2nd Puc Ayke Ide Namma Kaiyalli Kannada Notes Question and Answer Summery Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಕನ್ನಡ ಆಯ್ಕೆಯಿದೆ ನಮ್ಮ ಕೈಯಲ್ಲಿ ನೋಟ್ಸ್ ಪ್ರಶ್ನೋತ್ತರಗಳು, ayke ide namma kaiyalli summary in kannada pdf part ಆಯ್ಕೆಯಿದೆ ನಮ್ಮ ಕೈಯಲ್ಲಿ Question answer class 12 ayke ide namma kaiyalli notes ಆಯ್ಕೆಯಿದೆ ನಮ್ಮ ಕೈಯಲ್ಲಿ notes pdf ಆಯ್ಕೆಯಿದೆ ನಮ್ಮ ಕೈಯಲ್ಲಿ summary in kannada ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ pdf
೩. ಆಯ್ಕೆಯಿದೆ ನಮ್ಮ ಕೈಯಲ್ಲಿ
– ನೇಮಿಚಂದ್ರ

ಲೇಖಕರ ಪರಿಚಯ:
ನೇಮಿಚಂದ್ರ ಕನ್ನಡದ ಪ್ರಖ್ಯಾತ ಕಥೆಗಾರ್ತಿ, ಬೆಂಗಳೂರಿನ ಎಚ್.ಎ.ಎಲ್.ನಲ್ಲಿ ಇಂಜಿನಿಯರ್ ಆಗಿದ್ದಾರೆ. ‘ನಮ್ಮ ಕನಸುಗಳಲ್ಲಿ ನೀವಿದ್ದೀರಿ’, ‘ಮತ್ತೆ ಬರೆದ ಕತೆಗಳು’, ‘ಒಂದು ಶ್ಯಾಮಲ ಸಂಜೆ’ ಎಂಬ ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ‘ನೇಮಿಚಂದ್ರರ ಕಥೆಗಳು’ ಎಂಬ ಹೆಸರಿನ ಸಮಗ್ರ ಕಥಾಸಂಕಲನವೂ ಪ್ರಕಟಗೊಂಡಿದೆ. ಮಹಿಳಾ ವಿಜ್ಞಾನಿಗಳನ್ನು ಕುರಿತು ಅಪರೂಪದ ಪುಸ್ತಕಗಳನ್ನು ಪ್ರಕಟಿಸಿರುವ ನೇಮಿಚಂದ್ರ ಪ್ರವಾಸಪ್ರಿಯ ಲೇಖಕಿ. ‘ಒಂದು ಕನಸಿನ ಪಯಣ’, ‘ಪೆರುವಿನ ಪವಿತ್ರ ಕಣಿವೆ’ ಎಂಬ ಪ್ರವಾಸಕಥನಗಳನ್ನು ಪ್ರಕಟಿಸಿದ್ದಾರೆ. ಬೆಳೆಗೆರೆ ಜಾನಕಮ್ಮನವರನ್ನು ಕುರಿತು ಇವರು ಹೊರತಂದಿರುವ ಪುಸ್ತಕವೂ ಗಮನಾರ್ಹವಾದುದು. ಉದಾಯವಾಣಿಯಲ್ಲಿ ಇವರು ಬರೆದ ಅಂಕಣಗಳನ್ನು ‘ಬದುಕು ಬದಲಿಸಬಹುದು’ ಎಂಬ ಹೆಸರಿನಲ್ಲಿ ಹೊರತಂದಿದ್ದಾರೆ. ಇದೇ ಪುಸ್ತಕದಿಂದ ಪ್ರಸ್ತುತ ‘ಆಯ್ಕೆಯಿದೆ ನಮ್ಮಕೈಯಲ್ಲಿ’ ಎಂಬ ಲೇಖನವನ್ನು ಆಯ್ದುಕೊಳ್ಳಲಾಗಿದೆ.
ಆಕರ: ‘ಬದುಕು ಬದಲಿಸಬಹುದು’.
(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು
೧. ‘ಆದೃಷ್ಟ’ವನ್ನೇ ಅವಲಂಬಿಸಿ ಬದುಕಲು ಸಾಧ್ಯವೇ?
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಲೇಖನದ ಆರಂಭದಲ್ಲಿಯೇ ಈ ಮೇಲಿನ ವಾಕ್ಯವನ್ನು ಗಮನಿಸಬಹುದು.
ಲೇಖಕಿಗೆ ಯಾರಾದರೂ ಮಾತಿನ ಮಧ್ಯೆ ‘ಏನ್ ಮಾಡೋಕಾಗುತ್ತೆ ಎಲ್ಲಾ ಹಣೆಬರಹ, ಆಗೋದು ಆಗೇ ಆಗುತ್ತೆ’ ಎಂದರೆ ರೇಗಿ ಹೋಗುತ್ತದೆಯಂತೆ, ಏಕೆಂದರೆ ಅವರ ಪ್ರಕಾರ ನಾವು ಕೆಲವೊಮ್ಮೆ ಆಗುವುದನ್ನು ತಡೆಯಲಾಗದಿರಬಹುದು. ಆದರೆ ತಡೆಯುವ ಪ್ರಯತ್ನವನ್ನಾದರೂ ಮಾಡಬಹುದಲ್ಲವೆ? ಎಂದು ಪ್ರಶ್ನಿಸಿಕೊಳ್ಳುತ್ತಾರೆ. ಲೇಖಕಿಯ ಖಚಿತ ಅಭಿಪ್ರಾಯದಂತೆ ‘ಅದೃಷ್ಟ’ವನ್ನೇ ಅವಲಂಬಿಸಿ ಬದುಕಲಾಗದು. ಅದೃಷ್ಟವನ್ನು ನಂಬಿ ಕೈಕಟ್ಟಿ ಕೂರುವುದಕ್ಕಿಂತ ಮನುಷ್ಕ ಪ್ರಯತ್ನ ಅತಿಮುಖ್ಯವೆಂಬುದನ್ನು ಈ ಮೇಲಿನಂತೆ ಪ್ರಶ್ನಿಸುವ ಮೂಲಕ ಲೇಖಕಿ ಸೂಚಿಸಿದ್ದಾರೆ.
೨. ಮತ್ತೆ ಅವರಿಗೆ ಮೂತ್ರಪಿಂಡದ ಕಲ್ಲು ಕಾಣಿಸಿರಲಿಲ್ಲ.
ಶ್ರೀಮತಿ ನೇಮಿಚಂದ್ರ ಅವರು ಬರೆದಿರುವ ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಲೇಖನದಿಂದ ಈ ವಾಕ್ಯವನ್ನು ಸ್ವೀಕರಿಸಲಾಗಿದೆ. ಕಮಲ ಮೇಡಂರವರಿಗಾಗಿದ್ದ ಮೂತ್ರಪಿಂಡದ ಕಲ್ಲಿನ ವಿಚಾರವನ್ನು ನಿರೂಪಿಸುತ್ತಾ ಲೇಖಕಿ ಈ ಮಾತನ್ನು ಹೇಳಿದ್ದಾರೆ. ಕಮಲ ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರು ಶಸ್ತ್ರಚಿಕಿತ್ಸೆಯ ನಂತರ ವೈದ್ಯರ ಸಲಹೆಯಂತೆ ಯಥೇಚ್ಛವಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರಲ್ಲದೆ, ವೈದ್ಯರು ಹೇಳಿದ್ದ ಕೆಲವು ಆಹಾರದ ಬದಲಾವಣೆಗಳನ್ನು ಜಾರಿಗೆ ತಂದರು ಇದರಿಂದಾಗಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಮತ್ತೆ ಅವರಿಗೆ ಮೂತ್ರಪಿಂಡದ ಕಲ್ಲು ಕಾಣಿಸಿರಲಿಲ್ಲ. ಇದನ್ನು ವಿವರಿಸುತ್ತಾ ಲೇಖಕಿ ತೊಂದರೆಯನ್ನು ನಿವಾರಿಸಿಕೊಳ್ಳುವಲ್ಲಿ ಮನುಷ್ಯ ತನ್ನ ಪ್ರಯತ್ನವನ್ನು ಬಿಡದೆ ಪಾಲಿಸಬೇಕೆಂದಿರುವರು
೩. ‘ನೋಡು. ನಿನ್ನ ಎದುರು ಎರಡು ಆಯ್ಕೆಗಳಿವೆ.
ಶ್ರೀಮತಿ ನೇಮಿಚಂದ್ರ ಅವರು ಬರೆದಿರುವ ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಲೇಖನದಲ್ಲಿ ಲೇಖಕಿಯೇ ತಮ್ಮ ಪತಿಗೆ ಹೇಳಿರುವ ಮಾತಿದು.
ಮೂತ್ರಪಿಂಡದ ಕಲ್ಲಿನ ತೊಂದರೆಯಿಂದ ಬಳಲುತ್ತಿದ್ದ ತಮ್ಮ ಪತಿ ಕೀರ್ತಿಯವರಿಗೆ, ಕಮಲ ಮೇಡಂ ಮತ್ತು ಮೂಲೆಮನೆ ಮುದ್ದೆಗೌಡರ ಶಸ್ತ್ರಚಿಕಿತ್ಸೆಯ ಅನುಭವಗಳನ್ನು ವಿವರಿಸಿದ ಲೇಖಕಿಯು “ನೋಡು ನಿನ್ನ ಎದುರು ಎರಡು ಆಯ್ಕೆಗಳಿವೆ. ಏನೂ ಮಾಡದ ಮುದ್ದೇಗೌಡರ ತರಹ ಎರಡೆರಡು ವರ್ಷಕ್ಕೆ ಆಪರೇಷನ್ ಮಾಡಿಸಿಕೊಳ್ಳೋದು. ಇಲ್ಲ ಕಮಲ ಮೇಡಂ ತರಹ ಇನ್ನು ಮೇಲೆ ಚೆನ್ನಾಗಿ ನೀರು ಕುಡಿಯುವುದು”ಎಂದು ಹೇಳಿದರು. ಆ ಕ್ಷಣದಿಂದಲೇ ತಮ್ಮಪತಿ ಯಥೇಚ್ಛವಾಗಿ ದ್ರವಾಹಾರವನ್ನು ಸ್ವೀಕರಿಸುವಂತೆ ಎಚ್ಚರವಹಿಸಿ, ಶಸ್ತ್ರಚಿಕಿತ್ಸೆಯ ಅಗತ್ಯ ಬಾರದಂತೆ ನೋಡಿಕೊಂಡರು.
