2nd Puc History 4.8 Rastrakutaru Chapter Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ 4.8 ರಾಷ್ಟ್ರಕೂಟರು ಪಾಠದ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ kseeb solutions class 12 history chapter 4.8 notes 2nd puc rastrakutaru history notes in kannada medium Rashtrakutaru 2nd puc history notes 2nd puc history notes kannada 2nd puc ಇತಿಹಾಸ notes ದ್ವಿತೀಯ ಪಿಯುಸಿ ಇತಿಹಾಸ ನೋಟ್ಸ್ 2nd PUC History Notes Pdf in Kannada ದ್ವಿತೀಯ ಪಿಯುಸಿ ನೋಟ್ಸ್ pdf.

I. ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಆರಿಸಿ బರೆಯಿರಿ.
1. ರಾಷ್ಟ್ರಕೂಟರ ರಾಜಧಾನಿ
ಎ) ಕಂಚಿ
ಬಿ) ಥಾನೇಶ್ವರ
ಸಿ) ಪಾಟಲೀಪುತ್ರ
ಡಿ) ಮಾನ್ಯಖೇಟ
2. ರಾಷ್ಟ್ರಕೂಟರ ರಾಜಲಾಂಛನ
ಎ) ವರಾಹ
ಬಿ) ಗಂಡಭೇರುಂಡ
ಸಿ) ಗರುಡ
ಡಿ) ನವಿಲು
3. ಕನ್ನಡದ ಆದಿಕವಿ
ಎ) ಪಂಪ
ಬಿ) ರನ್ನ
ಸಿ) ಪೊನ್ನ
ಡಿ) ಜನ್ನ
4. ಉಭಯಕವಿ ಚಕ್ರವರ್ತಿ ಬಿರುದಾಂಕಿತ ಕವಿ
ಎ) ರನ್ನ
ಬಿ) ಪೊನ್ನ
ಸಿ) ಜನ್ನ
ಡಿ) ಪಂಪ
5. ಅಮೋಘವರ್ಷನ ಆಸ್ಥಾನಕ್ಕೆ ಭೇಟಿನೀಡಿದ ವಿದೇಶಿ ಪ್ರವಾಸಿ
ಎ) ಅಬ್ದುಲ್ರಡಾಕ್
ಬಿ) ಫಾಹಿಯಾನ್
ಸಿ) ಹ್ಯೂಯನ್ ತ್ಸಾಂಗ್
ಡಿ) ಸುಲೇಮಾನ್
6. ರಾಷ್ಟ್ರಕೂಟರ ಪ್ರಸಿದ್ದ ದೊರೆ
ಎ) 3ನೇ ಕೃಷ್ಣ
ಬಿ) ದಂತಿದುರ್ಗ
ಸಿ) ಒಂದನೇ ಅಮೋಘವರ್ಷ
ಡಿ) ಗೋವಿಂದ
II. ಖಾಲಿ ಜಾಗಭರ್ತಿ ಮಾಡಿ
1.ಪಂಪನಿಗೆ ಆಶ್ರಯ ನೀಡಿದವರು ಅರಿಕೇಸರಿ
2. ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ (ಮಾಳಖೇಡ)
3. ರಾಷ್ಟ್ರಕೂಟರ ರಾಜಲಾಂಛನ ಗರುಡ
4. ಕನ್ನಡ ಆದಿಕವಿ ಪಂಪ
5. ರಾಷ್ಟ್ರಕೂಟರ ಮೊದಲ ದೊರೆ ದಂತಿದುರ್ಗ
6. ರಾಷ್ಟ್ರಕೂಟರ ಪ್ರಸಿದ್ಧ ದೊರೆ 1ನೇ ಅಮೋಘವರ್ಷ
7. ‘ಉಭಯಕವಿ ಚಕ್ರವರ್ತಿ’ ಎಂದು ಬಿರುದಾಂಕಿತ ಕವಿ ಪೊನ್ನ
8. ಪೊನ್ನನಿಗೆ ಆಶ್ರಯ ನೀಡಿದ್ದವರು 3ನೇ ಕೃಷ್ಣ
9. ಕನ್ನಡದ ಮೊದಲ ಸಾಹಿತ್ಯ ಕೃತಿ ಕವಿರಾಜಮಾರ್ಗ
10. ಕವಿರಾಜಮಾರ್ಗ ಕೃತಿಯನ್ನು ರಚಿಸಿದವರು ಶ್ರೀವಿಜಯ
11.ಅಮೋಘವರ್ಷನ ಆಸ್ಥಾನಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿ ಸುಲೇಮಾನ್
12. ರಾಷ್ಟ್ರಕೂಟರ ಆಡಳಿತದ ಅವಧಿ ಸಾ.ಶ. 753 ರಿಂದ 978
13. ಅಮೋಘವರ್ಷನನ್ನು ‘ರಾಮರಾಮುಡು’ ಕದನದಲ್ಲಿ ಸೋಲಿಸಿದ ಗಂಗರ ದೊರೆ ನೀತಿಮಾರ್ಗ ಎರೆಗಂಗ
III ಹೊಂದಿಸಿ ಬರೆಯಿರಿ.
