2nd Puc History 5.3 Maratara Elige Chapter Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ 5.3 ಮರಾಠರ ಏಳಿಗೆ ನೋಟ್ಸ್ ಪ್ರಶ್ನೋತ್ತರಗಳು ಕನ್ನಡ ಮಾಧ್ಯಮ 2nd puc history 5.3 question answer2nd puc history 5th chapter notes in kannada ಮರಾಠರ ಏಳಿಗೆ ನೋಟ್ಸ್ kseeb solutions for class 12 history kannada medium 12th standard history Maratara Elige notes 12th Standard History 5.3 Lesson Question Answer.

I. ಈ ಕೆಳಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಆರಿಸಿ ಬರೆಯಿರಿ.
1. ಮರಾಠ ರಾಜ್ಯದ ಸ್ಥಾಪಕ
ಎ) ಹುಮಾಯೂನ್
ಬಿ) ಬಾಬರ್
ಸಿ) ಶಂಬಾಜಿ
ಡಿ) ಶಿವಾಜಿ
2. ಸೂರತ್ ಮೇಲಿನ ದಾಳಿ ನಡೆದ ವರ್ಷ
ಎ) ಸಾ.ಶ. 1660
ಬಿ) ಸಾ.ಶ. 1664
ಸಿ) ಸಾ.ಶ. 1676
ಡಿ) ಸಾ.ಶ. 1978
3. ಶಿವಾಜಿಯ ಕಿರೀಟಧಾರಣಿಯಾದ ವರ್ಷ
ಎ) ಸಾ.ಶ. 1672
ಬಿ) ಸಾ.ಶ. 1674
ಸಿ) ಸಾ.ಶ. 1676
ಡಿ) ಸಾ.ಶ.1678
4. ಶಿವಾಜಿ ಮಗನ ಹೆಸರು
ಎ) ಸಾಂಬಾಜಿ
ಬಿ) ರಾಜಾರಾಮ
ಸಿ) ಶಂಬಾಜಿ
ಡಿ) ವೆಂಕೋಜಿ
5. ‘ಚೌತ್’ ಎಂದರೆ
ಎ) ಮನೆಗಂದಾಯ
ಬಿ) ಕಪ್ಪ
ಸಿ) ಬಂಡವಾಳ
ಡಿ) ಭೂಕಂದಾಯ
6. ಶಿವಾಜಿ ಜನಿಸಿದ ವರ್ಷ
ಎ) ಸಾ.ಶ. 1625
ಬಿ) ಸಾ.ಶ. 1626
ಸಿ) ಸಾ.ಶ. 1627
ಡಿ) ಸಾ.ಶ. 1628
II. ಬಿಟ್ಟ ಸ್ಥಳ ಭರ್ತಿಮಾಡಿರಿ
1. ಶಿವಾಜಿಯ ಗುರು ಸಂತರಾಮ್ ದಾಸ್
2. ಶಿವಾಜಿಯ ತಾಯಿ ಜೀಜಾಬಾಯಿ
3. ಶಿವಾಜಿಯ ಬಿರುದು ಛತ್ರಪತಿ
4. ಮರಾಠ ವಂಶದ ಸ್ಥಾಪಕ ಶಿವಾಜಿ
5. ಚೌತ್ ಎಂದರೆ ಭೂಕಂದಾಯ
6. ಶಿವಾಜಿ ಜನಿಸಿದ ವರ್ಷ ಸಾ.ಶ. 1627
7. ಶಿವಾಜಿ ಜನಿಸಿದ ಸ್ಥಳ ಶಿವನೇರಿ
