂಮಿಯಲ್ಲಿ ಹುಟ್ಟದಿರಲಿ. ಭೀಮನಂತೆ ಅಸಹಾಯಕರಾದ ಪರಮವೀರರು ಇನ್ನು ಮೇಲೆ ಭೂಮಿಯ ಮೇಲೆ ಹುಟ್ಟದಿರಲಿ. ನನ್ನಂತೆ, ಪಾಂಡವರಂತೆ ಸಂಪೂರ್ಣ ದುಃಖದಲ್ಲಿ ಕೊರಗಿದವರು ಈ ಹಿಂದೆ ಯಾರೂ ಇರಲಾರರು” ಎಂದು ದ್ರೌಪದಿಯು ಹಲುಬಿದಳು.

ಶಬ್ದಾರ್ಥ: ಭೀಮಸನ್ನಿಭರು-ಭೀಮಸದೃಶರು, ಭೀಮನಂತೆ ಬಲಶಾಲಿಗಳು (ಹೆಂಡತಿಯನ್ನು ಕಾಪಾಡಲಾಗದ ಭೀಮನಂಥವರು ಹುಟ್ಟಿ ಏನು ಪ್ರಯೋಜನ? ಎಂಬುದು ದ್ರೌಪದಿಯ ಮಾತಿನ ಅಭಿಪ್ರಾಯ); ನವೆ-ನರಳು: ಭಂಗಿತರು-ಅವಮಾನಕ್ಕೊಳಗಾದವರು.

೧೨) ಮಂದೆಗೆಳೆಸಿದ ಪಾಪಿ ಕೌರವ’

ನಂದು ಮುಂದಲೆವಿಡಿದು ಸೈಂಧವ

ಬಂದು ಬಳಿಕಾರಣ್ಯವಾಸದೊಳೆನ್ನನೆಳದೊಯ್ದ

ಇಂದು ಕೀಚಕ ನಾಯ ಕಾಲಲಿ

ನೊಂದೆ ನಾನೀ ಮೂರು ಬಾರಿಯೆ

ಬಂದ ಭಂಗವೆ ಸಾಕೆನುತೆ ಬಸವಳಿದಳಿಂದುಮುಖಿ

“ಜನರ ಮುಂದೆ ನನ್ನ ಮಾನ ಕಳೆಯಲು ಬಯಸಿದ ಪಾಪಿಯಾದ ಕೌರವನು ಅಂದು ನನ್ನ ಮುಂದಲೆಗೂದಲನ್ನು ಹಿಡಿದು ಎಳೆಸಿದನು. ಅರಣ್ಯವಾಸದಲ್ಲಿರುವಾಗ ಸೈಂಧವನು ನನ್ನನ್ನು ಹೊತ್ತುಕೊಂಡು ಹೋದ. ಈ ದಿನ ಕೀಚಕ ನಾಯಿಯು ನನ್ನನ್ನು ಕಾಲಿನಿಂದ ಒದ್ದು ನೋಯಿಸಿದ. ಈ ಮೂರು ಅಪಮಾನ-ಭಂಗಗಳೇ ನನಗೆ ಸಾಕಾಗಿದೆ” ಎಂದು ದ್ರೌಪದಿಯು ಮಿತಿಮೀರಿದ ದುಃಖದಿಂದ ಪ್ರಲಾಪಿಸಿದಳು.

ಶಬ್ದಾರ್ಥ: ಮಂದೆಗೆಳಸು-ತುಂಬಿದ ಸಭೆಗೆ ಎಳೆದು ತರಿಸಿದ; ಮುಂದಲೆ-ತಲೆಯ ಮುಂಭಾಗದ ಕೂದಲು; ಬಸವಳಿ-ಬಳಲು; ಭಂಗ-ಅವಮಾನ.