ಕ್ರಮ ಸಂಖ್ಯೆ | ಅ | ಆ | ಉತ್ತರಗಳು |
---|---|---|---|
1 | ದಂತಿದುರ್ಗ | ರಾಷ್ಟ್ರಕೂಟರ ಪ್ರಸಿದ್ಧ ದೊರೆ | ರಾಷ್ಟ್ರಕೂಟರ ಮೊದಲ ದೊರೆ |
2 | ಆದಿಕವಿ | ಧ್ರುವ | ಪಂಪ |
3 | ಉಭಯ ಕವಿ ಚಕ್ರವರ್ತಿ | ರಾಷ್ಟ್ರಕೂಟರ ಮೊದಲ ದೊರೆ | ಪೊನ್ನ |
4 | ರಾಷ್ಟ್ರಕೂಟರ ರಾಜಧಾನಿ | ಗರುಡ | ಮಾನ್ಯಖೇಟ |
5 | ರಾಷ್ಟ್ರಕೂಟರ ಲಾಂಛನ | ಪಂಪ | ಗರುಡ |
6 | ಸುಲೇಮಾನ್ | ಪೊನ್ನ | ವಿದೇಶಿ ಪ್ರವಾಸಿ |
7 | ಕೈಲಾಸನಾಥ ದೇವಾಲಯ | ವಿದೇಶಿ ಪ್ರವಾಸಿ | ಎಲ್ಲೋರಾ |
8 | ಕವಿರಾಜಮಾರ್ಗ | ಮಾನ್ಯಖೇಟ | ಶ್ರೀವಿಜಯ |
9 | ಶೀಲಭಟ್ಟಾರಿಕೆ | ಶ್ರೀವಿಜಯ | ಧ್ರುವ |
10 | 1ನೇ ಅಮೋಘವರ್ಷ | ಎಲ್ಲೋರಾ | ರಾಷ್ಟ್ರಕೂಟರ ಪ್ರಸಿದ್ಧ ದೊರೆ |
IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ:
1.ರಾಷ್ಟ್ರಕೂಟರ ಪ್ರಸಿದ್ಧ ದೊರೆ ಯಾರು?
ಒಂದನೇ ಅಮೋಘವರ್ಷ.
2. ಪೊನ್ನನಿಗೆ ಆಶ್ರಯ ನೀಡಿದವರು ಯಾರು?
3ನೇ ಕೃಷ್ಣ.
3. ಕನ್ನಡದ ಆದಿಕವಿ ಎಂದು ಯಾರನ್ನು ಕರೆಯುತ್ತಾರೆ?
ಪಂಪ
4. ಕನ್ನಡದ ಮೊದಲ ಸಾಹಿತ್ಯ ಕೃತಿ ಯಾವುದು?
ಶ್ರೀ ವಿಜಯನ ಕವಿರಾಜಮಾರ್ಗ.
5. ಅಮೋಘವರ್ಷನ ಆಸ್ಥಾನಕ್ಕೆ ಭೇಟಿ ನೀಡಿದ ವಿದೇಶಿ ಪ್ರವಾಸಿ ಯಾರು?
ಸುಲೇಮಾನ್.