8. ಶಿವಾಜಿಯ ಕಿರೀಟಧಾರಣೆಯಾದ ವರ್ಷ ಸಾ.ಶ. 1674
9. ಶಿವಾಜಿಯ ಮಗನ ಹೆಸರು ಸಾಂಬಾಜಿ
10. ಶಿವಾಜಿ ಮತ್ತು ಜೈಸಿಂಗ್ ನಡುವೆ ಪುರಂದರ ಒಪ್ಪಂದ
III. ಹೊಂದಿಸಿ ಬರೆಯಿರಿ.
ಕ್ರಮಸಂಖ್ಯೆ | ಅ | ಆ | ಉತ್ತರಗಳು |
---|---|---|---|
1 | ಮರಾಠ ರಾಜ್ಯದ ಸ್ಥಾಪಕ | ಛತ್ರಪತಿ | ಶಿವಾಜಿ |
2 | ಶಿವಾಜಿ ಜನಿಸಿದ ವರ್ಷ | ಶಿವಾಜಿಯ ತಾಯಿ | ಸಾ.ಶ. 1627 |
3 | ಶಿವಾಜಿಯ ಮಗ | ಭೂಕಂದಾಯ | ಸಾಂಬಾಜಿ |
4 | ಶಿವಾಜಿಯ ತಂದೆ | ಶಿವಾಜಿ ಜನಿಸಿದ ಸ್ಥಳ | ಷಹಜಿ ಭೋಂಸ್ಲೆ |
5 | ಶಿವಾಜಿಯ ಬಿರುದು | ಸಾ.ಶ. 1627 | ಛತ್ರಪತಿ |
6 | ಚಾತ್ | ಷಹಜಿ ಭೋಂಸ್ಲೆ | ಭೂಕಂದಾಯ |
7 | ಸಾ.ಶ. 1674 | ಶಿವಾಜಿಯ ಗುರು | ಶಿವಾಜಿ ಕಿರೀಟ ಧಾರಣೆ |
8 | ಜೀಜಾಬಾಯಿ | ಶಿವಾಜಿ | ಶಿವಾಜಿಯ ತಾಯಿ |
9 | ಶಿವನೇರಿ | ಶಿವಾಜಿ ಕಿರೀಟ ಧಾರಣೆ | ಶಿವಾಜಿ ಜನಿಸಿದ ಸ್ಥಳ |
10 | ದಾದಾಜಿ ಕೊಂಡದೇವ | ಸಾಂಬಾಜಿ | ಶಿವಾಜಿಯ ಗುರು |
IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.
1. ಮರಾಠ ವಂಶದ ಸ್ಥಾಪಕರು ಯಾರು?
ಶಿವಾಜಿ
2. ಶಿವಾಜಿಯ ಬಿರುದು ಯಾವುದು?
ಛತ್ರಪತಿ
3.’ಚೌತ್’ ಎಂದರೇನು?
ಶಿವಾಜಿಯ ನೇರ ಆಡಳಿತಕ್ಕೆ ಒಳಪಡದ ನೆರೆಯ ಪ್ರದೇಶಗಳು ಕೊಡಬೇಕಾದ ಭೂಕಂದಾಯ ಚೌತ್.
4. ಶಿವಾಜಿಯ ಕಿರೀಟಧಾರಣೆಯಾದ ವರ್ಷ ಯಾವುದು?
ಸಾ.ಶ.1674.
5. ಪುರಂದರ ಒಪ್ಪಂದ ಯಾರ ನಡುವೆ ಜರುಗಿತು?
ಶಿವಾಜಿ ಮತ್ತು ಜೈಸಿಂಗ್
6. ಶಿವಾಜಿ ಮಗನ ಹೆಸರೇನು?
ಸಾಂಬಾಜಿ
7. ವೆಂಕೋಜಿ ಯಾರು?
ಶಿವಾಜಿಯ ಮಲಸಹೋದರ
8. ಪರಗಣಗಳ ಆಡಳಿತವನ್ನು ಯಾರು ನೋಡಿಕೊಳ್ಳುತ್ತಿ ជួळ?
ದೇಸಾಯಿ
9. ಶಿವಾಜಿಯ ಗುರು ಯಾರು?
ದಾದಾಜಿ ಕೊಂಡದೇವ
10. ಶಿವಾಜಿ ಮತ್ತು ಜೈಸಿಂಗ್ ನಡುವೆ ಸಹಿ ಹಾಕಲಾದ ಒಪ್ಪಂದ ಯಾವುದು?
