2nd Puc History 4.6 Cholaru Chapter Notes | ದ್ವಿತೀಯ ಪಿಯುಸಿ ಇತಿಹಾಸ 4.6 ಚೋಳರು ಪಾಠದ ನೋಟ್ಸ್

2nd Puc History Cholaru Chapter Notes Question Answer Guide Extractr Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ 4.6 ಚೋಳರು ಪಾಠದ ನೋಟ್ಸ್ ಪ್ರಶ್ನೋತ್ತರಗಳು 2nd puc history chapter 4.6 question answer in kannada ಚೋಳರು ಇತಿಹಾಸ ನೋಟ್ಸ್‌ ಇತಿಹಾಸ ನೋಟ್ಸ್ 2nd puc ದ್ವಿತೀಯ ಪಿಯುಸಿ ಇತಿಹಾಸ ನೋಟ್ಸ್ kseeb solutions for class 12 history chapter 4.6 notes in kannada medium cholaru history in kannada question answer 2nd puc cholaru history in kannada notes.

Cholaru

ದ್ವಿತೀಯ ಪಿಯುಸಿ ಇತಿಹಾಸ 4.6 ಚೋಳರು ನೋಟ್ಸ್

1. ಚೋಳರ ರಾಜಧಾನಿ

ಎ) ಬನವಾಸಿ

ಸಿ) ಪಾಟಲಿಪುತ್ರ

ಡಿ) ಶ್ರವಣಬೆಳಗೊಳ

2. ‘ಪಂಡಿತ ಚೋಳ’ ಇದು ಯಾರ ಬಿರುದು

ಎ) ರಾಜರಾಜಚೋಳ

ಸಿ) 2ನೇ ರಾಜೇಂದ್ರ ಚೋಳ

ಡಿ) ರಾಜಶೇಖರ ಚೋಳ

3. ಸಿಂಹಳಕ್ಕೆ ದಂಡಯಾತ್ರೆಯನ್ನು ಕೈಗೊಂಡ ಅರಸ

ಎ) ರಾಜರಾಜ ಚೋಳ

ಬಿ) ರಾಜೇಂದ್ರ ಚೋಳ

ಸಿ) 2ನೇ ರಾಜೇಂದ್ರ ಚೋಳ

4. ಚೋಳ ಪ್ರಭುತ್ವವನ್ನು ಸ್ಥಾಪಿಸಿದ ದೊರೆ

ಎ) ಕರಿಕಾಲ ಚೋಳ

ಬಿ) ರಾಜರಾಜಚೋಳ

ಡಿ) ರಾಜೇಂದ್ರ ಚೋಳ

1.ಚೋಳರ ಇತಿಹಾಸವು ಸಂಘಂ ಯುಗದಿಂದ ಪ್ರಾರಂಭವಾಗುತ್ತದೆ.

2. ‘ಪಂಡಿತ ಚೋಳ’ ಎಂಬುದು ಒಂದನೇ ರಾಜೇಂದ್ರ ಚೋಳ ನ ಬಿರುದು.

3. ಅರಸನ ಆಪ್ತವರ್ಗವನ್ನು ‘ಉದಯಕೂಟಂ‘ ಎಂಬುದಾಗಿ ಕರೆಯಲಾಗುತ್ತಿತ್ತು.

