ದ್ವಿತೀಯ ಪಿಯುಸಿ ಕನ್ನಡ ಒಮ್ಮೆ ನಗುತ್ತೇವೆ ನೋಟ್ಸ್ | 2nd Puc Kannada Omme Nagutteve Notes

2nd Puc Kannada Omme Nagutteve Notes Question and Answer Summery Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಕನ್ನಡ ಒಮ್ಮೆ ನಗುತ್ತೇವೆ ನೋಟ್ಸ್ ಪ್ರಶ್ನೋತ್ತರಗಳು,ಒಮ್ಮೆ ನಗುತ್ತೇವೆ ಪದ್ಯ ಒಮ್ಮೆ ನಗುತ್ತೇವೆ Notes omme nagutteve summary in kannada omme nagutteve kannada question answer 12 puc kannada notes pdf download 2nd puc kannada notes question and answer 2nd puc kannada textbook answers omme nagutteve kannada poem notes 2 marks 2nd puc kannada notes with grammar 2nd puc kannada 12th poem notes.

೧೨. ಒಮ್ಮೆ ನಗುತ್ತೇವೆ

– ಸುಕನ್ಯಾ ಮಾರುತಿ

Omme Nagutteve Notes

ಕವಿ ಪರಿಚಯ

ಶ್ರೀಮತಿ ಸುಕನ್ಯಾ ಮಾರುತಿ ‘ಬಂಡಾಯ ಕವಯಿತ್ರಿ’ ಎಂದೇ ಪ್ರಸಿದ್ದರು. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಕೊಟ್ಟೂರಿನಲ್ಲಿ ಮಾರ್ಚ್ 1, 1956ರಲ್ಲಿ ಜನಿಸಿದ ಇವರು ಧಾರವಾಡದ ಜೆ.ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ‘ಪಂಚಾಗ್ನಿಯ ಮಧ್ಯೆ’, ‘ನಾನು ನನ್ನವರು’, ‘ತಾಜಮಹಲಿನ ಹಾಡು’ ‘ಬಿಂಬದೊಳಗಣ ಮಾತು’, ‘ನಾನೆಂಬ ಮಾಯೆ’ ಮುಂತಾದ ಕವಿತಾ ಸಂಕಲನಗಳನ್ನು ಸುಕನ್ಯಾ ಅವರು ಪ್ರಕಟಿಸಿದ್ದಾರೆ. ವಿವಿಧ ಪ್ರಗತಿಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ‘ಪ್ರಣಯಿನಿ’, ‘ಸಂಕೃತಿ’, ‘ಪ್ರಶಾಂತ’ ಎಂಬ ಕೃತಿಗಳನ್ನು ಸಂಪಾದಿಸಿಕೊಟ್ಟಿದ್ದಾರೆ.

ಆಕರ: ‘ನಾನೆಂಬ ಮಾಯೆ’.

(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು

೧. ಗಂಜಿಗೂ ಗತಿಯಿಲ್ಲ.

ಶ್ರೀಮತಿ ಸುಕನ್ಯಾ ಮಾರುತಿಯವರು ಬರೆದಿರುವ ‘ಒಮ್ಮೆ ನಗುತ್ತೇವೆ’ ಎಂಬ ಕವಿತೆಯ ಆರಂಭದಲ್ಲಿ ಈ ಮೇಲಿನ ವಾಕ್ಯವಿದೆ.

ಜನಗಳು ಮತ್ತು ದನಗಳು ಭೀಕರ ಬರಗಾಲದ ದಾಳಿಗೆ ಸಿಕ್ಕು ತತ್ತರಿಸಿ, ದಾರಿದ್ರ್ಯವನ್ನು ಅನುಭವಿಸುತ್ತಿರುವ ಸ್ಥಿತಿಯನ್ನು ವಿವರಿಸುವ ಸಂದರ್ಭದಲ್ಲಿ ಕವಯತ್ರಿ ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ. ದನಗಳಿಗೆ ಮೇವು ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ, ತಿನ್ನಲು ಗಂಜಿಗೂ ಗತಿಯಿಲ್ಲ ಇಂತಹ ಪರಿಸ್ಥಿತಿಯಲ್ಲಿ ಜನರೆಲ್ಲ ಸತ್ತ ದನಗಳನ್ನು ಕಿತ್ತುಕಿತ್ತು ತಿನ್ನಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆಂದು ಕವಯಿತ್ರಿ ಅತ್ಯಂತ ವಿಷಾದದಿಂದ ಹೇಳಿದ್ದಾರೆ.

೨. ಧಗಧಗ ಉರಿವ ಜ್ವಾಲಾಮುಖಿಯಾಗಿದ್ದೇನೆ.

ಶ್ರೀಮತಿ ಸುಕನ್ಯಾ ಮಾರುತಿ ಅವರು ಬರೆದಿರುವ ಒಮ್ಮೆ ನಗುತ್ತೇವೆ’ ಎಂಬ ಕವಿತೆಯಲ್ಲಿ ಕವಯಿತ್ರಿ ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ.

ಭೀಕರವಾದ ಬರಗಾಲದಲ್ಲಿ ದನಕರುಗಳು, ಜನರು ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ಸಾಯುತ್ತಿದ್ದಾರೆ. ಈಗ ಮಳೆ ಬಂದರೆ ಮಾತ್ರವೇ ಅವರ ಉಳಿಗಾಲ. ಇಂತಹ ಸಂದರ್ಭದಲ್ಲಿ ಅವರ ದೀನ ಸ್ಥಿತಿ ನೋಡಲಾರದೆ ಕವಯಿತ್ರಿ ಮಳೆಗಾಗಿ ಮುಗಿಲತ್ತ ಕೈಚಾಚಿ ನಿಂತಿದ್ದಾರೆ. ಮಳೆಗಾಗಿ ಬೇಡುತ್ತಿದ್ದರೂ ಮನದೊಳಗೆ ಧಗಧಗಿಸಿ ಉರಿಯುವ ಜ್ವಾಲಾಮುಖಿಯಾಗಿದ್ದೇನೆಂದು ಈ ಸಂದರ್ಭದಲ್ಲಿ ಕವಯಿತ್ರಿ ಹೇಳಿರುವರು.

೩. ದೀನದಲಿತತನಕ್ಕೆ ಧಿಕ್ಕಾರವಿರಲಿ!