ಪುರಂದರ ಒಪ್ಪಂದ.
V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಎರಡು ಪದ ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ:
1. ಶಿವಾಜಿ ಎಲ್ಲಿ, ಯಾವಾಗ ಜನಿಸಿದನು?
ಶಿವಾಜಿ ಶಿವನೇರಿ ಎಂಬಲ್ಲಿ, ಸಾ.ಶ. 1627ರಲ್ಲಿ ಜನಿಸಿದನು.
2. ಶಿವಾಜಿಯ ತಂದೆ-ತಾಯಿ ಯಾರು?
ಶಹಾಜಿ ಭೋಂಸ್ಲೆ, ಜೀಜಾಬಾಯಿ.
3. ಶಿವಾಜಿಯ ಮೇಲೆ ಪ್ರಭಾವ ಬೀರಿದ ಇಬ್ಬರು ವ್ಯಕ್ತಿಗಳನ್ನು ಹೆಸರಿಸಿ.
ಸಂತ ರಾಮದಾಸ್ ಮತ್ತು ತುಕಾರಾಂ.
4. ಶಿವಾಜಿಯ ಯಾವುದಾದರೂ ಎರಡು ಪ್ರಮುಖ ಕೋಟೆಗಳನ್ನು ಹೆಸರಿಸಿ.
ಪುರಂಧರ ಕೋಟೆ, ರಾಯಘಡ ಕೋಟೆ.
5. ಶಿವಾಜಿಯು ಸಂಗ್ರಹಿಸುತ್ತಿದ್ದ ಎರಡು ಪ್ರಮುಖ ತೆರಿಗೆಗಳು ಯಾವುವು?
ಚೌತ್ ಮತ್ತು ಸರ್ದೇಶಮುಖಿ.
VI ಈ ಕೆಳಗಿನ ಪ್ರಶ್ನೆಗಳಿಗೆ ಪ್ರತಿಯೊಂದನ್ನು 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಿ:
1. ಶಿವಾಜಿಯ ದಿಗ್ವಿಜಯಗಳನ್ನು ವಿವರಿಸಿ.
ಶಿವಾಜಿಯು 20ನೇ ವಯಸ್ಕನಾಗುವ ಮೊದಲೇ ಸೈನಿಕ ಜೀವನವನ್ನು ಆರಂಭಿಸಿ. ತೋರಣಕೋಟೆ ಮತ್ತು ಬಿಜಾಪುರದ ಸುಲ್ತಾನನಿಂದ ಚಿಕಾನ, ಕೊಂಡವ, ಸಿಂಹಗಡ ಮತ್ತು ಪುರಂದರಗಳನ್ನು ವಶಪಡಿಸಿಕೊಂಡನು. ಇದರಿಂದ ಷಹಜಿಯು ಬಂಧನಕ್ಕೊಳಪಟ್ಟಾಗ ರಾಜ ನೈತಿಕ ಜಾಣೆಯಿಂದ ತನ್ನ ತಂದೆಯನ್ನು ಬಿಡುಗಡೆಗೊಳಿಸಿದನು. ನಂತರ ಚಾವಳಿ ಪ್ರದೇಶವನ್ನು ಆಕ್ರಮಿಸಿ, ಪ್ರತಾಪ್ ಗಡ್ ಎಂಬ ಹೊಸಕೋಟೆಯನ್ನು ನಿರ್ಮಿಸಿದನು.
