ದ್ವಿತೀಯ ಪಿಯುಸಿ ಕನ್ನಡ ಶಿಲುಬೆ ಏರಿದ್ದಾನೆ ನೋಟ್ಸ್ | 2nd Puc Kannada Shilube Eriddane Notes

ದ್ವಿತೀಯ ಪಿಯುಸಿ ಕನ್ನಡ ಶಿಲುಬೆ ಏರಿದ್ದಾನೆ ನೋಟ್ಸ್ ಪ್ರಶ್ನೋತ್ತರಗಳು, 2nd Puc Shilube Eriddane Kannada Notes Question and Answer Summery Guide Extract Mcq Pdf Download in Kannada Medium Karnataka State Syllabus 2025 shilube eriddane kannada notes pdf ಶಿಲುಬೆ ಏರಿದ್ದಾನೆ ಸಾರಾಂಶ ಶಿಲುಬೆ ಏರಿದ್ದಾನೆ question answer shilube eriddane question answer in kannada kseeb solutions for class 12 kannada poem 9 notes 2nd puc kannada notes kseeb 2nd puc kannada notes ದ್ವಿತೀಯ ಪಿಯುಸಿ ಕನ್ನಡ ನೋಟ್ಸ್ second puc shilube eriddane kannada poem notes ಶಿಲುಬೆ ಏರಿದ್ದಾನೆ notes pdf.

೯. ಶಿಲುಬೆ ಏರಿದ್ದಾನೆ

– ಕೆ.ಎಸ್. ನಿಸಾರ್ ಅಹಮದ್

Shilube Eriddane

ಕವಿ ಪರಿಚಯ

‘ನಿತ್ಯೋತ್ಸವದ ಕವಿ’ ಎಂದೇ ಮನೆಮಾತಾಗಿರುವ ನಾಡೋಜ ಕೆ.ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರವರಿ 5, 1936ರಲ್ಲಿ ಜನಿಸಿದರು. ಇವರು ಓದಿದ್ದು ವಿಜ್ಞಾನವನ್ನಾದರೂ ಕನ್ನಡ ಸಾಹಿತ್ಯದಲ್ಲಿ ನೆಲೆನಿಂತಿದ್ದಾರೆ. ‘ಸಂಜೆ ಐದರ ಮಳೆ’, ‘ಅನಾಮಿಕ ಆಂಗ್ಲರು’, ‘ನೆನೆದವರ ಮನದಲ್ಲಿ’, ‘ಸುಮುಹೂರ್ತ’, ‘ನಾನೆಂಬ ಪರಕೀಯ’, ‘ಆಕಾಶಕ್ಕೆ ಸರಹದ್ದುಗಳಿಲ್ಲ’, ‘ಸ್ವಯಂಸೇವೆಯ ಗಿಳಿಗಳು’, ‘ಬಹಿರಂಗ’, ‘ವ್ಯಕ್ತಿಪರ ಕವನಗಳು’ ಮುಂತಾದ ಕವನಸಂಕಲನಗಳನ್ನು ಶ್ರೀಯುತರು ಪ್ರಕಟಿಸಿದ್ದಾರೆ. ವಿಮರ್ಶೆ, ಅನುವಾದ, ವೈಚಾರಿಕ ಪ್ರಕಾರಗಳಲ್ಲೂ ಸಾಕಷ್ಟು ಕೃಷಿ ಮಾಡಿರುವ ನಿಸಾರರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪುರಸ್ಕಾರ, ಪದ್ಮಶ್ರೀ, ನಾಡೋಜ ಮುಂತಾದ ಗೌರವಗಳು ಸಂದಿವೆ. ಇವರು 2007ರಲ್ಲಿ ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಆಕರ: ‘ವೃತ್ತಿಪರ ಕವನಗಳು’.

(ಆ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು

೧. ಯಾತನೆಗೂ ನಲ್ವಾತನೇ ನುಡಿವ ಮುಖಮುದ್ರೆ.

ಕೆ.ಎಸ್. ನಿಸಾರ್ ಅಹಮದ್ ಅವರ ‘ಶಿಲುಬೆ ಏರಿದ್ದಾನೆ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಗೋಡೆಯಲ್ಲಿರುವ ಏಸುವಿನ ಪಟವನ್ನು ನೋಡಿ ಕವಿಯು ಈ ಮೇಲಿನ ಮಾತನ್ನು ಹೇಳಿದ್ದಾರೆ. ಶಿಲುಬೆ ಏರಿರುವ ಜೀಸಸ್‌ನ ಪಟ ಗೋಡೆಯ ಮೇಲಿದೆ. ಆತನ ಶಿರ ಬಾಗಿದೆ, ಕುತ್ತಿಗೆಯಲ್ಲಿ ನರ ಉಬ್ಬಿದೆ. ಇದು ದುಃಖ ಅನುಭವಿಸುತ್ತಿರುವುದರ ಸಂಕೇತವಾಗಿದೆ. ಜಡಿದ ಮೊಳೆ, ಬಡಿದ ಮುಳ್ಳಿನ ಕಿರೀಟಗಳ ನೋವನ್ನು ಸಹಿಸಿಯೂ ಏಸುವಿನ ಮುಖಮುದ್ರೆಯು ಒಳ್ಳೆಯ ಮಾತನ್ನೇ ನುಡಿಯುವಂತಿದೆ ಎಂದು ಕವಿಯು ವಿವರಿಸಿದ್ದಾರೆ. ತಾನು ನೋವುಂಡರೂ, ನೋವು ಮಾಡಿದವರಿಗೆ ಹಿತವನ್ನೇ ಬಯಸುವ ಕರುಣಾಮಯಿಯಾಗಿ ಏಸುವು ಕವಿಯ ಕಣ್ಣಿಗೆ ಕಂಡಿರುವನು.

೨. ಮನ್ನಿಸಲಿ ನಿಮ್ಮನ್ನ ಆ ದೇವರೆ!

ಕೆ.ಎಸ್. ನಿಸಾರ್ ಅಹಮದ್ ಅವರ ‘ಶಿಲುಬೆ ಏರಿದ್ದಾನೆ’ ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವನ್ನು ಕವಿಯೇ ಉದ್ಗರಿಸಿದ್ದಾರೆ. ಏಸುವು ನಿರಪರಾಧಿಯಾದವನು. ಕೊಲೆಗಡುಕ ಬರಬ್ಬನನ್ನು ಕ್ಷಮಿಸಿದ ರೋಮಿನ ಯಾಜಕರು ಏಸುವನ್ನು ಕ್ಷಮಿಸದೆ, ಕಳ್ಳರಿಬ್ಬರೊಂದಿಗೆ ಗಲ್ಲಿಗೇರಿಸಲು ಆಗ್ರಹಿಸಿದರು. ಇದನ್ನು ನೆನೆದ ಕವಿಯು ನಿಮ್ಮ ದುಷ್ಟತನದ ಕೆಲಸವನ್ನು ‘ಆ ದೇವರು ಕ್ಷಮಿಸಲಿ’ ಎಂದಿದ್ದಾರೆ. ಅಕ್ಷಮ್ಯ ಅಪರಾಧವನ್ನು ಕ್ಷಮಿಸಬೇಕೆಂಬ ಉದಾರ ಹೃದಯಿಯಾದ ಏಸುವಿನ ಬೆಳಕು-ಆದರ್ಶ ಕವಿಯಲ್ಲೂ ಅನುರಣಿಸಿರುವುದನ್ನು ಗಮನಿಸಬಹುದು.

೩. ವೇಷ ಮರೆಸಿವೆ ಅಷ್ಟೆ – ಈ ಎಲ್ಲ ಕೇಡುಗಳು.

ಕೆ.ಎಸ್. ನಿಸಾರ್ ಅಹಮದ್ ಅವರ ಶಿಲುಬೆ ಏರಿದ್ದಾನೆ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.

ಏಸು ತಿಲುಬೆ ಏರಿದ ಕಾಲದಲ್ಲಿ ಜಗತ್ತಿನಲ್ಲಿ ದುಷ್ಟತನ ಕ್ರೌರ್ಯಗಳು ಬಲವಾಗಿ ನೆಲೆಯೂರಿ ಮುಗ್ಧರನ್ನು-ಆಮಾಯಕರನ್ನು ಶಿಕ್ಷಿಸಿ ಹಿಂಸಿಸುತ್ತಿದ್ದವು. ಈ ಗುಣಗಳು ಕಾಲರಾಯನ ಗುಜರಿ ಸೇರದೆ ಇಂದಿಗೂ ವೇಷ ಮರೆಸಿಕೊಂಡು ಜಗತ್ತನ್ನಾಳುತ್ತಿರುವುದನ್ನು ಕವಿಯು ಈ ಮೇಲಿನ ವಾಕ್ಯದ ಮೂಲಕ ವಿವರಿಸಿದ್ದಾರೆ. ವೇಷ ಮರೆಸಿರುವ ಕೇಡುಗಳು ರೈಫಲ್ಲು, ಟ್ಯಂಕ್, ಬಾಂಬು ಗ್ರನೇಡುಗಳ ರೂಪದಲ್ಲಿ ಹಿಂಸೆಯನ್ನು ಚಾಲ್ತಿಯಲ್ಲಿರಿಸಿರುವುದನ್ನು ಕವಿ ಇಲ್ಲಿ ಉದಾಹರಿಸಿದ್ದಾರೆ.