6. ರಾಷ್ಟ್ರಕೂಟರ ರಾಜಲಾಂಛನ ಯಾವುದು?
ಗರುಡ.
7. ಪಂಪನಿಗೆ ಆಶ್ರಯ ನೀಡಿದವರು ಯಾರು?
ರಾಷ್ಟ್ರಕೂಟರ ಸಾಮಂತನಾದ ಅರಿಕೇಸರಿ.
8. ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು?
1ನೇ ಕೃಷ್ಣ
9. ರಾಷ್ಟ್ರಕೂಟರ ಮೊದಲ ದೊರೆ ಯಾರು?
ದಂತಿದುರ್ಗ.
10. ರಾಷ್ಟ್ರಕೂಟರು ಯಾವ ಪ್ರದೇಶಕ್ಕೆ ಸೇರಿದವರು?
ಮಹಾರಾಷ್ಟ್ರದ ಲತ್ತನೂರು (ಲಾತೂರು)
11. ರಾಷ್ಟ್ರಕೂಟರು ಭಾರತದಲ್ಲಿ ಆಡಳಿತ ನಡೆಸಿದ ಅವಧಿ ಎಷ್ಟು?
ಸಾ.ಶ. 753 ರಿಂದ 978
12. ‘ಉಭಯ ಕವಿ ಚಕ್ರವರ್ತಿ’ ಎಂದು ಯಾರನ್ನು ಕರೆಯಲಾಗಿತ್ತು?
ಪೊನ್ನ
V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ:
1. ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು? ಎಲ್ಲಿ ನಿರ್ಮಿಸಿದರು?
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರದಲ್ಲಿ 1ನೇ ಕೃಷ್ಣನು ನಿರ್ಮಿಸಿದನು.
2. ಧ್ರುವನ ಯಾವುದಾದರೂ ಎರಡು ಬಿರುದುಗಳನ್ನು ಹೆಸರಿಸಿ.
ಧಾರಾವರ್ಷ, ಶ್ರೀ ವಲ್ಲಭ.
3. 3ನೇ ಗೋವಿಂದನ ಯಾವುದಾದರೂ ಎರಡು ಬಿರುದುಗಳನ್ನು ತಿಳಿಸಿ.
ಜಗತ್ತುಂಗ, ಪ್ರಭೂತವರ್ಷ
4. ಅಮೋಘವರ್ಷನ ಯಾವುದಾದರೂ ಎರಡು ಬಿರುದುಗಳನ್ನು ಬರೆಯಿರಿ.
‘ಅತಿಶಯದವಳ’, ‘ನೃಪತುಂಗ’.
5. ಪೊನ್ನನ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ.
‘ಶಾಂತಿಪುರಾಣ’ ಮತ್ತು ‘ಭುವನೈಕ್ಯ ರಾಮಾಭ್ಯುದಯ’.
6. ಪಂಪನ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ.
‘ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ’
VI ಈ ಕೆಳಗಿನ ಪ್ರಶ್ನೆಗೆ 15-20 ವಾಕ್ಯಗಳಲ್ಲಿ ಉತ್ತರಿಸಿ:
1. 3ನೇ ಗೋವಿಂದನ ಸಾಧನೆಗಳನ್ನು ವಿವರಿಸಿ.
3ನೇ ಗೋವಿಂದನ ಧ್ರುವನ ಮಗನಾಗಿದ್ದು ಸಾ.ಶ. 793ರಲ್ಲಿ ಅಧಿಕಾರಕ್ಕೆ ಬಂದನು. ಇವನ ಸಹೋದರ ಸ್ತಂಭನು ಗಂಗರು ಮತ್ತು ಪಲ್ಲವರಿಗೆ ಸಹಾಯ ಮಾಡುತ್ತಿದ್ದುದನ್ನು ಗಮನಿಸಿ ಅವನನ್ನು ಸೆರೆಮನೆಯಲ್ಲಿಟ್ಟು ನಂತರ ಬಿಡುಗಡೆ ಮಾಡಿ ಗಂಗಾವಾಡಿಯ ಅಧಿಕಾರಿಯನ್ನಾಗಿ ಮಾಡಿದನು. ಗಂಗರ ದೊರೆ ಶಿವಕುಮಾರನನ್ನು ಸೆರೆಮನೆಯಲ್ಲಿಟ್ಟನು. ಉತ್ತರ ಭಾರತದಲ್ಲಿ ರಾಜಕೀಯ ಸಂಘರ್ಷಗಳು ಏರ್ಪಟ್ಟು ಪ್ರತಿಹಾರದ ನಾಗಭಟ, ಬಂಗಾಳದ ಧರ್ಮಪಾಲ ಮತ್ತು ಕನೌಜನ ಚಕ್ರಾಯುಧನು ಸಾರ್ವಭೌಮತ್ವಕ್ಕಾಗಿ ಹೋರಾಡುತ್ತಿದ್ದಾಗ ಇವರನ್ನೆಲ್ಲಾ ಸೋಲಿಸಿದನು.