೪. ‘ಈ ಅದೃಷ್ಟ ನಿನಗೂ ಇತ್ತಲ್ಲೆ?’
ಶ್ರೀಮತಿ ನೇಮಿಚಂದ್ರ ಅವರ ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಅನುಭವ ಕಥನದಲ್ಲಿ ಲೇಖಕಿಯು ಈ ಮೇಲಿನ ಮಾತನ್ನು ತಮ್ಮ ಹೈಸ್ಕೂಲ್ ಸಹವಾರಿ ಸೀತಾಳನ್ನು ಉದ್ದೇಶಿಸಿ ಹೇಳಿದ್ದಾರೆ.
ಲೇಖಕಿಯು ಚೆನ್ನಾಗಿ ಓದಿ, ಇಂಜಿನಿಯರ್ ಆಗಿ, ಸ್ವಂತ ಮನೆ ಕೊಂಡಿದ್ದನ್ನು ಕಂಡು ಅವರ ಗೆಳತಿ ಸೀತಾ “ನೀನು ಬಿಡೆ, ತುಂಬಾ ಅದೃಷ್ಟವಂತೆ” ಎಂದಾಗ ಅದಕ್ಕೆ ಉತ್ತರಿಸುತ್ತಾ ಈ ಮೇಲಿನ ಮಾತನ್ನು ಹೇಳುತ್ತಾರೆ. ಸೀತಾಳಿಗೂ ಓಡುವ ಅವಕಾಶವಿತ್ತು. ಓದಿಸುವ ತಂದೆಯಿದ್ದರು. ಆದರೆ ಓದಿನಲ್ಲಿ ಆಸಕ್ತಿ ತೋರದೆ ಹೈಸ್ಕೂಲನ್ನೂ ಮುಗಿಸದೆ ಸಾಮಾನ್ಯ ಗೃಹಿಣಿಯಾಗಿದ್ದಳು. ಅದನ್ನು ನೆನಪಿಸುತ್ತಾ ಲೇಖಕಿಯು “ಈ ಅದೃಷ್ಟ ನಿನಗೂ ಇತ್ತಲ್ಲೆ?” ಎಂದು ಪ್ರಶ್ನಿಸಿದ್ದಾರೆ. ವಿದ್ಯಾವಂತನ ಬಟುಂಬದಲ್ಲಿ ಹುಟ್ಟಿಯೂ ಓದದ ಸೀತಾಳದು ನಿಜಕ್ಕೂ ದುರದೃಷ್ಟಕರ ಬದುಕು. ಹೆಣ್ಣು ಮಕ್ಕಳು ಚೆನ್ನಾಗಿ ಓದಿ, ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳುವುದು ಮುಖ್ಯ.
೫. ಮುಂಬಯಿಯ ಪ್ರಸಿದ್ಧ ನ್ಯಾಯವಾದಿಯಾದರು.
ನೇಮಿಚಂದ್ರ ಅವರ ʼಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಅನುಭವ ಕಥನದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಂಡಿದೆ. ನ್ಯಾಯವಾದಿಯಾದ ಪ್ಲೇವಿಯಾ ಅವರ ಬದುಕನ್ನು ವಿವರಿಸುವಾಗ ಲೇಖಕಿ ಈ ಮೇಲಿನ ಮಾತನ್ನು ಹೇಳಿದ್ದಾರೆ.
ಪ್ಲೇವಿಯಾ ದಿನನಿತ್ಯ ಹಿಂಸಿಸುವ ಗಂಡನ ಜೊತೆ ಬಾಳುವ ಕೌಟುಂಬಿಕ ಕ್ಷೌಲ್ಯಕ್ಕೆ ಬಲಿಯಾಗಿದ್ದರು. ಅವನ್ನು ಪ್ರತಿಭಟಿಸಿ ಹೊರಬಂದ ಆಕೆ ತಾವು ಹತ್ತನೇ ತರಗತಿವರೆಗೆ ಮಾತ್ರ ಓದಿದ್ದನ್ನು ಮುಂದುವರೆಸಿದಾಗ ಮೂರು ಮಕ್ಕಳ ತಾಯಿ ಬೇರೆ. ನಲವತ್ತರ ವಯಸ್ಸಿನಲ್ಲಿ ಮುಂದೆ ಓದಿ ಮುಂಬಯಿಯ ಪ್ರಸಿದ್ಧ ನ್ಯಾಯವಾದಿಯಾದರಲ್ಲದೆ, ತಮ್ಮ ಮೂರು ಮಕ್ಕಳನ್ನೂ ಮುಂದೆ ತಂದರು. ಇದನ್ನು ವಿವರಿಸುತ್ತಾ ಲೇಖಕಿಯು ದುರದೃಷ್ಟವೆಂದು ಕೈಚೆಲ್ಲಿ ಕೂರುವ ಬದಲು ನಮ್ಮ ಹೆಣ್ಣುಮಕ್ಕಳಿಗೆ ಪ್ಲೇವಿಯಾರ ಬದುಕು ಆದರ್ಶವಾಗಬೇಕೆಂದಿದ್ದಾರೆ.
ಹೆಚ್ಚುವರಿ ಪ್ರಶ್ನೆಗಳು:
೬. ‘ನಾನು ನಾಲ್ಕು ಬಾರಿ ಆಪರೇಷನ್ ಮಾಡಿಸಿಕೊಂಡಿದ್ದೇನೆ.
ಶ್ರೀಮತಿ ನೇಮಿಚಂದ್ರ ಅವರು ರಚಿಸಿರುವ ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಲೇಖನದಿಂದಾಯ್ದ ಈ ವಾಕ್ಯವನ್ನು ಮುದ್ದೇಗೌಡರು ಲೇಖಕಿಗೆ ಹೇಳುತ್ತಾರೆ.
ಲೇಖಕಿಯ ತಮ್ಮ ಪತಿ ಕೀರ್ತಿಗೆ ಕಿಡ್ನಿಸ್ಟೋನ್ ಆದಾಗ ಈ ಹಿಂದೆ ಕಿಡ್ನಿಸ್ಟೋನ್ ಆಗಿ ಶಸ್ತ್ರಚಿಕಿತ್ಸೆಗೊಳಗಾದವರ ಅನುಭವವನ್ನು ಅರಿಯಲೆಂದು ನೆರೆಯಲ್ಲಿದ್ದ ಕೆಲವರನ್ನು ವಿಚಾರಿಸುತ್ತಾರೆ. ಆ ರೀತಿ ಚಿಕಿತ್ಸೆಗೊಳಗಾಗಿದ್ದ ಮೂಲೆಮನೆ ಮುದ್ದೇಗೌಡರು ತಮ್ಮ ಅನುಭವವನ್ನು ವಿವರಿಸುತ್ತಾ “ಓಹ್ ಈಗದೇನೂ ದೊಡ್ಡ ಆಪರೇಷನ್ ಅಲ್ಲವಲ್ಲ. ನಾನು ನಾಲ್ಕು ಬಾರಿ ಮಾಡಿಸಿಕೊಂಡಿದ್ದೇನೆ” ಎಂದು ಆಂಗಿ ಎತ್ತಿ ತೋರಿಸಿದ ಸಂದರ್ಭವಿದಾಗಿದೆ. ಮೂತ್ರಪಿಂಡದ ಕಲ್ಲಿನ ತೊಂದರೆಯನ್ನು ಅವರು ನಿರ್ಲಕ್ಷ್ಯದಿಂದ ಕಂಡಿರುವುದು ಮೇಲಿನ ವಾಕ್ಯದ ಮೂಲಕ ವ್ಯಕ್ತವಾಗುತ್ತದೆ.
(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).
೧. ಲೇಖಕಿಗೆ ಯಾವಾಗ ರೇಗಿ ಹೋಗುತ್ತಿತ್ತು?
‘ಏನ್ ಮಾಡೋಕ್ಕಾಗುತ್ತೆ ಎಲ್ಲಾ ಹಣೆಬರಹ ಆಗೋದು ಆಗೇ ಆಗುತ್ತೆ’ ಎಂದು ಯಾರಾದರೂ ಹೇಳಿದರೆ,
೨. ಲೇಖಕಿಯ ಪತಿ ಯಾವ ತೊಂದರೆಯಿಂದ ಬಳಲಿದರು?
ಮೂತ್ರಪಿಂಡದಲ್ಲಿ ಕಲ್ಲು
೩. ‘ಕಿಡ್ನಿಸ್ಟೋನ್’ ಬಗ್ಗೆ ತಿಳಿಯಲು ಲೇಖಕಿ ಯಾರನ್ನು ಭೇಟಿ ಮಾಡಿದರು?
ಕಮಲ ಮೇಡಂ ಮತ್ತು ಮುದ್ದೇಗೌಡರನು
೪. ಲೇಖಕಿಯ ಪತಿಯನ್ನು ಸೋನೋಗ್ರಫಿ ರೂಮಿಗೆ ಕರೆದೊಯ್ದುದೇಕೆ?
ಮೂತ್ರಪಿಂಡದಲ್ಲಿ ಕಲ್ಲು ಇರುವ ಸ್ಥಳ ಚಲಿಸಿದ್ದರೆ ತಿಳಿಯಲೆಂದು
೫. ಆದೃಷ್ಟದ ಪ್ರಶ್ನೆ ಬಂದಾಗ ಲೇಖಕಿಗೆ ಯಾರು ನೆನಪಾಗುತ್ತಾರೆ?