ಶ್ರೀಮತಿ ಸುಕನ್ಯಾ ಮಾರುತಿ ಅವರು ಬರೆದಿರುವ ‘ಒಮ್ಮೆ ನಗುತ್ತೇವೆ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ದೀನದಲಿತರಿಗಾಗಿ ಎಂದೂ ನಂಬದ ಕಾಣದ ದೇವರನ್ನು ಪ್ರಾರ್ಥಿಸಿರುವ ಕವಯಿತ್ರಿ ಯಾರೂ ಸಹಾಯಹಸ್ತವನ್ನು ಚಾಚದಿದ್ದ ಸಂದರ್ಭದಲ್ಲಿ ಇಡೀ ಜಗತ್ತನ್ನೇ ಮುಳುಗಿಸಿ ಬಿಡುವ ಛಲ ಮೂಡುವುದೆಂದು ಹೇಳಿರುವರು. ಬೆಂಕಿ ನಾಲಗೆ ಚಾಚಿ ನನ್ನವರ ದಾರಿದ್ರ್ಯವನ್ನೇ ಆಪೋಶನ ಮಾಡಬೇಕೆನ್ನುವ ಅವರು ದಲಿತರಿಂದ ದೀನದಲಿತತನ ಸರ್ವನಾಶವಾಗಬೇಕೆಂಬ, ಸಮಾನತೆಯು ಮೂಡಬೇಕೆಂಬ ಆಶಯ ಹೊಂದಿರುವುದನ್ನು ಈ ಮೇಲಿನ ವಾಕ್ಯದಲ್ಲಿ ಗಮನಿಸಬಹುದಾಗಿದೆ.

೪. ಒಮ್ಮೆನಕ್ಕೇ ನಗುತ್ತೇವೆ.

ಶ್ರೀಮತಿ ಸುಕನ್ಯಾ ಮಾರುತಿ ಅವರು ಬರೆದಿರುವ ‘ಒಮ್ಮೆ ನಗುತ್ತೇವೆ’ ಎಂಬ ಕವಿತೆಯ ವಾಕ್ಯವಿದು. ಜಗತ್ತು ಆವರಿಸಿರುವ ಬರಗಾಲ ದೂರಾಗಿ, ಬಡತನ-ದಾರಿದ್ರ ತೊಲಗಿ ಜನರು ಸಂತೋಷದಲ್ಲಿರಬೇಕು. ಆಕಾಶದಲ್ಲಿ ಕಾರ್ಮೋಡ ಕವಿದು, ಭೂಮಿಗೆ ಮಳೆ ಸುರಿದು, ಹೊಳೆ ತುಂಬಿ ಹರಿದು, ಬೆಳೆ ಬೆಳೆಯುವಂತಾದಾಗ ಜನರೆಲ್ಲ ಸಂತೋಷದಿಂದ ಜೀವಿಸುತ್ತಾರೆ. ದನಕರುಗಳು ನೆಮ್ಮದಿಯಿಂದ ಬದುಕುತ್ತವೆ. ಈ ಎಲ್ಲ ಸಹಜೀವಿಗಳು ಸಂತೋಷದಿಂದಿರುವಾಗ ತಾವು ಅವರೊಂದಿಗೆ ಒಮ್ಮೆ ನಕ್ಕೇ ನಗುತ್ತೇವೆ, ಎಲ್ಲರೂ ಕೂಡಿ ನಗುತ್ತೇವೆ. ಅಂತಹ ಕಾಲ ಬಂದೇ ತೀರುವುದೆಂಬ ಆಶಯವನ್ನು ಕವಯಿತ್ರಿ ಈ ಮೇಲಿನ ವಾಕ್ಯದ ಮೂಲಕ ವ್ಯಕ್ತಪಡಿಸಿದ್ದಾರೆ.

ಹೆಚ್ಚುವರಿ ಪ್ರಶ್ನೆಗಳು:

೫. ಮುಗಿಲತ್ತ ಕೈಚಾಚಿ ನಿಂತಿದ್ದೇನೆ.

ಶ್ರೀಮತಿ ಸುಕನ್ಯಾ ಮಾರುತಿ ಅವರು ಬರೆದಿರುವ ʼಒಮ್ಮೆ ನಗುತ್ತೇವೆ’ ಎಂಬ ಪದ್ಯದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.

ಬರಗಾಲದಿಂದ ಸಹಜೀವಿಗಳು ಅನುಭವಿಸುತ್ತಿರುವ ಪಡಿಪಾಟಲನ್ನು ನೋಡಿ ದುಃಖಿತರಾದ ಕವಯಿತ್ರಿಯು ಏನೂ ಮಾಡಲಾಗದೆ, ಅವರ ಸ್ಥಿತಿಯನ್ನು ನೋಡಲಾಗದೆ ಮುಗಿಲತ್ತ ಕ್ಕೆ ಚಾಚಿ ನಿಂತಿದ್ದಾರೆ. ಮಳೆ ಸುರಿಯಲೆಂದು ಕೈಚಾಚಿ ಮುಗಿಲನ್ನು ಬೇಡಿಕೊಳ್ಳುವ ಚಿತ್ರ ಇದಾಗಿದ್ದು ಮಳೆ ಬಂದರೆ ಮಾತ್ರ ಭೂಮಿ ಮೇಲಿನ ಜೀವಿಗಳ ಬದುಕು ಹಸನಾಗುವುದು. ಇಲ್ಲವೇ ಬರಗಾಲದ ಬೇಗೆಯಿಂದ ಅಸುನೀಗುವ ಸ್ಥಿತಿ ಬಂದಿದೆ ಆದ್ದರಿಂದ ಕವಿಯಿತ್ರಿ ಮಳೆಸುರಿಯಲೆಂದು ಮುಗಿಲತ್ತ ಕೈಚಾಚಿ ನಿಂತಿದ್ದಾರೆ.

೬. ದನ, ಜನ ಎಲ್ಲ ಕೂಡಿ ನಗುತ್ತೇವೆ.

ಶ್ರೀಮತಿ ಸುಕನ್ಯಾ ಮಾರುತಿಯವರು ಬರೆದಿರುವ ʼಒಮ್ಮೆ ನಗುತ್ತೇವೆ’ ಎಂಬ ಕವಿತೆಯ ವಾಕ್ಯ ಇದಾಗಿದೆ.

