ದ್ವಿತೀಯ ಪಿಯುಸಿ ಕನ್ನಡ ಜಾಲಿಯ ಮರದಂತೆ ನೋಟ್ಸ್ | 2nd Puc Kannada Jaliya Maradante Notes

2nd Puc Kannada Jaliya Maradante Poem Notes Question Answer Summery Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಕನ್ನಡ ಜಾಲಿಯ ಮರದಂತೆ ನೋಟ್ಸ್ ಪ್ರಶ್ನೋತ್ತರಗಳು, ಜಾಲಿಯ ಮರದಂತೆ notes jaliya maradante in kannada lyrics jaliya maradante kannada question answer 2nd puc kannada 5th lesson question answer jaliya maradante kannada summary 2nd puc kannada notes 2nd puc kannada textbook answers pdf download 2nd puc kannada notes ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ pdf kseeb solutions for class 12 kannada poem 5 notes 2nd puc kannada 5th poem notes.

೦೫. ಜಾಲಿಯ ಮರದಂತೆ

– ಪುರಂದರದಾಸರು

Jaliya Maradante

ದ್ವಿತೀಯ ಪಿಯುಸಿ ಕನ್ನಡ ಜಾಲಿಯ ಮರದಂತೆ ನೋಟ್ಸ್ ಪ್ರಶ್ನೋತ್ತರಗಳು

ಕವಿ ಪರಿಚಯ

`ದಾಸರೆಂದರೆ ಪುರಂದರ ದಾಸರಯ್ಯ’ ಎಂದು ಗುರುಗಳಿಂದ ಹೊಗಳಿಸಿಕೊಂಡ ಮಹಾನುಭಾವರೇ ಪುರಂದರದಾಸರು. ಕ್ರಿ.ಶ. ಹದಿನೈದು-ಹದಿನಾರನೆಯ ಶತಮಾನದಲ್ಲಿ ಜೀವಿಸಿದ್ದ ಪುರಂದರದಾಸರು ‘ಪುರಂದರ ವಿಠಲ’ ಎಂಬ ಅಂಕಿತ ಪಡೆದು ಹರಿದಾಸರಾದುದರಿಂದ ಈ ಹೆಸರನ್ನು ಪಡೆದರು. ಇವರ ಜನ್ಮನಾಮ ಶ್ರೀನಿವಾಸನಾಯಕ ಎಂದು. ಚಿನ್ನ, ಬೆಳ್ಳಿ, ಮುತ್ತು ರತ್ನಗಳ ವ್ಯಾಪಾರ ಮಾಡುತ್ತಾ ‘ನವಕೋಟಿ ನಾರಾಯಣ’ ಎಂದೇ ಖ್ಯಾತರಾದ ಇವರು ತಮ್ಮ ಜೀವನದಲ್ಲಿ ನಡೆದ ಪವಾಡದಿಂದ ಜಿಪುಣತನವನ್ನು ಕಳೆದುಕೊಂಡು ಮಹಾ ಉದಾರಿಗಳಾಗಿ, ಹರಿದಾಸರಾಗಿ, ವಾಗ್ಗೇಯಕಾರರಾಗಿ ವಿಜೃಂಭಿಸಿದರು. ಕ್ರಿ.ಶ. 1484 ರಿಂದ 1564ರವರೆಗೆ ಜೀವಿಸಿದ ಪುರಂದರದಾಸರು ವೇದಾಂತವನ್ನು ಕನ್ನಡದಲ್ಲಿ ಹೃದಯಂಗಮವಾಗಿ ಹಾಡಿದರು. ಅವರು ಆಶು ಕವಿತೆಗಳನ್ನು ಲೀಲಾಜಾಲವಾಗಿ ರಚಿಸಿದರು. ಕೀರ್ತನೆ, ಸುಳಾದಿ ಮತ್ತು ಉಗಾಭೋಗಗಳೆಂಬ ಮೂರು ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸಿದ ದಾಸರು ‘ಕರ್ನಾಟಕ ಸಂಗೀತ ಪಿತಾಮಹ’ರೆನಿಸಿಕೊಂಡರು. ಅಂದು ಪುರಂದರದಾಸರು ಮಾಡಿದ ಪಾಠ ಪರಿಷ್ಕರಣವನ್ನು ಇಂದಿನ ಸಂಗೀತದ ಅಧ್ಯಾಪಕರು ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತು ಕೇರಳ ನಾಡಿನಲ್ಲಿ ಜಾರಿಯಲ್ಲಿಟ್ಟುಕೊಂಡಿದ್ದಾರೆ. ಪುರಂದರದಾಸರು ರಚಿಸಿರುವ ಸುಮಾರು ಸಾವಿರ ಕೀರ್ತನೆಗಳು ದೊರೆತಿವೆ.

ಅಭ್ಯಾಸ

(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು

೧. ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ.

ಪುರಂದರದಾಸರು ರಚಿಸಿದ ‘ಜಾಲಿಯ ಮರದಂತೆ’ ಎಂಬ ಕೀರ್ತನೆಯ ಆರಂಭದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು.