೪. ಬಂದೇ ತೀರುತ್ತದೆ ದೈವೀರಾಜ್ಯ

ಕೆ.ಎಸ್. ನಿಸಾರ್ ಅಹಮದ್ ಅವರ ಶಿಲುಬೆ ಏರಿದ್ದಾನೆ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ. ಏಸುವು ಶಿಲುಬೆ ಏರಿದ್ದರೂ ಆತ ಮತ್ತೆ ಉದಯಿಸಿ ಬಂದು ದೈವೀರಾಜ್ಯವನ್ನು ತರುವನೆಂಬ ನಂಬಿಕೆ ಕವಿಯದಾಗಿದೆ. ದುಷ್ಟರ ಸಾಮ್ರಾಜ್ಯಕ್ಕೆ ಅವರ ಕ್ರೋಧ ಹಾಗೂ ತಿಳಿಗೇಡಿತನಕ್ಕೆ ಅಂತ್ಯವನ್ನು ಹಾಡಿ ದೈವೀಸಾಮ್ರಾಜ್ಯವನ್ನು ತರಲೆಂದೇ ವಿಸುವು ಶಿಲುಬೆಯನ್ನು ಏರಿದ್ದಾನೆ. ಆತ ಮರಳಿ ಬಂದು ದುಷ್ಟತನವನ್ನು ತೊಲಗಿಸಿ, ಸತ್ಯಕ್ಕೆ, ಒಳ್ಳೆಯತನಕ್ಕೆ ಅವಕಾಶ ಮಾಡಿಕೊಡುವನೆಂಬ ಆಶಯವನ್ನು ಕವಿಯು ಈ ಮೇಲಿನ ವಾಕ್ಯದ ಮೂಲಕ ವ್ಯಕ್ತಪಡಿಸಿದ್ದಾರೆ.

೮. ದಿನನಿತ್ಯ ಶಿಲುಬೆಯೇರಿದ್ದಾನೆ ಜೀಸಸ್,

ಕೆ.ಎಸ್. ನಿಸಾರ್ ಅಹಮದ್ ಅವರ ‘ಶಿಲುಬೆ ಏರಿದ್ದಾನೆ’ ಎಂಬ ಕವಿತೆಯ ಅಂತ್ಯದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು.

ಏಸುಕ್ರಿಸ್ತನು ಇಂದಿಗೂ ದಿನನಿತ್ಯ ಶಿಲುಬೆ ಏರುವುದನ್ನು ಕವಿಯು ವಿವರಿಸಿದ್ದಾರೆ. ಆದರೆ ಆತ ಇಂದು ಶಿಲುಬೆಗೇರಿರುವುದು ಮತಗಳೆಂಬ ಮತಿಹೀನರ ದರ್ಪದಲ್ಲಿ ಶೋಷಣೆಗೊಳಗಾಗಿರುವ ಮುಗ್ಧರಲ್ಲಿ, ಅಮಾಯಕರಾಗಿ ಶಿಕ್ಷೆಗೆ ಗುರಿಯಾಗುತ್ತಿರುವ ದುಃಖಿತರ ಕಂಬನಿಗಳಲ್ಲಿ, ಆಸ್ಪತ್ರೆಗಳಲ್ಲಿ ನರಳುತ್ತಿರುವ ರೋಗಿಗಳ ರೂಪದಲ್ಲಿ, ತಿಂಗಳಿಗೊಮ್ಮೆಯೂ ದೀಪಹಚ್ಚಲು ಶಕ್ತಿಯಿಲ್ಲದ ಬಡವರ ಮನೆಗಳಲ್ಲಿ ಏಸುವು ದಿನನಿತ್ಯವೂ ಶಿಲುಬೆ ಏರಿ, ನೊಂದವರ ಕಂಬನಿಯನ್ನೊರೆಸುತ್ತಿದ್ದಾನೆಂದು ಕವಿಯು ಹೇಳಿದ್ದಾರೆ.

ಹೆಚ್ಚುವರಿ ಪ್ರಶ್ನೆಗಳು:

೬. ಕಾಲರಾಯನ ಗುಜರಿ ಸೇರಿಲ್ಲ.

ಶ್ರೀ ಕೆ.ಎಸ್. ನಿಸಾರ್ ಅಹಮದ್ ಅವರು ಬರೆದಿರುವ ‘ಶಿಲುಬೆ ಏರಿದ್ದಾನೆ’ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.

ದುಷ್ಟ ಜನರು ಜೀಸಸ್‌ನ ವಿಚಾರದಲ್ಲಿ ಕ್ರೂರವಾಗಿ ನಡೆದುಕೊಂಡರು. ಆ ಕ್ರೌರ್ಯ ಈಗಲೂ ವೇಷ ಮರೆಸಿಕೊಂಡು ಚಾಲ್ತಿಯಲ್ಲಿವೆ ಎಂಬುದನ್ನು ವಿವರಿಸುವಾಗ ಕವಿಯು ನಿಮ್ಮ ಕ್ರೌರ್ಯ ಕಾಲರಾಯನ ಗುಜರಿ ಸೇರಿಲ್ಲ, ಈ ಎಲ್ಲ ಕೇಡುಗಳು, ರೈಫಲ್ಲು, ಟ್ಯಾಂಕು, ಬಾಂಬು, ಗ್ರನೇಡುಗಳ ರೂಪದಲ್ಲಿ ಹಿಂಸೆಯನ್ನು ಚಾಲ್ತಿಯಲ್ಲಿಟ್ಟಿವೆ. ಅಮಾಯಕರನ್ನು ಆ ಕ್ರೌರ್ಯ ಹಿಂಸಿಸುತ್ತಿವೆ ಎಂಬುದಾಗಿ ವರ್ತಮಾನದ ಹಿಂಸೆಯ ಸ್ವರೂಪವನ್ನು ವಿವರಿಸುವಾಗ ಕವಿಯು ಈ ಮೇಲಿನಂತೆ ಹೇಳಿದ್ದಾರೆ.

(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).

೧. ಕ್ರಿಸ್ಮಸ್ ಪ್ಲಾಸ್ಟಿಕ್ ನಕಲಿನ ಕುಬ್ಬತೆಗೆ ಯಾವ ರೂಪ ಕರುಣಿಸಿದೆ?

ಗಿಡದ

೨. ಕ್ರಿಸ್ಮಸ್ ಸಂದರ್ಭದಲ್ಲಿ ಹತ್ತಿ ಯಾವ ಕೆಲಸ ಮಾಡಿದೆ?

ಮಂಜಿನ

೩. ಶಿಲುಬೆಯೇರಿದವರು ಯಾರು?

ಎಸುಕ್ರಿಸ್ತ

೪. ಜೀಸಸ್‌ನ ಮುಖಮುದ್ರೆ ಎನನ್ನು ನುಡಿವಂತಿದೆ?

ನಲ್ಪಾತನ್ನು

೫. ಜೀಸಸ್‌ನ ಶಿಲುಬೆಗೇರಿಸಿದವರು ಯಾರ ವಕಾಲತ್ತು ನಡೆಸಿದವರಾಗಿದ್ದಾರೆ?

ಬರಬ್ಬನ

೬. ಏನು ಬಂದೇ ತೀರುತ್ತದೆ ಎಂಬ ನಂಬಿಕೆಯಲ್ಲಿ ಜೀಸಸ್ ಶಿಲುಬೆ ವಿರಿದ್ದಾನೆ?

ದೈವೀರಾಜ್ಯ

೭. ಕವಿಯ ಪ್ರಕಾರ ತಿಂಗಳಿಗೊಂದು ಸಲವೂ ದೀಪ ಹಚ್ಚದ ಸ್ಥಳ ಯಾವುದು?

ದಲಿತವಾಸದ ಸೋಗೆ ಬಿಲಗಳು

೮. ಯಾರ ಕಂಬನಿಯನ್ನೊರೆಸಿ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ?

ಶೋಷಿತರ

ಹೆಚ್ಚುವರಿ ಪ್ರಶ್ನೆಗಳು:

೯. ಕವಿ ಯಾವುದಕ್ಕೆ ಆಜ್ಯ ಎನ್ನುತ್ತಾರೆ?