ಸೀತಾ
೬. ದುರಾಸೆಯ ಹುಡುಗನನ್ನು ನಿರಾಕರಿಸಿದವರು ಯಾರು?
ನಿಶಾ ಶರ್ಮ
ಹೆಚ್ಚುವರಿ ಪ್ರಶ್ನೆಗಳು:
೭. “ಬದುಕು ಸದಾ ಅದೃಷ್ಟಗಳನ್ನು ನಮ್ಮತ್ತ ಎಸೆಯದಿದ್ದರೂ, ಬದುಕು ನೂರು, ಸಾವಿರ ಅವಕಾಶಗಳನ್ನು ನಮ್ಮೆದುರು ತೆರೆಯುತ್ತದೆ. ಎಂಥ ಕೆಟ್ಟ ಸಂದರ್ಭದಲ್ಲೂ ನಮ್ಮೆದುರು ಆಯ್ಕೆಗಳಿರುತ್ತವೆ….”. – ‘ಆಯ್ಕೆ ಇದೆ ನಮ್ಮ ಕೈಯಲ್ಲಿ’ ಗದ್ಯದ ಈ ಸಾಲುಗಳು ಕೆಳಗಿನ ಯಾವ ಹೇಳಿಕೆಯನ್ನು ಸಮರ್ಥಿಸುತ್ತದೆ?
ಅವಕಾಶಗಳಿರುವಾಗ ಮುನ್ನಗ್ಗಿ ನಡೆಯುವುದು
೮. “ಸುಮ್ಮನೆ ದೂರು ಹೇಳುತ್ತಾ ಕೂರೋ ಬದಲು, ನೀನೇನಾದರೂ ಮಾಡು. ಎಸ್.ಎಸ್.ಎಲ್.ಸಿ. ಕಟ್ಟು, ಟೈಪಿಂಗ್ ಏನಾದರೂ ಕಲಿ… ನೂರು ದಾರಿಗಳಿವೆ” ಎಂದು ಹೇಳಿದರೂ ಸೀತಾ ಏಕೆ ಕಲಿಯಲಿಲ್ಲ?
ಸೀತಾಗೆ ಎಲ್ಲವೂ ತಟ್ಟನೆ ಸರಿಹೋಗಬೇಕು
೯. ನಲವತ್ತನೇ ವಯಸ್ಸಿನಲ್ಲಿ ಪುನಃ ವಿದ್ಯಾಭ್ಯಾಸ ಮುಂದುವರೆಸಿ ಪ್ರಸಿದ್ದ ನ್ಯಾಯವಾದಿಯಾದವರು ಯಾರು?
ಪ್ಲೇವಿಯಾ
(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):
೧. ಯಾವ ಉತ್ತರಗಳಿಂದ ಲೇಖಕಿಗೆ ತೃಪ್ತಿಯಾಗಲಿಲ್ಲ?
ಕಿಡ್ನಿಸ್ಟೋನ್ “ಕೆಲವರಿಗೆ ಆಗುತ್ತೆ, ಕೆಲವರಿಗೆ ಇಲ್ಲ. ಅವರವರ ಅದೃಷ್ಟ” ಎಂಬಂಥ ಉತ್ತರಗಳು ಲೇಖಕಿಗೆ ತೃಪ್ತಿ ನೀಡಲಿಲ್ಲ.
೨. ಕಮಲ ಮೇಡಂ ವೈದ್ಯರ ಯಾವ ಸಲಹೆಯನ್ನು ರೂಢಿಸಿಕೊಂಡರು?
ಕಮಲ ಮೇಡಂ ವೈದ್ಯರ ಸಲಹೆಯಂತೆ ಯಥೇಚ್ಛವಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರು ಮತ್ತು ವೈದ್ಯರು ಹೇಳಿದ್ದ ಕೆಲವು ಆಹಾರದ ಬದಲಾವಣೆಗಳನ್ನು ಜಾರಿಗೆ ತಂದರು. ಹೀಗಾಗಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಮತ್ತೆ ಅವರಿಗೆ ಮೂತ್ರಪಿಂಡದ ಕಲ್ಲು ಕಾಣಿಸಲಿಲ್ಲ.
೩. ಮುದ್ದೇಗೌಡರು ಪಕ್ಷದ ವಿಚಾರವಾಗಿ ಹೊಂದಿದ್ದ ನಿಲುವು ಯಾವುದು?
ಮುದ್ದೇಗೌಡರು ಪಥ್ಯದ ವಿಚಾರವಾಗಿ ನಿರ್ಲಕ್ಷ್ಯ ವಹಿಸಿದ್ದರು. ಅವರು “ಅಯ್ಯೋ ಅದೆಲ್ಲಾ ಪಥ್ಯ ಯಾರು ಮಾಡೋಕಾಗುತ್ತೆ ಬಿಡಿ, ಬಾಡು ತಿನ್ನೇಡಿ, ಹಾಲಿನ ಪದಾರ್ಥಗಳನ್ನು ಹೆಚ್ಚು ತಿನ್ನೇಡಿ, ಸದಾ ನೀರು ಕುಡೀರಿ ಅಂತಾರೆ. ಅದನ್ನೆಲ್ಲಾ ಯಾರು ಮಾಡ್ತಾರೆ” ಎನ್ನುತ್ತಿದ್ದರು.
೪. ಸೀತಾಳ ಓದುವ ಆಸಕ್ತಿ ಹೇಗಿತ್ತು?
ಸೀತಾಳಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ, ಎಸ್.ಎಸ್.ಎಲ್.ಸಿ.ಯಲ್ಲಿ ಎಲ್ಲಾ ವಿಷಯದಲ್ಲೂ ಫೇಲ್ ಆದವಳು ಮತ್ತೆ ಪರೀಕ್ಷೆ ಕಟ್ಟುವ ಗೋಜಿಗೆ ಹೋಗದೆ ಮಾರ್ಕೆಟ್, ಸಿನಿಮಾ ಎಂದು ಗೆಳತಿಯರೊಂದಿಗೆ ಸುತ್ತಾಡುತ್ತಿದ್ದಳು.
೫. ಸೀತಾಳ ಬಯಕೆ, ನಂಬಿಕೆಗಳು ಹೇಗಿದ್ದವು?
ಸೀತಾ ಕಷ್ಟಪಡುವವಳಲ್ಲ, ಎಲ್ಲವೂ ತಟ್ಟನೆ ಸರಿಹೋಗಿ ಬಿಡಬೇಕೆಂದು ಬಯಸುತ್ತಿದ್ದಳು. ಕೈತುಂಬಾ ಸಂಪಾದಿಸಿ ತಂದು ಹಾಕಿ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಗಂಡನ ಜವಾಬ್ದಾರಿ ಎಂಬ ನಂಬಿಕೆ ಅವಳಲ್ಲಿ ಬಲವಾಗಿ ಬೇರೂರಿತ್ತು.
೬. ತಾನು ಅದೃಷ್ಟವಂತೆ ಎಂದು ಲೇಖಕಿ ಭಾವಿಸಲು ಕಾರಣವೇನು?
ವಿದ್ಯಾವಂತದ ಕುಟುಂಬದಲ್ಲಿ ಹುಟ್ಟಿದ್ದು ಮತ್ತು ಎಷ್ಟು ಬೇಕಾದರೂ ಓದಿಸುವ ತಂದೆಯ ಮಗಳಾಗಿ ಹುಟ್ಟಿದ್ದು ತಮ್ಮ ಅದೃಷ್ಟವೆಂದು ಲೇಖಕಿ ಭಾವಿಸುತ್ತಾರೆ. ಇಂಥ ಅದೃಷ್ಟ ಭಾರತದ ಎಷ್ಟು ಜನ ಹೆಣ್ಣುಮಕ್ಕಳಿಗೆ ಸಿಗಬಲ್ಲದೆಂಬ ಪ್ರಶ್ನೆ ಅವರದು ತಮಗೆ ಸಿಕ್ಕಿರುವುದರಿಂದ ತಾವು ಅದೃಷ್ಟವಂತೆಯೆಂದು ಆಕೆ ಭಾವಿಸಿದ್ದಾರೆ.
ಹೆಚ್ಚುವರಿ ಪ್ರಶ್ನೆಗಳು:
೭. ಯಾರು ಯಾರಿಗೆ ಕಿಡ್ನಿಸ್ಟೋನ್ ಆಗಿತ್ತು?
ಲೇಖಕೆಯ ಪತಿ ಕೀರ್ತಿಗೆ, ಎದುರು ಮನೆಯ ಕಮಲ ಮೇಡಂ ಹಾಗೂ ಮೂಲೆಮನೆಯ ಮುದ್ದೇಗೌಡರಿಗೆ ಕಿಡ್ನಿಸ್ಟೋನ್ ಆಗಿತ್ತು.
೮. ಲೇಖಕಿಯ ಪತಿಯ ಎದುರಿಗಿದ್ದ ಎರಡು ಆಯ್ಕೆಗಳು ಯಾವುವು?
ಏನೂ ಮಾಡದೆ ಮುದ್ದೇಗೌಡರ ತರಹ ಎರಡೆರಡು ವರ್ಷಕ್ಕೆ ಆಪರೇಷನ್ ಮೂಡಿಸಿಕೊಳ್ಳುವುದು. ಇಲ್ಲವೇ ಕಮಲ ಮೇಡಂ ತರಹ ಚೆನ್ನಾಗಿ ನೀರು ಕುಡಿದು ಇದೇ ಮೊದಲ ಹಾಗೂ ಕೊನೆಯ ಆಪರೇಷನ್ ಮಾಡಿಸಿಕೊಳ್ಳುವುದು ಲೇಖಕಿಯ ಪತಿಗಿದ್ದ ಎರಡು ಆಯ್ಕೆಗಳಾಗಿದ್ದವು.
೯. ದೂರು ಹೇಳಿದ ಸೀತಾಗೆ ಲೇಖಕಿ ನೀಡಿದ ಸಲಹೆ ಏನು?