ದುರ್ಜನರನ್ನು ಚಾಲಿಯ ಮರದೊಂದಿಗೆ ಹೋಲಿಸಿರುವ ಕವಿಯು, ಚಾಲಿಯ ಮರದಲ್ಲಿ ಬುಡದಿಂದ ತುದಿಯವರೆಗೂ ಮುಳ್ಳುಗಳೇ ತುಂಬಿರುತ್ತವೆ. ಇದೇ ರೀತಿ ದುರ್ಜನರಲ್ಲಿಯೂ ಬರಿಯ ಕೆಟ್ಟ ವಿಚಾರ-ದುಷ್ಟಬುದ್ಧಿಗಳೇ ತುಂಬಿರುತ್ತವೆ. ಆದ್ದರಿಂದ ದುರ್ಜನರು ಸಮಾಜದಲ್ಲಿ ಜಾಲಿಯ ಮರದಂತೆ ನಿರುಪಯುಕ್ತರು. ಅವರು ಒಳ್ಳೆಯವರನ್ನು ಚುಚ್ಚುವ ಮುಳ್ಳುಗಳಿದ್ದಂತೆ ಎಂದು ಕವಿ ಹೇಳಿರುವರು.

೨. ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ.

ಪುರಂದರದಾಸರ ‘ಜಾಲಿಯ ಮರದಂತೆ’ ಎಂಬ ಸುಪ್ರಸಿದ್ದ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಜಾಲಿಯ ಮರವನ್ನು ಕುರಿತು ಕವಿಯು ಈ ಮೇಲಿನ ಮಾತನ್ನಾಡಿದ್ದಾರೆ.

ಜಾಲಿಯ ಮರವು ಆಡಿಯಿಂದ ಮುಡಿಯವರೆಗೆ ಮುಳ್ಳನ್ನೇ ತುಂಬಿಕೊಂಡಿರುತ್ತದೆ. ಬಿಸಿಲಲ್ಲಿ ಬಂದವರಿಗೆ ನೆರಳಾಗಲೀ, ಹಸಿದು ಬಂದವರಿಗೆ ಹಣ್ಣಾಗಲೀ ಅದರಿಂದ ಸಿಗುವುದಿಲ್ಲ. ಅದರ ಹೂವು ಕೂಡ ಸುವಾಸನೆಯನ್ನು ಬೀರುವುದಿಲ್ಲ. ಮರದ ಕೆಳಗೆಲ್ಲಾ ಮುಳ್ಳು ಬಿದ್ದಿರುತ್ತದೆಯಾದ್ದರಿಂದ ಜಾಲಿಯ ಮರದ ಕೆಳಗೆ ಕುಳಿತುಕೊಳ್ಳಲೂ ಸ್ಥಳವಿರುವುದಿಲ್ಲ. ಒಟ್ಟಾರೆ ಜಾಲಿಯ ಮರದಿಂದ ಯಾವ ಉಪಯೋಗವೂ ಇರುವುದಿಲ್ಲವೆಂದು ಕವಿ ವಿವರಿಸಿದ್ದಾರೆ.

೩. ನಾರುವ ದುರ್ಗಂಧ ಬಿಡಬಲ್ಲುದೆ?

ಪುರಂದರದಾಸರ ‘ಜಾಲಿಯ ಮರದಂತೆ’ ಎಂಬ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ. ದುರ್ಜನರಿಗೆ ಮಾನ್ಯತೆ ನೀಡುವುದು ವ್ಯರ್ಥವೆಂಬುದನ್ನು ವಿವರಿಸುವಾಗ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ.

ಊರಿನ ಹೊಲಸಿನಲ್ಲಿ ಜೀವಿಸುವ ಹಂದಿಯನ್ನು ತಂದು, ಅದಕ್ಕೆ ಷಡ್ರಸಾನ್ನ ಭೋಜನ ಮಾಡಿಸಿದ ಮಾತ್ರಕ್ಕೆ ಅದು ತನ್ನ ಮೈಯಿಂದ ದುರ್ಗಂಧ ಬೀರುವುದನ್ನು ಬಿಡುವುದಿಲ್ಲ. ಇದರಂತೆಯೇ ಸದಾ ದುಷ್ಟ ಕೆಲಸದಲ್ಲಿ ಮುಳುಗಿರುವ ದುರ್ಜನರಿಗೆ ತತ್ರೋಪದೇಶಗಳನ್ನು ಹೇಳಿದರೆ ಅವರು ತಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುವುದಿಲ್ಲ. ಆದ್ದರಿಂದ ಕವಿಯು ಹಂದಿ ಮತ್ತು ದುರ್ಜನರ ಮೂಲಸ್ವಭಾವಗಳನ್ನು ಬದಲಾಯಿಸಲು ಪ್ರಯತ್ನಿಸುವುದು ವ್ಯರ್ಥವಾದ ಕೆಲಸವೆಂದಿದ್ದಾರೆ.

೪. ಬಿನ್ನಾಣದ ಮಾತಿಗೆ ಕೊನೆಯಿಲ್ಲ.

ಪುರಂದರದಾಸರ ‘ಚಾಲಿಯ ಮರದಂತೆ’ ಎಂಬ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ದುರ್ಜನರ ವರ್ತನೆಯನ್ನು ಈ ಮೇಲಿನ ವಾಕ್ಯದ ಮೂಲಕ ಕವಿಯು ಟೀಕೆ ಮಾಡಿರುವರು.

ಸದಾ ದುಷ್ಟತನದ ಕಾರ್ಯಗಳಲ್ಲಿ ಮುಳುಗಿರುವ ದುರ್ಜನರಿಂದ ಸಮಾಜಕ್ಕೆ ಎಳ್ಳಷ್ಟು ಉಪಯೋಗವಿಲ್ಲ, ಆದರೂ ಅವರು ತನ್ನಿಂದಲೇ ಹಾಗಾಯ್ತು ಹೀಗಾಯ್ತು ಎಂದು ಜಂಬ ಕೊಚ್ಚುತ್ತಿರುತ್ತಾರೆ. ಆದ್ದರಿಂದ ಕವಿಯು ಅವರ ಜಂಬದ ವರ್ತನೆಯನ್ನು ‘ಬಿನ್ನಾಣದ ಮಾತಿಗೆ ಕೊನೆಯಿಲ್ಲ’ ಎಂದು ಟೀಕೆ ಮಾಡಿದ್ದಾರೆ.