೧೩) ಕಾಲಯಮ ಕೆರಳಿದೊಡೆ ಮುರಿವೆ

ಚ್ಚಾಳುತನದವರೆನ್ನನೊಬ್ಬಳ

ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ

ತೋಳ ಹೊರೆ ನಿಮಗೇಕೆ ಭೂಮಿ

ಪಾಲ ವಂಶದೊಳುದಿಸಲೇತಕೆ

ಕೂಳುಗೇಡಿಂಗೊಡಲ ಹೊರುವಿರಿಯೆಂದಳಿಂದುಮುಖಿ

“ಪ್ರಳಯ ಕಾಲದ ಯಮನೇ ಕೆರಳಿ ಯುದ್ಧಕ್ಕೆ ಬಂದರೂ ಅವನನ್ನು ಮುರಿಯುವಷ್ಟು ಯುದ್ಧ ಪ್ರವೀಣರಾದ ನೀವು ನನ್ನೊಬ್ಬಳನ್ನು ಆಳಲಾರಿರಿ. ಪಾಪಿಗಳಿರಾ, ಅಪಕೀರ್ತಿಗೆ ಹೆದರುವ ನಿಮಗೇಕೆ ಇಂತಹ ಸದೃಢವಾದ ತೋಳುಗಳು? ಕ್ಷತ್ರಿಯರಾಗಿ ಏಕೆ ಹುಟ್ಟಿದಿರಿ? ನಿಮಗೆ ಕೂಳು ಹಾಕುವುದೊಂದು ದಂಡ, ಕೇಡು” ಎಂಬು ಭೀಮನನ್ನು ದ್ರೌಪದಿಯು ಮೂದಲಿಸಿದಳು.

ಶಬ್ದಾರ್ಥ: ಕಾಲ-ಯಮ; ಎಚ್ಚಾಳುತನ-ಬಿಲ್ವಿದ್ಯಾಜಾಣೆ; ತೋಳಹೊರೆ-ತೋಳ್ಳಲ; ಕೂಳುಗೇಡಿಂಗೊಡಲ ಹೊರುವಿರಿ-ತಿನ್ನುವುದಕ್ಕೆ ಮಾತ್ರ ಹುಟ್ಟಿರುವ ನಿಷ್ಟ್ರಯೋಜಕರಂತೆ ಬದುಕಿರುವಿರಿ.

೧೪) ಎನಲು ಕಂಬನಿದುಂಬಿದನು ಕಡು

ನೆನೆದುದಂತಃಕರಣ ರೋಷದ

ಘನತೆ ಹೆಚ್ಚಿತು ಹಗೆಗಳನ್ನು ಹಿಂಡಿದನು ಮನದೊಳಗೆ

ತನುಪುಳಕವುಬ್ಬರಿಸಿ ಮೆಲ್ಲನೆ

ವನಿತೆಯನು ತೆಗೆದಪ್ಪಿದನು ಕಂ

ಬನಿಯದೊಡೆದನು ಸೆರಗಿನಲಿ ಕಲಿಭೀಮ ಮಾನಿನಿಯ

ದ್ರೌಪದಿಯು ಅಡಿದ ಮಾತುಗಳಿಂದಾಗಿ ಭೀಮನಲ್ಲಿ ದುಃಖ ಮೂಡಿತು. ಅವನು ಕಂಬನಿದುಂಬಿದನು. ಅವನ ಮನಸ್ಸು ಕರಗಿತು. ಶತ್ರುಗಳ ಮೇಲಿನ ಕೋಪ ಬಹುವಾಗಿ ಹೆಚ್ಚಿತು. ಅವರೆಲ್ಲರನ್ನು ತನ್ನ ಮನಸ್ಸಿನಲ್ಲೇ ಹಿಂಡಿ ಹಾಕಿದನು. ಅದರಿಂದ ರೋಮಾಂಚನಗೊಂಡು ದ್ರೌಪದಿಯನ್ನು ಬರಸೆಳೆದು ಅಪ್ಪಿಕೊಂಡನು. ಅವಳ ಕಣ್ಣೀರನ್ನು ತನ್ನ ಉತ್ತರೀಯದ ಸೆರಗಿನಿಂದ ಒರೆಸಿ ಸಮಾಧಾನ ಮಾಡಿದನು.