ಕೊನೆಗೊಮ್ಮೆ ಎಲ್ಲರೂ ಒಂದಾಗಿ ನಗುತ್ತೇವೆ ಎಂದು ಹೇಳಿರುವ ಕವಯಿತ್ರಿ ಮಳೆ ಸುರಿಸುವ, ಹೊಳೆ ಹರಿಸುವ, ಬೆಳೆ ಬೆಳೆಸುವ ನಗುವನ್ನು ದನ, ಜನ ಎಲ್ಲ ಕೂಡಿ ನಗುತ್ತೇವೆ. ಈ ಕಾಲ ದೂರವೇನಿಲ್ಲ, ಒಮ್ಮೆನಕ್ಕೆ ನಗುತ್ತೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಲೋಕದ ಜೀವಿಗಳೆಲ್ಲ ಸುಖವಾಗಿದ್ದಾಗ ಮಾತ್ರ ನಗಲು ಸಾಧ್ಯ ಮತ್ತು ಎಲ್ಲರೂ ಒಟ್ಟಾಗಿ ನಗುನಗುತ್ತಿರುವುದು ಮಾತ್ರವೇ ನಿಜವಾದ ಸಾಮಾಜಿಕ ನ್ಯಾಯವಾಗಿದೆ ಎಂಬ ತಿಳಿವಳಿಕೆಯು ಈ ಮೇಲಿನ ಮಾತಿನ ಹಿಂದಿದೆ.

೭. ಕತಕತನೆ ಕುದಿನ ಆಗ್ನಿಪರ್ವತವಾಗಿದ್ದೇನೆ.

ಶ್ರೀಮತಿ ಸುಕನ್ಯಾ ಮಾರುತಿ ಅವರು ಬರೆದಿರುವ ‘ಒಮ್ಮೆ ನಗುತ್ತೇವೆ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನಮ ಸ್ವೀಕರಿಸಲಾಗಿದೆ.

ಭೀಕರವಾದ ಬರಗಾಲ ಬಂದಿರುವುದರಿಂದ ಭೂಮಿಯ ಮೇಲಿನ ಸಹಜೀವಿಗಳು ಒದ್ದಾಡುತ್ತಿರುವುದನ್ನು ಕಂಡು ಕವಯಿತ್ರಿಗೆ ಕೋಪ ಬಂದಿದೆ. ಮೇವಿಲ್ಲದೆ ಹಸುಗಳು, ಗಂಜಿಗೂ ಗತಿಯಿಲ್ಲದ ಜನಗಳು – ಇವರನ್ನೆಲ್ಲಾ ನೋಡಿ ಕವಯಿತ್ರಿಯು ಕತಕತನೆ ಕುದಿವ ಅಗ್ನಿಪರ್ವತವಾಗಿದ್ದಾರೆ. ಈ ಕೋಪದ ಹಿಂದೆ, ಸಹಜೀವಿಗಳ ಬಗ್ಗೆ ಕವಯಿತ್ರಿಯಲ್ಲಿರುವ ಪ್ರೀತಿ ಬಹಳ ಮುಖ್ಯವಾಗಿವೆ. ಪ್ರೀತಿಯಿರುವ ಕಾರಣದಿಂದಲೇ ಅವರು ಸಹಜೀವಿಗಳು ಅನುಭವಿಸುತ್ತಿರುವ ಬರಗಾಲದ ಪರಿಣಾಮವನ್ನು ನೋಡಿ ಕುದಿವ ಅಗ್ನಿಪರ್ವತವಾಗಿದ್ದಾರೆನ್ನಬಹುದು.


(ಅ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).

೧. ದನಗಳಿಗೆ ಏನಿಲ್ಲ?

ಮೇವು

೨. ಜನರಿಗೆ ಯಾವುದಕ್ಕೆ ಗತಿಯಿಲ್ಲ?

ಗಂಜಿಗೆ

೩. ಕವಯಿತ್ರಿ ಯಾರಲ್ಲಿ ಮೊರೆ ಇಡುತ್ತಾರೆ?

ನಂಬದ ದೇವರಲ್ಲಿ

೪. ಕವಯಿತ್ರಿ ಯಾವುದಕ್ಕೆ ಧಿಕ್ಕಾರವಿರಲಿ ಎಂದು ಹೇಳುತ್ತಾರೆ?

ದೀನದಲಿತತನಕ್ಕೆ

೫. ಜನರನ್ನು ಯಾವುದರಿಂದ ಪಾರು ಮಾಡುತ್ತೇನೆಂದು ಕವಯಿತ್ರಿ ಹೇಳುವರು?

ಬಡತನದ ಧಗೆಯಿಂದ – ಹೊಗೆಯಿಂದ

ಹೆಚ್ಚುವರಿ ಪ್ರಶ್ನೆಗಳು:

೬. ‘ಒಮ್ಮೆ ನಗುತ್ತೇವೆ’ ಕವಿತೆಯನ್ನು ಬರೆದವರು ಯಾರು?

ಸುಕನ್ಯಾ ಮಾರುತಿ

೭. ಕವಯಿತ್ರಿ ಯಾವುದನ್ನು ಆಪೋಶನ ಮಾಡುತ್ತೇನೆ ಎನ್ನುತ್ತಾರೆ?

ದಾರಿದ್ರ್ಯಾವನ್ನು

೮. ನನ್ನವರು ಏನನ್ನು ಕಿತ್ತು ತಿನ್ನುತ್ತಿದ್ದಾರೆ ಎಂದು ಕವಯಿತ್ರಿ ಹೇಳಿದ್ದಾರೆ?

ಸತ್ತ ದನಗಳನ್ನು

(ಇ) ಎರಡು ಅಂಕದ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ).

೧. ದನಗಳಿಗೆ, ಜನಗಳಿಗೆ ಏನೇನು ಇಲ್ಲ?

ದನಗಳಿಗೆ ಮೇವಿಲ್ಲ, ಜನಗಳಿಗೆ ಕುಡಿಯಲು ನೀರಿಲ್ಲ, ಗಂಜಿಗೂ ಗತಿಯಿಲ್ಲ.

೨. ಕವಯಿತ್ರಿ ಮುಗಿಲತ್ತ ಕೈಚಾಚಿ ಏಕೆ ನಿಂತಿದ್ದಾರೆ?