ಸರು ಜಾಲಿಯ ಮರಕ್ಕೆ ಊರ ಹಂದಿಗೆ, ಕೂಳೆಗೆ ಕಚ್ಚಾಡುವ ಕುನ್ನಿಗೆ ಹೋಲಿಸಿರುವುದನ್ನು ಗಮನಿಸಿದರೆ ಅವರಿಗೆ-ದುರ್ಜನರ ಬಗ್ಗೆ ಇರುವ ಅಭಿಪ್ರಾಯವು ವೇದ್ಯವಾಗುತ್ತದೆ.

(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ):

೧. ಜಾಲಿಯ ಮರದಂತಿರುವವರು ಯಾರು?

ದುರ್ಜನರು

೨. ಜಾಲಿಯ ಮರ ಯಾರಿಗೆ ನೆರಳು ಕೊಡುವುದಿಲ್ಲ?

ಅಥವಾ

ಜಾಲಿಯ ಮರ ಯಾರಿಗೆ ನೆರಳು ಕೊಡುವುದಿಲ್ಲ?

ಬಿಸಿಲಲ್ಲಿ ಬಳಲಿ ಬಂದವರಿಗೆ

೩. ಜಾಲಿಯ ಮರದ ರಸಾಸ್ವಾದ ಹೇಗಿರುತ್ತದೆ?

ವಿಷದಂತೆ ಕಹಿ

೪. ದುರ್ಗಂಧ ಬಿಡದಿರುವುದು ಯಾವುದು?

ಊರ ಹಂದಿ

೫. ಯಾವ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ?

ಬಿನ್ನಾಣದ

೬. ಜಾಲಿಯ ಮುಳ್ಳು ಹೇಗೆ ಆವರಿಸುತ್ತದೆ?

ಬುಡದಿಂದ ತುದಿಯವರೆಗೂ

೭. ತತ್ವಜ್ಞಾನವನ್ನು ಕೇಳದವರು ಯಾರು?

ಘೋರ ಪಾಪಿಗಳು

ಹೆಚ್ಚುವರಿ ಪ್ರಶ್ನೆಗಳು

೮. ಜಾಲಿಯ ಮರ ಯಾರಿಗೆ ಹಣ್ಣು ಕೊಡುವುದಿಲ್ಲ?

ಹಸಿದು ಬಂದವರಿಗೆ

೯. ಧರೆಯೊಳಗೆ ದುರ್ಜನರು ಯಾವ ರೀತಿ ಇದ್ದಾರೆ?

ಜಾಲಿಯ ಮರದಂತೆ

೧೦. ಘೋರಪಾಪಿ ಯಾವುದನ್ನು ಬಿಡುವುದಿಲ್ಲ?

ಕ್ರೂರಕರ್ಮವನ್ನು

೧೧. ಜಾಲಿಯಲ್ಲಿ ಯಾವುದರ ವಾಸನೆಯಿಲ್ಲ?

ಕುಸುಮದ

೧೨. “ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ

ಇನ್ನಿವರ ಕಾರ್ಯವು ಪುರಂದರವಿಠಲ”

– ಈ ಸಾಲುಗಳಲ್ಲಿ ಪುರಂದರದಾಸರು ʼಕುನ್ನಿ ಮಾನವರಂತೆʼ ಎಂದು ಯಾರನ್ನು ಕರೆದಿದ್ದಾರೆ?

ದುರ್ಜನರನ್ನು

೧೩. ಯಾರಿಗೆ ಷಡ್ರಸಾನ್ನವನಿಕ್ಕಿ ಉಪಯೋಗವಿಲ್ಲ?

ಹಂದಿ

೧೪. ಪುರಂದರದಾಸರ ಕೀರ್ತನೆಗಳ ಅಂಕಿತ ಯಾವುದು?

ಪುರಂದರ ವಿಠಲ

೧೫. ಯಾವ ಮರದ ರಸವು ವಿಷವಾಗಿರುತ್ತದೆ?

ಜಾಲಿಯ ಮರದ ರಸ

೧೬. ಯಾರಿಗೆ ತತ್ವಜ್ಞಾನವನ್ನು ಹೇಳಿ ಪ್ರಯೋಜನವಿಲ್ಲ?

ದುರ್ಜನರಿಗೆ

(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):

೧. ಜಾಲಿಯ ಮರದ ನಿರರ್ಥಕತೆಯನ್ನು ಪುರಂದರದಾಸರು ಹೇಗೆ ತಿಳಿಸಿದ್ದಾರೆ?

ಅಡಿಯಿಂದ ಮುಡಿಯವರೆಗೆ ಮುಳ್ಳನ್ನೇ ತುಂಬಿಕೊಂಡಿರುವ ಜಾಲಿಯ ಮರವು ನೆರಳನ್ನಾಗಲಿ, ಹಣ್ಣನ್ನಾಗಲಿ ಕೊಡದೆ ನಿರರ್ಥಕವಾಗಿರುವುದೆಂದು ಪುರಂದರದಾಸರು ತಿಳಿಸಿದ್ದಾರೆ.

೨. ಯಾರಿಗೆ ಷಡ್ರಸಾನ್ನವನಿಕ್ಕಿ ಉಪಯೋಗವಿಲ್ಲ? ಏಕೆ?