ಶಬ್ದಾರ್ಥ: ಘನತೆ-ಗುರುತ್ವ; ಉಬ್ಬರಿಸು-ಹೆಚ್ಚಾಗಿ; ಮಾನಿನಿ-ಹೆಣ್ಣು (ದ್ರೌಪದಿ), ಮಾನವಂತಳು; ಹಿಂಡು-ತಿರುಚಿಕೊಲ್ಲು,

೧೫) ಕುರುಳ ನೇವರಿಸಿದನು ಗಲ್ಲವ

ನೊರೆಸಿ ಮುಂಡಾಡಿದನು ಮಂಚದ

ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ

ಅರಸಿ ಬಿಡು ಬಿಡು ಖಾತಿಯನು ವಿ

ಸ್ತರಿಸಲೇಕೆಮ್ಮಣ್ಣನಾಜ್ಞೆಯ

ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ

ಭೀಮನು ದ್ರೌಪದಿಯ ಕೂದಲನ್ನು ನೇವರಿಸಿದ. ಗಲ್ಲವನ್ನೊರೆಸಿ ತಲೆಯ ಮೇಲೆ ಕೈಯಾಡಿಸಿ ಸಮಾಧಾನ ಪಡಿಸಿದನು. ಮಂಚದ ಬಳಿಯಿದ್ದ ಗಿಂಡಿಯ ನೀರಿನಿಂದ ಅವಳ ಮುಖಕಮಲವನ್ನು ತೊಳೆದನು. ನಂತರ “ರಾಣಿ, ಇನ್ನು ಸಿಟ್ಟನ್ನು ಬಿಟ್ಟು ಬಿಡು. ನಾನು ಹೆಚ್ಚಿಗೆ ಏನನ್ನೂ ಹೇಳಲಾರೆ. ನಮ್ಮಣ್ಣನ ಆಜ್ಞೆಯ ಗೆರೆಯನ್ನು ದಾಟಿದೆ, ದಾಟಿದೆ ಹೋಗು” ಎಂದನು.

ಶಬ್ದಾರ್ಥ: ಮುಂಡಾಡು-ಮುದ್ದುಮಾಡು; ಹೊರೆ-ಸಮೀಪ, ಬಳಿಯಲ್ಲಿ; ಗಿಂಡಿ-ಚಿಕ್ಕ ತಂಬಿಗೆ: ಖಾತಿ-ಸಿಟ್ಟು, ಕೋಪ; ವಿಸ್ತರಿಸಲೇಕೆ-ಹೆಚ್ಚಿಗೆ ಮಾತೇಕೆ?

೧೬) ಬಸುರ ಬಗೆವೆನು ಕೀಚಕನ ನಸು

ಮಿಸುಕಿದೊಡೆ ವೈರಾಟ ವಂಶದ

ಹೆಸರ ತೊಡೆವೆನು ನಮ್ಮನರಿದೊಡೆ ಕೌರವವ್ರಜವ

ಕುಸುರಿದರಿವೆನು ಭೀಮ ಕಷ್ಟವ

ನೆಸಗಿದನು ಹಾಯೆಂದರಾದೊಡೆ

ಮುಸುಡನಮರಾದ್ರಿಯಲ್ಲಿ ತೇವೆನು ದೇವಸಂತತಿಯ

ದ್ರೌಪದಿಗೆ ಸಮಾಧಾನ ಮಾಡುತ್ತಾ ಭೀಮನು ತನ್ನ ನಿರ್ಧಾರವನ್ನು ಹೀಗೆಂದು ಪ್ರಕಟಿಸಿದನು. “ಕೀಚಕನ ಹೊಟ್ಟೆಯನ್ನು ಬಗೆದು ಹಾಕುತ್ತೇನೆ. ಸ್ವಲ್ಪವೇ ಎದುರಾಡಿದರೂ ವಿರಾಟನ ವಂಶವೇ ಇರಲಿಲ್ಲವೆಂಬ ಹಾಗೆ ಮಾಡುತ್ತೇನೆ. ಒಂದು ವೇಳೆ ಕೌರವರಿಗೆ ಇದು ತಿಳಿದರೆ ಅವರೆಲ್ಲರನ್ನೂ ಕೊಚ್ಚಿಕೊಚ್ಚಿ ಹಾಕುತ್ತೇನೆ. ಭೀಮನು ಮಹಾಕ್ರೂರ ಕರ್ಮವನ್ನು ಮಾಡಿದನೆಂದು ದೇವತೆಗಳು ಹೇಳಿದರಾದರೆ, ಮೇರುಪರ್ವತಕ್ಕೆ ಅವರ ಮುಖಗಳನ್ನು ತಿಕ್ಕಿಬಿಡುತ್ತೇನೆ” ಎಂದು ಭೀಮನು ದೌಪದಿಯನ್ನು ಸಂತೈಸಿ ನುಡಿದನು.