4. ಚೋಳರ ಪ್ರಭುತ್ವವನ್ನು ಸ್ಥಾಪಿಸಿದ ದೊರೆ ವಿಜಯಾಲಚೋಳ

5. ‘ಸಂಘಂ’ ಎಂದರೇ ತಮಿಳುಸಾಹಿತ್ಯ ಸಂಘ

6. ‘ಕುಡುಪಲೈ’ ಎಂದರೆ ಅದೃಷ್ಟ

7. ತಂಜಾವೂರಿನ ರಾಜರಾಜೇಶ್ವರ ದೇವಾಲಯವನ್ನು ಕಟ್ಟಿಸಿದವರು ಒಂದನೇ ರಾಜರಾಜ ಚೋಳ

8. ಸಂಘಂಕಾಲದ ಚೋಳರ ಮೊದಲ ದೊರೆ ಇಳ್ಳೆಯಾನ್

9. ಚೋಳರ ರಾಜಧಾನಿ ತಂಜಾವೂರು

10. ಚೋಳರ ಗ್ರಾಮಾಡಳಿತವನ್ನು ತಿಳಿಸುವ ಶಿಲಾಶಾಸನ ಒಂದನೇ ಪಾರಾಂತಕನ ಉತ್ತರ ಮೆರೂರು ಶಾಸನ

III. ಹೊಂದಿಸಿ ಬರೆಯಿರಿ.

ಕ್ರಮ ಸಂಖ್ಯೆಉತ್ತರಗಳು
1ತಂಜಾವೂರುಅರಸನ ಆಪ್ತವರ್ಗಚೋಳರ ರಾಜಧಾನಿ
2ಕಡುವಲೈಒಂದನೇ ರಾಜೇಂದ್ರ ಚೋಳಅದೃಷ್ಟ
3ಇಳೈಯಾನ್ಚೋಳರ ಗ್ರಾಮಾಡಳಿತದ ಮಾಹಿತಿಸಂಘಂಕಾಲದ ಚೋಳರ ಮೊದಲ ದೊರೆ
4ಉತ್ತರ ಮೆರೂರು ಶಾಸನತಂಜಾವೂರುಚೋಳರ ಗ್ರಾಮಾಡಳಿತದ ಮಾಹಿತಿ
5ಪಂಡಿತಚೋಳಕರಿಕಾಲ ಚೋಳಒಂದನೇ ರಾಜೇಂದ್ರ ಚೋಳ
6ವಿಜಯಾಲಚೋಳಚೋಳರ ರಾಜಧಾನಿಚೋಳರ ಪ್ರಭುತ್ವ ಸ್ಥಾಪಕ
7ಉದಯ ಕೂಟಂ949
ಅರಸನ ಆಪ್ತವರ್ಗ
8ಸಿಂಹಳ ದಂಡಯಾತ್ರೆ ತಮಿಳು ಸಾಹಿತ್ಯ ಸಂಘಕರಿಕಾಲ ಚೋಳ
9ತಕ್ಕೋಳಂ ಶಾಸನಅದೃಷ್ಟ949
10ರಾಜರಾಜೇಶ್ವರ ದೇವಾಲಯಸಂಘಂಕಾಲದ ಚೋಳರ ಮೊದಲ ದೊರೆತಂಜಾವೂರು
11ಸಂಘಂಚೋಳರ ಪ್ರಭುತ್ವ ಸ್ಥಾಪಕತಮಿಳು ಸಾಹಿತ್ಯ ಸಂಘ

1.’ಸಂಘಂ’ ಎಂದರೇನು?

ತಮಿಳು ‘ಸಾಹಿತ್ಯ ಸಂಘ’

2. ‘ಕುಡುವಲೈ’ ಎಂದರೇನು?

ಅದೃಷ್ಟ

3. ತಂಜಾವೂರಿನ ರಾಜರಾಜೇಶ್ವರ ದೇವಾಲಯವನ್ನು ಕಟ್ಟಿಸಿದವರು ಯಾರು?

ಒಂದನೇ ರಾಜರಾಜ ಚೋಳ,

4. ಚೋಳರ ಗ್ರಾಮಾಡಳಿತವನ್ನು ತಿಳಿಸುವ ಶಿಲಾಶಾಸನ ಯಾವುದು?

ಒಂದನೇ ಪಾರಾಂತಕನ ಉತ್ತರ ಮೆರೂರು ಶಾಸನ.

5. ಸಂಘಂ ಕಾಲದ ಚೋಳರ ಮೊದಲ ದೊರೆ ಯಾರು?

ಇಳ್ಳೆಯಾನ್.

6. ಚೋಳರ ಇತಿಹಾಸವು ಯಾವ ಯುಗದಿಂದ ಪ್ರಾರಂಭವಾಗುತ್ತದೆ?

ಸಂಘಂಯುಗ

7. ಸಿಂಹಕ್ಕೆ ದಂಡಯಾತ್ರೆಯನ್ನು ಕೈಗೊಂಡ ಅರಸ ಯಾರು?