ಊರ ಹಂದಿಗೆ ಷಡ್ರಸಾನ್ನವನ್ನಿಕ್ಕಿ ಉಪಯೋಗವಿಲ್ಲ. ಏಕೆಂದರೆ ಏನೇ ಮಾಡಿದರೂ ಅದು ತನ್ನ ದುರ್ಗಂಧವನ್ನು ಬಿಡುವುದಿಲ್ಲ.

೩. ಯಾರಿಗೆ ತತ್ವಜ್ಞಾನವನ್ನು ಹೇಳಿ ಪ್ರಯೋಜನವಿಲ್ಲ?

ದುರ್ಜನರಿಗೆ ತತ್ವಜ್ಞಾನವನ್ನು ಹೇಳಿದರೆ ಉಪಯೋಗವಿಲ್ಲ. ಏಕೆಂದರೆ ಅವರು ತಮ್ಮ ದುರ್ಗುಣಗಳನ್ನು ಬಿಡುವುದಿಲ್ಲ.

೪. ದುರ್ಜನರ ಕಾರ್ಯ ಯಾವ ಬಗೆಯದು?

ದುರ್ಜನರ ಕಾರ್ಯ ಸಮಾಜಕ್ಕೆ ಕೆಟ್ಟದ್ದನ್ನು ಮಾಡುವಂತಹದ್ದು, ಚಾಲಿಯ ಮುಳ್ಳಿನಂತೆ ದುರ್ಜನರೂ ಮುಗ್ಧರನ್ನು ನೋಯಿಸುತ್ತಿರುತ್ತಾರೆ.

(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):

೧. ಜಾಲಿಯ ಮರವು ನಿರುಪಯುಕ್ತವೆಂಬುದನ್ನು ಪುರಂದರದಾಸರು ಹೇಗೆ ನಿರೂಪಿಸಿದ್ದಾರೆ?

ಜಾಲಿಯ ಮರವು ಧನದೊಳಿರುವುದು ನಿರುಪಯುಕ್ತವೆಂಬುದು ಪುರಂದರದಾಸರ ಅಭಿಪ್ರಾಯವಾಗಿದೆ. ಮರವೊಂದು ಭೂಮಿಯ ಮೇಲೆ ಹುಟ್ಟಿ ಬೆಳೆದರೆ ಇತರರಿಗೆ ನೆರಳನ್ನು ಹಣ್ಣನ್ನು ಹೂವಿನ ಸುವಾಸನೆಯನ್ನು ನೀಡಿ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತದೆ. ಆದರೆ ಜಾಲಿಯ ಮರದಿಂದ ಈ ಬಗೆಯ ಉಪಯೋಗವಿಲ್ಲ. ಅಡಿಯಿಂದ ಮುಡಿಯವರೆಗೆ ಮುಳ್ಳನ್ನೇ ತುಂಬಿಕೊಂಡಿರುವ ಜಾಲಿಮರವು ಬಿಸಿಲಲ್ಲಿ ಬಳಲಿ ಬಂದವರಿಗೆ ಸ್ವಲ್ಪವೂ ನೆರಳನ್ನು ಒದಗಿಸುವುದಿಲ್ಲ. ಹಸಿವೆಂದು ಬಂದವರಿಗೆ ಹಣ್ಣನ್ನು ನೀಡುವುದಿಲ್ಲ. ಜಾಲಿಯ ಮರದ ಹೂವು ಸುವಾಸನೆಯನ್ನು ಪಾರಿಸುವುದಿಲ್ಲ. ಅದರ ರಸವೂ ಕೂಡ ಕುಡಿಯಲು ವಿಷದಂತೆ ಕಹಿಯಾಗಿರುತ್ತದೆ. ಆದ್ದರಿಂದ ಜಾಲಿಯ ಮರವು ಯಾವುದೇ ಬಗೆಯ ಉಪಯೋಗಕ್ಕೆ ಬಾರದೆ ನಿರರ್ಥಕತೆಯನ್ನು ಹೊಂದಿದೆ ಎಂಬುದು ಪುರಂದರದಾಸರ ಅಭಿಪ್ರಾಯವಾಗಿದೆ.

೨. ಜಾಲಿಮರ ಮತ್ತು ದುರ್ಜನರನ್ನು ಸಮೀಕರಿಸಿರುವುದರ ಔಚಿತ್ಯವನ್ನು ಚರ್ಚಿಸಿ.

“ಜಾಲಿಯ ಮರದಂತೆ ಧರೆಯೊಳು ದುರ್ಜನರು” ಎಂದು ಪುರಂದರದಾಸರು ದುರ್ಜನರನ್ನು ಚಾಲಿಯ ಮರಕ್ಕೆ ಹೋಲಿಸಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ. ಏಕೆಂದರೆ ಜಾಲಿಯ ಮರದಿಂದಲೂ ದುರ್ಜನರಿಂದಲೂ ಯಾವ ಉಪಯೋಗವೂ ಸಮಾಜಕ್ಕಿಲ್ಲ. ಎರಡೂ ನಿರರ್ಥಕವಾದ ಜೀವನಕ್ಕೆ ಉದಾಹರಣೆಗಳೇ, ಜಾಲಿಯ ಮರ ಮೈತುಂಬ ಚುಚ್ಚುವ ಮುಳ್ಳನ್ನು ಹೊಂದಿರುವಂತೆ ದುರ್ಜನರ ಮನಸ್ಸಿನ ತುಂಬಾ ಕೆಟ್ಟ ವಿಚಾರಗಳೇ ತುಂಬಿರುತ್ತದೆ. ಜಾಲಿಯ ಮರ ನೆರಳನ್ನಾಗಲಿ, ಹಣ್ಣನ್ನಾಗಲಿ, ಹೂವಿನ ಸುವಾಸನೆಯನ್ನಾಗಲೀ ಲೋಕಕ್ಕೆ ಒದಗಿಸುವುದಿಲ್ಲ. ಇದೇ ರೀತಿ ದುರ್ಜನರೂ ಕೂಡ ತಮ್ಮ ದುಷ್ಟ ಕೆಲಸಗಳಿಂದಾಗಿ ಸಮಾಜಕ್ಕೆ ಅಪಾಯವನ್ನುಂಟು ಮಾಡುತ್ತಿರುವ ಹೊರೆಯಾಗಿದ್ದಾರೆ. ಆದ್ದರಿಂದ ದುರ್ಜನರನ್ನು ಜಾಲಿಯ ಮರದೊಂದಿಗೆ ಸಮೀಕರಿಸಿರುವುದು ಸರಿಯಾದ ಹೋಲಿಕೆಯಾಗಿದೆ ಎನ್ನಬಹುದು.

