2nd Puc History Artikate Mattu Shikshanada Mele British Adalitada Prabhava Chapter Notes| ದ್ವಿತೀಯ ಪಿಯುಸಿ ಇತಿಹಾಸ 7.3 ಆರ್ಥಿಕತೆ ಮತ್ತು ಶಿಕ್ಷಣದ ಮೇಲೆ ಬ್ರಿಟಿಷ್‌ ಆಡಳಿತದ ಪ್ರಭಾವ ಪಾಠದ ನೋಟ್ಸ್

2nd Puc History Artikate Mattu Shikshanada Mele British Adalitada Prabhava Chapter Notes| ದ್ವಿತೀಯ ಪಿಯುಸಿ ಇತಿಹಾಸ 7.3 ಆರ್ಥಿಕತೆ ಮತ್ತು ಶಿಕ್ಷಣದ ಮೇಲೆ ಬ್ರಿಟಿಷ್‌ ಆಡಳಿತದ ಪ್ರಭಾವ ಪಾಠದ ನೋಟ್ಸ್ 12ನೇ ತರಗತಿ ಅಧ್ಯಾಯ 7.3 ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ 2nd puc history notes in kannada Medium 12th Std History 7.3 Lesson Question Answer in Kannda Karnataka Second 7.3 Chapter Notes Guide Pdf Download in Kannada kseeb solutions for class 12 history kannada medium chapter 7.3

Artikate Mattu Shikshanada Mele British Adalitada Prabhava

1.ಶಾಶ್ವತ ಕಂದಾಯ ಪದ್ಧತಿ ಜಾರಿಗೊಳಿಸಿದವರು

ಎ) ಲಾರ್ಡ್‌ವೆಲ್ಲೆಸ್ಲಿ

ಬಿ) ಲಾರ್ಡ್‌ ಡಾಲ್‌ಹೌಸಿ

ಡಿ) ಲಾರ್ಲ್‌ವೆಲ್ಲಿಂಗ್‌ಟನ್

2. ‘ಪಾವರ್ಟಿ ಅಂಡ್ ಅನ್ ಬ್ರಿಟಿಶ್ ರೂಲ್ ಇನ್ ಇಂಡಿಯಾ’ ಪುಸ್ತಕ ಬರೆದವರು.

ಬಿ) ಗಾಂಧೀಜಿ

ಸಿ) ನೆಹರೂ

ಡಿ) ಮೌಲಾನಾ ಕಲಾಂ

3. ವುಡ್ ವರದಿ ಜಾರಿಗೆ ಬಂದ ವರ್ಷ

ಎ) 1853

ಸಿ) 1855

ಡಿ) 1856

4. ಸೋರಿಕೆ ಸಿದ್ಧಾಂತದ ಪ್ರತಿಪಾದಕ

ಎ) ನೆಹರು

ಬಿ) ಪಟೇಲ್

ಡಿ) ಇಂದಿರಾಗಾಂಧಿ

5. ಲಾರ್ಡ್ ಮೆಕಾಲೆ ವರದಿ ರೂಪುಗೊಂಡಿದ್ದು

ಎ) 1834

ಬಿ) 1833

ಸಿ) 1832

1.ಮೆಕಾಲೆ ವರದಿ ರೂಪುಗೊಂಡಿದ್ದು 1835

2. 1854ರ ವುಡ್ ವರದಿಯನ್ನು ಸಿದ್ದಪಡಿಸಿದವರು ಸರ್‌ಚಾರ್ಲ್ಸ್‌ವುಡ್

3. ವುಡ್‌ವರದಿ ಜಾರಿಗೆ ಬಂದ ವರ್ಷ 1854

4. ‘ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ಮಹಾಸನ್ನದು’ ಎಂಬುದಾಗಿ ಕರೆಯಲಾಗುವ ವರದಿ 1854ರ ವುಡ್ ವರದಿ

5. ಸೋರಿಕೆ ಸಿದ್ಧಾಂತದ ಪ್ರತಿಪಾದಕ ದಾದಾಬಾಯಿ ನವರೋಜಿ

6. ದಾದಾಬಾಯಿಯವರ ಕೃತಿ ‘ಪಾವರ್ಟಿ ಅಂಡ್ ಆನ್‌ಬ್ರಿಟಿಷ್ ರೂಲ್ ಇನ್ ಇಂಡಿಯಾ’