ಕ್ರೋಧ ಮತ್ತು ತಿಳಿಗೇಡಿತನಕ್ಕೆ

೧೦. ಜೀಸಸ್ ಯಾರ ಕಂಬನಿಯನ್ನು ಒರೆಸುತ್ತಾರೆ?

ಶೋಷಿತರ

೧೧. ಕೇಕು ಮತ್ತು ಚಳಿಗಳನ್ನು ಯಾವುದು ಹೊತ್ತು ತಂದಿದೆ?

ಕ್ರಿಸ್ಮಸ್

೧೨. ಕ್ರಿಸ್ತನ ಎಡಕ್ಕೂ ಬಲಕ್ಕೂ ಯಾರನ್ನು ತೂಗಿ ಸನ್ಮಾನಿಸಲಾಯಿತು?

ಕಳ್ಳರನ್ನು

೧೩. ದಲಿತ ವಾಸಸ್ಥಳಗಳಿ ಹೇಗಿವೆ?

ಸೋಗೆಯ ಬಿಲಗಳಂತೆ

(ಇ) ಎರಡು ಅಂಕದ ಪ್ರಶ್ನೆಗಳು (ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿ).

೧. ಕ್ರಿಸ್ಮಸ್ ಮನೆಗೆ ಏನನ್ನು ಹೊತ್ತು ತಂದಿದೆ?

ಕ್ರಿಸ್ಮಸ್ ಮನೆಗೆ ರೇಕು, ಚಳಿ, ನಕ್ಷತ್ರ, ದೀಪ, ಮಂಜು ಹತ್ತಿಯ ರೂಪತಾಳಿದ ಪ್ಲಾಸ್ಟಿಕ್ಕಿನ ಕ್ರಿಸ್‌ಮಸ್ ಮರ ಮುಂತಾದನ್ನು ಹೊತ್ತುತಂದಿದೆ.

೨. ತಿಲುಬೆಗೇರಿದ ಯೇಸುವಿನ ದೇಹ ಯಾರಿಗೆ, ಏನನ್ನು ನುಡಿದಂತಿದೆ?

ಶಿಲುಬೆ ಏರಿದ ಏಸುವು ಕೊಲೆಗಡುಕ ಬರಬ್ಬನ ವಕಾಲತ್ತು ವಹಿಸಿದ, ಕಳ್ಳರೊಂದಿಗೆ ತನ್ನನ್ನು ಗಲ್ಲು ಶಿಕ್ಷೆಗೆ ಗುರಿಮಾಡಿದ ರೋಮನ್ ಯಾಜಕರನ್ನು ದೇವರು ಕ್ಷಮಿಸಲಿ ಎಂದು ಪ್ರಾರ್ಥಿಸುವಂತಿದೆ.

೩. ಶಿಲುಬೆಗೇರಿಸಿದವರ ಗುಣಗಳು ಇಂದು ಯಾವ ವೇಷ ತಾಳಿವೆ?

ಶಿಲುಬೆಗೇರಿಸಿದವರ ಗುಣಗಳು ಇಂದಿಗೂ ವೇಷ ಮರೆಸಿಕೊಂಡಿವೆ. ಅವರ ಕೇಡುಗಳಿಂದು ರೈಫಲ್, ಟ್ಯಾಂಕು, ಬಾಂಬು ಮತ್ತು ಗ್ರನೇಡುಗಳ ರೂಪ ತಳೆದಿವೆ.

೪. ಯಾವ ಸಂದೇಶವನ್ನು ನೀಡುವ ರೀತಿಯಲ್ಲಿ ಜೀಸಸ್ ಶಿಲುಬೆಯೇರಿದ್ದಾನೆ?

ದುಷ್ಟರ ಸಾಮ್ರಾಜ್ಯ ದೂರವಾಗಿ, ಅವರ ಕ್ರೋಧ-ತಿಳಿಗೇಡಿತನಗಳು ಮರೆಯಾಗಿ ದೈವೀರಾಜ್ಯವು ಬಂದೇ ತೀರುತ್ತದೆಂಬ ಸಂದೇಶವನ್ನು ಸಾರುವವನಂತೆ ಜೀಸಸ್ ಶಿಲುಬೆಯನ್ನು ವಿರಿದ್ದಾನೆ.

ಹೆಚ್ಚುವರಿ ಪ್ರಶ್ನೆಗಳು:

೫. ಯಾವ ವಸ್ತುಗಳು ಕಾಲರಾಯನ ಗುಜರಿ ಸೇರಿಲ್ಲ?

ಬಡಿದ ಸುತ್ತಿಗೆಗಳು, ಮುಳ್ಳಿನ ಮಕುಟ, ಹಬ್ಬಿಸಿದ ಸುಳ್ಳು, ರೋಮನ್ನರ ಕಿವಿಡೆಬ್ಬಿಸುವ ಕೊಂಬುಗಳು ಕಾಲರಾಯನ ಗುಜರಿ ಸೇರಿಲ್ಲ

೬. ಕ್ರಿಸ್ತ ಎಲ್ಲೆಲ್ಲಿ ಶಿಲುಬೆಗೇರಿದ್ದಾನೆ?

ಇಗರ್ಜಿ, ಮಸಜೀದು, ದೇವಸ್ಥಾನ, ಮಠ, ಕೋರ್ಟು, ಕಾರ್ಖಾನೆ, ಠಾಣೆ, ಬಂದೀಖಾನೆ, ದವಾಖಾನೆಯ ಕೋಣೆ, ದಲಿತವಾಸದ ಸೋಗೆ ಬಿಲಗಳಲ್ಲಿ ಕ್ರಿಸ್ತ ಶಿಲುಬೆಗೇರಿದ್ದಾನೆ.

೭. ಗೋಡೆಯಲ್ಲಿರುವ ಕ್ರಿಸ್ತನ ಚಹರೆ ಹೇಗಿದೆ?

ಬಾಗಿದ ಶಿರ, ಕುತ್ತಿಗೆಯಲ್ಲಿ ಉಬ್ಬಿದ ನರ, ಯಾತನೆಗೂ ನಲ್ವಾತನೇ ನುಡಿವ ಮುಖಮುದ್ರೆ, ತೆರೆದೆದೆ ಎನ್ನುವಂತಿರುವ ಕ್ರಿಸ್ತನ ಚಹರೆ ಗೋಡೆಯಲ್ಲಿ ಕವಿಗೆ ಕಾಣುತ್ತದೆ.

(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):

೧. ಶಿಲುಬೆಗೇರಿದ ಜೀಸಸ್‌ನ ದೇಹ ಏನನ್ನು ಹೇಳುವಂತಿದೆ? ಏವರಿಸಿ.

ಶಿಲುಬೆಗೇರಿರುವ ಏಸುವಿನ ದೇಹವು ತಪ್ಪು ಮಾಡಿದವರನ್ನು ಕ್ಷಮಿಸೆಂದು ಪ್ರಾರ್ಥಿಸುವಂತಿದೆ. ಆತನ ಶಿರ ಬಾಗಿದೆ, ಕುತ್ತಿಗೆಯ ನೆರವು ಉಬ್ಬಿಕೊಂಡಿದ್ದು ದುಃಖ-ನೋವನ್ನು ನುಂಗಿದಂತಿದೆ. ಆತನ ಮುಖಮುದ್ರೆ ಮತ್ತು ತೆರೆದ ಎದೆಯು ಯಾತನೆಯಲ್ಲಿಯೂ ನಲ್ವಾತನ್ನೇ ನುಡಿಯುವಂತೆ ತೋರುತ್ತಿದೆ. ಬರಬ್ಬರ ಕೊಲೆಗಡುಕತನವನ್ನು ಕ್ಷಮಿಸಿ, ನಿರಪರಾಧಿಯಾದ ತನ್ನನ್ನು ಕ್ಷಮಿಸದ, ಬದಲಿಗೆ ಕಳ್ಳರೊಂದಿಗೆ ಗಲ್ಲಿಗೇರಿಸಿದ ರೋಮಿನ ಯಾಜಕರನ್ನು ಆ ದೇವರು ಕ್ಷಮಿಸಿಬಿಡಲಿ ಎನ್ನುವ ಭಾವವನ್ನು ಬಿಂಬಿಸುವಂತಿದೆ ಎಂದು ಕವಿಯು ವಿವರಿಸಿದ್ದಾರೆ.

೨. ಯಾವ ಸ್ಥಳಗಳಲ್ಲಿ ದೇಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ? ಚರ್ಚಿಸಿ.