೩. ಸಮಾಜಕಂಟಕರ ಬಗೆಗೆ ಪುರಂದರದಾಸರ ಅಭಿಪ್ರಾಯಗಳನ್ನು ಸಂಗ್ರಹಿಸಿ.

ಸಮಾಜಕಂಟಕರ ಬಗೆಗೆ ಪುರಂದರದಾಸರು ಅಸಮಾಧಾನಗೊಂಡಿದ್ದಾರೆ. ಎಳ್ಳಷ್ಟೂ ಉಪಯೋಗವಿಲ್ಲದ ದುರ್ಜನರಿಂದ ಸಮಾಜದ ನೆಮ್ಮದಿ ಹಾಳು. ಅವರಿಗೆ ತತ್ತ್ವಜ್ಞಾನವನ್ನು ಬೋಧಿಸಿಯೂ ಉಪಯೋಗವಿಲ್ಲ. ಬರಿ ಬಿನ್ನಾಣದ ಮಾತುಗಳನ್ನಾಡಿಕೊಂಡು ಕೆಟ್ಟ ಕೆಲಸಗಳಲ್ಲಿ ನಿರತರಾಗಿರುವ ಮವ್ವರನ್ನು ಪುರಂದರದಾಸರು ಜಾಲಿಯ ಮರಕ್ಕೆ, ಊರ ಹಂದಿಗೆ, ಕೂಳಿಗೆ ಕಚ್ಚಾಡುವ ಕುನ್ನಿಗೆ ಹೋಲಿಸಿರುವುದನ್ನು ಗಮನಿಸಿದರೆ ಅವರಿಗೆ-ದುರ್ಜನರ ಬಗ್ಗೆ ಇರುವ ಅಭಿಪ್ರಾಯವು ವೇದ್ಯವಾಗುತ್ತದೆ.

ಭಾಷಾಭ್ಯಾಸ

೧. ದುರ್ಜನರು – ಸುಜನರು, ಸ್ವಾದ – ವಿಷ ಈ ಮುಂತಾದ ಪದಗಳ ವೈರುಧ್ಯವನ್ನು ಗಮನಿಸಿ.

ದುರ್ಜನರು ಕೆಟ್ಟ ಗುಣಗಳಿಂದ ಸಮಾಜ ಕಂಟಕರಾಗಿರುತ್ತಾರೆ.

ಸುಜನರಿಂದ ಸಮಾಜದಲ್ಲಿ ಸೌಹಾರ್ದ, ಶಾಂತಿ, ನೆಮ್ಮದಿಗಳು ನೆಲೆಸಿರುತ್ತವೆ.

ಅಂತಯೇ ಸ್ವಾದ – ನಾಲಗೆಗೆ ಹಿತವನ್ನು ವಿಷ ಅಹಿತವನ್ನು ಉಂಟುಮಾಡುವ ವಿರುದ್ಧ ಗುಣಗಳನ್ನು ಹೊಂದಿದೆ.

೨. ಘೋರಪಾಪಿ, ದುರ್ಜನ, ದುರ್ಗಂಧ – ಈ ಪದಗಳಲ್ಲಿರುವ ಗುಣವಾಚಕಗಳನ್ನು ಗುರುತಿಸಿರಿ.

ಘೋರಪಾಪಿ – ‘ಘೋರ’ ಎಂಬುದು ಗುಣವಾಚಕ.

ದುರ್ಜನ – ‘ದುರ್’ ಎಂಬುದು ಗುಣವಾಚಕ.

ದುರ್ಗಂಧ – ”ದುರ್’ ಎಂಬುದು ಗುಣವಾಚಕ.

೩. ರಸ, ಪರಿ, ಕೊನೆ, ನಾರು – ಇವುಗಳಿಗೆ ನಾನಾರ್ಥಗಳನ್ನು ಬರೆಯಿರಿ.

೪) ಧರೆ, ಕುಸುಮ, ಕರ್ಮ, ಬಿನ್ನಾಣ, ಕುನ್ನಿ – ಇವುಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

ಧರೆ – ಭೂಮಿ, ವಸುಧೆ, ನೆಲ, ಧರಣಿ, ಧಾರುಣಿ, ಪೃಥ್ವಿ, ಇಳೆ, ವಸುಂಧರೆ

ಕುಸುಮ – ಹೂವು, ಪುಷ್ಪ, ಸುಮ

ಕರ್ಮ – ಕೆಲಸ, ಕಾರ್ಯ, ಕಜ್ಜ, ಉದ್ಯೋಗ, ಎಜ್ಜುಗ

ಬಿನ್ನಾಣ – ಬೆಡಗು, ಜಂಬ, ಒನವು, ಒಯ್ಯಾರ

ಕುನ್ನಿ – ನಾಯಿ, ಶ್ವಾನ, ಶುನಕ.