7. ಶಾಶ್ವತ ಕಂದಾಯ ಪದ್ಧತಿ ಜಾರಿಗೊಳಿಸಿದವರು ಲಾರ್ಡ್ ಕಾರ್ನ್‌ವಾಲೀಸ್

ಕ್ರಮ ಸಂಖ್ಯೆಉತ್ತರಗಳು
1ಶಾಶ್ವತ ಕಂದಾಯಸೋರಿಕೆ ಸಿದ್ದಾಂತಲಾರ್ಡ್‌ ಕಾರ್ನ್‌ ವಾಲೀಸ್
2ವುಡ್‌ ವರದಿ1854ರ ವುಡ್‌ ವರದಿ1854
3ಭಾರತದಲ್ಲಿ ಇಂಗ್ಲೀಷ್‌ ಶಿಕ್ಷಣ ಮಹಾಸನ್ನದು18351854ರ ವುಡ್‌ ವರದಿ
4ಮೆಕಾಲೆ ವರದಿ18541835
5ದಾದಾಬಾಯಿಲಾರ್ಡ್‌ ಕಾರ್ನ್‌ ವಾಲೀಸ್ಸೋರಿಕೆ ಸಿದ್ದಾಂತ

1.ಶಾಶ್ವತ ಕಂದಾಯ ಪದ್ಧತಿಯನ್ನು ಜಾರಿಗೊಳಿಸಿದವರು ಯಾರು?

ಲಾರ್ಡ್‌ ಕಾರ್ನ್‌ವಾಲೀಸ್.

2. ವುಡ್‌ವರದಿ ರಚನೆಯಾದದ್ದು ಯಾವ ವರ್ಷದಲ್ಲಿ?

ಸಾ.ಶ. 1854ರಲ್ಲಿ

3. ಸೋರಿಕೆ ಸಿದ್ದಾಂತವನ್ನು ಪ್ರತಿಪಾದಿಸಿದವರು ಯಾರು?

ದಾದಾಬಾಯಿ ನವರೋಜಿ.

4. ದಾದಾಬಾಯಿ ನವರೋಜಿಯವರು ಬರೆದ ಕೃತಿ ಯಾವುದು?

‘ಪಾವರ್ಟಿ ಅಂಡ್ ಅನ್‌ಬ್ರಿಟಿಷ್ ರೂಲ್ ಇನ್ ಇಂಡಿಯಾ’.

5. ‘ಭಾರತದಲ್ಲಿ ಇಂಗ್ಲೀಷ್ ಶಿಕ್ಷಣದ ಮಹಾಸನ್ನದು’ ಎಂದು ಯಾವುದನ್ನು ಕರೆಯಲಾಗಿದೆ?

1854ರ ವುಡ್‌ನ ವರದಿ.

6. ಮೆಕಾಲೆ ವರದಿ ಯಾವಾಗ ರೂಪುಗೊಂಡಿತು?

1835

1.ಭಾರತದಲ್ಲಿ ಬ್ರಿಟಿಷರು ಜಾರಿಗೆ ತಂದ ಯಾವುದಾದರೂ ಎರಡು ಭೂ ಕಂದಾಯ ಪದ್ಧತಿಗಳನ್ನು ಹೆಸರಿಸಿ.

ಜಮೀನ್ದಾರಿ ಪದ್ಧತಿ, ರೈತಾಪಿ ವ್ಯವಸ್ಥೆ.

2. ರೈತವಾರಿ ಪದ್ಧತಿ ಎಂದರೇನು?

ರೈತರು ಅಥವಾ ಕೃಷಿಕರಿಗೆ ನಿಯಮಿತವಾಗಿ ಕಂದಾಯವನ್ನು ಕೊಡುವ ಒಪ್ಪಂದದ ಮೇರೆಗೆ ಭೂಮಾಲಿಕತ್ವವನ್ನು ನೀಡುವುದೇ ರೈತವಾರಿ ಪದ್ಧತಿ.

3. ಮಹಲ್‌ವಾರಿ ಪದ್ಧತಿ ಎಂದರೇನು?

ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಹಳ್ಳಿಗಳ ಕಂದಾಯ ಘಟಕಕ್ಕೆ ಮಹಲ್ ಎಂದು ಕರೆಯುತ್ತಿದ್ದು. ಮಹಲ್‌ನೊಳಗಿದ್ದ ಕೃಷಿಕನಿಗೆ ಒಟ್ಟಾರೆಯಾಗಿ ಭೂ ಮಾಲಿಕತ್ವ ಕೊಡುವುದೇ ಮಹಲ್‌ವಾರಿ ಪದ್ಧತಿ.

4. ಪೌರಾತ್ಯ ಸಾಹಿತ್ಯದ ಬಗ್ಗೆ ಮೆಕಾಲೆಯ ಅಭಿಪ್ರಾಯವೇನಾಗಿತ್ತು?