ದನಗಳ-ಜನಗಳ ಕಷ್ಟ ನೋಡಲಾರದೆ ಕವಯಿತ್ರಿ ಮಳೆಗಾಗಿ ಮುಗಿಲತ್ತ ಕೈಚಾಚಿ ನಿಂತಿದ್ದಾರೆ.

೩. ಜನರನ್ನು ಕವಯಿತ್ರಿ ಯಾವ ಯಾವುದರಿಂದ ಪಾರು ಮಾಡುವುದಾಗಿ ಹೇಳಿದ್ದಾರೆ?

ಕವಯಿತ್ರಿ ಜನರನ್ನು ಬಡತನವೆಂಬ ಬವಣೆಯ ಧಗೆಯಿಂದ ಹೊರನುಗಿಸುತ್ತೇನೆ ಮತ್ತು ದಾರಿದ್ರ್ಯವೆಂಬ ಹೊಗೆಯಿಂದ ಪಾರು ಮಾಡುತ್ತೇನೆಂದಿದ್ದಾರೆ.

೪. ಕವಯಿತ್ರಿ ನಗುವ ನಗು ಎಂತಹುದು?

ಕವಯಿತ್ರಿ ನಗುವ ನಗು ಕೊನೆಯಿಲ್ಲದ ನಗು, ಮೊನೆಯಿಲ್ಲದ ನಗು, ಆಕಾಶದಲ್ಲಿ ಕಾರ್ಮೋಡ ಕವಿಸುವ ನಗು, ಮಳೆ ಸುರಿಸುವ ನಗು, ಹೊಳೆ ಹರಿಸುವ ನಗು, ಬೆಲೆ ಬೆಳೆಸುವ ನಗು ಆಗಿರುತ್ತದೆ.

ಹೆಚ್ಚುವರಿ ಪ್ರಶ್ನೆಗಳು:

೫. ತನ್ನವರನ್ನು ಯಾರು ಕೈಹಿಡಿಯದಿದ್ದಾಗ ಏನೇನು ಮಾಡುತ್ತೇನೆಂದು ಕವಯಿತ್ರಿ ಹೇಳಿದ್ದಾರೆ?

ಕವಯಿತ್ರಿ ಮೊದಲು ತನ್ನವರ ಕೈ ಹಿಡಿಯುವಂತೆ ದೇವರನ್ನು ಬೇಡುವರು. ಯಾರೂ ಕೈ ಹಿಡಿಯದಿದ್ದಾಗ ಕಂಬನಿಯ ಲಾವಾರಸದಲ್ಲಿ ವಿಶ್ವವನ್ನೇ ಮುಳುಗಿಸಿ, ಬೆಂಕಿ ನಾಲಗೆಯಿಂದ ನನ್ನವರ ದಾರಿದ್ರ್ಯವನ್ನೇ ಆಪೋಶನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):

೧. ಕವಯಿತ್ರಿ ಆಗ್ನಿಪರ್ವತ ಜ್ವಾಲಾಮುಖಿ ಆಗಿದ್ದೇನೆ ಎನ್ನಲು ಕಾರಣಗಳೇನು?

ಎಲ್ಲೆಲ್ಲೂ ಭೀಕರ ಬರಗಾಲ ಕಾಲಿಟ್ಟು ಕಷ್ಟ ಪರಿಸ್ಥಿತಿ ಎದುರಾಗಿದೆ. ದನಗಳಿಗೆ ತಿನ್ನಲು ಮೇವಿಲ್ಲದೆ ಸಾಯುತ್ತಿವೆ. ಜನಗಳಿಗೆ ಕುಡಿಯಲು ನೀರಿಲ್ಲ, ಗಂಜಿ ತಿನ್ನಲೂ ಗತಿಯಿಲ್ಲದೆ ಅವರೆಲ್ಲ ಸತ್ತದನಗಳನ್ನು ಕಿತ್ತುಕಿತ್ತು ತಿನ್ನುವ ಸ್ಥಿತಿ ತಲುಪಿರುವುದನ್ನು ಕಣ್ಣಾರೆ ಕಂಡ ಕವಯಿತ್ರಿ ವ್ಯಗ್ರಗೊಂಡಿದ್ದಾರೆ. ಬಡವರ ಸ್ಥಿತಿಯನ್ನು ನೋಡಿ ಕತಕತನೆ ಕುದಿದು ಅಗ್ನಿಪರ್ವತವಾಗಿದ್ದಾರೆ. ಏನು ಮಾಡಲಾಗದೆ ಬಡವರ ಸ್ಥಿತಿಯನ್ನು ಕಣ್ಣಿಂದ ನೋಡಲಾಗದೆ ಮುಗಿಲತ್ತ ಕೈಚಾಚಿ ನಿಂತಿರುವ ಕವಯಿತ್ರಿ ಧಗಧಗಿಸಿ ಉರಿವ ಜ್ವಾಲಾಮುಖಿಯಾಗಿದ್ದೇನೆಂದಿದ್ದಾರೆ. ಬಡವರ ಪರವಾಗಿ ಕವಯಿತ್ರಿಯ ಕಾಳಜಿ ಇಲ್ಲಿ ಸಶಕ್ತವಾಗಿ ಹೊರಹೊಮ್ಮಿದೆ.

೨. ‘ಒಮ್ಮೆ ನಗುತ್ತೇವೆ’ ಎಂಬ ಕವಿತೆಯಲ್ಲಿ ವ್ಯಕ್ತವಾಗುವ ನಗುವಿನ ವೈಶಿಷ್ಟ್ಯ ವಿವರಿಸಿ.