ಶಿವಾಜಿ ಮತ್ತು ಅಶ್ಚಲ್ ಖಾನ್: ಬಿಜಾಪುರದ ಸುಲ್ತಾನನು ತನ್ನ ಸೇನಾನಿ ಅಪ್ಟಲ್ ಖಾನನ್ನು ಶಿವಾಜಿ ವಿರುದ್ಧ ಹೋರಾಡಲು ಕಳುಹಿಸಿದನು. ಶಿವಾಜಿ ‘ವ್ಯಾಘ್ರನಖ’ ಎಂಬ ಆಯುಧದಿಂದ ಈತನನ್ನು ಕೊಂದು ಅವನ ಬಿಡಾರವನ್ನು ಲೂಟಿ ಮಾಡಿದನು. ಬಿಜಾಪುರದ ಸುಲ್ತಾನನು ಶಿವಾಜಿಯೊಡನೆ ಶಾಂತಿ ಒಪ್ಪಂದವನ್ನು ಮಾಡಿಕೊಂಡು ಆತನ ಪ್ರದೇಶಗಳಿಗೆ ಮಾನ್ಯತೆ ನೀಡಿದನು.
ಶಿವಾಜಿ ಮತ್ತು ಔರಂಗಜೇಬ: ಮೊಘಲ್ ಸುಲ್ತಾನ ಔರಂಗಜೇಬನಿಗೆ ಸೇರಿದ ಹಲವಾರು ಕೋಟೆಗಳು ಮತ್ತು ಪ್ರದೇಶಗಳನ್ನು ಶಿವಾಜಿಯು ವಶಪಡಿಸಿಕೊಂಡಿದ್ದನು. ಇದರಿಂದಾಗಿ ಶೈಯಿಸ್ತಾಖಾನ್ ಎಂಬುವವನು ದಖನ್ನಿನ ರಾಜ್ಯಪಾಲನನ್ನಾಗಿ ನೇಮಿಸಿ ಶಿವಾಜಿಯನ್ನು ಸದೆಬಡಿಯಲು ಹೇಳಿದನು. ಶೈಯಿಸ್ತಾಖಾನ್ ಶಿವಾಜಿಗೆ ಸೇರಿದ ಪೂನಾ, ಕೊಂಕಣ, ಚಕಾನ್ ಕೋಟೆಗಳನ್ನು ವಶಪಡಿಸಿಕೊಂಡನು. ನಂತರ ಶಿವಾಜಿಯ ಬಾಲ್ಯಜೀವನದ ಮನೆಯಲ್ಲಿಯೇ ಬಿಡಾರ ಹೂಡಿದನು. ಇದನ್ನರಿತ ಶಿವಾಜಿ ಮದುವೆ ದಿಬ್ಬಣದವರಂತೆ ಸುಮಾರು 100 ಜನರೊಡಗೂಡಿ ಏಕಾಏಕಿ ಧಾಳಿ ಮಾಡಿದನು. ಈ ದಾಳಿಯಲ್ಲಿ ಶೈಯಾಸ್ತಖಾನ್ ತನ್ನ ಕೈಬೆರಳುಗಳನ್ನು ಕಳೆದುಕೊಂಡು ಪಲಾಯನ ಮಾಡಿದನು.
- ಸೂರತ್ ಮೇಲೆ ಧಾಳಿ ಮಾಡಿ ಒಂದು ಕೋಟಿ ರೂ ಸಂಗ್ರಹಿಸಿದನು. ಮೊಘಲರನ್ನು ಬೆಂಬಲಿಸಿದ ಇಂಗ್ಲಿಷರನ್ನು ಹಿಮ್ಮೆಟ್ಟಿಸಿದನು. ಮೊಘಲ್ ಸೈನ್ಯದ ಆಗಮನದ ಸುದ್ದಿ ತಿಳಿದು ಸೂರತ್ನಿಂದ ಫಲಾಯನ ಮಾಡಿದನು.