ಕರಿಕಾಲ ಚೋಳ

8. ಪಲ್ಲವರ ದೊರೆ ಅಪರಾಜಿತವರ್ಮನನ್ನು ಕೊಂದು ಚೋಳರ ಪ್ರಭುತ್ವವನ್ನು ಸ್ಥಾಪಿಸಿದ ದೊರೆ ಯಾರು?

ವಿಜಯಾಲ ಚೋಳ

9. ‘ಪಂಡಿತ ಚೋಳ’ ಇದು ಯಾರ ಬಿರುದು?

ಒಂದನೇ ರಾಜೇಮದ್ರ ಚೋಳ

10. ಅರಸನ ಆಪ್ತವರ್ಗವನ್ನು ಏನೆಂದು ಕರೆಯಲಾಗುತ್ತಿತ್ತು?

ಉದನಕೂಟಂ

11. ‘ವರಿಯಮ್’ ಎಂದರೇನು?

ವಾರ್ಷಿಕಸಮಿತಿ, ಉದ್ಯಾನಸಮಿತಿ, ಕೆರೆಕಟ್ಟೆಗಳ ಸಮಿತಿಗಳ ಕಾರ್ಯನಿರ್ವಹಣೆಯ ಸಮಿತಿಯನ್ನು ‘ವರಿಯಂ’ ಎನ್ನುವರು.

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯದಲ್ಲಿ ಉತ್ತರಿಸಿ:

1.ಸಂಘಂ ಯುಗದ ಯಾವುದಾದರೂ ಎರಡು ಪ್ರಸಿದ್ಧ ಕೃತಿಗಳನ್ನು ಹೆಸರಿಸಿ.

ಶಿಲಾವಾದಿಗಾರಂ ಮತ್ತು ಮಣಿಮೇಗಲೈ.

2. ತಕ್ಕೋಳಂ ಕದನವು ಯಾವಾಗ ಮತ್ತು ಯಾರ ನಡುವೆ ನಡೆಯಿತು?

ಸಾ.ಶ. 949ರಲ್ಲಿ ಚೋಳ ಮತ್ತು ರಾಷ್ಟ್ರಕೂಟರ ನಡುವೆ ನಡೆಯಿತು.

3. ಒಂದನೇ ರಾಜೇಂದ್ರ ಚೋಳನ ಯಾವುದಾದರೂ ಎರಡು ಬಿರುದುಗಳನ್ನು ತಿಳಿಸಿ.

ಪಂಡಿತಚೋಳ, ಗಂಗೈಕೊಂಡ ಚೋಳ.

V. ಈ ಕೆಳಗಿನ ಪ್ರಶ್ನೆಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ:

1. ಒಂದನೇ ರಾಜೇಂದ್ರ ಚೋಳನ ಸಾಧನೆಗಳನ್ನು ವಿವರಿಸಿ.