ಇಂದಿಗೂ ಜೀಸಸ್ ದಿನನಿತ್ಯ ಶಿಲುಬೆ ಏರುತ್ತಲೇ ಇರುವನೆಂದು ಕವಿಯು ಅದನ್ನು ಕೆಲವು ಉದಾಹರಣೆಗಳ ಮೂಲಕ ವಿವರಿಸಿ ಹೇಳಿದ್ದಾರೆ. ಚರ್ಚು, ಮಸೀದಿ, ದೇವಸ್ಥಾನ ಮತ್ತು ಮರಗಳಲ್ಲಿ ಮತದ ವಿಚಾರವಾಗಿ ಮತಿರಹಿತ ಹಟಿಗಳು ಮುನ್ನೆಲೆಗೆ ಬಂದಿವೆ. ಅಲ್ಲಿ ಏಸು ಶಿಲುಬೆಗೇರುವನು. ಕೋರ್ಟಿನಲ್ಲಿ ಕಾರ್ಖಾನೆಗಳಲ್ಲಿ ಠಾಣೆಗಳಲ್ಲಿ ಬಂದೀಖಾನೆಗಳಲ್ಲಿ, ಆಸ್ಪತ್ರೆಗಳಲ್ಲಿ ನರಳುತ್ತಿರುವವರ-ಶೋಷಣೆಗೊಳಗಾದ ಜನರ ದುಃಖ ಸಂಕಟಗಳಲ್ಲಿ ಏಸುಕ್ರಿಸ್ತನು ಶಿಲುಬೆ ವಿರುತ್ತಾನೆ. ತಿಂಗಳಿಗೊಮ್ಮೆ ಗುಡಿಸಲಿನಲ್ಲಿ ದೀಪಹಚ್ಚುವ ಶಕ್ತಿ ಇಲ್ಲದ ಜನರ ಸೋಗೆ ಬಿಲಗಳಲ್ಲಿಯೂ ಜೀಸಸ್ ದಿನನಿತ್ಯ ಶಿಲುಬೆ ಏರಿದ್ದಾನೆ. ಶೋಷಿತರ ಕಂಬನಿಯನ್ನೊರೆಸುವ ಸಲುವಾಗಿ ಆತ ಶಿಲುಬೆಯೇರಿರುವನೆಂದು ಕವಿ ವಿವರಿಸಿದ್ದಾರೆ.

೩. ‘ತಿಲುದೆ ಏರಿದ್ದಾನೆ’ ಕವನದಲ್ಲಿ ಜೀಸಸ್ ವ್ಯಕ್ತಿತ್ವ ಮತ್ತು ಆತನ ಮಹತ್ವವನ್ನು ಕವಿ ಯಾವ ರೀತಿ ನಿರೂಪಿಸಿದ್ದಾರೆ?

ಕವಿತೆಯ ಸಾರಾಂಶವನ್ನು ಸಂಗ್ರಹಿಸಿ ಬರೆಯಿರಿ.

ಹೆಚ್ಚುವರಿ ಪ್ರಶ್ನೆಗಳು:

೪. ಕ್ರಿಸ್ತನ ಕಾಲದ ಕೇಡುಗಳು ಈಗ ಹೇಗೆ ವೇಷ ಮರೆಸಿಕೊಂಡಿವೆ?

ಕ್ರಿಸ್ತನ ಕಾಲದ ಕೇಡುಗಳಾವುವೂ ಈಗ ಗುಜರಿ ಸೇರಿಲ್ಲ, ಬದಲಿಗೆ ವೇಷ ಮರೆಸಿಕೊಂಡಿವೆ. ಈ ಎಲ್ಲ ಕೇಡುಗಳೂ ರೈಫಲ್ಲು, ಟ್ಯಾಂಕು, ಬಾಂಬು, ಗ್ರನೇಡುಗಳು ಕ್ರಿಸ್ತನ ಕಾಲದ ಕ್ರೌರ್ಯ- ಕೇಡುಗಳಿಗೆ ಚಲನೆಯನ್ನೊದಗಿಸಿ, ಅಮಾಯಕರನ್ನು ಹಿಂಸಿಸುತ್ತಿವೆ. ಈ ದುಷ್ಟ ಆಯುಧಗಳನ್ನು ಕೈಯಲ್ಲಿ ಹಿಡಿದಿರುವ ಬಲಿಷ್ಠ ಕೈಗಳು ಮನದೊಳಗೆ ಹುದುಗಿಸಿಕೊಂಡಿರುವ ದ್ವೇಷಾಸೂಯೆಗಳಿಂದ ಪ್ರತೀಕಾರ ಕೈಗೊಂಡಿವೆ ಎಂಬುದಾಗಿ ಕವಿಯು ವಿವರಿಸಿದ್ದಾರೆ.

೫. ಕ್ರಿಸ್ಮಸ್ ಆಗಮನವನ್ನು ಕವಿ ಹೇಗೆ ಚಿತ್ರಿಸಿದ್ದಾರೆ?

ಡಿಸೆಂಬರ್‌ನಲ್ಲಿ ಕ್ರಿಸ್ಮಸ್‌ನ ಆಗಮನದ ಸಂಭ್ರಮ. ಪ್ರತಿಯೊಬ್ಬರ ಮನೆಯಲ್ಲೂ ಸಂಭ್ರಮ ತರುವ ಕ್ರಿಸ್ಮಸ್ ಮನೆಗೆ ಕೇಕು, ನಕ್ಷತ್ರ ದೀಪ, ಚಳಿಗಳೊಂದಿಗೆ ಆಗಮಿಸುತ್ತದೆ. ಮನೆಯೊಳಗೆ ಪ್ಲಾಸ್ಟಿಕಿನ ಕ್ರಿಸ್ಮಸ್ ಗಿಡಗಳು ಬಂದು ಕುಳಿತರೆ, ಆ ಗಿಡಕ್ಕೆ ಹತ್ತಿಯಿಂದ ಮಾಡಿದ ಮಂಜಿನ ರೂಪವನ್ನು ಅಂಟಿಸಿರುತ್ತಾರೆ. ಮನೆಯ ಮುಂದೆ ಕ್ರಿಸ್ಮಸ್ ಸ್ಟಾರ್ ನೇತುಹಾಕುವುದು, ಕೇಕು ತಿಂದು-ಹಂಚುವುದು. ಈ ಎಲ್ಲ ಸಂಭ್ರಮಗಳೂ ಕ್ರಿಸ್ಮಸ್ ಆಗಮನದ ಸಂಕೇತವಾಗಿದೆ. ಇದರೊಂದಿಗೆ ಮೋಂಬತ್ತಿಯ ಬೆಳಕು, ಪ್ರಾರ್ಥನೆಗಳೂ ದಿವ್ಯ ಅನುಭವಗಳನ್ನು ನೀಡುತ್ತವೆ.

ಭಾಷಾಭ್ಯಾಸ:

೧. ಈ ಕವಿತೆಯಲ್ಲಿ ಬಂದಿರುವ ಅನ್ಯದೇಶ ಪದಗಳನ್ನು ಸಂಗ್ರಹಿಸಿರಿ. ಉದಾ: ರೈಫಲ್ಲು, ಟ್ಯಾಂಕು.

ಕ್ರಿಸ್ಮಸ್, ಕೇಕು, ಪ್ಲಾಸ್ಟಿಕ್, ನಕಲು, ಸ್ಕರ್ಟ್, ಮೋಂಬತ್ತಿ, ಶಿಲುಬೆ, ಜೀಸಸ್, ವಕಾಲತ್ತು, ರೋಮ್, ರೈಫಲ್, ಟ್ಯಾಂಕು, ಬಾಂಬು, ಗ್ರನೇಡು, ಇಗರ್ಜಿ, ಮಸಜೀದು, ಕೋರ್ಟು, ಕಾರ್ಖಾನೆ, ದವಾಖಾನೆ – ಇತ್ಯಾದಿ.

೨. ಈ ಕವಿತೆಯಲ್ಲಿ ಬಂದಿರುವ ತತ್ಸಮ-ತದ್ಭವ ಪದಗಳನ್ನು ಗುರುತಿಸಿರಿ.

ಉದಾ: ಶಿರ, ಸಿರ.

ಶಿರ – ಸಿರ

ರಾಯ – ರಾಜ

ವೇಷ – ವೇಸ

ಮಸಜೀದು – ಮಸೀದಿ.

ಕೆಳಗಿನ ಪದ್ಯದ ಭಾವಾರ್ಥವನ್ನು ಬರೆಯಿರಿ:

೧. ನೀವು ಬಡಿದ ಸುತ್ತಿಗೆಗಳು

ಮೊಳೆಗಳು

ಮಕುಟ ಹೆಣೆದ ಮುಳ್ಳುಗಳು

ಹಬ್ಬಿಸಿದ ಸುಳ್ಳುಗಳು

ರೋಮನರ ಕಿವಿಡೆಬ್ಬಿಸುವ ಕೊಂಬುಗಳು

ಕಾಲರಾಯನ ಗುಜರಿ ಸೇರಿಲ್ಲ

ವೇಷ ಮರೆಸಿವೆ ಆದ್ರೆ, ಈ ಎಲ್ಲ ಕೇಡುಗಳು:

ರೈಫಲ್ಲು ಬ್ಯಾಂಕು, ಬಾಂಬು, ಗ್ರನೇಡುಗಳು.