- ಶಿವಾಜಿಯ ವಿರುದ್ಧ ಔರಂಗಜೇಬನು ರಾಜಾ ಜೈಸಿಂಗ್ನನ್ನು ಕಳುಹಿಸಿದನು. ಈತ ಪುರಂದರ, ರಾಯಗಡ ಮುಂತಾದ ಕೋಟೆಗಳನ್ನು ವಶಪಡಿಸಿಕೊಂಡನು. ನಂತರ ಇವರಿಬ್ಬರ ನಡುವೆ ‘ಪುರಂದರ ಒಪ್ಪಂದ’ ವಾಗಿ ಶಿವಾಜಿಯು 23 ಕೋಟೆಗಳನ್ನು ನೋಡಿ, ಕಪ್ಪ ಕಾಣಿಕೆ ನೀಡಲು ಒಪ್ಪಿದನು. ನಂತರ ಜೈಸಿಂಗ್ನ ಒತ್ತಾಯದ ಔರಂಗಜೇಬನ ಆಸ್ತಾನಕ್ಕೆ ಬಂದನು. ಆದರೆ ಔರಂಗಜೇಬನು ಶಿವಾಜಿಯನ್ನು ಅವಮಾನಿಸಿ ಸೆರೆಮನೆಗೆ ತಳ್ಳಿದನು. ನಂತರ ಸಿಹಿ ತುಂಬಿದ ಬುಟ್ಟಿಯಲ್ಲಿ ಶಿವಾಜಿ ಸಾಂಬಾಜಿಯ ಜೊತೆಗೂಡಿ ತಪ್ಪಿಸಿಕೊಂಡು ಬಂದು ಎರಡು ಬಾರಿ ಸೂರತ್ ಮೇಲೆ ದಾಳಿ ಮಾಡಿದ್ದೇ ಅಲ್ಲದೆ ಮೊಘಲರಿಗೆ ಬಿಟ್ಟು ಕೊಟ್ಟಿದ್ದ ಎಲ್ಲಾ ಕೋಟೆಗಳನ್ನು ವಶಪಡಿಸಿಕೊಂಡನು.
- ತನ್ನ ಪಟ್ಟಾಭಿಷೇಕದ ನಂತರ ಶಿವಾಜಿಯು ಹುಬ್ಬಳ್ಳಿ, ಜಿಂಜಿ ಮತ್ತು ವೆಲ್ಲೂರುಗಳನ್ನು ಆಕ್ರಮಿಸಿದನು. ಸಾ.ಶ. 1680ರಲ್ಲಿ ಮರಣ ಹೊಂದಿದನು.
2. ಶಿವಾಜಿಯ ಆಡಳಿತ ಪದ್ದತಿಯ ಬಗ್ಗೆ ಒಂದು ವಿವರಣೆ ನೀಡಿ.
ಶಿವಾಜಿಯು ಉತ್ತಮ ದಿಗ್ವಿಜಯಕಾರನಾಗಿದ್ದಂತೆ ಸಮರ್ಥ ಆಡಳಿತಗಾರನೂ ಆಗಿದ್ದನು. ಕೇಂದ್ರ ಸರ್ಕಾರದ ಕೇಂದ್ರಬಿಂದು ಇವನೇ ಆಗಿದ್ದನು. 8 ಮಂದಿ ಮಂತ್ರಿಗಳನ್ನೊಳಗೊಂಡ ‘ಅಷ್ಟಪ್ರಧಾನ’ ರಿದ್ದರು. ಅವರೆಂದರೆ 1. ಪೇಶ್ವ-ಪ್ರಧಾನಮಂತ್ರಿ 2. ಅಮಾತ್ಯ-ಹಣಕಾಸುಮಂತ್ರಿ, 3. ಮಂತ್ರಿ-ಇತಿಹಾಸಕಾರ, 4. ಸುಮಂತ್-ವಿದೇಶಾಂಗ ವ್ಯವಹಾರ, 5. ಸಚಿವ-ರಾಜಪತ್ರ ವ್ಯವಹಾರ, 6. ಪಂಡಿತ್ರಾವ್-ಧನಾಧ್ಯಕ್ಷ, 7. ಸೇನಾಪತಿ, 8. ನ್ಯಾಯಾಧೀಶ-ಸರ್ಕಾರದಲ್ಲಿ 18 ಇಲಾಖೆಗಳಿದ್ದು ಅವು ‘ವಿವಿಧ ಮಂತ್ರಿಗಳ ಉಸ್ತುವಾರಿಯಲ್ಲಿದ್ದವು.