ಶಬ್ದಾರ್ಥ: ಬಗೆ-ಸೀಳು; ನಸುಮಿಸುಕು-ಸ್ವಲ್ಪ ಅಲುಗಾಡಿದರೂ; ನಮ್ಮನರಿದೊಡೆ-ಈಗ ಅಜ್ಞಾತದಲ್ಲಿರುವ ನಮ್ಮನ್ನು ಗುರುತಿಸಿದರೆ; ವ್ರಜ-ಸಮೂಹ; ಕುಸುರಿದರಿ-ಚೂರಾಗಿ ಕತ್ತರಿಸು; ಮುಸುಡೆ-ಮುಖ, ಮೋರೆ; ತೇವೆನು-ತಿಕ್ಕುವೆನು, ಅರೆವೆನು.

ಟಿಪ್ಪಣಿಗಳು:

೧. ಸೈಂಧವ:

ದುರ್ಯೋಧನನ ತಂಗಿಯಾದ ದುಶ್ಯಳೆಯ ಗಂಡ. ಜಯದ್ರಥ ಎಂಬುದು ಈತನ ಇನ್ನೊಂದು ಹೆಸರು, ದುರ್ಯೋಧನನನ್ನು ಮೆಚ್ಚಿಸಲು ಪಾಂಡವರು ವನವಾಸದಲ್ಲಿರುವಾಗ ದ್ರೌಪದಿಯನ್ನು ಅಪಹರಿಸುವ ವಿಫಲ ಪ್ರಯತ್ನ ಮಾಡಿರುತ್ತಾನೆ. ಮುಂದೆ ಮಹಾಭಾರತ ಯುದ್ಧದಲ್ಲಿ ದ್ರೋಣರು ಚಕ್ರವ್ಯೂಹ ರಚಿಸಿದಾಗ ಅಭಿಮನ್ನು ಆ ವ್ಯೂಹವನ್ನು ಭೇದಿಸಿ ಒಳನುಗ್ಗುತ್ತಾನೆ. ಆತನ ಬೆಂಗಾವಲಿಗೆ ಬಂದ ಭೀಮನನ್ನು ತಡೆದ ಸೈಂಧವ ಅಭಿಮನ್ಯುವಿನ ಸಾವಿಗೆ ಕಾರಣನಾಗುತ್ತಾನೆ. ಇದನ್ನರಿತ ಅರ್ಜುನ ಮರುದಿನದ ಸೂರ್ಯಾಸ್ತದೊಳಗೆ ಸೈಂಧವನನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿ ಕೃಷ್ಣನ ಸಹಾಯದಿಂದ ಕೊಲ್ಲುತ್ತಾನೆ.