‘ಒಮ್ಮೆ ನಗುತ್ತೇವೆ’ ಎಂಬ ಕವಿತೆಯಲ್ಲಿ ಶ್ರೀಮತಿ ಸುಕನ್ಯಾ ಮಾರುತಿಯವರು ವಿವರಿಸಿರುವ ನಗುವು ಅತ್ಯಂತ ವಿಶಿಷ್ಟ ವಾದುದು. ಅದು ಸಮಷ್ಟಿಯ ಹಿತವನ್ನು ಆಶಯವಾಗುಳ್ಳ ನಗು. ಕಷ್ಟದಲ್ಲಿ ಬೇಯುತ್ತಿರುವ ಜೀವಗಳಲ್ಲಿ ನೆಮ್ಮದಿಯ ನಗು ಮೂಡಿದಾಗ ಅರಳುವ ನಗು. ಎಂದೆಂದೂ ಶಾಶ್ವತವಾಗಿ ಉಳಿಯುವ ಕೊನೆಯಿಲ್ಲದ-ಮೊನೆಯಿಲ್ಲದ ನಗು. ಆಕಾಶದಲ್ಲಿ ಕಾರ್ಮೋಡ ಕವಿಸುವ ನಗು, ಮಳೆಸುರಿಸುವ-ಬೆಳೆಬೆಳೆಸುವ-ಹೊಳೆಹರಿಸುವ ನಗು. ದನಗಳು, ಜನಗಳು ಎಲ್ಲರೂ ಕೂಡಿ ನಗುತ್ತೇವೆ. ಒಬ್ಬರೇ ನಗು ನಗುವಲ್ಲ. ಅದು ಎಲ್ಲರೂ ಕೂಡಿ ನಗುವ ನಗುವದು ಎಂದು ಕವಯಿತ್ರಿ ನಗುವಿನ ವೈಶಿಷ್ಟ್ಯವನ್ನು ವಿವರಿಸಿ ಹೇಳಿದ್ದಾರೆ.

ಹೆಚ್ಚುವರಿ ಪ್ರಶ್ನೆಗಳು:

೩. ಕವಯಿತ್ರಿ ತನ್ನವರ ನೋವನ್ನು ಹೋಗಲಾಡಿಸಲು ಏನೇನು ಮಾಡುತ್ತೇನೆಂದು ಹೇಳುತ್ತಾರೆ?

ಕವಯಿತ್ರಿಯು ತನ್ನವರ ನೋವನ್ನು ಸರ್ವನಾಶ ಮಾಡಲು ವಿಶ್ವವನ್ನೇ ಮುಳುಗಿಸುವ ಛಲ ತೊಡುತ್ತಾರೆ. ಬೆಂಕಿ ನಾಲಗೆ ಚಾಚಿ ತನ್ನವರ ದಾರಿದ್ರ್ಯವನ್ನು ಆಪೋಶನ ತೆಗೆದುಕೊಂಡು ಅವರನ್ನು ಪಾರುಮಾಡಿ, ನಗಿಸುವೆನೆಂದಿದ್ದಾರೆ. ಧಗೆಯಿಂದ, ಹೊಗೆಯಿಂದ ಪಾರು ಮಾಡಿ ತನ್ನವರನ್ನು ನಗಿಸುತ್ತೇನೆ. ಎಲ್ಲರೂ ಕೂಡಿ ಆಕಾಶದಲ್ಲಿ ಕಾರ್ಮೋಡ ಕವಿಸಿ, ಮಳೆ ಸುರಿಸಿ, ಹೊ ಹರಿಸುವ ನಗುವನ್ನು ನಗುವುದಾಗಿ ಕವಯಿತ್ರಿ ಹೇಳಿದ್ದಾರೆ. ಬಡವರಲ್ಲಿ, ನೊಂದವರಲ್ಲಿ, ಮುಗ್ಧ ಜೀವಿಗಳಲ್ಲಿ ನಗುವನ್ನು ಉಕ್ಕಿಸಿ ಅವರ ಬದುಕನ್ನು ಸಂತೋಷದಲ್ಲಿರಿಸಬೇಕೆಂಬ ಆಶಯ ಕವಯಿತ್ರಿಯದಾಗಿದೆ.

ಭಾಷಾಭ್ಯಾಸ:

೧. ಪದಬಿಡಿಸಿ ಬರೆಯಿರಿ: ಕಂಬನಿ, ಕಾರ್ಮೋಡ.

ಕಂಬನಿ = ಕಣ್ + ಪನಿ

ಕಾರ್ಮೋಡ = ಕಾರ್ + ಮೋಡ.

೨. ನಾನಾರ್ಥ ಗಮನಿಸಿ:

ಹೊಳೆ – ನದಿ, ಕಾಂತಿ.

೩. ಅನುಕರಣಾವ್ಯಯಗಳನ್ನು ಗಮನಿಸಿ:

ಕತಕತ, ಧಗಧಗ.

ಕೆಳಗಿನ ಪದ್ಯದ ಭಾವಾರ್ಥವನ್ನು ಬರೆಯಿರಿ:

೧. ದನಗಳಿಗೆ ಮೇವಿಲ್ಲ

ಜನಗಳಿಗೆ ನೀರಿಲ್ಲ

ಗಂಜಿಗೂ ಗತಿಯಿಲ್ಲ,

ನನ್ನವರು

ಸತ್ತ ದನಗಳ

ಕಿತ್ತು ತಿನ್ನುವುದನ್ನು

ಕಣ್ಣಾರೆ ಕಾಣುತ್ತ

ಕತಕತನೆ ಕುದಿವ

ಅಗ್ನಿಪರ್ವತವಾಗಿದ್ದೇನೆ.

ಬಂಡಾಯ ಸಾಹಿತ್ಯ ಸಂದರ್ಭದ ಪ್ರಮುಖ ಕವಯತ್ರಿಯರಲ್ಲೊಬ್ಬರಾದ ಶ್ರೀಮತಿ ಸುಕನ್ಯಾ ಮಾರುತಿಯವರು ರಚಿಸಿರುವ ‘ಒಮ್ಮೆನಗುತ್ತೇವೆ’ ಎಂಬ ಕವಿತೆಯಿಂದ ಈ ಮೇಲಿನ ಪದ್ಮಭಾಗವನ್ನು ಸ್ವೀಕರಿಸಲಾಗಿದೆ.

ಭೀಕರ ಬರಗಾಲವು ಜನರನ್ನು, ಇತರೆ ಸಹಜೀವಿಗಳನ್ನು ಕಷ್ಟಕ್ಕೆ ನೂಕಿರುವುದನ್ನು ಕಂಡು ಕವಿತೆಯ ನಾಯಕಿಯು ಕೋಪದ ಅಗ್ನಿವರ್ತತವಾಗಿರುವುದನ್ನು ವಿವರಿಸುವ ಸಂದರ್ಭವನ್ನು ಈ ಮೇಲಿನ ಪದ್ಯವು ಒಳಗೊಂಡಿದೆ.