“ಸುಮ್ಮನೆ ದೂರು ಹೇಳುತ್ತಾ ಕೂರೋ ಬದಲು, ನೀನೇನಾದರೂ ಮಾಡು. ಎಸ್.ಎಸ್.ಎಲ್.ಸಿ. ಕಟ್ಟು, ಟೈಪಿಂಗ್ ಏನಾದರೂ ಕಲಿ” ಎಂದು ಲೇಖಕಿಯು ತಮ್ಮ ಬಳಿ ದೂರು ಹೇಳಿದ ಸೀತಾಗೆ ಸಲಹೆ ನೀಡಿದರು.
೧೦. ಲೇಖಕಿ ಯಾವುದನ್ನು ‘ಆದೃಷ್ಟ’ ಎನ್ನುತ್ತಾರೆ?
ಅತಿ ಕಡಿಮೆ ಸಂಭವನೀಯತೆ ಇರುವ ಘಟನೆ ನಡೆದಾಗ, ಅದು ಒಳ್ಳೆಯದಾಗಿದ್ದರೆ ಅದನ್ನು ಅದೃಷ್ಟ ಎನ್ನುತ್ತೇವೆ ಎಂದು ಲೇಖಕಿ ಹೇಳಿದ್ದಾರೆ.
೧೧. ಪ್ಲೇವಿಯಾ ಬದುಕಿನಲ್ಲಿ ಆಯ್ಕೆ ಮಾಡಿಕೊಂಡ ದಾರಿ ಯಾವುದು?
ಪ್ಲೇವಿಯಾ ಗಂಡನಿಂದ ಕ್ರೌರ್ಯ. ಹಿಂಸೆಯನ್ನು ಅನುಭವಿಸಿದರೂ, ತವರಿನ ಬೆಂಬಲವಿಲ್ಲದಿದ್ದರೂ, ದುರದೃಷ್ಟಕ್ಕೆ ಹಲುಬಿ ಕೂರಲಿಲ್ಲ, ಅವಳು ನಲವತ್ತರ ವಯಸ್ಸಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಮುಂಬಯಿಯ ಪ್ರಸಿದ್ದ ನ್ಯಾಯವಾದಿಯಾದರು.
(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):
೧. ರಜೆಗೆಂದು ಮೈಸೂರಿಗೆ ಹೋದಾಗ ಲೇಖಕಿಯ ಪತಿಗಾದ ತೊಂದರೆಯೇನು?
ಲೇಖಕಿಯು ನಾಲ್ಕು ವರ್ಷಗಳ ಹಿಂದೆ ರಜೆಗೆಂದು ಕುಟುಂಬ ಸಮೇತರಾಗಿ ಮೈಸೂರಿನಲ್ಲಿರುವ ತವರುಮನೆಗೆ ಹೋಗಿದ್ದರು. ಒಂದು ರಾತ್ರಿ ಇದಕ್ಕಿದ್ದಂತೆ ಲೇಖಕಿಯ ಪತಿ ಕೀರ್ತಿಯವರಿಗೆ ಕೆಳಹೊಟ್ಟೆಯಲ್ಲಿ ತುಂಬಾ ನೋವು ಕಾಣಿಸಿಕೊಂಡಿತು. ಬೆನ್ನ ಹಿಂಬದಿಯಲ್ಲಿ ಶುರುವಾದ ನೋವು ಕಿಬ್ಬೊಟ್ಟೆಯವರೆಗೂ ಹರಡಿ ಕೀರ್ತಿ ವಿಲವಿಲನೆ ಒದ್ದಾಡಿದರು. ಅವರನ್ನು ಮಿಷನ್ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಸೋನೋಗ್ರಫಿ ಮಾಡಿ ಮೂತ್ರಪಿಂಡದಲ್ಲಿ 8 ಮಿ.ಮೀ. ಕಲ್ಲಿರುವುದಾಗಿ ತಿಳಿಸಿದರಲ್ಲದೆ, ಎರಡು ದಿನಗಳ ನಂತರ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸಿದರು. ತಕ್ಷಣಕ್ಕೆ ನೋವು ನಿವಾರಕ ಮಾತ್ರೆಗಳನ್ನು ಕೊಟ್ಟು ಕಳುಹಿಸಿದರು.
೨. ಕಮಲ ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲು ಮೂಡಿದ್ದೇಕೆ?
ಕಮಲ ಮೇಡಂ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯವಿರಲಿಲ್ಲ. ಹೀಗಾಗಿ ಅವರು ಶೌಚಾಲಯ ಬಳಸಲು ಸಂಕೋಚಪಟ್ಟು ಬೆಳಿಗ್ಗೆ ಮನೆಯಿಂದ ಹೊರಟ ಮೇಲೆ, ಮತ್ತೆ ಸಂಜೆ ಮನೆಗೆ ಹಿಂದಿರುಗಿ ಬರುವವರೆಗೂ ಜಲಬಾಧೆಯನ್ನು ತಡೆದುಕೊಳ್ಳದೆ ಬೇರೆ ದಾರಿಯಿರಲಿಲ್ಲ. ಕಮಲ ಮೇಡಂ ನೀರು ಕುಡಿದರೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಇಡೀ ಹಗಲಿನಲ್ಲಿ ನೀರು ಕುಡಿಯುವುದನ್ನೇ ಬಿಟ್ಟುಬಿಟ್ಟಿದ್ದರು. ಇದರಿಂದಾಗಿ ಅವರಿಗೆ ಒಂದು ದಿನ ಹೆರಿಗೆ ನೋವನ್ನು ಮೀರಿಸಿದ ಹೊಟ್ಟೆನೋವು ಕಾಣಿಸಿಕೊಂಡಿತು. ನೋವಿನಿಂದ ಬೊಬ್ಬೆಯಿಟ್ಟು ವೈದ್ಯರ ಬಳಿ ಬಂದಾಗ ಅವರ ಮೂತ್ರಪಿಂಡದಲ್ಲಿ ಕಲ್ಲಿರುವುದು ಪತ್ತೆಯಾಯಿತು. ಶಸ್ತ್ರಚಿಕಿತ್ಸೆಯ ನಂತರ ವೈದ್ಯರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಪುನಃ ಅವರಿಗೆ ಮೂತ್ರಪಿಂಡದ ಕಲ್ಲಿನ ತೊಂದರೆ ಕಾಣಿಸಿಕೊಳ್ಳಲಿಲ್ಲ.
೩. ಲೇಖಕಿಯ ಪತಿಯ ಮೂತ್ರಪಿಂಡದ ಕಲ್ಲು ಕರಗಿಹೋಗಿದ್ದು ಹೇಗೆ?
ಲೇಖಕಿಯು ತಮ್ಮ ಪತಿ ಕೀರ್ತಿಗೆ ಕಮಲ ಮೇಡಂ ಮತ್ತು ಮುದ್ದೇಗೌಡರ ಮೂತ್ರಪಿಂಡ ಕಲ್ಲಿನ ವಿಚಾರಗಳ ವಿವರಗಳನ್ನು ತಿಳಿಸಿ, ಕಮಲ ಮೇಡಂರ ಪಥ್ಯದ ಮಾರ್ಗ ನಿನಗೆ ಆದರ್ಶವಾಗಬೇಕೆಂದರು. ಇದೇ ಮೊದಲ ಮತ್ತು ಕೊನೆಯ ಆಪರೇಷನ್ ಆಗಬೇಕೆಂದು ತಾಕೀತು ಮಾಡಿದರಲ್ಲದೆ. ಈಗಿನಿಂದಲೇ ನೀರು ಕುಡಿಯಲು ಅಭ್ಯಾಸ ಮಾಡಿಕೋ, ಮೊಳಮದ್ದ ಪಂಜಾಬಿ ಲೋಟದಲ್ಲಿ ಹಾಲು ಕುಡಿಯುವುದನ್ನು ನಿಲ್ಲಿಸೆಂದರು. ಕೊಳದಪ್ಪಲೆ ನೀರು, ಎಳನೀರು, ಬಾರ್ಲಿವಾಟರ್ ಮುಂತಾದವುಗಳಲ್ಲಿ ಎರಡು ದಿನ ತಮ್ಮ ಪತಿಯನ್ನು ತೇಲಿಸಿ ಮುಳುಗಿಸಿದರು. ಈ ಎಲ್ಲದರ ಪರಿಣಾಮ ವಾಗಿ ಮೂತ್ರಪಿಂಡದ ಕಲ್ಲು ಕರಗಿ ಕಣ್ಮರೆಯಾಗಿ ಹೋಗಿದ್ದರಿಂದ ಕೀರ್ತಿಯವರಿಗೆ ಆಪರೇಷನ್ ಮಾಡಬೇಕಾದ ಸಂದರ್ಭವೇ ಎದುರಾಗಲಿಲ್ಲ.
೪. ಸೀತಾ ಎಂಬ ಗೆಳತಿಯ ಗುಣ-ಸ್ವಭಾವವನ್ನು ಲೇಖಕಿ ಹೇಗೆ ಚಿತ್ರಿಸಿದ್ದಾರೆ?