- ಪಾಂಡ್ಯರು ಕೇರಳದ ಅರಸರನ್ನು ಒಗ್ಗೂಡಿಸಿಕೊಂಡು ಯುದ್ಧ ಸಾರಿದಾಗ ಇವರನ್ನೆಲ್ಲಾ ಸೋಲಿಸಿ ರಾಜ ಲಾಂಛನವನ್ನು ಕಿತ್ತುಕೊಂಡನು. ಪಲ್ಲವ ದೊರೆ ದಂತಿದುರ್ಗನನ್ನು ಸೋಲಿಸಿ ಕಪ್ಪಕಾಣಿಕೆಗಳನ್ನು ಸ್ವೀಕರಿಸಿದನು. ಈತನಿಗೆ ಜಗತ್ತುಂಗ ‘ಪ್ರಭೂತವರ್ಷ’ 1 ‘ಶ್ರೀ ವಲ್ಲಭ’, ‘ತ್ರಿಭುವನದವಳ’ ಮೊದಲಾದ ಬಿರುದುಗಳಿದ್ದವು.
2. ಅಮೋಘವರ್ಷನ ಸಾಧನೆಗಳನ್ನು ವಿವರಿಸಿ.
ಇವನು 3ನೇ ಗೋವಿಂದನ ಮಗ. ಈತನಿಗೆ ಶರ್ವಎಂಬ ಹೆಸರು ಇತ್ತು.
- ವೆಂಗಿಯ ಚಾಲುಕ್ಯರ ದೊರೆ 3ನೇ ಗುಣಗ ವಿಜಯಾದಿತ್ಯನನ್ನು ಸೋಲಿಸಿದನು.
- ಅಮೋಘವರ್ಷನ ದಂಡನಾಯಕ ಬಂಕೇಶನು ಗಂಗ ದೊರೆ ರಾಜಮಲ್ಲನನ್ನು ಸೋಲಿಸಿದನು.
- ರಾಚಮಲ್ಲನ ನಂತರ ಅಧಿಕಾರಕ್ಕೆ ಬಂದ ನೀತಿಮಾರ್ಗ ಎರೆಗಂಗನು ಅಮೋಘವರ್ಷನನ್ನು ಸೋಲಿಸಿದನು.
- ನಂತರದಲ್ಲಿ ನೃಪತುಂಗನು ಗಂಗ ಮತ್ತು ಇತರ ಅರಸು ಮನೆತನದವನೊಡನೆ ಸಂಘರ್ಷ ಕೈಬಿಟ್ಟು ವೈವಾಹಿಕ ಸಂಬಂಧ ಮಾಡಿಕೊಂಡನು.
- ತನ್ನ ಮಗಳಾದ ಚಂದ್ರಲಬ್ಬೆಯನ್ನು ಗಂಗದೊರೆ ಭೂತುಗನಿಗೆ, ಮತ್ತು ಮತ್ತೊಬ್ಬ ಮಗಳಾದ ಶೀಲಮಹಾದೇವಿಯನ್ನು ವೆಂಗಿಯ ವಿಜಯಾದಿತ್ಯನ ಮಗ ವಿಷ್ಣುವರ್ಧನನಿಗೆ ಮತ್ತು ಇನ್ನೊಬ್ಬ ಮಗಳಾದ ಸಂಖಾಳನ್ನು ಕಂಚಿಯ ಪಲ್ಲವ ದೊರೆ 3ನೇ ನಂದಿವರ್ಮನಿಗೆ ಕೊಟ್ಟು ವಿವಾಹ ಮಾಡಿದನು.