  • ಇವನು ಒಂದನೇ ರಾಜ ರಾಜ ಚೋಳನ ಮಗ, ಸಿಂಹಳದ ಅರಸ 5ನೇ ಮಹೇಂದ್ರನನ್ನು ಸೋಲಿಸಿ ಬಂಧನದಲ್ಲಿಟ್ಟು ಆತನ ವಶದಲ್ಲಿದ್ದ ಪಾಂಡ್ಯ ರಾಜನ ಮುದ್ರೆ ಮತ್ತು ರಾಜಕಿರೀಟವನ್ನು ವಶಕ್ಕೆ ತೆಗೆದುಕೊಂಡು, ಸೆರೆಯಲ್ಲಿದ್ದ ಮಹೇಂದ್ರನು ಮರಣ ಹೊಂದಿದ ನಂತರ ಸಿಂಹಳ ರಾಜ್ಯ ಚೋಳರ ಪಾಲಾಯಿತು.
  • ಕಲ್ಯಾಣಿ ಚಾಲುಕ್ಯದೊರೆ 2ನೇ ಜಯಸಿಂಹನನ್ನು ಮತ್ತು ಈತನ ಪರ ವಹಿಸಿ ಬಂದ ವೆಂಗಿಯ ವಿಜಯಾದಿತ್ಯನನ್ನು ಸೋಲಿಸಿ ರಾಜ್ಯದಿಂದ ಹೊರ ಹಾಕಿ, ರಾಜ ರಾಜ ನರೇಂದ್ರನನ್ನು ಸಿಂಹಾಸನದ ಮೇಲೆ ಕೂರಿಸಿ ತನ್ನ ಮಗಳಾದ ಅಮ್ಮಂಗದೇವಿಯನ್ನು ಕೊಟ್ಟು ಮದುವೆ ಮಾಡಿದನು. ನಂತರ ಒರಿಸ್ಸಾದತ್ತ ಮುನ್ನುಗ್ಗಿ ಬಂಗಾಳದ ಒಂದನೇ ಮಹಿಪಾಲನ್ನು ಸೋಲಿಸಿದನು.
  • ಗಂಗಾನದಿಯವರೆವಿಗೂ ದಂಡೆಯಾತ್ರೆ ಹೋಗಿ ಪವಿತ್ರ ಗಂಗಾಜಲವನ್ನು ತೆಗೆದುಕೊಂಡು ಬಂದು ‘ಗಂಗೈಕೊಂಡ ಚೋಳ’ ಎಂಬ ಬಿರುದನ್ನು ಧರಿಸಿ. ಗಂಗೈಕೊಂಡ ಚೋಳಪುರಂ ಎಂಬ ಹೊಸ ರಾಜಧಾನಿಯನ್ನು ಕಟ್ಟಿಸಿದನು. ಇವನು ಚೋಳಗಂಗಂ ಎಂಬ ಕೆರೆಯನ್ನು ಕಟ್ಟಿಸಿ ಅದರೊಳಗೆ ಗಂಗಾ ಪವಿತ್ರ ಜಲವನ್ನು ಬೆರೆಸಿದನು.
  • ತನ್ನ ಬಲಿಷ್ಟ ನೌಕಾಪಡೆ ಮತ್ತು ಸೈನ್ಯದೊಂದಿಗೆ ಆಗ್ನೆಯ ಏಷ್ಯಾದ ಶೈಲೇಂದ್ರ ಸಾಮ್ಯಾಜ್ಯದ ಮೇಲೆ ದಂಡಯಾತ್ರೆಯನ್ನು ಕೈಗೊಂಡು ಬಂಗಾಳ ಕೊಲ್ಲಿಯನ್ನು ದಾಟಿ ಜಾವಾ, ಸುಮಾತ್ರಗಳನ್ನು ಗೆದ್ದುಕೊಂಡು ಶೈಲೇಂದ್ರದ ದೊರೆ ಸಂಗ್ರಾಮ ವಿಜಯೋತ್ತುಂಗವರ್ಮನ್ನನ್ನು ಯುದ್ಧದಲ್ಲಿ ಸೋಲಿಸಿದನು. ಇವನು ಆ ವಿಜಯದ ನೆನಪಿಗಾಗಿ ಶೈಲೇಂದ್ರದಲ್ಲಿ ಗಂಗೈಕೊಂಡ ಚೋಳ ಶಿವಾಲಯವನ್ನು ಕಟ್ಟಿಸಿದನು.
  • ಈತನು ದಕ್ಷ ಆಡಳಿತಗಾರ ಮತ್ತು ವಿದ್ಯಾಪೇಕ್ಷಕನಾಗಿದ್ದು ‘ಎನ್ನಾಯರಂ’ ಎಂಬಲ್ಲಿ ಉನ್ನತ ವಿದ್ಯಾಕೇಂದ್ರವನ್ನು ಸ್ಥಾಪಿಸಿದನು. ಈ ವಿದ್ಯಾಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದ 340 ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತು.
  • ಈತನು ‘ಪಂಡಿತಚೋಳ’ ‘ಗಂಗೈಕೊಂಡ ಚೋಳ’ ಮತ್ತು ‘ಕೇದಾರಕೊಂಡ’ ಮುಂತಾದ ಬಿರುದುಗಳನ್ನು ಹೊಂದಿದ್ದನು.
  • ಚೀನಾ ದೇಶಕ್ಕೆ ತನ್ನ ರಾಯಭಾರಿಗಳನ್ನು ಕಳುಹಿಸಿದ್ದನು.

2. ಚೋಳರ ಗ್ರಾಮಾಡಳಿತವನ್ನು ವಿವರಿಸಿ.