ಲೇಖಕಿಗೆ ಆದೃಷ್ಟ-ಆಯ್ಕೆಗಳ ಪ್ರಶ್ನೆ ಬಂದಾಗ ನೆನಪಾಗುವುದು ಅವಳ ಹೈಸ್ಕೂಲ್ ಸಹಪಾರಿ ಸೀತಾ. ವಿದ್ಯಾವಂತರ ಕುಟುಂಬದಲ್ಲಿ ಹುಟ್ಟಿದ್ದರೂ, ಎಷ್ಟು ಬೇಕಾದರೂ ಓದಿಸಲು ಸಿದ್ಧರಿದ್ದ ಪ್ರಾಧ್ಯಾಪಕ ತಂದೆಯಿದ್ದರೂ ಸೀತಾ ಮಾತ್ರ ಓದಿನಲ್ಲಿ ಆಸಕ್ತಿ ತೋರಲಿಲ್ಲ, ಎಸ್.ಎಸ್.ಎಲ್.ಸಿ.ಯಲ್ಲಿ ಎಲ್ಲಾ ಸಬ್ಜೆಕ್ಟಿನಲ್ಲಿ ಅನುತ್ತೀರ್ಣಳಾದರೂ ಮತ್ತೆ ಪರೀಕ್ಷೆ ಬರೆವ ಗೋಜಿಗೇ ಹೋಗಲಿಲ್ಲ. ಗೆಳತಿಯರೊಂದಿಗೆ ಮಾರ್ಕೆಟ್, ಸಿನಿಮಾ ಸುತ್ತಿ ಸಮಯವನ್ನು ಅಪವ್ಯಯ ಮಾಡಿಕೊಂಡಳು. ಮದುವೆಯಾದ ಮೇಲೂ ಗಂಡನ ಮನೆಯಲ್ಲಿ ಅದಿಲ್ಲ, ಇದಿಲ್ಲ ಎಂದು ದೂರುವ ಸ್ವಭಾವ ಅವಳದು. ಮುಂದೆ ಓದುವುದು ಅಸಾಧ್ಯವಾಯಿತು. ಎಲ್ಲವೂ ದಿಢೀರನೆ ಸರಿಹೋಗಿಬಿಡಬೇಕು ಎಂಬ ಸ್ವಭಾವ ಆಕೆಯದು. ಚೆನ್ನಾಗಿ ದುಡಿದು ಸಂಪಾದಿಸಿ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಗಂಡನದೆಂದು ಆಕೆ ಬಲವಾಗಿ ನಂಬಿದ್ದಳು. ಲೇಖಕಿಯ ಉನ್ನತಿಯನ್ನು ಕಂಡು “ನೀನೇ ಅದೃಷ್ಟವಂತೆ ಕಣೇ” ಎಂದು ಹಲುಬುವ ಸ್ವಭಾವದ ಸೀತಾ ಪರಿಶ್ರಮಪಟ್ಟು ಬದುಕನ್ನು ರೂಪಿಸಿಕೊಳ್ಳುವ ಸ್ವಭಾವದ ವ್ಯಕ್ತಿಯಾಗಿರಲಿಲ್ಲ.
೫. ಬದುಕಿನಲ್ಲಿ ಆಯ್ಕೆಗಳು ಮುಖ್ಯ ಎಂಬುದನ್ನು ಲೇಖಕಿ ಹೇಗೆ ನಿರೂಪಿಸಿದ್ದಾರೆ?
ಬದುಕಿನಲ್ಲಿ ಆಯ್ಕೆಗಳು ಮುಖ್ಯವೆಂಬುದನ್ನು ಮೊದಲಿಗೆ ತಮ್ಮ ಸ್ವಾನುಭವ ಹಾಗೂ ಗೆಳತಿ ಸೀತಾಳ ಉದಾಹರಣೆಗಳಿಂದ ವಿವರಿಸುವ ಲೇಖಕಿಯು ನಂತರ ಪ್ಲೇವಿಯಾ ಮತ್ತು ನಿಶಾ ಶರ್ಮ ಅವರ ಬದುಕನ್ನು ಉದಾಹರಿಸಿದ್ದಾರೆ. ಪ್ಲೇವಿಯಾ ಕೌಟುಂಬಿಕ ಹಿಂಸೆಯ ಕ್ರೌರ್ಯದಿಂದ ಹೊರಬರುವ ಸರಿಯಾದ ಆಯ್ಕೆಮಾಡಿ ತಮ್ಮ ಬದುಕನ್ನು ರೂಪಿಸಿಕೊಂಡರು. ನಲವತ್ತು ವರ್ಷ ವಯಸ್ಸಿನಲ್ಲಿ ಎಸ್.ಎಸ್.ಎಲ್.ಸಿ.ವರೆಗಿದ್ದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, ‘ಲಾ’ ಓದಿ ಮುಂಬಯಿಯ ಪ್ರಸಿದ್ದ ನ್ಯಾಯವಾದಿಯೆನಿಸಿದರು. ತಮ್ಮ ಮೂರು ಮಕ್ಕಳ ಬದುಕನ್ನೂ ಹಸನಾಗಿಸಿದರು. ಇದೇ ರೀತಿ ವರದಕ್ಷಿಣೆಯ ದುರಾಸೆಗೆ ಬಲಿಯಾದ ವರನನ್ನು ಹಸೆಮಣೆಯೇರುವ ಸಂದರ್ಭದಲ್ಲಿ ನಿರಾಕರಿಸಿದ ನಿಶಾ ಶರ್ಮ ಬದುಕಿನ ಆಯ್ಕೆಯ ದಿಟ್ಟತನವನ್ನು ತೋರಿದರು. ಈ ಎಲ್ಲ ಉದಾಹರಣೆಗಳ ಮೂಲಕ ಲೇಖಕಿ ಬದುಕಿನಲ್ಲಿ ಆಯ್ಕೆಗಳು ಮುಖ್ಯವೆಂಬುದನ್ನು ನಿರೂಪಿಸಿದ್ದಾರೆ.
ಹೆಚ್ಚುವರಿ ಪ್ರಶ್ನೆಗಳು:
೬. ಆದೃಷ್ಟವನ್ನೇ ಅವಲಂಬಿಸಿ ಬದುಕಲು ಸಾಧ್ಯವಿಲ್ಲ ಎಂಬುದನ್ನು ಈ ಲೇಖನ ಹೇಗೆ ಪ್ರತಿಪಾದಿಸುತ್ತದೆ?
ಶ್ರೀಮತಿ ನೇಮಿಚಂದ್ರ ಅವರು ಬರೆದಿರುವ ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಲೇಖನವು ಬದುಕಿನಲ್ಲಿ ಹಲವು ಆಯ್ಕೆಗಳನ್ನು ಆಯ್ದುಕೊಳ್ಳಬೇಕಾದ ಅನಿವಾರ್ಯತೆಯನ್ನು ತಿಳಿಸುತ್ತದೆ. ಅದೃಷ್ಟ-ದುರದೃಷ್ಟ ಎಲ್ಲವೂ ಸೇರಿ ಈ ಬದುಕು ರೂಪಿತಗೊಂಡಿರುತ್ತದೆ. ದುರದೃಷ್ಟಕ್ಕಾಗಿ ಹಲುಬುತ್ತಾ ಕೂತ ಸೀತಾಳ ಬದುಕು ದುರಂತದಲ್ಲಿ ಕೊನೆಗೊಂಡಿತು. ಸರಿಯಾದ ಆಯ್ಕೆ ಮಾಡಿಕೊಂಡ ಪ್ಲೇವಿಯ ಮತ್ತು ನಿಶಾ ಶರ್ಮರ ಬದುಕು ಹಸನಾಯಿತು. ಪ್ಲೇವಿಯ ಮತ್ತು ನಿಶಾ ಶರ್ಮರು ತಮ್ಮ ದುರದೃಷ್ಟಕ್ಕಾಗಿ ಆಳುತ್ತಾ ಕೈಕಟ್ಟಿ ಕೂರದೇ ಪ್ರಯತ್ನದಿಂದ ತಮ್ಮ ಬದುಕನ್ನು ಬದಲಾಯಿಸಿಕೊಂಡರು. ಈ ಮುಂತಾದ ಸಂಗತಿಗಳನ್ನು ವಿವರಿಸಿರುವ ಪ್ರಸ್ತುತ ಲೇಖನವು ಬದುಕು ಅದೃಷ್ಟವನ್ನು ಮಾತ್ರ ಅವಲಂಬಿಸಿರುವುದಿಲ್ಲ, ಬದಲಿಗೆ ಆಯ್ಕೆ ಮತ್ತು ಪ್ರಯತ್ನಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ದೃಢಪಡಿಸಿದೆ ಎನ್ನಬಹುದು.
೭. ಪ್ರಸಿದ್ಧ ನ್ಯಾಯವಾದಿಯಾದ ಪ್ಲೇವಿಯಾ ತಮ್ಮ ಬದುಕಿನ ಹೋರಾಟದಲ್ಲಿ ಹೇಗೆ ಯಶಸ್ವಿಯಾದರು?
ಪ್ಲೇವಿಯ ಅವರು ದಿನಾ ಬಡಿಯುವ ಗಂಡನನ್ನು ಪಡೆದು ಕ್ರೌರ್ಯ-ಹಿಂಸೆಯ ಮದುವೆಯಲ್ಲಿ ಸಿಕ್ಕಿಬಿದ್ದಿದ್ದರು. ಅವರು ಓದಿದ್ದು ಕೇವಲ ಹತ್ತನೇ ತರಗತಿವರೆಗೆ ಮಾತ್ರ. ಆದರೆ ಮೂರು ಸಣ್ಣಮಕ್ಕಳ ತಾಯಿಯಾದ ಆಕೆ “ತಾನು ಓದಿಲ್ಲ, ತವರಿನ ಸಂಪತ್ತಿಲ್ಲ, ಬೆಂಬಲಕ್ಕೆ ಯಾರೂ ಇಲ್ಲ, ಗಂಡನಿಂದ ಬಡಿಸಿಕೊಳ್ಳದೆ ಅನ್ಯಮಾರ್ಗವಿಲ್ಲ” ಎಂದು ತಮ್ಮ ದುರದೃಷ್ಟಕ್ಕೆ ಹಲಬುತ್ತಾ ಕೈಕಟ್ಟಿ ಕೂರಲಿಲ್ಲ. ನಲವತ್ತರ ವಯಸ್ಸಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿ ಮುಂಬಯಿಯ ಪ್ರಸಿದ್ಧ ನ್ಯಾಯವಾದಿಯಾದರು. ತಮ್ಮ ಮೂರು ಮಕ್ಕಳನ್ನು ಮುಂದೆ ತಂದರು. ಹೀಗೆ ಒಂದು ಸರಿಯಾದ ನಿರ್ಧಾರದ ಆಯ್ಕೆಮಾಡಿಕೊಂಡ ಪ್ಲೇವಿಯ ಅವರು ತಮ್ಮ ಬದುಕಿನ ಹೋರಾಟದಲ್ಲಿ ಯಶಸ್ವಿಯಾಗಿ, ಇತರರಿಗೂ ಮಾದರಿ ಎನಿಸಿದರು.