೫. ದುರ್ಜನರು, ಬಿಸಿಲಲ್ಲಿ, ಪಾಪಿಗೆ, ಹಣ್ಣಿನಲ್ಲಿ – ಇವುಗಳ ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಿ.

ದುರ್ಜನರು – ಪ್ರಥಮಾ ವಿಭಕ್ತಿ

ಬಿಸಿಲಲ್ಲಿ – ಸಪ್ತಮೀ ವಿಭಕ್ತಿ

ಪಾಪಿಗೆ – ಚತುರ್ಥಿ ವಿಭಕ್ತಿ

ಹಣ್ಣಿನಲ್ಲಿ – ಸಪ್ತಮೀ ವಿಭಕ್ತಿ

ಕೆಳಗಿನ ಪದ್ಯದ ಭಾವಾರ್ಥವನ್ನು ಬರೆಯಿರಿ:

೧. ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ

ಹಸಿದು ಬಂದವರಿಗೆ ಹಣ್ಣು ಇಲ್ಲ

ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ

ರಸದಲ್ಲಿ ಸ್ವಾದವು ವಿಷದಂತೆ ಇರುತಿಹ

ಶ್ರೀ ಪುರಂದರದಾಸರು ಬರೆದಿರುವ ‘ಜಾಲಿಯ ಮರದಂತೆ’ ಎಂಬ ಕೀರ್ತನೆಯಿಂದ ಈ ಮೇಲಿನ ಪದ್ಯಭಾಗವನ್ನು ಆಯ್ದುಕೊಳ್ಳಲಾಗಿದೆ.

ಜಾಲಿಯ ಮರದಿಂದ ಯಾವುದೇ ಉಪಯೋಗವೂ ಜನರಿಗಿಲ್ಲ ಎಂಬುದನ್ನು ವಿವರಿಸುತ್ತಾ ಕವಿಯು ಈ ಪದ್ಯದ ಮಾತುಗಳನ್ನು ಆಡಿದ್ದಾರೆ. “ಜಾಲಿಯ ಮರವು ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳನ್ನು ಕೊಡುವುದಿಲ್ಲ. ಹೊಟ್ಟೆ ಹಸಿದು ಬಂದವರಿಗೆ ಈ ಮರವು ತಿನ್ನಲು ಹಣ್ಣನ್ನೂ ಕೊಡುವುದಿಲ್ಲ. ಈ ಮರದ ಹೂವಿಗೆ ವಾಸನೆಯೂ ಇರುವುದಿಲ್ಲ. ಬುಡದಲ್ಲಿ ಕುಳಿತು ಸುಧಾರಿಸಿಕೊಳ್ಳೋಣವೆಂದರೆ ಅಲ್ಲೆಲ್ಲಾ ಮುಳ್ಳೇ ತುಂಬಿರುತ್ತದಾದ್ದರಿಂದ ಕೂಡಲು ಜಾಗವೂ ಇಲ್ಲ. ಜಾಲಿಯ ರುಚಿಯು ವಿಷದಷ್ಟು ಕಹಿಯಾಗಿರುತ್ತದೆ”. ಹೀಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ.

ಮರವೆಂದರೆ ಕೂರಲು ಸ್ಥಳ, ನೆರಳು, ತಿನ್ನಲು ಹಣ್ಣು, ಆಸ್ವಾದಿಸಲು ಹೂವಿನ ವಾಸನೆ ಮುಂತಾದುವನ್ನು ನೀಡುತ್ತದ್ದೆಂಬ ಕಲ್ಪನೆಯಿರುತ್ತದೆ. ಆದರೆ ಜಾಲಿಯ ಮರವು ಯಾವುದನ್ನೂ ನೀಡದೆ ನಿರುಪಯುಕ್ತವಾಗಿರುತ್ತದೆ. ಜಾಲಿಯ ಮರವು ಭೂಮಿಯ ಮೇಲಿನ ದುರ್ಜನರಂತೆಯೇ ಇರುತ್ತದೆ. ಜಾಲಿಯ ಮರಕ್ಕೂ – ದುರ್ಜನರಿಗೂ ಸಮೀಕರಣ ಮಾಡಿರುವುದು ಸೊಗಸಾದ ಹೋಲಿಕೆಯಾಗಿದೆ.

ಪದ್ಯದ ಸಾರಾಂಶ ಮತ್ತು ವಿಮರ್ಶೆ

ಪುರಂದರದಾಸರ ಸಮಾಜ ವಿಮರ್ಶೆಯ ರಚನೆಗಳಲ್ಲಿ ತುಂಬಾ ಪ್ರಸಿದ್ಧವಾದ ಕೀರ್ತನೆಯಿದು.