ಪೌರಾತ್ಯ ಕಲಿಕೆಯು ಪಾಶ್ಚಾತ್ಯ ಕಲಿಕೆಗಿಂತ ತೀರಾ ಕಳಪೆಯಾಗಿದೆ. ‘ಭಾರತ ಮತ್ತು ಅರೇಬಿಯಾದ ಸಮಸ್ತ ಪೌರಾತ್ಯ ಸಾಹಿತ್ಯ ಸೇರಿದರೂ ಯೂರೋಪಿನ ಉತ್ತಮ ಗ್ರಂಥಾಲಯ ಕಪಾಟೊಂದರ ಗ್ರಂಥಗಳಿಗೆ ಸಮನಾಗದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

1.ಸೋರಿಕೆ ಸಿದ್ಧಾಂತವನ್ನು ವಿವರಿಸಿ.

ಭಾರತದ ಕೃಷಿಯನ್ನು ಅಭಿವೃದ್ಧಿ ಪಡಿಸಲು ಬ್ರಿಟಿಷರಿಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಅವರು ಇಂಗ್ಲೆಂಡಿನಲ್ಲಿರುವ ತಮ್ಮ ಕಾರ್ಖಾನೆಗಳಿಗೆ ಕಚ್ಛಾ ವಸ್ತುಗಳನ್ನು ದೊರಕಿಸಿಕೊಳ್ಳಲು ಮತ್ತು ತಮ್ಮ ವಾಣಿಜ್ಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮಾತ್ರ ಆಸಕ್ತರಾಗಿದ್ದರು. ಯೂರೋಪ್ ಮತ್ತು ಅಮೇರಿಕಾದ ಮಾರುಕಟ್ಟೆಗಳಲ್ಲಿ ಅಪಾರ ಬೇಡಿಕೆಯಿದ್ದ ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ಚಹಾ, ನೀಲಿ ಮುಂತಾದವುಗಳನ್ನು ಬೆಳೆಯಲು ಭಾರತೀಯ ಕೃಷಿಕರ ಮೇಲೆ ಒತ್ತಡ ಹೇರಿದರು.

  • ಉದ್ದೇಶ ಪೂರ್ವಕವಾಗಿಯೇ ಕೈಗಾರಿಕೆಗಳ ಸ್ಥಾಪನೆಯಲ್ಲಿ ಆಸಕ್ತಿ ತೋರಿಸದೇ ಭಾರತವನ್ನು ಕಚ್ಛಾವಸ್ತುಗಳ ಮೂಲವಾಗಿ ಮತ್ತು ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆಯನ್ನಾಗಿ ಪರಿವರ್ತಿಸಿದರು. ಭಾರತೀಯ ಕರಕುಶಲ ವಸ್ತುಗಳು ಇಂಗ್ಲೆಂಡಿನ ಯಂತ್ರದಿಂದ ಮಾಡಿದ ಉತ್ಪಾದನೆಗಳೊಂದಿಗೆ ಸ್ಪರ್ಧಿಸಲಾಗಲಿಲ್ಲ. ಕಸುಬುದಾರರ, ಕುಶಲಕರ್ಮಿಗಳು ರೈತರಾಗಿ ಇಲ್ಲವೇ ಕೃಷಿ ಕೂಲಿ ಕಾರ್ಮಿಕರಾಗಿ ಹಸಿವೆಯಿಂದ ಬಳಲುವಷ್ಟು ಕಡಿಮೆ ಕೂಲಿಗೆ ಕೆಲಸ ಮಾಡಬೇಕಾಯಿತು.
  • ಬ್ರಿಟಿಷರು ಜಾರಿಗೆ ತಂದ ಹೊಸ ರೈತವಾರಿ ಪದ್ಧತಿ. ಮಹಲ್‌ವಾರಿ ಪದ್ದತಿಗಳು ಲೇವಾದೇವಿದಾರರ ಮತ್ತು ಜಮೀನ್ದಾರರ ಪರವಾಗಿದಸ್ಟು ರೈತರು ಶೋಷಣೆಗೆ ಒಳಗಾಗಿ ಗ್ರಾಮಗಳ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಗಳು ಕುಂಠಿತಗೊಂಡವು.
  • ನಾಗರೀಕ ಮತ್ತು ಸೇವಾ ಅಧಿಕಾರಿಗಳ ವೇತನ ಮತ್ತು ನಿವೃತ್ತಿವೇತನ, ಸಾಲದ ಮೇಲಿನ ಬಡ್ಡಿ, ಬ್ರಿಟಿಷ್ ಬಂಡವಾಳ ಶಾಹಿಗಳ ಲಾಭ, ಆಡಳಿತದ ವೆಚ್ಚ ಇತ್ಯಾದಿ ಸಾಕಷ್ಟು ಸಂಪತ್ತು ಭಾರತದಿಂದ ಇಂಗ್ಲೆಂಡಿಗೆ ಹೊಳೆಯಂತೆ ಹರಿದುಹೋಯಿತು.
  • ಭಾರತದ ರಫಿಗಿಂತಲೂ ಇಂಗ್ಲೆಂಡಿನಿಂದ ಆಮದಿನ ಹೆಚ್ಚಳ ಹಾಗೂ ಭಾರತೀಯ ವಸ್ತುಗಳ ಮೇಲಿನ ಹೆಚ್ಚಿನ ತೆರಿಗೆಗಳು ಮತ್ತು ಬ್ರಿಟಿಷ್ ವಸ್ತುಗಳ ಮೇಲಿನ ಕಡಿಮೆ ತೆರಿಗೆಗಳಿಂದಾಗಿಯೂ ಸಂಪತ್ತಿನ ಸೋರಿಕೆಯಾಯಿತು.
  • ದಾದಾಬಾಯಿ ನವರೋಜಿಯವರು ತಮ್ಮ ‘ಪಾವರ್ಟಿಅನ್ ಬ್ರಿಟಿಷ್ ರೂಲ್ ಇನ ಇಂಡಿಯಾ’ ಕೃತಿಯಲ್ಲಿ ತಮ್ಮ ‘ಸೋರಿಕೆ ಸಿದ್ಧಾಂತ’ವನ್ನು ಮಂಡಿಸಿದ್ದಾರೆ.