ಭಾಷಾಭ್ಯಾಸ
೧) ತಲೆಕೊಡವು, ತಲೆದೂಗು, ತಲೆಬಾಗು, ತಲೆತಗ್ಗಿಸು – ಈ ನುಡಿಗಟ್ಟುಗಳಲ್ಲಿರುವ ಅರ್ಥವ್ಯತ್ಯಾಸವನ್ನು ಗಮನಿಸಿ.
ತಲೆಕೊಡವು ಎಂದರೆ ನಿರಾಕರಿಸು; ತಲೆದೂಗು ಎಂದರೆ ಮೆಚ್ಚುಗೆ ಅಥವಾ ಒಪ್ಪಿಗೆ ಸೂಚಿಸು; ತಲೆಬಾಗು ಎಂದರೆ ನಮಸ್ಕರಿಸು ಅಥವಾ ಶರಣಾಗು; ತಲೆತಗ್ಗಿಸು ಎಂದರೆ ಅಪಮಾನ ಅನುಭವಿಸು ಎಂಬಿತ್ಯಾದಿ ಅರ್ಥಗಳಿವೆ. ಇದೇ ರೀತಿ ತಲೆಬಿಸಿಯಾಗು, ತಲೆ ಮೇಲೆ ಮೆಣಸು ಅರೆ, ತಲೆಹಾಕು, ತಲೆ ಮೇಲೆ ಚಪ್ಪಡಿ ಎಳೆ, ತಲೆತಿರುಗು, ತಲೆ ಎತ್ತು, ತಲೆದಂಡ ಮುಂತಾದವುಗಳ ಅರ್ಥವ್ಯತ್ಯಾಸವನ್ನು ಗಮನಿಸಿರಿ. ವಾಕ್ಯದಲ್ಲಿ ಅವುಗಳನ್ನು ಪ್ರಯೋಗಿಸುವುದನ್ನು ಅಭ್ಯಾಸ ಮಾಡಿ.
೨) ಕೀರ್ತಿಗೆ, ನೋವಿನಲ್ಲಿ, ಶಾಲೆಯಲ್ಲಿ, ಮನೆಯಿಂದ – ಇವುಗಳ ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಿ,
ಕೀರ್ತಿಗೆ – ಚತುರ್ಥಿ ವಿಭಕ್ತಿ
ನೋವಿನಲ್ಲಿ – ಸಪ್ತಮೀ ವಿಭಕ್ತಿ
ಶಾಲೆಯಲ್ಲಿ – ಸಪ್ತಮೀ ವಿಭಕ್ತಿ
ಮನೆಯಿಂದ – ತೃತೀಯಾ ವಿಭಕ್ತಿ
೩) ಪಠ್ಯದಲ್ಲಿ ಬಂದಿರುವ ಅನ್ಯದೇಶ ಪದಗಳನ್ನು ಗುರುತಿಸಿ ಪಟ್ಟಿಮಾಡಿರಿ.
ಮಿಷನ್ ಆಸ್ಪತ್ರೆ, ಸೋನೋಗ್ರಫಿ, ಕಿಡ್ನಿಸ್ಟೋನ್, ಮೇಡಂ, ಆಪರೇಷನ್, ಫಾರ್ಮ್, ಲೇಸರ್, ಬಾರ್ಲಿ ವಾಟರ್, ಅಡ್ಮಿಟ್, ಥಿಯೇಟರ್, ಹೈಸ್ಕೂಲು, ಇಂಜಿನಿಯರ್, ಎಸ್.ಎಸ್.ಎಲ್.ಸಿ., ಮಾರ್ಕೆಟ್, ಸಿನಿಮಾ, ಟಾಟಾ ಇನ್ಸ್ಟಿಟ್ಯೂಟ್, ಡಿಗ್ರಿ, ಟೈಪಿಂಗ್, ಬ್ಯಾಂಕ್, ಫ್ಲಾಟ್, ಏರ್ಪೋರ್ಟ್, ಕಾರ್ಖಾನೆ, ಕಾರು, ಫುಟ್ಪಾತ್, ಮುಂಬಯಿ, ಜರ್ದಾ, ಪ್ಲೇವಿನ್ -ಇತ್ಯಾದಿ
ಲೇಖನದ ಸಾರಾಂಶ ಮತ್ತು ವಿಮರ್ಶೆ:
‘ಅದೃಷ್ಟ’ವನ್ನೇ ಅವಲಂಬಿಸಿ ಬದುಕಬಾರದು. ದುರದೃಷ್ಟಕರವಾದ ಕೆಲವು ಘಟನೆಗಳನ್ನು ಬದಲಾಯಿಸುವುದು ನಮ್ಮ ಕೈಯಿಂದ ಸಾಧ್ಯವಾಗದಿರಬಹುದು. ಆದರೆ ನಮ್ಮ ಬದುಕನ್ನು ಪ್ರಯತ್ನದಿಂದ ರೂಪಿಸಿಕೊಳ್ಳಲು ಸಾಧ್ಯವಿದೆ. ಅವಕಾಶವಿದೆ ಎಂಬುದನ್ನು ನಿರೂಪಿಸುವ ಆಶಯವಿರುವ ಈ ಲೇಖನದಲ್ಲಿ ಒಂದೆರಡು ಉದಾಹರಣೆಗಳ ಮೂಲಕ ಅದನ್ನು ವಿವರಿಸುವ ಪ್ರಯತ್ನವನ್ನು ನೇಮಿಚಂದ್ರ ಅವರು ಮಾಡಿದ್ದಾರೆ.
ಲೇಖಕಿ ಮೊದಲಿಗೆ ಸ್ವಾನುಭವದ ಸಂಗತಿಯೊಂದನ್ನು ನಿರೂಪಿಸುತ್ತಾರೆ. ಲೇಖಕಿಯ ಪತಿ ಕೀರ್ತಿಯವರಿಗೆ ಒಂದು ರಾತ್ರಿ ಇದ್ದಕ್ಕಿದ್ದಂತೆ ಸಹಿಸಲಾರದಷ್ಟು ಕಿಬ್ಬೊಟ್ಟೆ-ಬೆನ್ನುನೋವುಗಳು ಬಾಧಿಸಿ ಒದ್ದಾಡತೊಡಗಿದರು. ಅವರನ್ನು ಮಿಷನ್ ಆಸ್ಪತ್ರೆಗೆ ಕರೆದೊಯ್ಯಲಾಗಿ ಅಲ್ಲಿ ಸೋನೋಗ್ರಫಿ ಮಾಡಿನೋಡಿದಾಗ ಮೂತ್ರಪಿಂಡದಲ್ಲಿ 8 ಮಿ.ಮೀ. ಉದ್ದದ ಕಲ್ಲಿದೆ ಎಂದೂ ಎರಡು ದಿನ ಬಿಟ್ಟು ಶಸ್ತ್ರಚಿಕಿತ್ಸೆ ಮಾಡುವುದೆಂದೂ ನಿಗದಿಯಾಯಿತು.
ಲೇಖಕಿಗೆ ಮೂತ್ರಪಿಂಡದ ಕಲ್ಲು ಯಾಕೆ ಆಗುತ್ತದೆ ಎಂಬುದನ್ನು ತಿಳಿಯುವ ಕುತೂಹಲ ಉಂಟಾಗಿ ಅಕ್ಕಪಕ್ಕದವರನ್ನು ವಿಚಾರಿಸಿದಾಗ ಎದುರು ಮನೆಯ ಕಮಲ ಮೇಡಂಗೆ ಮೂತ್ರಪಿಂಡದಲ್ಲಿ ಕಲ್ಲಿದ್ದ ವಿಚಾರ ತಿಳಿಯಿತು. ಅವರನ್ನು ಭೇಟಿಯಾದ ಲೇಖಕಿ ವಿಚಾರಿಸಿದಾಗ ಆಕೆ ತಮ್ಮ ಅನುಭವವನ್ನು ಹೇಳಿಕೊಂಡರು. ಅವರು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿಲ್ಲದ ಕಾರಣ ಅವರು ಬೆಳಿಗ್ಗೆ ಮನೆಯಿಂದ ಹೊರಟವರು ಸಂಜೆ ಹಿಂದಿರುಗುವವರೆಗೂ ಜಲಬಾಧೆಯನ್ನು ತಡೆದುಕೊಳ್ಳುತ್ತಿದ್ದರು. ಜೊತೆಗೆ ಶೌಚಾಲಯಕ್ಕೆ ಹೋಗಬೇಕಾದೀತೆಂದು ನೀರು ಕುಡಿಯುವುದನ್ನೂ ಬಿಟ್ಟಿದ್ದರು. ಇದರ ಪರಿಣಾಮದಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಎದುರಾಯಿತು. ಚಿಕಿತ್ಸೆಯ ನಂತರ ಕಮಲ ಮೇಡಂ ವೈದ್ಯರ ಸಲಹೆಯಂತೆ ಯಥೇಚ್ಛವಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರಲ್ಲದೆ ಆಹಾರದಲ್ಲೂ ಬದಲಾವಣೆ ಮಾಡಿಕೊಂಡರು. ಇದರಿಂದಾಗಿ ಅವರಿಗೆ ಮತ್ತೆ ಆ ಸಮಸ್ಯೆ ಕಾಡಲಿಲ್ಲ.