೨. ಕೀಚಕ

ಕೇಕಯ ರಾಜನಿಂದ ಮಾಲವಿಯಲ್ಲಿ ಜನಿಸಿದವ. ಇವನಿಗೆ 105 ಮಂದಿ ಒಡಹುಟ್ಟಿದವರೂ, ಸುದೇಷ್ಣೆಯೆಂಬ ಸೋದರಿಯೂ ಇದ್ದರು. ಸುದೇಷ್ಣ ವಿರಾಟ ರಾಜನ ರಾಣಿ, ಕೀಚಕ ಬಾಣಾಸುರನ ಅಂಶದಿಂದ ಜನಿಸಿದವ. ಇವನೂ ಇವನ ತಮ್ಮಂದಿರಾದ 104 ಮಂದಿ ಉಪಕೀಚಕರೂ ವಿರಾಟರಾಜನಲ್ಲಿಯೇ ಇರುತ್ತಿದ್ದರು. ಮಹಾಬಲಶಾಲಿಯಾಗಿದ್ದ ಕೀಚಕ ವಿರಾಟನ ಸೇನಾಪತಿಯಾಗಿದ್ದ. ಅಜ್ಞಾತವಾಸದ ಅವಧಿಯಲ್ಲಿ ದೌಪದಿಯು ಸೈರಂದ್ರಿಯ ವೇಷದಲ್ಲಿ ರಾಣಿಯಾದ ಸುದೇಷ್ಟೆಯ ಅಂತಃಪುರದಲ್ಲಿ ಕೇಶಶೃಂಗಾರ ಮಾಡಿಕೊಂಡಿರುವಾಗ ಅಕ್ಕನ ಮನೆಗೆ ಬಂದ ಕೀಚಕ ಸೈರಂದ್ರಿಯಲ್ಲಿ ಮೋಹವನ್ನು ತಾಳಿ; ಆಕೆಯನ್ನು ಹೊಂದಲು ನಾನಾ ಬಗೆಯಿಂದ ಪ್ರಯತ್ನಿಸಿ, ಸೋತು ತನ್ನ ಅಕ್ಕನಲ್ಲಿ ಮನೋಗತವನ್ನರುಹಿ ಸಹಾಯ ಯಾಚಿಸುತ್ತಾನೆ. ಕೀಚಕನ ಉಪಟಳವನ್ನು ತಾಳಲಾಗದೆ ದೌಪದಿಯು ಭೀಮನ ಮೊರೆಹೋಗುತ್ತಾಳೆ. ನಾಟ್ಯಶಾಲೆಯಲ್ಲಿ ಸ್ತ್ರೀವೇಷದಲ್ಲಿ ಅವಿತುಕೊಂಡಿದ್ದ ಭೀಮನು ಕೀಚಕನನ್ನು ಮುಷ್ಟಿಯುದ್ದದಲ್ಲಿ ಕೊಲ್ಲುತ್ತಾನೆ. ಮೇಲೆರಗಿ ಬಂದ 105 ಉಪಕೀಚಕರನ್ನೂ ಕೊಂದು ಬ್ರೌಪದಿಯನ್ನು ಸಂಕಷ್ಟದಿಂದ ಪಾರುಮಾಡುತ್ತಾನೆ.

ಆ) ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ:

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು – ಕುಮಾರವ್ಯಾಸ

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು – ಕುಮಾರವ್ಯಾಸ

ಕುಮಾರವ್ಯಾಸ – ಯುಗಪ್ರವರ್ತಕ ಕವಿ

ಕುಮಾರವ್ಯಾಸ – ಭಾಗವತ ಭಕ್ತಕವಿ

ಕುಮಾರವ್ಯಾಸ – ಗದುಗಿನ ನಾರಣಪ್ಪ

ಕರ್ಣಾಟ ಭಾರತ ಕಥಾಮಂಜರಿ – ಕುಮಾರವ್ಯಾಸ

ಕರ್ಣಾಟ ಭಾರತ ಕಥಾಮಂಜರಿ – ಕುಮಾರವ್ಯಾಸ ಭಾರತ

ಕರ್ಣಾಟ ಭಾರತ ಕಥಾಮಂಜರಿ – ಗದುಗಿನ ಭಾರತ

ಕುಮಾರವ್ಯಾಸ – ರೂಪಕ ಸಾಮ್ರಾಜ್ಯ ಚಕ್ರವರ್ತಿ

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು – ವಿರಾಟಪರ್ವ

ಸೈರಂದ್ರಿ – ದ್ರೌಪದಿ

ಶಶಿವದನೆ – ದ್ರೌಪದಿ

ಯಮಸುತ – ಧರ್ಮರಾಯ

ಪಾಂಚಾಲನಂದನೆ – ದ್ರೌಪದಿ

ಲತಾಂಗಿ – ದ್ರೌಪದಿ

ಪಾರ್ಥ – ಅರ್ಜುನ

ಕೊಲಲಕ್ಷಮರು – ನಕುಲ-ಸಹದೇವ

Leave a Comment