- ಅಮೋಘವರ್ಷನು ತನ್ನ ಕೊನೆಯ ದಿನಗಳಲ್ಲಿ ಯುವರಾಜನಾದ ಕೃಷ್ಣನ ದಂಗೆಯನ್ನು ಎದುರಿಸಬೇಕಾದರೂ ದಂಡನಾಯಕನಾದ ಬಂಕೇಶನು ಕೃಷ್ಣನ ಮನವೊಲಿಸುವಲ್ಲಿ ಯಶಸ್ವಿಯಾದನು. ಇದರಿಂದಾಗಿ ಬಂಕೇಶನು ಬನವಾಸಿಯ ರಾಜ್ಯಪಾಲನಾದನು.
- ಅಮೋಘವರ್ಷನು ಧಾರ್ಮಿಕ ಸಹಿಷ್ಣುವಾಗಿದ್ದು ರಾಜ್ಯದ ಜನರನ್ನು ಕ್ಷಾಮದಿಂದ ಪಾರುಮಾಡಲು ಕೊಲ್ಲಾಪುರದ ಮಹಾಲಕ್ಷ್ಮೀಗೆ ಕೈ ಬೆರಳೊಂದನ್ನು ನೀಡಿದವನೆಂದು ಸಂಜನ್ ಶಾಸನ ತಿಳಿಸುತ್ತದೆ.
- ಸ್ವತಃ ವಿದ್ವಾಂಸನಾಗಿದ್ದು ಪ್ರಶೋತ್ತರ ರತ್ನಮಾಲಾ ಕೃತಿಯನ್ನು ರಚಿಸಿದನು ಮತ್ತು ಅನೇಕ ವಿದ್ವಾಂಸರುಗಳಿಗೆ ಆಶ್ರಯದಾತನಾಗಿದ್ದನು.
IV. ಈ ಕೆಳಗಿನ ಪ್ರಶ್ನೆಗೆ 30-40 ವಾಕ್ಯಗಳಲ್ಲಿ ಉತ್ತರಿಸಿ:
1.ರಾಷ್ಟ್ರಕೂಟರ ಸಾಂಸ್ಕೃತಿಕ ಕೊಡುಗೆಗಳನ್ನು ವಿವರಿಸಿ.
ರಾಷ್ಟ್ರಕೂಟ ಅರಸರು ಭಾರತೀಯ ಸಂಸ್ಕೃತಿಗೆ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ವೈದಿಕ ಮತಾವಲಂಭಿಗಳಾಗಿದ್ದು ಇವರು ಜೈನ ಮತ್ತು ಬೌದ್ಧ ಧರ್ಮಗಳಿಗೆ ರಾಜಾಶ್ರಯ ನೀಡಿದರು.
- ಸಾಹಿತ್ಯ ಪೋಷಕನಾಗಿದ್ದರು; ಕನ್ನಡದ ಮೊದಲ ಕೃತಿಯಾದ ಕವಿರಾಜ ಮಾರ್ಗ ಶ್ರೀ ವಿಜಯನಿಂದ ರಚಿಸಲ್ಪಟ್ಟಿತು.
- 3ನೇ ಕೃಷ್ಣನ ಆಸ್ತಾನದಲ್ಲಿದ್ದ ಪೊನ್ನನು ಶಾಂತಿಪುರಾಣ, ಭುವನೈಕ್ಯ ರಾಮಾಭ್ಯುದಯ ಗ್ರಂಥವನ್ನು ರಚಿಸಿದನು ಇವನಿಗೆ ‘ಉಭಯ ಕವಿ ಚಕ್ರವರ್ತಿ’ ಎಂಬ ಬಿರುದಿತ್ತು.
- ರಾಷ್ಟ್ರಕೂಟರ ಸಾಮಂತ ಇಮ್ಮಡಿ ಅರಿಕೇಸರಿಯ ಆಸ್ಥಾನದಲ್ಲಿದ್ದ ಪಂಪನು ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣ ಗ್ರಂಥವನ್ನು ರಚಿಸಿದನು. ಈತನನ್ನು ‘ಕನ್ನಡದ ಆದಿಕವಿ’ ಎಂದು ಕರೆಯಲಾಗಿದೆ.