“ದನಗಳಿಗೆ ತಿನ್ನಲು ಮೇವಿಲ್ಲ. ಜನರಿಗೆ ಕುಡಿಯಲು ನೀರಿಲ್ಲ. ಗಂಜಿಗೂ ಗತಿ ಇಲ್ಲದ ಜನರು ಸತ್ತ ದನಗಳನ್ನೇ ಕಿತ್ತು ಕಿತ್ತು ತಿಂದು ಹೊಟ್ಟೆಹೊರೆಯುವುದನ್ನು ಕಣ್ಣಾರೆ ಕಾಣುತ್ತಿರುವುದರಿಂದ ಕತಕತನೆ ಕುದಿಯುವ ಅಗ್ನಿಪರ್ವತವಾಗಿದ್ದೇನೆ” ಎಂಬುದಾಗಿ ಕವಿತೆಯ ನಾಯಕಿ ಹೇಳಿರುವ ಮಾತುಗಳು ಈ ಪದ್ಯದ ಭಾವಾರ್ಥವಾಗಿದೆ.

ಜನರ ಬಗ್ಗೆ, ದನಗಳಂತಹ ಮುಗ್ಧ ಜೀವಿಗಳ ಬಗೆಗೆ ಕವಿತೆಯ ನಾಯಕಿಗಿರುವ ಕಾಳಜಿಯು ಇಲ್ಲಿ ವ್ಯಕ್ತವಾಗಿದೆ. ಇವರೆಲ್ಲರನ್ನೂ ಸಂಕಷ್ಟಕ್ಕೆ ಈಡುಮಾಡಿರುವ ಭೀಕರ ಬರಗಾಲದ ಬಗ್ಗೆ ಅಪಾರವಾದ ಕೋಪ ಆವರಿಸಿದೆ. ಆಗ್ನಿಪರ್ವತವೇ ತಾವಾಗಿದ್ದೇವೆಂಬ ಅವರ ಮಾತಿನಲ್ಲಿ ಸಹಜೀವಿಗಳ ಬಗೆಗಿನ ಕಾಳಜಿ, ಮಮಕಾರಗಳು ವ್ಯಕ್ತವಾಗಿರುವುದು ಇಲ್ಲಿ ಸ್ವಾರಸ್ಯಕರ ಸಂಗತಿಯಾಗಿದೆ. ಕೇವಲ ತನ್ನ ಸುಖವನ್ನು ಮಾತ್ರ ಗಮನಿಸುವ ಸ್ವಾರ್ಥಿಯಾಗದೆ ಇತರರ ಹಿತವನ್ನು ಬಯಸುವ ಸಂವೇದನೆಯನ್ನು ಒಳಗೊಂಡಿರುವ ವ್ಯಕ್ತಿತ್ವ ಮುಖ್ಯವೆಂಬುದು ಈ ಸಂದರ್ಭದಿಂದ ಅರಿವಾಗುತ್ತದೆ.

ಕವಿತೆಯ ಸಾರಾಂಶ ಮತ್ತು ವಿಮರ್ಶೆ

ಶ್ರೀಮತಿ ಸುಕನ್ಯಾ ಮಾರುತಿ ಅವರು ಬರೆದಿರುವ ‘ಒಮ್ಮೆ ನಗುತ್ತೇವೆ’ ಎಂಬ ಕವಿತೆಯು ವ್ಯವಸ್ಥೆಯ ವಿರುದ್ಧ ಎತ್ತಿರುವ ಬಂಡಾಯದ ದನಿಯಾಗಿದೆ. ಸಾಮಾಜಿಕ ಅಸಮಾನತೆಯು ಬಡವರನ್ನು ಹಸಿವಿನ ಸುಳಿಯಲ್ಲಿ ಸಿಲುಕಿಸಿ ನರಳಿಸುತ್ತಿದ್ದ. ಅವರ ಮೊಗದಲ್ಲಿ ನಗೆ ಅರಳಬೇಕಾದರೆ ಮೂಲಭೂತ ಸೌಕರ್ಯಗಳನ್ನು ಮೊದಲು ಒದಗಿಸಬೇಕು. ಆ ಮೂಲ ಹೊರೆಯಾಗಿರುವ ಅವರ ಬದುಕಿನಲ್ಲಿ ನಗೆ ಮೂಡಿಸಬೇಕೆಂಬ ಕಳಕಳಿಯನ್ನು ಕವಯಿತ್ರಿ ಇಲ್ಲಿ ತೋರಿದ್ದಾರೆ.

೧. ದನಗಳಿಗೆ ಮೇವಿಲ್ಲ

ಜನಗಳಿಗೆ ನೀರಿಲ್ಲ

ಗಂಜಿಗೂ ಗತಿಯಿಲ್ಲ

ನನ್ನವರು

ಸತ್ತ ದನಗಳ

ಕಿತ್ತು ತಿನ್ನುವುದನ್ನು

ಕಣ್ಣಾರೆ ಕಾಣುತ್ತ

ಕತಕತನೆ ಕುದಿವ

ಅಗ್ನಿಪರ್ವತವಾಗಿದ್ದೇನೆ.

ಭೀಕರವಾದ ಬರಗಾಲ ಒದಗಿ ಸಹ ಜೀವಿಗಳು ಪರಿತಪಿಸುವುದನ್ನು ನೋಡಿ ಕವಯಿತ್ರಿಗೆ ನಗು ಮಾಯವಾಗಿ ಅಗ್ನಿಪರ್ವತವಾಗಿರುವ ಅನುಭವವಾಗಿದೆ. ಮೂಕ ಮುಗ್ಧಜೀವಿಗಳಾದ ದನಕರುಗಳು ತಿನ್ನಲು ಮೇವಿಲ್ಲದೆ ಸಾಯುತ್ತಿದೆ. ಜನರನ್ನು ಬಡತನ ಕಿತ್ತು ತಿನ್ನುತ್ತಿದೆ. ಕುಡಿಯಲು ನೀರಾಗಲಿ, ಗಂಜಿಯಾಗಲಿ ಗತಿಯಿಲ್ಲದ ಜನರು ಹೊಟ್ಟೆ ತುಂಬಿಸಿಕೊಳ್ಳಲು ಸತ್ತ ದನಗಳನ್ನು ಕಿತ್ತು ಕಿತ್ತು ತಿನ್ನುತ್ತಿರುವುದನ್ನು ಕಣ್ಣಾರೆ ಕಂಡ ಕವಯಿತ್ರಿಯು ಕುದಿನ ಅಗ್ನಿಪರ್ವತವಾಗಿದ್ದಾರೆ. ಮಳೆಯಿಲ್ಲದೆ, ಬೆಳೆಯಿಲ್ಲದೆ ಒಣಗಿರುವ ಈ ಸ್ಥಿತಿಯನ್ನು ಕಂಡು ಕವಯಿತ್ರಿಗೆ ತೀವ್ರ ನಿರಾಸೆಯಾಗಿದೆ.