೧. ಜಾಲಿಯ ಮರದಂತೆ ಧರೆಯೊಳು ದುರ್ಜನರು

ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ

ಪುರಂದರದಾಸರು ಕೆಟ್ಟವರನ್ನು – ದುರ್ಜನರನ್ನು ‘ಜಾಲಿಯ ಮರದಂತೆ” ಎಂದು ಟೀಕೆ ಮಾಡಿದ್ದಾರೆ. ಜಾಲಿಯ ಮರವು ಬುಡದಿಂದ ತುದಿಯವರೆಗೂ ಮುಳ್ಳನ್ನು ತುಂಬಿಕೊಂಡಿರುತ್ತದೆ. ಇದೇ ರೀತಿ ದುರ್ಜನರೂ ಕೂಡ ಅಡಿಯಿಂದ – ಮುಡಿಯವರೆಗೂ ಕೆಟ್ಟ ವಿಚಾರಗಳನ್ನೇ ತುಂಬಿಕೊಂಡಿರುತ್ತಾರೆ. ಜಾಲಿಮರ ಹೇಗೆ ಎಲ್ಲದಕ್ಕೂ ನಿರುಪಯುಕ್ತವೋ ಹಾಗೆ ದುರ್ಜನರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಜಾಲಿಮರ ಮತ್ತು ದುರ್ಜನರು ಧರೆಯೊಳೆರುವುದು ವ್ಯರ್ಥ ಎಂಬುದು ಪುರಂದರದಾಸರ ಅಭಿಪ್ರಾಯವಾಗಿದೆ.

೨. ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ

ಹಸಿದು ಬಂದವರಿಗೆ ಹಣ್ಣು ಇಲ್ಲ

ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ

ರಸದಲ್ಲಿ ಸ್ವಾದವು ವಿಷದಂತೆ ಇರುತಿಹ

ಕೀರ್ತನೆಯ ಈ ಭಾಗದಲ್ಲಿ ಕವಿಯು ಜಾಲಿಯ ಮರದ ಸ್ವರೂಪವನ್ನು ವಿವರಿಸಿ ಅದರ ನಿರರ್ಥಕತೆಯನ್ನು ನಿರೂಪಿಸಿದ್ದಾರೆ. ಬಿಸಿಲಲ್ಲಿ ಬಳಲಿ ಬಂದವರಿಗೆ ಜಾಲಿಯ ಮರ ನೆರಳನ್ನು ಒದಗಿಸುವುದಿಲ್ಲ. ಹಸಿವು ಎಂದು ಬಂದವರಿಗೆ ಜಾಲಿಯ ಮರ ಹಣ್ಣನ್ನು ನೀಡಿ ಸಲಹುವುದಿಲ್ಲ. ಅದು ಹೂಬಿಟ್ಟು ಸುವಾಸನೆಯನ್ನು ಪಸರಿಸಿ ತನ್ನ ಸುತ್ತಲ ವಾತಾವರಣವನ್ನು ಆಹ್ಲಾದಗೊಳಿಸುವುದೂ ಇಲ್ಲ. ಜಾಲಿಯ ಮರದ ಕೆಳಗೆ ನೆರಳು ಸ್ವಲ್ಪವಾದರೂ ಸಿಗದೆ ಯಾರೂ ಕುಳಿತುಕೊಳ್ಳಲೂ ಆಗದು. ಇನ್ನು ಜಾಲಿಯ ಮರದ ರಸವೋ ವಿಷದಂತೆ ಕಹಿಯಾಗಿದ್ದು ಅಸ್ವಾದಿಸಲು ಸಾಧ್ಯವಿಲ್ಲ. ಹೀಗೆ ಜಾಲಿಯ ಮರವು ಈ ಮೇಲೆ ವಿವರಿಸಿರುವ ಯಾವ ಅರ್ಥದಲ್ಲಿಯೂ ಉಪಯೋಗಕ್ಕೆ ಬಾರದೆ, ಭೂಮಿಯ ಮೇಲೆ ನಿರುಪಯುಕ್ತವಾಗಿ ಎಲ್ಲೆಂದರಲ್ಲಿ ಬೆಳೆದಿರುತ್ತದೆಂದು ಪುರಂದರದಾಸರು ವಿವರಿಸಿದ್ದಾರೆ.

೩. ಊರಹಂದಿಗೆ ಪಡ್ರಸಾನ್ನವನಿಕ್ಕಲು

ನಾರುವ ದುರ್ಗಂಧ ಬಿಡಬಲ್ಲುದೆ

ಘೋರಪಾಪಿಗೆ ತತ್ತ್ವಜ್ಞಾನವ ಪೇಳಲು

ಕ್ರೂರ ಕರ್ಮವ ಬಿಟ್ಟು ಸುಜನನಾಗುವನೆ

ಕೆಟ್ಟ ಗುಣಗಳನ್ನು ಹೊಂದಿರುವ ಸಮಾಜ ಕಂಟಕರನ್ನು ಏನು ಮಾಡಿದರೂ ಬದಲಾಯಿಸಲು ಸಾಧ್ಯವಿಲ್ಲವೆಂಬು ದನ್ನು ಕವಿ ಈ ಭಾಗದಲ್ಲಿ ವಿವರಿಸಿದ್ದಾರೆ. ಊರ ಹಂದಿಯು ಸದಾ ಕೆಸರು – ಗಲೀಜುಗಳಲ್ಲಿ ವಾಸಿಸುತ್ತಿದ್ದು ದುರ್ನಾತ ಬೀರುತ್ತಿರುತ್ತದೆ. ಅದಕ್ಕೆ ಪಡ್ರಸಾನ್ನವನ್ನಿಕ್ಕಿದ ಮಾತ್ರಕ್ಕೆ ಅದರ ಮೈಯಿಂದ ಹೊರಸೂಸುವ ದುರ್ಗಂಧ ಕಡಿಮೆಯಾಗುವುದಿಲ್ಲ. ಇದೇ ರೀತಿಯಲ್ಲಿ ಘೋರಪಾಪಿಯಾದವರಿಗೆ ತತ್ತ್ವಜ್ಞಾನವನ್ನು ಹೇಳಿದರೆ ಆತ ತಾನು ಮಾಡುತ್ತಿರುವ ಕ್ರೂರವಾದ ಕೆಲಸವನ್ನು ಬಿಟ್ಟು ಒಳ್ಳೆಯವನಾಗಿ ಬಿಡುವುದಿಲ್ಲ. ಮೂಲಗುಣಗಳನ್ನು ಉಪದೇಶದ ಮಾತುಗಳಿಂದ ಬದಲಾಯಿಸುವುದು ತುಂಬಾ ಕಷ್ಟ ಮತ್ತು ಅದರಿಂದ ಉಪಯೋಗವಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ.