- ಶಿವಕೋಟಾಚಾರ್ಯರು ‘ವಡ್ಡಾರಾಧನೆ’ ಎಂಬ ಕೃತಿಯನ್ನು ರಚಿಸಿದರು. ಇದು ‘ಹಳೆಗನ್ನಡದ ಮೊದಲ ಗದ್ಯ’ ಕೃತಿಯಾಗಿದೆ.
- ಸಂಸ್ಕೃತ ಸಾಹಿತ್ಯವು ವಿಫುಲವಾಗಿ ಬೆಳೆಯಿತು. ಅಮೋಘವರ್ಷನ ಪ್ರಶೋತ್ತರ ರತ್ನಮಾಲಾ, ಶಕ್ತಾಯನನ ಶಬ್ದಾನುಶಾಸನ. ಮಹಾವೀರಾಚಾರ್ಯನ ಗಣಿತಸಾರಸಂಗ್ರಹ, ಆಗಸನ ವರ್ಧಮಾನ ಪುರಾಣ ಮೊದಲಾದವು ಸಂಸ್ಕೃತಿ ಕೃತಿಗಳಾಗಿವೆ.
- ಕಲೆ ಮತ್ತು ವಾಸ್ತುಶಿಲ್ಪ: ರಾಷ್ಟ್ರಕೂಟ ಅರಸರು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ಇವರು ದೇವಾಲಯ, ಗುಹಾಂತರ ದೇವಾಲಯಗಳನ್ನು ಮತ್ತು ಬಸದಿಗಳನ್ನು ನಿರ್ಮಿಸಿದ್ದಾರೆ. ಎಲ್ಲೋರ, ಅಜಂತ ಮತ್ತು ಎಲಿಫೆಂಟಾ ಇವರ ಕಲೆಯ ಪ್ರಮುಖ ಕೇಂದ್ರಗಳಾಗಿವೆ.
- ಎಲ್ಲೋರ ಕೈಲಾಸನಾಥ ದೇವಾಲಯ: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರಾದಲ್ಲಿ 16 ಗುಹೆಗಳಿದ್ದು ಅವುಗಳಲ್ಲಿ 5 ಹಿಂದೂ ಧರ್ಮಕ್ಕೆ ಸೇರಿವೆ. ಇಲ್ಲಿನ ಕೈಲಾಸನಾಥ ಏಕಶಿಲಾ ದೇವಾಲಯವು ಜಗತ್ಪಸಿದ್ಧವಾಗಿದೆ. ಈ ದೇವಾಲಯವನ್ನು 1ನೇ ಕೃಷ್ಣನು ಸಾ.ಶಿ. 770ರಲ್ಲಿ ನಿರ್ಮಿಸಿದನು. ರಾವಣನು ಕೈಲಾಸ ಪರ್ವತವನ್ನು ಎತ್ತುತ್ತಿರುವ ದೃಶ್ಯವು ಅದ್ಭುತವಾಗಿ ಕಾಣುವುದರಿಂದ ಈ ದೇವಾಲಯಕ್ಕೆ ಕೈಲಾಸನಾಥ ದೇವಾಲಯ ಎಂದು ಕರೆಯಲಾಗಿದೆ.
- ಎಲಿಫೆಂಟಾ : ಮುಂಬೈಯಿಂದ ಆರು ಮೈಲಿ ದೂರದಲ್ಲಿರುವ ಒಂದು ದ್ವೀಪ ಪ್ರದೇಶವಾಗಿರುವ ಎಲಿಫೆಂಟಾದ ಹಿಂದಿನ ಹೆಸರು ಗೊರವಪುರಿ. ಇಲ್ಲಿರುವ ಬೃಹತ್ ಆನೆಯನ್ನು ಪೋರ್ಚುಗೀಸರು ಎಲಿಫೆಂಟಾ ಎಂದು ಕರೆದ ನಂತರ ಈ ದ್ವೀಪಕ್ಕೆ ಎಲಿಫೆಂಟಾ ಎಂಬ ಹೆಸರು ಬಂದಿತು. ಇಲ್ಲಿರುವ ಗುಹೆಗಳ ಮದ್ಯದಲ್ಲಿರುವ ಗುಹೆಯಲ್ಲಿನ ತ್ರಿಮೂರ್ತಿ ವಿಗ್ರಹ ದೇವರ ಮೂರು ಅವತಾರಗಳಿಗೆ [ಸೃಷ್ಟಿ, ಸ್ಥಿತಿ, ಲಯ] ಸಂಬಂಧಿಸಿದೆ.