ಇದು ಚೋಳರ ಆಡಳಿತದ ಮುಖ್ಯಲಕ್ಷಣವಾಗಿದ್ದು ಒಂದನೇ ಪಾರಾಂತಕನ ಉತ್ತರ ಮೇರೂರು ಶಾಸನ ಗ್ರಾಮಡಳಿತದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತದೆ.

  • ಗ್ರಾಮವನ್ನು 30 ಭಾಗಗಳಾಗಿ [ಕುಡುಂಬು] ವಿಂಗಡಿಸಲಾಗಿತ್ತು. ಪ್ರತಿ ವಿಭಾಗದಿಂದ ಒಬ್ಬೊಬ್ಬ ಸದಸ್ಯರನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತಿತ್ತು. ಚುನಾವಣೆ ದಿನದಂದು ಗ್ರಾಮಸ್ಥರು ದೇವಾಲಯಕ್ಕೆ ಸೇರಿ ಆಯ್ಕೆ ಮಾಡುವ ಅಭ್ಯರ್ಥಿಗಳ ಹೆಸರನ್ನು ಓಲೆಗರಿಯ ಮೇಲೆ ಬರೆದು ಒಂದು ಮಡಿಕೆಯಲ್ಲಿ ಹಾಕಿ, ಒಬ್ಬ ಚಿಕ್ಕ ಬಾಲಕನಿಂದ ಎಲ್ಲರ ಸಮ್ಮುಖದಲ್ಲಿ ಎತ್ತಿಸಿ ಪ್ರತಿನಿಧಿಗಳನ್ನು ಆಯ್ಕೆ ನಡೆಸಲಾಗುತ್ತಿತ್ತು
  • ಆಯ್ಕೆಯಾದ ಪ್ರತಿನಿಧಿಗಳು ವಾರ್ಷಿಕ ಸಮಿತಿ, ಉದ್ಯಾನ ಸಮಿತಿ, ಮತ್ತು ಕೆರೆಕಟ್ಟೆಗಳ ಸಮಿತಿಗಳಲ್ಲಿ ಕಾರ್ಯನಿರ್ವಹಿಸಬೇಕಿತ್ತು. ಈ ಸಮಿತಿಗಳನ್ನು ‘ವರಿಯಂ’ ಎಂತಲೂ ಪ್ರತಿನಿಧಿಗಳನ್ನು ‘ವರಿಯ ಪೆರು ಮಕ್ಕಳ್’ ಎಂತಲೂ ಕರೆಯುತ್ತಿದ್ದರು.
  • ಈ ಸಮಿತಿಗಳು 360 ದಿನಗಳು ಕಾರ್ಯನಿರ್ವಹಿಸು ತ್ತಿದ್ದವು. ಗ್ರಾಮಗಳ ಆಸ್ತಿ ರಕ್ಷಣೆ, ಕಂದಾಯ ವಸೂಲಿ, ದೇವಾಲಯ, ಕೆರೆ, ತೋಪು, ಅರಣ್ಯ ರಕ್ಷಣೆ ಮುಂತಾದ ಕರ್ತವ್ಯಗಳನ್ನು ಗ್ರಾಮಸಭೆ ನಿರ್ವಹಿಸುತ್ತಿತ್ತು. ಸಭೆಯ ತೀರ್ಮಾನಗಳನ್ನು ಬರೆದಿಡಲಾಗುತ್ತಿತ್ತು, ಅನಾವಶ್ಯಕವಾಗಿ ಕೇಂದ್ರಾಡಳಿತವು ಗ್ರಾಮಾಡಳಿತದಲ್ಲಿ ಮಧ್ಯ ಪ್ರವೇಶಿಸುತ್ತಿರಲಿಲ್ಲ.