೪. ತನ್ನಿಂದ ಉಪಕಾರ ತೊಟಕಾದರೂ ಇಲ್ಲ

ಬಿನ್ನಾಣದ ಮಾತಿಗೆ ಕೊನೆಯಿಲ್ಲ

ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ

ಇನ್ನಿವರ ಕಾರ್ಯವು ಪುರಂದರವಿಠಲ.

ಜಾಲಿಯ ಮರದಂತೆ ನಿರುಪಯುಕ್ತವಾಗಿ ಬದುಕುವ ದುರ್ಜನರಿಂದ ಸ್ವಲ್ಪವೂ ಸಮಾಜಕ್ಕೆ ಉಪಯೋಗವಿಲ್ಲ. ಆದರೂ ದುರ್ಜನರು ತಮ್ಮನ್ನು ತಾವೆ ಹೊಗಳಿಕೊಳ್ಳುವ ಬಿನ್ನಾಣದ ಮಾತುಗಳನ್ನು ಆಡುತ್ತಾರೆ. ಯಾರಿಂದ ಸಮಾಜಕ್ಕೆ ಲಾಭವಿದೆಯೋ ಅಂಥವರಿಗೆ ಗೌರವ-ಮಾನ್ಯತೆಗಳು ಸಿಗುವುದಿಲ್ಲ; ಬದಲಿಗೆ ಅಪಾತ್ರರಾದವರಿಗೆ ಅವು ಸಲ್ಲುತ್ತಿವೆ. ದುರ್ಜನರು ಸಮಾಜಕ್ಕೆ ಹೊರೆ. ಅನ್ನ ತಿನ್ನಲು ಕಚ್ಚಾಡುವ ನಾಯಿಗಳಂತೆ ದುರ್ಜನರು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋರಾಡುತ್ತಾರೆ. ಇದರಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಹೇಗೆ ಜಾಲಿಮರವು ನಿರರ್ಥಕವಾಗಿ ಧರೆಯಲ್ಲಿ ಬೆಳೆವುದೋ ಹಾಗೆ ದುರ್ಜನರು ಸಮಾಜದಲ್ಲಿ ಬದುಕುವರೆಂದು ಪುರಂದರದಾಸರು ವಿವರಿಸಿದ್ದಾರೆ. ಸಮಾಜಕಂಟಕರನ್ನು ಚುಚ್ಚಿ ನೋಯಿಸುವ ಜಾಲಿಮರದ ಮುಳ್ಳಿನೊಂದಿಗೆ ಸಮೀಕರಿಸಿರುವುದು ಔಚಿತ್ಯಪೂರ್ಣವಾಗಿದೆ.

ಶಬ್ಧಾರ್ಥ: ಧರೆ – ಭೂಮಿ; ದುರ್ಜನ – ಕೆಟ್ಟ ಜನ; ಮೂಲಾಗ್ರ ಪರಿಯಂತ – ಬುಡದಿಂದ ತುದಿಯವರೆಗೆ; ಬಳಲಿ – ಆಯಾಸಗೊಂಡು, ದಣಿದು; ಕುಸುಮ – ಹೂವು; ಸ್ವಾದ – ರುಚಿ; ಪಡ್ರಸಾನ್ನ – ಉಪ್ಪು, ಖಾರ, ಸಿಹಿ, ಕಹಿ, ಹುಳಿ ಮತ್ತು ಒಗರುಗಳೆಂಬ ಆರು ಬಗೆಯ ರುಚಿಭೇದಗಳುಳ್ಳ ಆಹಾರ; ನಾರು – ವಾಸನೆ ಬೀರು; ಕರ್ಮ – ಕೆಲಸ; ತೊಟಿಕು – ಸ್ವಲ್ಪವಾದರೂ; ಬಿನ್ನಾಣ – ಒನಪು, ಒಯ್ಯಾರ, ಸೊಬಗು, ಹಾಸ್ಯ, ಗೇಲಿ; ಕುನ್ನಿ – ನಾಯಿ.

ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ

ಜಾಲಿಯ ಮರದಂತೆ – ಪುರಂದರದಾಸ

ಪುರಂದರದಾಸ – ಪುರಂದರವಿಠಲ

ಶ್ರೀನಿವಾಸನಾಯಕ – ಪುರಂದರದಾಸ

ಪುರಂದರದಾಸ – ಕರ್ನಾಟಕ ಸಂಗೀತ ಪಿತಾಮಹ

ಜಾಲಿಯ ಮರದಂತೆ – ದುರ್ಜನರು

ಜಾಲಿಯ ಮರದಂತೆ – ಕೀರ್ತನೆ

ಪುರಂದರದಾಸ – ಕೀರ್ತನೆ ಸಾಹಿತ್ಯ

ತತ್ವಜ್ಞಾನ ಕೇಳದವ – ಘೋರಪಾಪಿ

ದುರ್ಗಂಧ ಬಿಡದಿರುವುದು – ಊರ ಹಂದಿ

Leave a Comment