೨. ಏನೂ ಮಾಡಲಾಗದೆ

ಅವರ ಸ್ಥಿತಿ ನೋಡಲಾಗದೆ

ಅವರಿಗಾಗಿ

ಮುಗಿಲತ್ತ ಕೈಚಾಚಿ

ನಿಂತಿದ್ದೇನೆ, ಧಗಧಗಿಸಿ ಉರಿವ ಜ್ವಾಲಾಮುಖಿಯಾಗಿದ್ದೇನೆ.

ನನ್ನವರಿಗಾಗಿ

ನಾನೆಂದೂ ನಂಬಿರದ

ದೇವರಲ್ಲಿ

ಮೊರೆಯಿಡುತ್ತೇನೆ,

ಕಂಡೇ ಇರದ

ದೈವದ ಸಹಾಯ ಬೇಡುತ್ತೇನೆ

ದನಕರುಗಳು – ಜನರು ಪಡುವ ಬವಣೆಯನ್ನು ಕಂಡು ಏನೂ ಮಾಡಲಾಗದ ಅಸಹಾಯಕತೆ ಕವಯಿತ್ರಿಯದು. ನೊಂದವರತ್ತ ಕಣ್ಣುಹಾಯಿಸಿ ನೋಡಲಾರದೆ ಕವಯಿತ್ರಿ ಅವರಿಗಾಗಿ ಆಕಾಶದತ್ತ ಕೈಚಾಚಿ ಮಳೆಗಾಗಿ ದೇವರನ್ನು ಪ್ರಾರ್ಥಿಸಿದ್ದಾರೆ. ಇಂತಹ ಸ್ಥಿತಿಯನ್ನು ನಿರ್ಮಾಣ ಮಾಡಿರುವ ದೇವರು-ಪ್ರಕೃತಿ-ವ್ಯವಸ್ಥೆ ಎಲ್ಲದರ ಬಗ್ಗೆಯೂ ಅತೀವ ಕೋಪಗೊಂಡಿರುವ ಕವಯಿತ್ರಿ ಧಗಿಧಗಿಸಿ ಉರಿಯುವ ಜ್ವಾಲಾಮುಖಿಯಾಗಿದ್ದಾರೆ. ಅವರಿಗೆ ದೇವರಲ್ಲಿ ಎಂದಿಗೂ ನಂಬಿಕೆ ಇರಲಿಲ್ಲ. ಆದರೂ ಜನರ ಕಷ್ಟ ನೋಡಲಾಗದೆ ಎಂದೂ ಕಾಣದ. ನಂಬಿರದ ದೇವರಲ್ಲಿ ಮೊರೆಯಿಟ್ಟು ಸಹಾಯವನ್ನು ಬೇಡುತ್ತಿರುವುದಾಗಿ ಕವಯಿತ್ರಿ ಹೇಳಿದ್ದಾರೆ.

೩. ಯಾರೂ ನನ್ನವರ

ಕೈ ಹಿಡಿಯದಾಗ

ನನ್ನ ಕಂಬನಿಯ

ಲಾವಾರಸದಲ್ಲಿ

ವಿಶ್ವವನ್ನೇ

ಮುಳುಗಿಸಿ ಬಿಡುವ

ಛಲ ಮೂಡುತ್ತದೆ.

ಬೆಂಕಿ ನಾಲಗೆ ಚಾಚಿ

ನನ್ನವರ ದಾರಿದ್ರವನ್ನೇ

ಆಪೋಶನ ಮಾಡುತ್ತೇನೆ.

ಅವರ ದೀನ

ದಲಿತತನಕ್ಕೆ ಧಿಕ್ಕಾರವಿರಲಿ!

ಅವರ ನೋವನ್ನೇ

ಸರ್ವನಾಶ ಮಾಡುತ್ತೇನೆ.

ಮೊದಲಿಗೆ ಕಾಣದ ದೇವರನ್ನು ಕಷ್ಟ ನಿವಾರಣೆಗಾಗಿ ಪ್ರಾರ್ಥಿಸಿದ ಕವಯಿತ್ರಿಗೆ ದೇವರು ಜನರನ್ನು ಕಾಪಾಡುವುದಿಲ್ಲವೆಂಬುದು ಖಚಿತವಾದಾಗ, ಯಾರೂ ಸಹಾಯಕ್ಕೆ ಹಸ್ತವನ್ನು ಚಾಚದಿದ್ದಾಗ ತಮ್ಮ ಕಣ್ಣೀರಿನ ಲಾವಾರಸದಲ್ಲಿ ಇಡೀ ವಿಶ್ವವನ್ನೇ ಮುಳುಗಿಸಿ ಬಿಡಬೇಕೆಂಬ, ಜಗತ್ತನ್ನೇ ಸರ್ವನಾಶ ಮಾಡಬೇಕೆಂಬ ಛಲ ಮೂಡುತ್ತದೆ. ಬೆಂಕಿ ನಾಲಗೆಯನ್ನು ಚಾಚಿ ತಮ್ಮವರು ಅನುಭವಿಸುತ್ತಿರುವ ದಾರಿದ್ರ್ಯವನ್ನೇ ನುಂಗಿ ನೊಣೆಯಬೇಕೆಂಬ ಭಾವ ಮೂಡುತ್ತದೆ. ಕ್ರೋಧದಿಂದ ಕವಯಿತ್ರಿ ಬಡಜನರ ದೀನ ದಲಿತತನಕ್ಕೆ ಧಿಕ್ಕಾರ ಕೂಗುತ್ತಾರೆ. ಮಾತ್ರವಲ್ಲ ಅವರ ನೋವನ್ನೇ ಸರ್ವನಾಶ ಮಾಡುವುದಾಗಿ ಹೇಳಿದ್ದಾರೆ.