ಅವಕ್ಕೆ ಚಲನೆಯೊದಗಿಸಿವೆ:

ನಿಮ್ಮವೇ ಬಲಿಷ್ಠ ಕೈಯಿಗಳು, ಎದೆಯಾಳದ ಮುಖ್ಯಿಗಳು,

ಎದೆಯಾಳದ ಮುಯ್ಯಿಗಳು.

ಕೆ.ಎಸ್. ನಿಸಾರ್ ಅಹಮದ್ ಅವರು ಬರೆದಿರುವ ‘ಶಿಲುಬೆ ಏರಿದ್ದಾನೆ’ ಎಂಬ ಕವಿತೆಯಿಂದ ಈ ಮೇಲಿನ ಪದ್ಮಭಾಗವನ್ನು ಆಯ್ದುಕೊಳ್ಳಲಾಗಿದೆ.

ಏಸುಕ್ರಿಸ್ತವನ್ನು ಶಿಲುಬೆಗೇರಿಸಿದ ಸಂದರ್ಭಗಳನ್ನು ಕವಿ ಇಲ್ಲಿ ಪುನರ್ ಸ್ಮರಣೆ ಮಾಡಿದ್ದಾರೆ. ಏಸುವನ್ನು ಶಿಲುಬೆಗೇರಿಸಿ ಸುತ್ತಿಗೆಯಿಂದ ಬಡಿಯಲಾಯಿತು. ಮೊಳೆ ಜಡಿಯಲಾಯಿತು. ತಲೆಗೆ ಮುಳ್ಳನ ಕಿರೀಟ ಹಾಕಿ ಇಲ್ಲಿ ಸಲ್ಲುವ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ ರೋಮನ್ನರು ವಿಜಯೋತ್ಸಾಹದಿಂದ ಕೊಂಬು ಕಹಳೆಗಳ ದನಿಯನ್ನು ಮೊಳಗಿಸಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ರೋಮನ್ನರ ಈ ಕೆಡುಕಿನ ವರ್ತನೆಯು ಕಾಲರಾಯನ ಗುಜರಿ ಸೇರಿಲ್ಲ. ವೇಷ ಮರೆಸಿ ಕೊಂಡಿರುವ ಈ ಎಲ್ಲ ಕೇಡಿನ ಸ್ವರೂಪಗಳೆಂದು ರೈಫಲ್ಲು ಬ್ಯಾಂಕು, ಬಾಂಬು, ಗ್ರನೇಡುಗಳ ರೂಪದಲ್ಲಿ ಅವೆಲ್ಲವೂ ಚಾಲ್ತಿಯಲ್ಲಿದೆ. ಮವ್ವರ ಬಲಿಷ್ಠ ಕೈಯಿಗಳು ಮುು ತೀರಿಸುವ ನೆಪದಲ್ಲಿ ರೋಮನ್ನರ ಕೆಡುಕನ್ನು ಚಾಲನೆಯಲ್ಲಿಟ್ಟಿವೆ. ವಿಸುಕ್ರಿಸ್ತನೆಂಬ ಇತಿಹಾಸವುರುಷ ವರ್ತಮಾನದಲ್ಲೂ ಚಾಲ್ತಿಯಲ್ಲಿದ್ದಾನೆಂಬ ಕಲ್ಪನೆ ಚರಿತ್ರೆ-ವರ್ತಮಾನಗಳನ್ನು ಇಲ್ಲಿ ಬೆಸೆದಿವೆ. ಏಸುವಿನ ಅಹಿಂಸಾ ಬೋಧನೆಯು ಕಣ್ಮರೆಯಾಗಿ ಹೋಗಿರುವುದನ್ನು ಇಲ್ಲಿ ವ್ಯಂಗ್ಯವಾಗಿ ಚಿತ್ರಿಸಲಾಗಿದೆ.

೨. ಶಿಲುಬೆಯೇರಿದ್ದಾನೆ ಜೀಸಸ್ ಗೋಡೆಯಲ್ಲಿ;

ಬಾಗಿದ ಶಿರ

ಕುತ್ತಿಗೆಯಲ್ಲಿ ಉಬ್ಬಿದೊಂದು ನರ.

ಯಾತನೆಗೂ ನಲ್ವಾತನೇ ನುಡಿವ ಮುಖ ಮುದ್ರೆ;

ತೆರೆದೆದೆ

ಎನ್ನುವಂತಿದೆ;

ಕೊಲೆಗಡುಕ ಬರಬ್ಬನ ವಕಾಲತ್ತು ನಡೆಸಿದವರೆ,

ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನ ತೂಗಿ ಸನ್ಮಾನಿಸಿದವರೆ,

ಮನ್ನಿಸಲಿ ನಿಮ್ಮನ್ನ – ಆ ದೇವರೆ!

ಕೆ.ಎಸ್. ನಿಸಾರ್ ಅಹಮದ್ ಅವರು ಬರೆದಿರುವ ‘ಶಿಲುಬೆ ಏರಿದ್ದಾನೆ’ ಎಂಬ ಕವಿತೆಯಿಂದ ಈ ಮೇಲಿನ ಪದ್ಮಭಾಗವನ್ನು ಆಯ್ದುಕೊಳ್ಳಲಾಗಿದೆ.

ಕವಿ ಗೋಡೆಗೆ ಅಂಟಿರುವ ಶಿಲುಬೆಯ ಏಸುವಿನ ಚಿತ್ರ ನೀಡಿದ್ದಾರೆ. ಶಿಲುಬೆಗೆ ಏರಿಸಿರುವ ಜೀಸಸ್‌ನ ಪಟವಿದೆ. ಜೀಸಸ್‌ನ ಬಾಗಿದ ಶಿರ, ಅವನ ಕುತ್ತಿಗೆಯ ಭಾಗದಲ್ಲಿ ನರವೊಂದು ಉಬ್ಬಿರುವುದನ್ನು ಗಮನಿಸಿದ್ದಾರೆ. ಮೊಳೆ ಜಡಿದು ನೇಣು ಹಾಕುತ್ತಿರುವುದರಿಂದ ಆಗುತ್ತಿರುವ ಯಾತನೆ-ನೋವನ್ನು ಮರೆಸಿಯೂ ನೋವಿನಲ್ಲೂ ಒಳ್ಳೆಯ ಮಾತುಗಳನ್ನಾಡಬಲ್ಲ ಎನ್ನುವಂತಹ ಮುಖಮುದ್ರೆ ಜೀಸಸ್‌ನದಾಗಿದೆ. ಅವನದು ಎಲ್ಲರಿಗೂ ತೆರೆದ ಮನಸ್ಸು, ತಕ್ಷಣ ಕವಿಗೆ ಜೀಸಸ್‌ನ ಸಾವಿನ ಸಂದರ್ಭ ಕಣ್ಣೆದುರು ಮೂಡಿ ನಿಲ್ಲುತ್ತದೆ. ಏಸುವನ್ನು ಶಿಲುಬೆಗೇರಿಸಲು ಆಗ್ರಹಿಸಿದ ರೋಮ್ ಯಾಜಕರು ಆ ಪವಿತ್ರದಿನದಂದು ಕೊಲೆಗಡುಕನಾದ ಬರಬ್ಬನನ್ನು ಕ್ಷಮಿಸಲು ಆಗ್ರಹಿಸುತ್ತಾರೆಯೇ ವಿನಹ: ಜೀಸಸ್‌ನನ್ನು ಕ್ಷಮಿಸಲು ಒಪ್ಪುವುದಿಲ್ಲ. ಅವರ ಒತ್ತಡಕ್ಕೆ ಮಣಿದು ಇಬ್ಬರು ಕಳ್ಳರ ಮಧ್ಯೆ ಜೀಸಸ್‌ನನ್ನು ಗಲ್ಲಿಗೇರಿಸಲಾಯಿತು. ಆದ್ದರಿಂದ ಕವಿ ಜೀಸಸ್‌ಗೆ ಇಂತಹ ಸ್ಥಿತಿ ತಂದಿತ್ತ ಕ್ರೂರಿಗಳನ್ನು ಆ ದೇವರು ಮನ್ನಿಸಲಿ ಎಂದು ಪ್ರಾರ್ಥಿಸುತ್ತಾರೆ.