2. ಬ್ರಿಟಿಷ್ ಆಡಳಿತವು ಭಾರತೀಯ ಶಿಕ್ಷಣದ ಮೇಲೆ ಬೀರಿದ ಪ್ರಭಾವವನ್ನು ಕುರಿತು ಬರೆಯಿರಿ.

ಯೂರೋಪಿಯನ್ನರು ಆಗಮಿಸುವ ಮುಂಚೆ ಭಾರತದಲ್ಲಿನ ಶಿಕ್ಷಣವು ಧರ್ಮಾಧರಿತವಾಗಿದ್ದು ಹಿಂದೂ ಪಾಠಶಾಲೆಗಳು, ಮುಸ್ಲಿಂ ಮದರಸಾಗಳಲ್ಲಿ ನಡೆಯುತ್ತಿತ್ತು. ಈಸ್ಟ್ ಇಂಡಿಯಾ ಕಂಪನಿಯು ಜನರಿಗೆ ಶಿಕ್ಷಣ ನೀಡಲು ಆಸಕ್ತಿ ತೋರದಿದ್ದರೂ ಸಹ ಬ್ರಿಟಿಷ್ ಸಂಸತ್ತು ಚಾರ್ಟರ್ ಕಾಯಿದೆಯನ್ನು ಅಂಗೀಕರಿಸಿ ಭಾರತದಲ್ಲಿನ ಶಿಕ್ಷಣದ ಅಭಿವೃದ್ಧಿಗೆ ವಾರ್ಷಿಕವಾಗಿ 1,00,000 ರೂಪಾಯಿಗಳನ್ನು ಒದಗಿಸಿತು. ಆದರೆ ಕಂಪನಿಯು ಪೌರತ್ಯರು (ಓರಿಯಂಟ್ ಸಿಸ್ಟರು) ಮಧ್ಯದ ಭಿನ್ನಾಭಿಪ್ರಾಯದಿಂದಾಗಿ ಈ ಹಣವನ್ನು ಖರ್ಚು ಮಾಡಲಿಲ್ಲ.

  • ಈ ವಿವಾದವು 1835ರವರೆಗೆ ಮುಂದುವರೆಯಿತು.

ಮೆಕಾಲೆ ವರದಿ 1835

ಗವರ್ನರ್ ಜನರಲ್ ಲಾರ್ಡ್ ವಿಲಿಯಂ ಬೆಂಟಿಂಕ್‌ನು ಈ ವಿವಾದವನ್ನು ಬಗೆಹರಿಸಲು ಮೆಕಾಲೆಯನ್ನು ನೇಮಕ ಮಾಡಿದ. ಈತನು ವರದಿಯನ್ನು ಸಲ್ಲಿಸಿ ಇಂಗ್ಲೀಷ್ ಶಿಕ್ಷಣದ ಬೆಂಬಲಿಗರ ಅಭಿಪ್ರಾಯಗಳನ್ನು ಬೆಂಬಲಿಸಿದನು. ಈತ ಭಾರತದಲ್ಲಿ ಪಾಶ್ಚಾತ್ಯ ಮಾದರಿಯ ಶಿಕ್ಷಣ ವ್ಯವಸ್ಥೆಯ ಬೆಳವಣಿಗೆ ಹಾಗೂ ಇಂಗ್ಲೀಷನ್ನು ಮಾಧ್ಯಮವಾಗಿಸಬೇಕೆಂದು ಪ್ರತಿಪಾದಿಸಿದನು.