ಸದಸ್ಯರಿಗೆ ಇರಬೇಕಾದ ಕನಿಷ್ಠ ಅರ್ಹತೆಗಳೆಂದರೆ:

  • ಅಭ್ಯರ್ಥಿಯು ಕನಿಷ್ಟ ಅರ್ಧ ಎಕರೆ ಕೊಡುವ ಭೂಮಿಯನ್ನು ಹೊಂದಿರಬೇಕು.
  • ಸ್ವಂತ ನಿವೇಶನದಲ್ಲಿ ಕಟ್ಟಿಸಿದ ಮನೆಯಲ್ಲಿ ವಾಸವಾಗಿರಬೇಕು.
  • ವೇದ, ಬ್ರಾಹ್ಮಣಕಗಳ ಹಾಗೂ ವ್ಯವಹಾರಿಕ ಜ್ಞಾನವಿರಬೇಕು.
  • ಉತ್ತಮ ಚಾರಿತ್ರ್ಯವುಳ್ಳವರಾಗಿರಬೇಕು.

ಅನರ್ಹತೆಗಳು:

  • ಮೂರು ವರ್ಷಗಳ ಸತತವಾಗಿ ಯಾವುದೇ ಒಂದು ಸಮಿತಿಯಲ್ಲಿ ಸದಸ್ಯನಾಗಿದ್ದರೆ ಪುನರಾಯ್ಕೆಗೆ ಅನರ್ಹ.
  • ಸಮಿತಿಯಲ್ಲಿ ಲೆಕ್ಕಪತ್ರಗಳನ್ನು ಸಲ್ಲಿಸದವರು ಮತ್ತು ಅವನ ಹತ್ತಿರದ ಸಂಬಂಧಿಕರು.
  • ದುಷ್ಟರು, ಮೋಸಗಾರರು ಮತ್ತು ಬ್ರಾಹ್ಮಣಹತ್ಯೆ, ಮಧ್ಯಸೇವನೆ, ಕಳ್ಳತನ ಮತ್ತು ವ್ಯಭಿಚಾರ ಆರೋಪಿ ಹೊತ್ತವರು.

ಈ ಎಲ್ಲಾ ಅಂಶಗಳಿಂದಾಗಿ ಚೋಳರ ಗ್ರಾಮಗಳನ್ನು ವಿದ್ವಾಂಸರು ‘ಚಿಕ್ಕ ಪ್ರಜಾಪ್ರಭುತ್ವ ರಾಜ್ಯಗಳು’ ಎಂದು ಕರೆದಿದ್ದಾರೆ.

1.ಪಂಡಿತ ಚೋಳ ಇದು ಯಾರ ಬಿರುದು?

ಒಂದನೇ ರಾಜೇಂದ್ರ ಚೋಳ

2. ಚೋಳರ ಇತಿಹಾಸವು ಯಾವ ಯುಗದಿಂದ ಪ್ರಾರಂಭವಾಗುತ್ತದೆ?

ಸಂಘಂ ಯುಗ

3. ಪಂಡಿತ ಚೋಳ ಇದು ಯಾರ ಬಿರುದು?

ಒಂದನೇ ರಾಜೇಂದ್ರ ಚೋಳ

4. ಸಿಂಹಳಕ್ಕೆ ದಂಡಯಾತ್ರೆಯನ್ನು ಕೈಗೊಂಡ ಅರಸ ಯಾರು?

ಕರಿಕಾಲ ಚೋಳ

5. ಪಲ್ಲವರ ದೊರೆ ಅಪರಾಚಿತವರ್ಮನನ್ನು ಕೊಂದು ಚೋಳರ ಪ್ರಭುತ್ವವನ್ನು ಸ್ಥಾಪಿಸಿದ ದೊರೆ ಯಾರು?

ವಿಜಯಾಲ ಚೋಳ

6. ಅರಸನ ಆಪ್ತ ವರ್ಗವನ್ನು ಏನೆಂದು ಕರೆಯಲಾಗುತ್ತಿತ್ತು?

ಉದನ ಕೂಟಂ

ತಂಜಾವೂರು ಇವರ ಪ್ರಮುಖ ರಾಜಧಾನಿಯಾಗಿತ್ತು.

ಕುಡುವಲೈ ಎಂದರೆ ಅದೃಷ್ಟ.

ಒಂದನೇ ರಾಜೇಂದ್ರಚೋಳನು ಚೀನಾ ದೇಶಕ್ಕೆ ತನ್ನ ರಾಯಭಾರಿಗಳನ್ನು ಕಳುಹಿಸಿದ್ದನು.

Leave a Comment