ಕವಿತೆಯ ಸಾರಾಂಶ ಮತ್ತು ವಿಮರ್ಶೆ

ಕೆ.ಎಸ್. ನಿಸಾರ್ ಅಹಮದ್ ಅವರು ರಚಿಸಿರುವ ‘ಶಿಲುಬೆ ಏರಿದ್ದಾನೆ’ ಎಂಬ ಈ ಕವಿತೆಯನ್ನು ಅವರ ‘ವ್ಯಕ್ತಿಪರ ಕವನಗಳು’ ಎಂಬ ಸಂಗ್ರಹದಿಂದ ಆಯ್ದುಕೊಂಡಿದೆ. ಇಲ್ಲಿ ಶಿಲುಬೆಯನ್ನು ಏರಿದವನು ಕ್ರೈಸ್ತ ಧರ್ಮದ ಸಂತನೆನಿಸಿದ ಏಸುಕ್ರಿಸ್ತ ಅಥವಾ ಜೀಸಸ್, ಆತ ತನ್ನ ಸಾವಿನ ಸಂದರ್ಭದಲ್ಲಿಯೂ ಲೋಕಕಲ್ಯಾಣದ ಹಿತವನ್ನು ಚಿಂತಿಸಿದ ಮಹಾತ್ಮ ಆತನ ಪ್ರೀತಿ, ಕರುಣೆ, ಔದಾರ್ಯಗಳು ಇಂದಿನ ವಿಷಮ ವಾತಾವರಣದಲ್ಲಿ ಎಲ್ಲರ ಹೃದಯಗಳಲ್ಲೂ ಅನುರಣನಗೊಳ್ಳಬೇಕೆಂದು ಕವಿ ಆಶಿಸಿದ್ದಾರೆ.

೧. ಕ್ರಿಸ್ಮಸ್ ಹೊತ್ತು ತಂದಿದೆ ಈ ಮನೆಗೆ,

ಕೇಕು, ಚಳಿ, ನಕ್ಷತ್ರ ದೀಪ;

ಪ್ಲಾಸ್ಟಿಕ್ ನಕಲಿನ ಕುಬ್ಬತೆಗೆ

ಕರುಣಿಸಿದೆ ಗಿಡದ ರೂಪ;

ಅದಕ್ಕೆ ಮಂಜಿನ ಕೆಲಸ ಮಾಡಿದೆ ಹತ್ತಿ,

ಸ್ಕರ್ಟಿನ ಹುಡುಗಿಯ ಮೊಣಕಾಲಲ್ಲಿ

ಬೆಚ್ಚಗಾಗಿದೆ ಮೋಂಬತ್ತಿ.

ಕವಿತೆಯ ಆರಂಭವು ಡಿಸೆಂಬರ್ ತಿಂಗಳಲ್ಲಿ ಜಗತ್ತಿನಾದ್ಯಂತ ಆಚರಿಸಲ್ಪಡುವ ಕ್ರಿಸ್ಮಸ್ ಹಬ್ಬದ ಆಗಮನವನ್ನು ಕುರಿತು ಚಿತ್ರಿಸುತ್ತದೆ. ಪ್ರತಿಯೊಬ್ಬ ಕ್ರಿಶ್ಚಿಯನ್ ಧರ್ಮೀಯನ ಮನೆಯಲ್ಲೂ ಸಂಭ್ರಮ ತರುವ ಕ್ರಿಸ್ಮಸ್ ಮನೆಗೆ ಕೇಕು, ನಕ್ಷತ್ರ ದೀಪಗಳನ್ನು ಹೊತ್ತು ತರುತ್ತದೆ. ಡಿಸೆಂಬರ್‌ನ ಕೊರೆಯುವ ಚಳಿಯಲ್ಲೂ ಈ ಸಂಭ್ರಮಕ್ಕೆ ಕೊರತೆಯಿಲ್ಲ. ಮನೆಯೊಳಗೆ ಪ್ಲಾಸ್ಟಿಕಿನ ಕ್ರಿಸ್ಮಸ್ ಗಿಡಗಳು ಬಂದು ಕುಳಿತರೆ, ಆ ಗಿಡಕ್ಕೆ ಹತ್ತಿಯಿಂದ ಮಾಡಿದ ಮಂಜಿನ ರೂಪವನ್ನು ಅಂಟಿಸಿರುತ್ತಾರೆ. ಮನೆಯ ಮುಂದೆ ಕ್ರಿಸ್ಮಸ್ ಸ್ಟಾರ್ ನೇತುಹಾಕುವುದು, ಕೇಕು ಮಾಡಿಯೋ, ಅಂಗಡಿಯಿಂದ ತಂದೋ ತಿನ್ನುವುದು-ಹಂಚುವುದು, ಕ್ರಿಸ್ಮಸ್ ಟ್ರೇಯ ಪ್ಲಾಸ್ಟಿಕ್ ಪ್ರತಿರೂಪವನ್ನು ತಂದು ಜೋಡಿಸುವುದು – ಈ ಎಲ್ಲವೂ ಹಬ್ಬ ತರುವ ಸಂಭ್ರಮದ ಸಂಕೇತ ಗಳಾಗಿವೆ. ಸ್ಕರ್ಟ್ ಧರಿಸಿರುವ ಕ್ರಿಶ್ಚಿಯನ್ ಹುಡುಗಿಯರು ಮಂಡಿಯೂರಿ ಮೋಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸುವ ರೀತಿಯನ್ನು ಕವಿ ಇಲ್ಲಿ ಚಿತ್ರಿಸಿದ್ದಾರೆ. ಮೋಂಬತ್ತಿಯು ಬೆಳಕಿನ ಸಂಕೇತ, ಪ್ರಾರ್ಥನೆಯ ಮೂಲಕವೇ ಬೆಚ್ಚಗಾಗಿದೆ ಮೋಂಬತ್ತಿ ಎಂದು ಹೇಳುವ ಮೂಲಕ ಕವಿ ಬೆಚ್ಚನೆಯ ಪ್ರಾರ್ಥನೆಯ ದಿವ್ಯ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ.

೨. ಶಿಲುಬೆಯೇರಿದ್ದಾನೆ ಜೀಸಸ್ ಗೋಡೆಯಲ್ಲಿ;

ಬಾಗಿದ ಶಿರ

ಕುತ್ತಿಗೆಯಲಿ ಉಬ್ಬಿದೊಂದು ನರ,

ಯಾತನೆಗೂ ನಲ್ವಾತನೇ ನುಡಿವ ಮುಖ ಮುದ್ರೆ;

ಎನ್ನುವಂತಿದೆ;

ಕೊಲೆಗಡುಕ ಬಂಬ್ಬನ ವಕಾಲತ್ತು ನಡೆಸಿದವರೆ,

ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನ ತೂಗಿ ಸನ್ಮಾನಿಸಿದವರೆ,

ಮನ್ನಿಸಲಿ ನಿಮ್ಮನ್ನ – ಆ ದೇವರೆ!

ಈ ಭಾಗದಲ್ಲಿ ಕವಿ ಗೋಡೆಗೆ ಅಂಟಿರುವ ಶಿಲುಬೆಯ ಏಸುವಿನ ಚಿತ್ರ ನೀಡಿದ್ದಾರೆ. ಗೋಡೆಯಲ್ಲಿ ಶಿಲುಬೆಗೇರಿಸಿರುವ ಜೀಸಸ್‌ನ ಪಟವಿದೆ. ಜೀಸಸ್‌ನ ಬಾಗಿದ ಶಿರ, ಅವನ ಕುತ್ತಿಗೆಯ ಭಾಗದ ನರವೊಂದು ಉಬ್ಬಿರುವುದನ್ನು ಕವಿ ಗಮನಿಸಿದ್ದಾರೆ. ಮೊಳೆ ಜಡಿದು ನೇತುಹಾಕಿರುವುದರಿಂದಾಗುತ್ತಿರುವ ಯಾತನೆ-ನೋವನ್ನು ಮರೆಸಿಯೂ, ನೋವಿನಲ್ಲೂ ಒಳ್ಳೆಯ ಮಾತುಗಳ ನ್ನಾಡಬಲ್ಲ ಎನ್ನುವಂತಹ ಮುಖಮುದ್ರೆ ಜೀಸಸ್‌ನದಾಗಿದೆ. ಅವನದು ಎಲ್ಲರಿಗೂ ತೆರೆದ ಎದೆ-ಮನಸ್ಸು ಎಂದು ಕವಿ ವರ್ಣಿಸಿ ದ್ದಾರೆ. ತಕ್ಷಣ ಕವಿಗೆ ಜೀಸಸ್‌ ಸಾವಿನ ಸಂದರ್ಭ ಕಣ್ಣೆದುರು ಮೂಡಿ ನಿಲ್ಲುತ್ತದೆ. ಏಸುವನ್ನು ಶಿಲುಬೆಗೇರಿಸಲು ಆಗ್ರಹಿಸಿದ ರೋಮ್‌ನ ಯಾಜಕರು ಆ ಪವಿತ್ರ ದಿನದಂದು ಕೊಲೆಗಡುಕನಾದ ಬರಬ್ಬನನ್ನು ಕ್ಷಮಿಸಲು ಆಗ್ರಹಿಸುತ್ತಾರೆಯೇ ವಿನಾ ಜೀಸಸ್‌ನನ್ನು ಕ್ಷಮಿಸಲು ಒಪ್ಪುವುದಿಲ್ಲ. ಅವರ ಒತ್ತಡಕ್ಕೆ ಮಣಿದು ಇಬ್ಬರು ಕಳ್ಳರ ಮಧ್ಯೆ ಜೀಸಸ್‌ನನ್ನು ಗಲ್ಲಿಗೇರಿಸಲಾಯಿತು. ಆದ್ದರಿಂದ ಕವಿ ಜೀಸಸ್‌ಗೆ ಇಂತಹ ಸ್ಥಿತಿ ತಂದಿತ್ತ ಕ್ರೂರಿಗಳನ್ನು ಆ ದೇವರು ಮನ್ನಿಸಲಿ ಎಂದು ಪ್ರಾರ್ಥಿಸಿದ್ದಾರೆ.