  • ಈ ಶಾಸನವು ಶಿಕ್ಷಣದ ಮೂಲಕ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಹಾಗೂ ಈಸ್ಟ್ ಇಂಡಿಯಾ ಕಂಪನಿಯ ಕೆಲಸಕ್ಕೆ ಗುಮಾಸ್ತರನ್ನು ತಯಾರಿಸುವ ಉದ್ದೇಶವನ್ನು ಹೊಂದಿತ್ತು.

ವುಡ್‌ ವರದಿ -1854

ಭಾರತದಲ್ಲಿನ ಶಿಕ್ಷಣದ ಅಭಿವೃದ್ಧಿಯ ಮುಂದಿನ ಹಂತ 1854ರ ಸರ್ ಚಾರ್ಲ್ಸ್ವುಡ್‌ನಿಂದ ಸಿದ್ದಪಡಿಸಲ್ಪಟ್ಟ ‘ವುಡ್‌ನ ವರದಿ’ ಇದರ ಅಂಶಗಳೆಂದರೆ-

  1. ಕಂಪನಿಯು ಹಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಪಟ್ಟಣಗಳಲ್ಲಿ ಪ್ರೌಢಶಾಲೆ ಮತ್ತು ಜಿಲ್ಲಾ ಮಟ್ಟದಲ್ಲಿ ಕಾಲೇಜುಗಳನ್ನು ಆರಂಭಿಸಬೇಕು.
  2. ಪ್ರಾಥಮಿಕ ಶಿಕ್ಷಣವು ದೇಶೀಯ ಭಾಷೆಗಳಲ್ಲಿರಬೇಕು. ಪ್ರೌಢಶಾಲೆಗಳಲ್ಲಿ ಹಾಗೂ ಉನ್ನತಶಿಕ್ಷಣಕ್ಕೆ ಆಂಗ್ಲ ಮಾಧ್ಯಮವಿರಬೇಕು.
  3. ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವುದು.
  4. ಕಂಪನಿಯು ಎಲ್ಲಾ ಪ್ರಾಂತ್ಯಗಳಲ್ಲಿ ಶಿಕ್ಷಣದ ಮೇಲ್ವಿಚಾರಣೆಗೆ ‘ಸಾರ್ವಜನಿಕ ಶಿಕ್ಷಣ ಇಲಾಖೆ’ಯನ್ನು ಸ್ಥಾಪಿಸಬೇಕು.
  5. ಲಂಡನ್ ವಿಶ್ವವಿದ್ಯಾಲಯ ಮಾದರಿಯಲ್ಲಿ ಬಾಂಬೆ, ಮದ್ರಾಸ್ ಮತ್ತು ಕಲ್ಕತ್ತಾಗಳಲ್ಲಿ ವಿಶ್ವವಿದ್ಯಾಲಯಗಳ ಸ್ಥಾಪನೆ.
  6. ಶಿಕ್ಷಕರ ತರಬೇತಿ ಕಾಲೇಜುಗಳನ್ನು ಆರಂಭಿಸುವುದು.
  7. ವೃತ್ತಿ ಶಿಕ್ಷಣ ಮತ್ತು ತಾಂತ್ರಿಕ ಶಾಲಾ ಕಾಲೇಜುಗಳ ಸ್ಥಾಪನೆ.
  8. ಮಹಿಳಾ ಶಿಕ್ಷಣಕ್ಕೆ ಪ್ರಾಧಾನ್ಯತೆ.

ಈ ವರದಿಯ ಬಹುತೇಕ ಶಿಫಾರಸ್ಸುಗಳ ಅನುಷ್ಠಾನಗೊಂಡವು. ಚಾರ್ಲ್ಸ್ ವುಡ್‌ರ ವಿಚಾರಗಳು ಭಾರತೀಯ ಶಿಕ್ಷಣದ ಮೇಲೆ ಮುಂದಿನ ಅನೇಕ ವರ್ಷಗಳವರೆಗೆ ಪ್ರಭಾವ ಬೀರಿದವು. ಈ ವರದಿಯನ್ನು ಭಾರತದಲ್ಲಿನ ಇಂಗ್ಲಿಷ್ ಶಿಕ್ಷಣದ ‘ಮಹಾಸನ್ನದು’ ಎಂದು ಕರೆಯಲಾಗಿದೆ.