- ಶಿವಾಜಿಯು ತನ್ನ ರಾಜ್ಯವನ್ನು ‘ಸ್ವರಾಜ್ಯ’ ಎಂದು ಕರೆದಿದ್ದನು. ನಾಲ್ಕು ಪ್ರಾಂತ್ಯಗಳನ್ನಾಗಿ ವಿಂಗಡಿಸಿ ಪ್ರತಿ ಪ್ರಾಂತ್ಯಕ್ಕೂ ಸರ್ದೇಶ್ಮುಖ್ ಎಂಬ ರಾಜ್ಯಪಾಲನನ್ನು ನೇಮಿಸಿದ್ದನು.
- ಪ್ರಾಂತ್ಯಗಳನ್ನು ‘ದೇಶ್’ಗಳಾಗಿ ವಿಂಗಡಿಸಿ ‘ದೇಶ್ಮುಖ್ ಅಥವಾ ದೇಶ್ಪಾಂಡೆ’ ಎಂದ ಅಧಿಕಾರಿಯನ್ನು ನೇಮಿಸಿದ್ದನು.
- ʼದೇಶ್’ಗಳನ್ನು ‘ಪರಗಣ’ಗಳಾಗಿ ವಿಂಗಡಿಸಿ ದೇಸಾಯಿ ಎಂಬ ಅಧಿಕಾರಿಗಳನ್ನು ನೇಮಿಸಿದ್ದನು. ಗ್ರಾಮಸಭೆಯು ಆಡಳಿತದ ಅತಿಚಿಕ್ಕ ಘಟಕವಾಗಿತ್ತು.
ಕಂದಾಯಪದ್ಧತಿ: ಭೂಮಿಯ ಫಲವತ್ತತೆ ಮತ್ತು ಉತ್ಪತ್ತಿಯನ್ನಾಧರಿಸಿ ಶಿವಾಜಿಯು ಭೂಮಿಯನ್ನು ವರ್ಗೀಕರಿಸಿ ಭೂಕಂದಾಯವನ್ನು ಉತ್ಪನ್ನದ ಶೇ. 30ಕ್ಕೆ ನಿಗಧಿಪಡಿಸಿದನು. ಪ್ರಾಕೃತಿಕ ವಿಕೋಪಗಳಾದಾಗ ಕಂದಾಯವನ್ನು ರದ್ದುಪಡಿಸುತ್ತಿದ್ದನು. ಚೌತ್ ಮತ್ತು ಸರ್ದೇಶ್ ಮುಖಿ ಎಂಬ ಎರಡು ಪ್ರಮುಖ ತೆರಿಗೆ ಅಥವಾ ಸೈನಿಕ ಕಾಣಿಕೆ (ರಕ್ಷಣಾ ತೆರಿಗೆ)ಗಳನ್ನು ಸಂಗ್ರಹಿಸುತ್ತಿದ್ದನು.
- ಸೈನಿಕ ವ್ಯವಸ್ಥೆ: ಸೈನ್ಯವು ಕಾಲಾಳು, ಅಶ್ವಪಡೆ, ಫಿರಂಗಿಪಡೆ ಮತ್ತು ಒಂಟೆ ಮತ್ತು ಆನೆಗಳನ್ನು ಒಳಗೊಂಡಿತು. ಕಾಲಾಳುಗಳು ಗೆರಿಲ್ಲಾ ಮತ್ತು ಪರ್ವತಯುದ್ಧ ಕಲೆಗಳಲ್ಲಿ ತರಬೇತಿ ಪಡೆದಿದ್ದರು. ಅಲ್ಲದೆ 200 ಹಡಗುಗಳನ್ನೊಳಗೊಂಡ ಬಲಿಷ್ಟ ನೌಕಾಪಡೆ ಹೊಂದಿದ್ದನು.