೩. ನೀವು ಬಡಿದ ಸುತ್ತಿಗೆಗಳು

ಮೊಳೆಗಳು

ಮಕುಟ ಹೆಣೆದ ಮುಳ್ಳುಗಳು

ಹಬ್ಬಿಸಿದ ಸುಳ್ಳುಗಳು

ರೋಮನರ ಕಿವಿಡೆಬ್ಬಿಸುವ ಕೊಂಬುಗಳು

ಕಾಲರಾಯನ ಗುಜರಿ ಸೇರಿಲ್ಲ-

ವೇಷ ಮರೆಸಿವೆ ಅಷ್ಟೆ, ಈ ಎಲ್ಲ ಕೇಡುಗಳು;

ರೈಫಲ್ಲು, ಟ್ಯಾಂಕು, ಬಾಂಬು, ಗ್ರನೇಡುಗಳು.

– ಅವಕ್ಕೆ ಚಲನೆಯೊದಗಿಸಿವೆ;

ನಿಮ್ಮವೇ ಬಲಿಷ್ಠ ಕೈಯಿಗಳು,

ಎದೆಯಾಳದ ಮುಯ್ಯಿಗಳು.

ನಿರಪರಾಧಿಯಾದ ಜೀಸಸ್‌ನನ್ನು ಶಿಲುಬೆಗೇರಿಸಲು ತೀರ್ಮಾನಿಸಿ, ಅವನ ಕೈ-ಕಾಲುಗಳನ್ನು ಶಿಲುಬೆಗಾನಿಸಿ ಮೊಳೆಯಿಟ್ಟು ಸುತ್ತಿಗೆಯಿಂದ ಹೊಡೆಯಲಾಯಿತು. ತಲೆಗೆ ಮುಳ್ಳಿನ ಕಿರೀಟವನ್ನಿಟ್ಟು ಬಡಿಯಲಾಯಿತು. ಇವೆಲ್ಲದರ ಜೊತೆಗೆ ಇಡೀ ರೋಮಿನ ತುಂಬೆಲ್ಲಾ ಜೀಸಸ್‌ನ ಬಗ್ಗೆ ಸುಳ್ಳಿನ ಕೊಂಬು ಕಹಳೆಗಳನ್ನು ಮೊಳಗಿಸಲಾಯಿತು. ಇದನ್ನು ನೆನಪಿಸಿಕೊಳ್ಳುವ ಕವಿಗೆ ದುಷ್ಟರು ಜೀಸಸ್‌ನ ಬಗ್ಗೆ ತೋರಿದ ಕ್ರೌರ್ಯ ಇಂದಿಗೂ ಮರೆಯಲಾಗಿಲ್ಲವೆನಿಸುತ್ತದೆ. ಆ ಎಲ್ಲ ಕೆಡುಕುಗಳೂ ವೇಷ ಮರೆಸಿಕೊಂಡು ಇಂದಿಗೂ ಚಾಲ್ತಿಯಲ್ಲಿದ್ದು ಮುಗ್ಧರನ್ನು-ಅಮಾಯಕರನ್ನು ಹಿಂಸಿಸುತ್ತದೆ. ಆ ಕೆಡುಕುಗಳಿಂದು ರೈಫಲ್ಲು, ಟ್ಯಾಂಕ್, ಬಾಂಬು, ಗ್ರನೇಡುಗಳ ರೂಪ ತಳೆದು ಹಿಂಸೆಗೆ ಚಾಲನೆ ನೀಡಿವೆ. ಈ ದುಷ್ಟ ಆಯುಧಗಳನ್ನು ಕೈಯಲ್ಲಿ ಹಿಡಿದಿರುವ ಬಲಿಷ್ಠ ಕೈಗಳು ಮನದೊಳಗೆ ಹುದುಗಿಸಿಕೊಂಡಿರುವ ದ್ವೇಷಾಸೂಯೆಗಳಿಗೆ ಪ್ರತೀಕಾರ ಕೈಗೊಂಡಿವೆ ಎಂದು ಕವಿ ಚಿಂತಿಸುತ್ತಾರೆ.

೪. ಇರುವತನಕ ನಿಮ್ಮ ಸಾಮ್ರಾಜ್ಯ

ಆಗುತ್ತೇನೆ ಕ್ರೋಧ, ತಿಳಿಗೇಡಿತನಕ್ಕೆ ಆಜ್ಯ

ಬಂದೇ ತೀರುತ್ತದೆ ದೈವೀರಾಜ್ಯ

ಎನ್ನುವಂತೆ ಏರಿದ್ದಾನೆ ಶಿಲುಬೆ-

ಇಗರ್ಜಿ ಮಸಜೀದು ದೇವಸ್ಥಾನ ಮಠಗಳಲ್ಲಿ

ಮತಮತದ ಮತಿರಹಿತ ಹಟಗಳಲ್ಲಿ;

ಕೋರ್ಟು ಕಾರ್ಖಾನೆ ಠಾಣೆ ಠಾಣೆಗಳಲ್ಲಿ,

ಕಣ್ಬೆಳಕ ಕಿತ್ತೆಸೆದು ಕುರುಡುಗೊಳಿಸುವ

ನಮ್ಮ ಬಂದಿಖಾನೆಗಳಲ್ಲಿ,

ದವಾಖಾನೆಗಳ ಕೋಣೆ ಕೋಣೆಗಳಲ್ಲಿ;

ಮಾಹೆಗೊಂದಾವರ್ತಿ ಹಣತೆ ಹೊತ್ತಿಸಿಕೊಳ್ಳದ

ದಲಿತ ವಾಸದ ಸೋಗೆ ಬಿಲಗಳಲ್ಲಿ-

ದಿನ ನಿತ್ಯ ಶಿಲುಬೆಯೇರಿದ್ದಾನೆ ಜೀಸಸ್;

ಅಸಂಖ್ಯ ಕ್ರಿಸ್ಮಸ್ಸುಗಳ ಹರಸಿ,

ಶೋಷಿತರ ಕಂಬನಿಯನೊರೆಸಿ,

ಸತ್ಯಕ್ಕೆ ಹೊಸ ಕವಲುಗಳ ತೆರೆಸಿ.