1. ಭಾರತದ ಆರ್ಥಿಕತೆಯ ಮೇಲೆ ಬ್ರಿಟಿಷ್ ಆಳ್ವಿಕೆಯ ಪ್ರಭಾವದ ಕುರಿತು ವಿವರಣೆ ನೀಡಿ.

ಬ್ರಿಟಿಷರು ಭಾರತವನ್ನು 200 ವರ್ಷಗಳಿಗೂ ಹೆಚ್ಚು ಕಾಲ ಆಳಿದರು. ಭಾರತವನ್ನು ರಾಜಕೀಯವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಶೋಷಿಸಿದರು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಭಾರತದ ಆರ್ಥಿಕತೆಯ ಮೇಲೆ ಗಾಢವಾದ ಪ್ರಭಾವ ಬೀರಿತು.

  • ಭೂ ಕಂದಾಯವು ಸರಕಾರಗಳಿಗೆ ಪ್ರಮುಖ ಆದಾಯದ ಮೂಲವಾಗಿತ್ತು. ಆಡಳಿತಕ್ಕೆ ಬೃಹತ್ ಸೇನೆಯ ನಿರ್ವಹಣೆಗೆ, ಯುದ್ಧಗಳಿಗಾಗಿ ಮತ್ತು ತಮ್ಮ ಐಶಾರಾಮಿ ಜೀವನಕ್ಕೆ ಈ ಖರ್ಚಿನ ಭಾರವನ್ನು ಭಾರತೀಯ ಕೃಷಿಕರು ಅಥವಾ ರೈತರ ಮೇಲೆ ಹೇರಲಾಗುತ್ತಿತ್ತು. ಇದರ ಜೊತೆಗೆ ಭಾರತದಲ್ಲಿ ಹಳೆಯ ಕಂದಾಯ ಪದ್ಧತಿಯೂ ಅಸ್ತಿತ್ವದಲ್ಲಿತ್ತು.

ಶಾಶ್ವತ ಕಂದಾಯ ಪದ್ದತಿ ಅಥವಾ ಜಮೀನ್ದಾರಿ ಪದ್ದತಿ 1793

ಲಾರ್ಡ್ ಕಾರ್ನ್‌ವಾಲೀಸನು ಬಂಗಾಳ ಬಿಹಾರ ಒರಿಸ್ಸಾ, ಉತ್ತರಪ್ರದೇಶದ ಉತ್ತರ ಭಾಗ ಮತ್ತು ಕರ್ನಾಟಿಕ್ ಪ್ರದೇಶಗಳಲ್ಲಿ ಈ ಪದ್ಧತಿಯನ್ನು ಜಾರಿಗೆ ತಂದನು. ಜಮೀನ್ದಾರರಿಗೆ ಭೂ ಮಾಲಿಕತ್ವವನ್ನು ನೀಡಿ ಅವರು ರೈತರಿಂದ ಕಂದಾಯವನ್ನು ವಸೂಲಿ ಮಾಡಿ ಕಂದಾಯದಲ್ಲಿ ಶೇ.89ರಷ್ಟನ್ನು ಸರ್ಕಾರಕ್ಕೆ ಕೊಡಬೇಕಿತ್ತು. ಉಳಿದದ್ದನ್ನು ತಾವು ಇಟ್ಟುಕೊಳ್ಳುತ್ತಿದ್ದರು. ಈ ಪದ್ದತಿಯಿಂದ ರೈತರಿಗೆ ಬಹಳ ಕಷ್ಟವಾಯಿತು.

  • ರೈತವಾರಿ ಪದ್ಧತಿ:

ಈ ಪದ್ಧತಿಯಲ್ಲಿ ರೈತರೊಂದಿಗೆ ಕಂಪನಿ ನೇರ ಒಪ್ಪಂದವನ್ನು ಮಾಡಿಕೊಂಡಿತು. ನಿಗದಿತ ಕಂದಾಯದ ಶೇಕಡಾ 50 ಕಂದಾಯವನ್ನು ನಿಯಮಿತವಾಗಿ ಕೊಡುವ ಶರತ್ತಿನನ್ವಯ ಭೂ ಮಾಲಿಕತ್ವವನ್ನು ನೀಡಲಾಗುತ್ತಿತ್ತು. ಈ ಪದ್ಧತಿಯಲ್ಲಿ ಕೃಷಿಕರು ಸರಕರದ ಸಂಪೂರ್ಣ ಅಧೀನದಲ್ಲಿದ್ದರು. ಬರಗಾಲ, ಪ್ರವಾಹಗಳಿಂದ ಹಾನಿಗೊಳಗಾದರೂ ಸಹ ಕಂದಾಯವನ್ನು ಕೊಡಲೇಬೇಕಾಗಿತ್ತು. ಅನೇಕ ಕೃಷಿಕರು ತೆರಿಗೆ ಕೊಡಲಾಗಿದೆ ಭೂ ಒಡೆತನವನ್ನು ಕಳೆದುಕೊಂಡರು.