- ಇವರು ಚಿತ್ರಕಲೆಗೂ ಪ್ರೋತ್ಸಾಹ ನೀಡಿದ್ದರೆಂಬುದಕ್ಕೆ ಎಲ್ಲೋರದ ಗುಹಾಂತರ ದೇವಾಲಯದಲ್ಲಿರುವ ಚಿತ್ರಕಲೆ ಸಾಕ್ಷಿಯಾಗಿದೆ.
ಹೆಚ್ಚುವರಿ ಪ್ರಶ್ನೆಗಳು:
1. ರಾಷ್ಟ್ರಕೂಟರು ಭಾರತದಲ್ಲಿ ಎಷ್ಟು ವರ್ಷಗಳ ಕಾಲ ಆಳ್ವಿಕೆ ನಡೆಸಿದರು?
ಸಾ.ಶ. 753 ರಿಂದ 978ರ ವರೆಗೆ.
2. ಯಾವ ದೊರೆ ತನ್ನ ಮಗಳಾದ ಶೀಲಭಟ್ಟಾರಿಕೆಯನ್ನು ಧ್ರುವನಿಗೆ ಕೊಟ್ಟು ವಿವಾಹ ಮಾಡಿದನು?
ವೆಂಗಿ ಅರಸ 4ನೇ ವಿಷ್ಣುವರ್ಧನ.
3. ರಾಷ್ಟ್ರಕೂಟರು ಯಾವ ಪ್ರದೇಶಕ್ಕೆ ಸೇರಿದವರು?
ಇವರು ಮಹಾರಾಷ್ಟ್ರದ ಲತ್ತಲೂರು (ಲಾತೂರು) ಪ್ರದೇಶಕ್ಕೆ ಸೇರಿದವರು.
4. ಅಮೋಘವರ್ಷನನ್ನು ‘ರಾಜರಾಮುಡು’ ಕದನದಲ್ಲಿ ಸೋಲಿಸಿದ ಗಂಗರ ದೊರೆ ಯಾರು?
ನೀತಿಮಾರ್ಗ ಎರೆಗಂಗ.
5. 2ನೇ ಗೋವಿಂದನನ್ನು ಪದಚ್ಯುತಿಗೊಳಿಸಿ ಅಧಿಕಾರಕ್ಕೆ ಬಂದ ಅರಸನಾರು?
ಧ್ರುವ
6. 3ನೇ ಗೋವಿಂದನ ಸಾಮ್ರಾಜ್ಯವು ಎಲ್ಲಿಯವರೆಗೆ ಹರಡಿತ್ತು?
ಉತ್ತರದಲ್ಲಿ ಹಿಮಾಲಯದಿಂದ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೆ ಮತ್ತು ಪಶ್ಚಿಮದಲ್ಲಿ ಸೌರಾಷ್ಟ್ರದಿಂದ ಪೂರ್ವದಲ್ಲಿ ಬಂಗಾಳದವರೆವಿಗೂ ಹರಡಿತ್ತು.
ನೆನಪಿನಲ್ಲಿಡಬೇಕಾದ ಅಂಶಗಳು:
- ಮಾನ್ಯಖೇಟ ರಾಷ್ಟ್ರಕೂಟರ ರಾಜಧಾನಿಯಾಗಿತ್ತು.
- ಗರುಡ ಇರವ ರಾಷ್ಟ್ರ ಲಾಂಛನವಾಗಿತ್ತು.
- ಪಂಪ ಕನ್ನಡದ ಆದಿಕವಿ,
- ಉಭಯ ಕವಿ ಚಕ್ರವರ್ತಿ ಪೊನ್ನ.