೪. ನನ್ನವರನ್ನು

ನನ್ನ ಪ್ರೀತಿಯ

ಜನರನ್ನು

ಎಲ್ಲರೂ ನಾನೇ

ಆದವರನ್ನು

ನಾನು ನಗಿಸುತ್ತೇನೆ.

ಧಗೆಯಿಂದ

ಹೊರನುಗಿಸುತ್ತೇನೆ

ಹೊಗೆಯಿಂದ

ಪಾರುಮಾಡುತ್ತೇನೆ

ಅವರನ್ನು ನಗಿಸುತ್ತೇನೆ.

ಕವಯಿತ್ರಿಗೆ ದೀನದಲಿತರ ಬಗೆಗೆ ಅಪಾರವಾದ ಕಾಳಜಿಯಿದೆ. ಆದ್ದರಿಂದ ಅವರು ದಲಿತರನ್ನು ‘ನನ್ನವರು, ನಾನೇ ಆದವರು’ ಎಂದು ಹೇಳಿಕೊಂಡಿದ್ದಾರೆ. ಅವರಲ್ಲಿ ನಗುವನ್ನು ಮೂಡಿಸಬೇಕು ಎಂಬ ಆಸೆ ಕವಯಿತ್ರಿಯದು. ಅವರು ಪಡುತ್ತಿರುವ ಬವಣೆಯಿಂದ ಹೊರತಂದು, ಕಷ್ಟವೆಂಬ ಹೊಗೆಯಲ್ಲಿ ಉಸಿರುಕಟ್ಟಿ ನರಳುತ್ತಿರುವವರನ್ನು ಪಾರುಮಾಡಿ, ಅವರು ಸುಖವಾಗಿ ನಗುನಗುತ್ತಿರಬೇಕೆಂಬ ಆಶಯ ಕವಯಿತ್ರಿಯದಾಗಿದೆ. ಅವರ ಮೊಗದಲ್ಲಿ ನಗುವನ್ನು ಕಾಣಬೇಕೆಂಬ ಹಂಬಲ ಕವಯಿತ್ರಿಯದಾಗಿದೆ.

೫. ಆಗ ನಾನು ನಗುತ್ತೇನೆ

ಕೊನೆಯಿಲ್ಲದ ನಗು

ಮೊನೆಯಿಲ್ಲದ ನಗು

ಆಕಾಶದಲ್ಲಿ

ಕಾರ್ಮೋಡ ಕವಿಸುವ ನಗು

ಮಳೆ ಸುರಿಸುವ ನಗು

ಹೊಳೆ ಹರಿಸುವ ನಗು

ಬೆಳೆ ಬೆಳೆಸುವ ನಗು

ಧನ, ಜನ ಎಲ್ಲ ಕೂಡಿ

ನಗುತ್ತೇವೆ,

ಒಮ್ಮೆನಕ್ಕೇ ನಗುತ್ತೇವೆ.

ಕ್ರೋಧಗೊಂಡಿರುವ, ಜ್ವಾಲಾಮುಖಿಯಾಗಿರುವ ಕವಯಿತ್ರಿಯ ಮನಸ್ಸು ಪ್ರಶಾಂತವಾಗಿ ನಗು ಮೂಡಬೇಕಾದರೆ ಮೊದಲಿಗೆ ಬಡವರ ಬದುಕು ಹಸನಾಗಬೇಕು. ಆಗ ತಾವು ನಗುನಗುತ್ತಲೇ ಇರುವುದಾಗಿ ಕವಯಿತ್ರಿ ಹೇಳಿದ್ದಾರೆ. ಅವರು ನಗುವ ಕೊನೆಯಿಲ್ಲದ ನಗು ಯಾವುದೆಂದರೆ ಆಕಾಶದಲ್ಲಿ ಕಾರ್ಮೋಡವನ್ನು ಕವಿಸುವ ನಗು, ಭೂಮಿಯಲ್ಲಿ ಬೆಳೆ ಬೆಳೆಯುವ ನಗು. ಹೀಗೆ ಮಳೆ-ಬೆಳೆಗಳು ಸಮೃದ್ಧವಾಗಿರುವಾಗ ವನ, ಜನಗಳೆಲ್ಲರೂ ಸಂತೋಷದಿಂದ ನಗುನಗುತ್ತಾ ಬಾಳುವ ಸಮಯ ಬರುತ್ತದೆ. ಆಗ ಅವರೊಂದಿಗೆ ನಾನೂ ಕೂಡಿ ನಕ್ಕೇ ನಗುತ್ತೇನೆ ಎಂದು ಕವಯಿತ್ರಿ ಹೇಳಿರುವರು. ಸಮಷ್ಟಿಯ ಹಿತದಲ್ಲಿ ತನ್ನ ನಗು ಅಡಗಿದೆಯೆಂಬುದನ್ನು ಕವಯಿತ್ರಿ ಇಲ್ಲಿ ವಿವರಿಸಿದ್ದಾರೆ.

ಶಬ್ದಾರ್ಥ: ಕುದಿ – ಬೇಯು; ಮೊರೆಯಿಡು – ಬೇಡು, ಯಾಚಿಸು; ಕಂಬನಿ – ಕಣ್ಣೀರು; ಲಾವಾರಸ – ಭೂಮಿಯಿಂದ ಹೊರಬರುವ ಜ್ವಾಲಾಮುಖ; ಧಗೆ – ಹೊಗೆ; ಹೊಳೆ – ಕಾಂತಿ; ಅಪೋಶನ – ಊಟದ ಮೊದಲು ಮತ್ತು ನಂತರ ಅಂಗೈಯಲ್ಲಿ ಹಾಕಿಕೊಂಡು ಕುಡಿಯುವ ನೀರು/ಹಾಲು.

ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ:

ಒಮ್ಮೆನಗುತ್ತೇವೆ – ಸುಕನ್ಯಾ ಮಾರುತಿ

ಒಮ್ಮೆನಗುತ್ತೇವೆ – ನಾನೆಂಬ ಮಾಯೆ

ನಾನೆಂಬ ಮಾಯೆ – ಸುಕನ್ಯಾ ಮಾರುತಿ

ದನಗಳಿಗೆ ಮೇವಿಲ್ಲ – ಜನಗಳಿಗೆ ನೀರಿಲ್ಲ

ಮಳೆ ಸುರಿಸುವ ನಗು – ಹೊಳೆ ಹರಿಸುವ ನಗು.

Leave a Comment