  • ಮಹಲ್ವಾರಿ ವ್ಯವಸ್ಥೆ:

ಒಂದು ಅಥವಾ ಒಂದಕ್ಕಿಂತ ಹೆಚ್ಚು ಹಳ್ಳಿಗಳನ್ನೊಳಗೊಂಡ ಕಂದಾಯ ಪ್ರದೇಶವನ್ನು ಮಹಲ್ ಎಂದು ಕರೆಯಲಾಗಿದ್ದು, ಮಹಲ್‌ನೊಳಗಿದ್ದ ಕೃಷಿಕರನ್ನು ಒಟ್ಟಾರ ಎಭೂ ಮಾಲಿಕರೆಂದು ಪರಿಗಣಿಸಿ ಕಂದಾಯವನ್ನು ಸಂಗ್ರಹಿಸುತ್ತಿದ್ದರು. ಹೆಚ್ಚಿನ ಭೂ ಕಂದಾಯವು ರೈತರಿಗೆ ಹೊರೆಯಾಗಿ ಬಡತನದಿಂದ ಬಂದರು.

ಭಾರತದ ಕೃಷಿಯನ್ನು ಅಭಿವೃದ್ಧಿಪಡಿಸಲು ಬ್ರಿಟಿಷರಿಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಅವರು ಇಂಗ್ಲೆಂಡಿನಲ್ಲಿರುವ ತಮ್ಮ ಕಾರ್ಖಾನೆಗಳಿಗೆ ಕಚ್ಛಾ ವಸ್ತುಗಳನ್ನು ದೊರಕಿಸಿಕೊಳ್ಳಲು ಮತ್ತು ತಮ್ಮ ವಾಣಿಜ್ಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮಾತ್ರ ಆಸಕ್ತರಾಗಿದ್ದರು. ಯೂರೋಪ್ ಮತ್ತು ಅಮೇರಿಕಾದ ಮಾರುಕಟ್ಟೆಗಳಲ್ಲಿ ಅಪಾರ ಬೇಡಿಕೆಯಿದ್ದ ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ಚಹಾ, ನೀಲಿ ಮುಂತಾದವುಗಳನ್ನು ಬೆಳೆಯಲು ಭಾರತೀಯ ಕೃಷಿಕರ ಮೇಲೆ ಒತ್ತಡ ಹೇರಿದರು. ಉದ್ದೇಶ ಪೂರ್ವಕವಾಗಿಯೇ ಕೈಗಾರಿಕೆಗಳ ಸ್ಥಾಪನೆಯಲ್ಲಿ ಆಸಕ್ತಿ ತೋರಿಸದೇ ಭಾರತವನ್ನು ಕಚ್ಚಾ ವಸ್ತುಗಳ ಮೂಲವಾಗಿ ಮತ್ತು ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಿದರು.

ಭಾರತೀಯ ಕರಕುಶಲ ವಸ್ತುಗಳು ಇಂಗ್ಲೆಂಡಿನ ಯಂತ್ರದಿಂದ ಮಾಡಿದ ಉತ್ಪಾದನೆಗಳೊಂದಿಗೆ ಸ್ಪರ್ಧಿಸಲಾಗಲಿಲ್ಲ.. ಕಸುಬುದಾರರು, ಕುಶಲಕರ್ಮಿಗಳು ರೈತರಾಗಿ ಇಲ್ಲವೇ ಕೃಷಿ ಕೂಲಿ ಕಾರ್ಮಿಕರಾಗಿ ಹಸಿವೆಯಿಂದ ಬಳಲುವಷ್ಟು ಕಡಿಮೆ ಕೂಲಿಗೆ ಕೆಲಸ ಮಾಡಬೇಕಾಯಿತು.