- ನ್ಯಾಯಾಂಗ ಪದ್ಧತಿ : ರಾಜನೇ ಸರ್ವೋಚ್ಚ ನ್ಯಾಯಾಧೀಶನಾಗಿದ್ದು, ಗ್ರಾಮ ಪಂಚಾಯಿತಿಗಳು ನಾಗರೀಕ ಮೊಕದ್ದಮೆಗಳನ್ನು ಮತ್ತು ಜಿಲ್ಲಾ ಅಧಿಕಾರಿಗಳು ಹಾಗೂ ರಾಜ್ಯಪಾಲರು ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿದ್ದರು. ಗ್ರಾಮ ನ್ಯಾಯಾಲಯಗಳ ತೀರ್ಪುಗಳಿಗೆ ರಾಜ ಮನ್ನಣೆ ಇತ್ತು; ರಾಜ ಮತ್ತು ನ್ಯಾಯಾಧೀಶರು ಮೇಲ್ಮನವಿಗಳ ಬಗ್ಗೆ ಆಲಿಸುತ್ತಿದ್ದರು. ನ್ಯಾಯಾಧೀಶನು ನಾಗರೀಕ ಮತ್ತು ಸೈನಿಕ ನ್ಯಾಯ ನಿರ್ವಹಣೆಗೆ ಜವಾಬ್ದಾರನಾಗಿದ್ದನು.
ಹೆಚ್ಚುವರಿ ಪ್ರಶ್ನೆಗಳು:
1.ಶಿವಾಜಿಯ ಸೈನಿಕ ಕಾರ್ಯಾಚರಣೆಗೆ ನೆರವಾದ ಗುಡ್ಡಗಾಡು ಜನರು ಯಾರು?
ಮಾವಳಿಯರು
2. ಶಿವಾಜಿಯ ಗುರು ಯಾರು?
ದಾದಾಜಿ ಕೊಂಡದೇವ
3. ಶಿವಾಜಿಯ ಕಿರೀಟಧಾರೆಯಾದ ವರ್ಷ ಯಾವುದು?
ಸಾ.ಶ. 1674
4. ಸೂರತ್ ಮೇಲಿನ ದಾಳಿಯು ಯಾವಾಗ ನಡೆಯಿತು?
ಸಾ.ಶ. 1664 ರಲ್ಲಿ
5. ಶಿವಾಜಿಯ ಆಕ್ರಮಣದಿಂದ ತನ್ನ ಕೈ ಬೆರಳುಗಳನ್ನು ಕಳೆದುಕೊಂಡವನಾರು?
ಶೈಯಿಸ್ತಾ ಖಾನ್
6. ಶಿವಾಜಿಯ ಮಗನ ಹೆಸರೇನು?
ಸಾಂಬಾಜಿ
7. ಪರಗಣಗಳ ಆಡಳಿತವನ್ನು ಯಾರು ನೋಡಿ ಕೊಳ್ಳುತ್ತಿದ್ದರು?
‘ದೇಸಾಯಿ’ ಎಂಬ ಅಧಿಕಾರಿ.
8. ವೆಂಕೋಜಿ ಯಾರು?
ಶಿವಾಜಿಯ ಮಲಸಹೋದರ.
ನೆನಪಿನಲ್ಲಿಡಬೇಕಾದ ಅಂಶಗಳು:
- ಶಿವಾಜಿಯು ಮರಾಠ ವಂಶದ ಸ್ಥಾಪಕ.
- ‘ಭರಮ’ ಎಂಬುದು ಶಿವಾಜಿಯ ಬಿರುದು.
- ಶಿವಾಜಿಯು ಸಂಗ್ರಹಿಸುತ್ತಿದ್ದ ತೆರಿಗೆಯ ಹೆಸರು ಚೌತ್ ಮತ್ತು ಸರ್ದೇಶ್ ಮುಖಿ,
- ಔರಂಗಜೇಬನನ್ನು ಶಿವಾಜಿಯು ಎದುರಿಸಿದನು.
- ಶಿವಾಜಿಯ ಗುರು ಸಂತ ರಾಮ್ ದಾಸ್.