ಮೂಲೆಮನೆಯ ಮುದ್ದೇಗೌಡರು ನಾಲ್ಕು ಬಾರಿ ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಆಪರೇಷನ್ ಮಾಡಿಸಿಕೊಂಡಿದ್ದರು. ಸರಿಯಾಗಿ ನೀರು ಕುಡಿಯದೆ, ವೈದ್ಯರ ಸಲಹೆಯನ್ನು ಪಾಲಿಸದೆ, ಪಥ್ಯ ಮಾಡದೆ ಉದಾಸೀನ ಮಾಡಿದ್ದರಿಂದಾಗಿ ಪದೇ ಪದೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಮನೆಗೆ ಹಿಂತಿರುಗಿ ಬಂದ ಲೇಖಕಿ ಗಂಡ ಕೀರ್ತಿಗೆ ಮೇಲಿನ ಸಂಗತಿಗಳನ್ನು ವಿವರಿಸಿ “ನಿನ್ನ ಎದುರು ಎರಡು ಆಯ್ಕೆಗಳಿವೆ. ಏನೂ ಪಥ್ಯ ಮಾಡದೆ ಮುದ್ದೇಗೌಡರ ರೀತಿ ಎರಡೆರಡು ವರ್ಷಕ್ಕೊಮ್ಮೆ ಆಪರೇಷನ್ ಮಾಡಿಸಿಕೊಳ್ಳುವುದು ಅಥವಾ ಕಮಲ ಮೇಡಂರವರ ರೀತಿ ಚೆನ್ನಾಗಿ ನೀರು ಕುಡಿದು ನಿರೋಗಿಯಾಗಿರುವುದು” ಎಂದರಲ್ಲದೆ ಇಂದಿನಿಂದಲೇ ನೀರು ಕುಡಿಯಲು ಆರಂಭಿಸು ಎಂದವರೆ, “ಆಪರೇಷನ್ ಆದ ಮೇಲೆ ನೋಡೋಣ” ಎಂಬ ಪತಿಯ ಮಾತನ್ನೂ ಲೆಕ್ಕಿಸದೆ ಎರಡು ದಿನ ಪೂರ್ತಿ ನೀರು, ಎಳನೀರು, ಬಾರ್ಲಿ ವಾಟರ್ನಲ್ಲಿ ಗಂಡನನ್ನು ತೇಲಿಸಿ-ಮುಳುಗಿಸಿದರು. ಪವಾಡವೆಂಬಂತೆ ಆಪರೇಷನ್ ಮಾಡುವ ಮೊದಲೇ ಕಲ್ಲು ಕರಗಿಹೋಗಿತ್ತು. ಇಲ್ಲಿ ಲೇಖಕಿ ತಮ್ಮ ಪ್ರಯತ್ನದ ಫಲದಿಂದ ಶಸ್ತ್ರಚಿಕಿತ್ಸೆಗೆ ಅವಕಾಶವಿಲ್ಲದಂತೆ ಗಂಡನನ್ನು ಪಾರು ಮಾಡಿದ ಬಗೆ ಅನುಕರಣೀಯವಾಗಿದೆ.
ಅದೃಷ್ಟ-ಆಯ್ಕೆ ಎಂಬ ಪ್ರಶ್ನೆಗಳು ಕಾಡಿದಾಗ ಲೇಖಕಿಗೆ ಸೀತಾ ಎಂಬ ತಮ್ಮ ಗೆಳತಿಯ ನೆನಪಾಗುವುದಂತೆ ಕಾಲೇಜು ಪ್ರಾಧ್ಯಾಪಕರ ಮಗಳಾದ ಸೀತಾ ಓದಿನಲ್ಲಿ ಆಸಕ್ತಿಯಿಲ್ಲದೆ ಎಸ್.ಎಸ್.ಎಲ್.ಸಿ.ಯಲ್ಲಿ ಫೇಲ್ ಆಗಿ ಮತ್ತೆ ಪರೀಕ್ಷೆ ಕಟ್ಟುವ ತಾಪತ್ರಯಕ್ಕೆ ಹೋಗದೆ ಮಾರ್ಕೆಟ್, ಸಿನಿಮಾ ಎಂದು ಓಡಾಡಿಕೊಂಡಿದ್ದಳು. ಹೈಸ್ಕೂಲಿನಿಂದಲೇ ಇಂಜಿನಿಯರ್ ಆಗುವ ಕನಸು ಕಂಡಿದ್ದ ಲೇಖಕಿ ಅದನ್ನು ಸಾಧಿಸಿದ್ದು ಮಾತ್ರವಲ್ಲದೆ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಸಂಶೋಧನೆಯನ್ನು ಮಾಡಿದರು. ಇಬ್ಬರೂ ಪ್ರಾಧ್ಯಾವಕರ ಮಕ್ಕಳೇ ಆದರೂ ಇಬ್ಬರ ಆಯ್ಕೆ-ಅಭಿರುಚಿಗಳು ಬೇರೆ ಬೇರೆಯಾಗಿದ್ದವು. ‘ಹುಡುಗಿಗೆ ಡಿಗ್ರಿಯಾದರೂ ಆಗಿರಬೇಕು’ ಎಂದು ಬಯಸುವ ಕಾಲವಾದ್ದರಿಂದ ಸುಂದರಿಯಾಗಿದ್ದರೂ ಸೀತಾಳಿಗೆ ಕೃತುಂಬ ಸಂಬಳ ತರುವ ಗಂಡ ಸಿಗಲಿಲ್ಲ. ಆ ಬದುಕಿಗೆ ಹೊಂದಿಕೊಳ್ಳಲಾಗದ ಸೀತಾ, ಮನೆ ಚಿಕ್ಕದು, ಅದಿಲ್ಲ, ಇವಿಲ್ಲ ಎಂದು ಲೇಖಕಿಯ ಬಳಿ ದೂರುತ್ತಿದ್ದರು. “ಎಸ್.ಎಸ್.ಎಲ್.ಸಿ. ಕಟ್ಟು, ಟೈಪಿಂಗ್ ಕಲಿ” ಎಂದು ಲೇಖಕಿಯು ಸೀತಾಗೆ ಸಲಹೆ ನೀಡಿದಾಗ, “ಕೈ ತುಂಬ ಸಂಪಾದಿಸಿ ತಂದುಹಾಕಿ ಹೆಂಡ್ತೀನ ಚೆನ್ನಾಗಿ ನೋಡಿಕೊಳ್ಳೋದು ಗಂಡನ ಜವಾಬ್ದಾರಿ’ ಎಂದು ಬಲವಾಗಿ ನಂಬಿದ್ದ ಸೀತಾ ತಾನು ಪ್ರಯತ್ನಪಟ್ಟು ಬದುಕನ್ನು ಸರಿಪಡಿಸಿಕೊಳ್ಳಲು ಸಿದ್ಧವಿಲ್ಲದೆ, ಲೇಖಕಿ ದುಡಿದು ಮನೆ ಕೊಂಡಿದ್ದನ್ನು ಅದೃಷ್ಟವೆಂದು ಹಲುಬಿದಳು. ತನ್ನದು ದುರದೃಷ್ಟವೆಂದು ಕೊರಗಿದಳು. ಹೆಣ್ಣಿಗೆ ಓದುವ ಅದೃಷ್ಟ, ತಂದೆ-ತಾಯಿ ವಿದ್ಯಾವಂತರಾಗಿರುವ ಅದೃಷ್ಟ ಎಷ್ಟು ಬೇಕಾದರೂ ಓದಿಸಲು ತಯಾರಿರುವ ತಂದೆಯನ್ನು ಪಡೆಯುವ ಅದೃಪ್ಪ ಇವೆಲ್ಲವೂ ಲೇಖಕಿಗಿದ್ದಂತೆ ಸೀತಾಳಿಗೂ ಇತ್ತು. ಆದರೆ ಅದನ್ನು ಆಕೆ ಸಕಾರಾತ್ಮಕವಾಗಿ
ಆದ್ದರಿಂದ ಅದೃಷ್ಟವನ್ನು ನಂಬಿ ಕುಳಿತುಕೊಳ್ಳಬಾರದು. ಬದುಕು ಅದೃಷ್ಟ-ದುರದೃಷ್ಟ ಎಲ್ಲವನ್ನೂ ನಮ್ಮ ಕಡೆಗೆ ಎಸೆಯುತ್ತಿರುತ್ತದೆ, ಆದರೆ ಎಂಥ ಕೆಟ್ಟ ಸಂದರ್ಭದಲ್ಲೂ ನಮ್ಮೆದುರು ಆಯ್ಕೆಗಳಿರುತ್ತವೆ. ಪ್ಲೇವಿಯಾ ಎಂಬ ತಾಯಿ ಗಂಡನ ಕ್ರೌರ್ಯದಿಂದ ಹೊರಬಂದು, ನಲವತ್ತರ ವಯಸ್ಸಿನಲ್ಲಿ ಕಾನೂನು ಪದವಿ ಪಡೆದು ನ್ಯಾಯವಾದಿ ಎನಿಸಿದರು. ನಿಶಾ ಶರ್ಮ ಎಂಬ ಹೆಣ್ಣುಮಗಳು ವರದಕ್ಷಿಣೆ ದುರಾಸೆಯ ಹುಡುಗನನ್ನು ನಿರಾಕರಿಸಿದರು. ಬಹುಪಾಲು ಮಧ್ಯಮ ವರ್ಗದವರು ನಾನಾ ಚಟಗಳಿಗೆ ಬಲಿಯಾಗುತ್ತಾರೆ. ಆದರೆ ಓದುವ ಆಯ್ಕೆ, ಜರ್ದಾ ತಿನ್ನದಿರುವ ಆಯ್ಕೆ, ವರದಕ್ಷಿಣೆ ಇಲ್ಲದೆ ಮದುವೆಯಾಗುವ ಆಯ್ಕೆ – ಇಂತಹ ನೂರು ಅವಕಾಶಗಳ ದಾರಿ ನಮ್ಮೆಲ್ಲರೆದುರಿಗಿದೆ… ನಾವು ಆ ಹಾದಿಯಲ್ಲಿ ಸಾಗಬೇಕಷ್ಟೆ ಎಂದು ಲೇಖಕಿ ಅಭಿಪ್ರಾಯಪಡುತ್ತಾರೆ. ನಿಜಕ್ಕೂ ಇದೊಂದು ಪರಿಣಾಮಕಾರಿ ಪ್ರಭಾವ ಬೀರಬಲ್ಲ ಲೇಖನವಾಗಿದೆ.