  • ಬ್ರಿಟಿಷರು ಜಾರಿಗೆ ತಂದ ಹೊಸ ರೈತವಾರಿ ಪದ್ಧತಿ ಮಹಲ್‌ವಾರಿ ಪದ್ಧತಿಗಳು ಲೇವಾದೇವಿದಾರರ ಮತ್ತು ಜಮೀನ್ದಾರರ ಪರವಾಗಿದ್ದು. ರೈತರು ಶೋಷಣೆಗೆ ಒಳಗಾಗಿ ಗ್ರಾಮಗಳ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಗಳು ಕುಂಠಿತಗೊಂಡವು.
  • ನಾಗರೀಕ ಮತ್ತು ಸೇನಾ ಅಧಿಕಾರಿಗಳ ವೇತನ ಮತ್ತು ನಿವೃತ್ತಿವೇತನ, ಸಾಲದ ಮೇಲಿನ ಬಡ್ಡಿ, ಬ್ರಿಟಿಷ್ ಬಂಡವಾಳ ಶಾಹಿಗಳ ಲಾಭ, ಆಡಳಿತದ ವೆಚ್ಚ ಇತ್ಯಾದಿ ಸಾಕಷ್ಟು ಸಂಪತ್ತು ಭಾರತದಿಂದ ಇಂಗ್ಲೆಂಡಿನ ಹೊಳೆಯಂತೆ ಹರಿದುಹೋಯಿತು.
  • ಭಾರತದ ರಫಿಗಿಂತಲೂ ಇಂಗ್ಲೆಂಡಿನಿಂದ ಆಮದಿನ ಹೆಚ್ಚಳ ಹಾಗೂ ಭಾರತೀಯ ವಸ್ತುಗಳ ಮೇಲಿನ ಹೆಚ್ಚಿನ ತೆರಿಗೆಗಳು ಮತ್ತು ಬ್ರಿಟಿಷ್ ವಸ್ತುಗಳ ಮೇಲಿನ ಕಡಿಮೆ ತೆರಿಗೆಗಳಿಂದಾಗಿಯೂ ಸಂಪತ್ತಿನ ಸೋರಿಕೆ ಯಾಯಿತು.
  • ದಾದಾಬಾಯಿ ನವರೋಜಿಯವರು ತಮ್ಮ ‘ಪಾವರ್ಟಿ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ’ ಕೃತಿಯಲ್ಲಿ ತಮ್ಮ ‘ಸೋರಿಕೆ ಸಿದ್ಧಾಂತ’ವನ್ನು ಮಂಡಿಸಿದ್ದಾರೆ.

1. ಶಾಶ್ವತ ಕಂದಾಯ ಪದ್ಧತಿ ಅಥವಾ ಜಮೀನ್ದಾರಿ ಪದ್ಧತಿಯನ್ನು ಬ್ರಿಟಿಷರು ಯಾವಾಗ ಜಾರಿಗೆ ತಂದರು?

ಕ್ರಿ.ಶ. 1793 ರಲ್ಲಿ

2. ಮೆಕಾಲೆ ವರದಿಯು ಯಾವಾಗ ರೂಪುಗೊಂಡಿತು?

1835ರಲ್ಲಿ.

3. ರೈತವಾರಿ ಪದ್ಧತಿಯನ್ನು ಯಾವ ಯಾವ ಪ್ರಾಂತ್ಯಗಳಲ್ಲಿ ಜಾರಿಗೆ ತರಲಾಯಿತು?

ಬಾಂಬೆ ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿ.

4. ಪಾವರ್ಟಿ ಆಂಡ್ ಅನ್‌ ಬ್ರಿಟಿಷ್ ರೂಲ್ ಇನ್ ಇಂಡಿಯಾ ಕೃತಿಯನ್ನು ರಚಿಸಿದವರಾರು?

ದಾದಾಬಾಯಿ ನವರೋಜಿ

5. 1854ರ ವುಡ್ ವರದಿಯನ್ನು ಸಿದ್ಧಪಡಿಸಿದವರಾರು?

ಸರ್ ಚಾರ್ಲ್ಸ್‌ ವುಡ್

  • ಬ್ರಿಟಿಷ್‌ ಆಡಳಿತದ ಕಾಲದಲ್ಲಿ ಭಾರತದ ಸಂಪತ್ತು ಅಪಾರವಾಗಿ ಇಂಗ್ಲೆಂಡಿಗೆ ಹರಿದುಹೋಯಿತು.
  • ದಾದಾಬಾಯಿ ನವರೋಜಿಯವರು ಸೋರಿಕೆಯ ಸಿದ್ದಾಂತವನ್ನು ಮಂಡಿಸಿದ್ದಾರೆ.
  • ಲಾರ್ಡ್‌ ಕಾರನ್‌ ವಾಲೀಸನು ಜಮೀನ್ದಾರಿ ಪದ್ದತಿಯನ್ನು ಜಾರಿಗೆ ತಂದನು.
  • ಬ್ರಿಟಿಷರ ಆಡಳಿತವು ಭಾರತೀಯ ಪಾರಂಪರಿಕ ಶಿಕ್ಷಣದ ಮೇಲೆ ಪ್ರಭಾವವನ್ನು

Leave a Comment