ಇಂದು ಜಗತ್ತಿನಾದ್ಯಂತ ಇರುವ ದುಷ್ಟತನಕ್ಕೆ ಜೀಸಸ್‌ನ ಪ್ರೀತಿ, ಕರುಣೆ, ಔದಾರ್ಯಗಳ ಔಷಧವಾಗಬೇಕೆಂದು ಕವಿಯು ಆಶಿಸಿರುವ ವಿವರಗಳು ಪದ್ಯದ ಈ ಮೇಲಿನ ಭಾಗದಲ್ಲಿದೆ. ಕವಿಯ ಕಣ್ಣಿಗೆ ಜೀಸಸ್ ದುಷ್ಟ ಸಾಮ್ರಾಜ್ಯದ ಅವನತಿಗೆ, ಕ್ರೋಧಕ್ಕೆ, ತಿಳಿಗೇಡಿತನಕ್ಕೆ ಉತ್ತರವಾಗಿ ಕಂಡುಬಂದಿದ್ದಾನೆ. ದುಷ್ಠ ಸಾಮ್ರಾಜ್ಯ ದೂರಾಗಿ ದೈವೀರಾಜ್ಯದ ಆಗಮನದ ಸೂಚನೆಯಂತೆ ಜೀಸಸ್ ಈಗ ಶಿಲುಬೆ ಏರಿದ್ದಾನೆಂದು ಕವಿ ಭಾವಿಸುತ್ತಾರೆ. ಇಂದು ಇಗರ್ಜಿ, ಮಸೀದಿ, ದೇವಸ್ಥಾನ, ಮಠ ಮುಂತಾದೆಡೆ ಕಾಣಬರುತ್ತಿರುವುದು ಜನರ ಮತಿರಹಿತ ಹಟ – ಇದಕ್ಕೆ ಮುಗ್ಧರು – ಅಮಾಯಕರು ಬಲಿಯಾಗುತ್ತಿದ್ದಾರೆ. ಕೋರ್ಟು-ಪೊಲೀಸ್ ಠಾಣೆಗಳು ಮುಗ್ಧ ಜನರನ್ನು ಬಂಧಿಸಿ ಕತ್ತಲಕೋಣೆಯಲ್ಲಿರಿಸಿಕೊಂಡಿವೆ. ಬಡವರ ಮನೆಗಳಲ್ಲಿ ತಿಂಗಳಿಗೊಂದು ಸಲ ದೀಪ ಬೆಳಗುವ ಸ್ಥಿತಿಯೂ ಇಲ್ಲದ ಬಡತನ ರಾರಾಜಿಸುತ್ತಿದೆ. ಈ ಎಲ್ಲ ಮುಗ್ಧರ ನೋವುಗಳ ಪ್ರತಿರೂಪವಾಗಿ ಶಿಲುಬೆಯೇರಿರುವ ಏಸು ಕವಿಯ ಕಣ್ಣಿಗೆ ಕಾಣಿಸಿರುವುದು ಮಾತ್ರವಲ್ಲ, ಆತ ಶೋಷಿತರ ಕಣ್ಣೀರನ್ನು ಒರೆಸುವ, ಸತ್ಯ ಮಾರ್ಗದಲ್ಲಿ ಜಗತ್ತನ್ನು ಮುನ್ನಡೆಸಬಲ್ಲ ಮಹಾಶಕ್ತಿಯಾಗಿ ಕಾಣಿಸಿಕೊಂಡಿದ್ದಾನೆ. ಕವಿಯು ಶಿಲುಬೆ ಏರಿರುವ ಏಸು ಜಗತ್ತಿನ ದುಃಖವನ್ನು ತೊಡೆಯುವ ಮಹಾಸಂತನೆಂದು ಭಾವಿಸಿದ್ದಾರೆ.

ಶಬ್ದಾರ್ಥ: ಶಿಲುಬೆ – ಕ್ರೈಸ್ತರಲ್ಲಿ ಹಿಂದೆ ತಪ್ಪಿತಸ್ತರನ್ನು ಕೊಲ್ಲಲು ನಿರ್ಮಿಸಿದ ಮರದ ಸಾಧನ, ಕ್ರೈಸ್ತರ ಧಾರ್ಮಿಕ ಲಾಂಛನ: ನಲ್ವಾತು – ಒಳ್ಳೆಯ ಮಾತು; ಮಕುಟ – ಕಿರೀಟ; ಕೊಂಬು – ವಾಲಗ (ಊದುವ ಸಾಧನ); ಗುಜರಿ – ಹಳೆಯ ಸಾಮಾನುಗಳನ್ನು ಮಾರುವ ಸ್ಥಳ; ರೈಫಲ್ಲು-ಪಿಸ್ತೂಲು; ಟ್ಯಾಂಕು, ಗ್ರನೇಡು – ಯುದ್ಧ ಸಾಧನಗಳು; ಮುಯ್ಯಿ – ಸೇಡು; ಅಜ್ಯ – ತುಪ್ಪ; ಮಸಜೀದು – ಮಸೀದಿ; ಇಗರ್ಜಿ – ಚರ್ಚು; ಮತಿರಹಿತ – ಬುದ್ಧಿರಹಿತ; ಮಾಹೆ – ತಿಂಗಳು; ಒಂದಾವರ್ತಿ – ಒಂದು ಸಲ; ಸೋಗೆ ಬಿಲ – ಗುಡಿಸಲು; ಅಸಂಖ್ಯ – ಲೆಕ್ಕವಿಲ್ಲದಷ್ಟು; ಕವಲು – ಟಿಸಿಲು, ಭಿನ್ನತೆ, ಬದಲಾವಣೆ.

ಟಿಪ್ಪಣಿಗಳು:

೧. ಸ್ಕರ್ಟಿನ ಹುಡುಗಿಯ ಮೊಣಕಾಲಲ್ಲಿ ಬೆಚ್ಚಗಾಗಿದೆ ಮೋಂಬತ್ತಿ.

ಈ ಸಾಲುಗಳು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಹುಡುಗಿಯರು ಸಾಮಾನ್ಯವಾಗಿ ಧರಿಸುವ ದಿರಿಸನ್ನು ಮತ್ತು ಅವರು ಮಂಡಿಯೂರಿ ಮೋಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸುವ ರೀತಿಯನ್ನು ನೆನಪಿಸುತ್ತವೆ. ಮೋಂಬತ್ತಿ ಬೆಳಕಿನ ಸಂಕೇತ, ಪ್ರಾರ್ಥನೆಯ ಮೂಲಕವೇ ಬೆಚ್ಚಗಾಗಿದೆ ಮೋಂಬತ್ತಿ ಎಂದು ಹೇಳುವ ಮೂಲಕ ಕವಿ ಬೆಚ್ಚನೆಯ ಪ್ರಾರ್ಥನೆಯ ದಿವ್ಯ ಅನುಭವವನ್ನು ಕಟ್ಟಿಕೊಡುತ್ತಾರೆ.

೨. ಕೊಲೆಗಡುಕ ಬರಬ್ಬರ ವಕಾಲತ್ತು ನಡೆಸಿದವರೆ

ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನ ತೂಗಿ ಸನ್ಮಾನಿಸಿದವರೆ.

ಈ ಸಾಲುಗಳು ಜೀಸಸ್‌ನ ಸಾವಿನ ಸಂದರ್ಭವನ್ನು ಕಣ್ಣೆದುರು ತರುತ್ತವೆ. ಯೇಸುವನ್ನು ಶಿಲುಬೆಗೇರಿಸಲು ಆಗ್ರಹಿಸಿದ ರೋಮ್‌ನ ಯಾಜಕರು ಆ ಪವಿತ್ರ ದಿನದಂದು ಕೊಲೆಗಡುಕ ಬರಬ್ಬನನ್ನು ಕ್ಷಮಿಸಲು ಆಗ್ರಹಿಸುತ್ತಾರೆಯೇ ವಿನಾ ಜೀಸಸ್‌ನನ್ನು ಕ್ಷಮಿಸಲು ಒಪ್ಪುವುದಿಲ್ಲ. ಇವರ ಒತ್ತಡಕ್ಕೆ ಮಣಿದು ಇಬ್ಬರು ಕಳ್ಳರ ಮಧ್ಯೆ ಜೀಸಸ್‌ನನ್ನು ಗಲ್ಲಿಗೇರಿಸಲಾಯಿತು.

೩. ನೀವು ಬಡಿದ ಸುತ್ತಿಗೆಗಳು

ಮೊಳೆಗಳು

ಮಕುಟ ಹೆಣೆದ ಮುಳ್ಳುಗಳು….

ಈ ಸಾಲುಗಳು ಯೇಸುವನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲುವ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಗಿವೆ. ಜೀಸಸ್‌ನನ್ನು ಶಿಲುಬೆಗೇರಿಸಿ ಮೊಳೆ ಬಡಿಯುವ, ಮುಳ್ಳಿನ ಕಿರೀಟ ತೊಡಿಸಿ ಅವಮಾನ ಮಾಡುವ ಕರುಣಾಜನಕ ಸಂದರ್ಭವನ್ನು ಕವಿ ಇಲ್ಲಿ ಚಿತ್ರಿಸಿದ್ದಾರೆ.

ಹೊಂದಿಸಿ ಬರೆಯುವುದಕ್ಕೆ ಬೇಕಾದ ಮಾಹಿತಿ:

  1. ಶಿಲುಬೆ ಏರಿದ್ದಾನೆ – ಕೆ.ಎಸ್. ನಿಸಾರ್ ಅಹಮದ್
  2. ಶಿಲುಬೆ ಏರಿದ್ದಾನೆ – ವೃತ್ತಿಪರ ಕವನಗಳು
  3. ವೃತ್ತಿಪರ ಕವನಗಳು – ಕೆ.ಎಸ್. ನಿಸಾರ್ ಅಹಮದ್
  4. ಶಿಲುಬೆಗೆ ಏರಿದವರು – ಏಸುಕ್ರಿಸ್ತ
  5. ಕೆ.ಎಸ್. ನಿಸಾ‌ರ್ ಅಹಮದ್ – ನಿತ್ಯೋತ್ಸವ ಕವಿ

Leave a Comment