ಶಬ್ದಾರ್ಥ: ಸೋನಗ್ರಫಿ – ಮೂತ್ರಪಿಂಡದಲ್ಲಿನ ಕಲ್ಲನ್ನು ಪತ್ತೆಹಚ್ಚಲು ನಡೆಸುವ ತಪಾಸಣೆ; ಕಿಡ್ನಿಸ್ಟೋನ್ – ಮೂತ್ರಪಿಂಡದಲ್ಲಿನ ಕಲ್ಲು; ಜಲಬಾಧೆ – ಮೂತ್ರಬಾಧೆ, ಬಾಯಾರಿಕೆ; ಯಥೇಚ್ಛ – ಬೇಕಾದಷ್ಟು; ಲೇಸರ್ ಚಿಕಿತ್ಸೆ – ಕಿರಣ ಚಿಕಿತ್ಸೆ; ಪಡ್ಡ – ನಿಯಮದಂತೆ ತೆಗೆದುಕೊಳ್ಳಬೇಕಾದ ಆಹಾರ, ಔಷಧಿ ಇತ್ಯಾದಿ; ಬಾಡು – ಮಾಂಸ; ಅಡ್ಡಿಟ್ – ದಾಖಲಾಗು; ನರ್ಸ್ – ಶುಕ್ರೂಷಕರು; ಮೊಗದು – ತುಂಬಿ; ತಾಪತ್ರಯ – ತೊಂದರೆ, ಕಷ್ಟ (ಆದಿಭೌತಿಕ, ಆದಿದೈವಿಕ, ಆಧ್ಯಾತ್ಮಿಕ ಎನ್ನುವ ಮೂರು ರೀತಿಯ ಕಷ್ಟಗಳು); ಡಿಗ್ರಿ – ಪದವಿ; ರೋಗಿ – ಬೇಸತ್ತು; ಫುಟ್ ಬಾತ್ – ಪಾದಚಾರಿಗಳು ಚಲಿಸುವ ಪಥ.
ಟಿಪ್ಪಣಿಗಳು:
೧. ನಿಶಾ ಶರ್ಮ
ನಿಶಾ ಶರ್ಮ ಇಂಜಿನಿಯರಿಂಗ್ ಓದಿ, ಉದ್ಯೋಗದಲ್ಲಿದ್ದ ಹುಡುಗಿ. ಆಕೆಗೆ ವಿವಾಹ ನಿಶ್ಚಿತವಾಗಿತ್ತು. ಅಸಾಧ್ಯ ಆಸೆಬುರುಕ ಗಂಡಿನ ವರದಕ್ಷಿಣೆಯ ಬೇಡಿಕೆಗಳಿಗೆಲ್ಲ ತಲೆದೂಗಿ ಎರಡೆರಡು ವಾಷಿಂಗ್ ಮೆಷೀನ್, ಟಿವಿ, ಫ್ರಿಜ್ ಏನೆಲ್ಲವನ್ನು ನೀಡಿ ಮನೆಯವರು ಮದುವೆ ನಿಶ್ಚಯ ಮಾಡಿದ್ದರು. ಮದುವೆಯ ಮಂಟಪದಲ್ಲಿ ಗಂಡಿನ ಕಡೆಯವರು ಮತ್ತಷ್ಟು ವರದಕ್ಷಿಣೆಯನ್ನು ಕೇಳಿ ತಮ್ಮ ಮಿತಿ ಮೀರಿದ ದುರಾಸೆಯನ್ನು ಮೆರೆದಾಗ, ನಿಶಾ ಪ್ರತಿಭಟಿಸಿ ತಾನು ಈ ವಿವಾಹವನ್ನು ಮಾಡಿಕೊಳ್ಳುವುದಿಲ್ಲ ಎಂದು ನಿರಾಕರಿಸಿ ಹೊರ ಬಂದಳು. ಮುಂದೆ ಆಕೆಗೆ ಒಳ್ಳೆಯ ಸಂಬಂಧ ಕೂಡಿಬಂದು, ವರದಕ್ಷಿಣೆ ಇಲ್ಲದೆಯೇ ವಿವಾಹವಾಯಿತು.
೨. ಪ್ಲೇವಿಯಾ
ಪ್ಲೇವಿಯಾ ಕನ್ನಡ ನೆಲದ ಹುಡುಗಿ, ಅವರನ್ನು ಓದಿಸಿದ್ದು ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ. ನಂತರ ಮದುವೆಯಾಗಿತ್ತು. ವಿವಾಹವಾದೊಡನೆ ಪತಿಯೊಡನೆ ಮುಂಬಯಿಗೆ ಬಂದಿದ್ದರು. ಗಂಡನ ಹೊಡೆತ ಬಡಿತದ ಕೌಟುಂಬಿಕ ಹಿಂಸೆಯಲ್ಲಿ ಅವರು ಛಿದ್ರವಾದರು. ಅವರಿಗೆ ಮೂರು ಮಕ್ಕಳು. ಕೌಟುಂಬಿಕ ಹಿಂಸೆ, ನಮ್ಮ ಸಮಾಜದಲ್ಲಿ ಬಹಳಷ್ಟು ಬೆಳಕಿಗೆ ಬಾರದೆ, ಸೆರಗಿನ ಮರೆಯಲ್ಲಿ, ಬಿಗಿದ ತುಟಿಗಳ ಬಿಕ್ಕುಗಳಲ್ಲಿ ತಡೆದು ಮುಗಿಯುತ್ತದೆ. ಕ್ರೌರ್ಯ ತುಂಬಿದ ವಿವಾಹದಲ್ಲೇ ಕಡೆಯವರೆಗೂ ಉಳಿದು ತಮ್ಮೊಡನೆ ತಮ್ಮ ಕರ್ಮಕತೆಯನ್ನು ನಿಗೂಢವಾಗಿ ಉಳಿಸಿ ಹೋಗುವವರೇ ಹೆಚ್ಚು. ಇಂಥ ಹಿಂಸೆಯ ಸಂಬಂಧವನ್ನು ಬದಿಗಿಟ್ಟು ಓದು-ಉದ್ಯೋಗವಿಲ್ಲದಿದ್ದರೂ ಹೊರ ಬಂದು, ತಮ್ಮ ಕಾಲ ಮೇಲೆ ನಿಂತ ಅಪರೂಪದ ದಿಟ್ಟ ಮಹಿಳೆ ಪ್ಲೇವಿಯಾ.
ಪ್ಲೇವಿಯಾ, ತಮ್ಮ ಮಧ್ಯವಯಸ್ಸಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಕಾನೂನಿನಂತಹ ಕ್ಲಿಷ್ಟ ವಿಷಯವನ್ನು ಆಯ್ದುಕೊಂಡು ಹುದ್ದೆಗೆ ತಯಾರಾದರು. ತಮ್ಮ ಬದುಕಿನ ಕತ್ತಲನ್ನು ಕೆಡುವುತ್ತಲೆ ಇತರರ ಹಾದಿಯ ಹಣತೆಯಾದರು. ಮಹಿಳಾ ಸಂಘಟನೆ, ಮಹಿಳಾ ಅಧ್ಯಯನದಲ್ಲಿ ತೊಡಗಿದರು. ಎಲ್.ಎಲ್.ಬಿ ಮತ್ತು ಎಲ್.ಎಲ್.ಎಮ್. ಮುಗಿಸಿದರು. ಕೆಲವೇ ವರ್ಷಗಳಲ್ಲಿ ಅವರ ಶ್ರಮ ಫಲ ನೀಡಿತು. ಅತ್ಯಂತ ಯಶಸ್ವಿ ಲಾಯರ್ ಎನಿಸಿಕೊಂಡದ್ದಲ್ಲದೆ, ಸ್ತ್ರೀವಾದಿ ದೃಷ್ಟಿಕೋನದ ನ್ಯಾಯವಾದಿ ಎಂದೂ ಹೆಸರು ಪಡೆದಿದ್ದಾರೆ.
ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿರಿ:
೧. ಆದೃಷ್ಟದ ಪ್ರಶ್ನೆ ಬಂದಾಗ ಲೇಖಕಿಗೆ——————–ನೆನಪಾಗುತ್ತಾರೆ.
ಸೀತಾ
೨. ಲೇಖಕಿಯ ಪತಿ————————- ತೊಂದರೆಯಿಂದ ಬಳಲಿದರು.
ಕಿಡ್ನಿಸ್ಟೋನ್
೩. ದುರಾಸೆಯ ಹುಡುಗನನ್ನು ನಿರಾಕರಿಸಿದವರು——————–
ನಿಶಾ ಶರ್ಮ
೪. ನನಗೆ ದುರಾಸೆಯ ಹುಡುಗನನ್ನು ನಿರಾಕರಿಸುವ ಆಯ್ಕೆ ಇದೆ ಎಂದವಳು—————–
ನಿಶಾ ಶರ್ಮ
೫. ನಲವತ್ತನೇ ವಯಸ್ಸಿನಲ್ಲಿ ಪುನಃ ವಿದ್ಯಾಭ್ಯಾಸ ಮುಂದುವರೆಸಿ ಪ್ರಸಿದ್ದ ನ್ಯಾಯವಾದಿಯಾದವರು——————
ಪ್ಲೇವಿಯಾ
೬. ಲೇಖಕಿಯ ತಾಯಿಯು ವಾಸವಿದ್ದ ಸ್ಥಳ—————
ಮೈಸೂರು
೭. ಲೇಖಕಿಯ ಗಂಡನ ಚಿಕಿತ್ಸೆಗೆ——————ಆಸ್ಪತ್ರೆಗೆ ಹೋದರು.
ಮಿಷನ್
೮. ಲೇಖಕಿಯ ಗಂಡನ ಹೆಸರು—————
ಕೀರ್ತಿ
೯. ಸೀತಾಳಿಗೆ ಬದುಕು —————- ಆಟದಂತೆ ಕಾಣುತ್ತಿತ್ತು.
ಅದೃಷ್ಟದ