ದ್ವಿತೀಯ ಪಿಯುಸಿ ಕನ್ನಡ ವಾಲ್‌ಪರೈ: ಅಭಿವೃದ್ಧಿ ತಂದ ದುರಂತ ನೋಟ್ಸ್ | 2nd Puc Kannada Valparai: Abhivrudhi Tanda Duranta Notes

2nd Puc Valparai Abhivrudhi Tanda Duranta Kannada Notes Question and Answer Summery Guide Extract Mcq Pdf Download in Kannada Medium Karnataka State Syllabus 2025 ವಾಲ್ಪರೈ ಅಭಿವೃದ್ಧಿ ತಂದ ದುರಂತ question answer 2nd PUC Kannada Chapter 2 Question Answer Val‌parai ವಾಲ್ ಪರೈ ಅಭಿವೃದ್ಧಿ ತಂದ ದುರಂತ ಸಾರಾಂಶ kseeb solutions for class 12 kannada chapter 2 valparai notes val‌parai abhivrudhi tanda duranta pdf 2nd puc kannada 2nd lesson notes 2nd puc kannada notes

೨. ವಾಲ್‌ಪರೈ: ಅಭಿವೃದ್ಧಿ ತಂದ ದುರಂತ

– ಕೃಪಾಕರ ಸೇನಾನಿ, ಕೆ. ಪುಟ್ಟಸ್ವಾಮಿ

Valparai Abhivrudhi Tanda Duranta
Valparai Abhivrudhi Tanda Duranta

ಲೇಖಕರ ಪರಿಚಯ:

ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಮೈಸೂರಿನವರು. ವನ್ಯಜೀವಿಗಳ ಛಾಯಾಗ್ರಹಣ, ಸಾಕ್ಷ್ಯ ಚಿತ್ರಗಳ ತಯಾರಿಕೆ ಇವರ ಹವ್ಯಾಸ. ಪರಿಸರ ಮತ್ತು ವನ್ಯಜೀವಿ ಸಂಕುಲಗಳ ಬಗ್ಗೆ ಅಪಾರ ಕಾಳಜಿಯುಳ್ಳ ಇವರಿಬ್ಬರೂ ಡಾ. ಕೆ. ಪುಟ್ಟಸ್ವಾಮಿಯವರೊಂದಿಗೆ ಕೂಡಿ ‘ಜೀವಜಾಲ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗಿದ್ದ ಕೃಪಾಕರ-ಸೇನಾನಿ ಕಾಡುಗಳ್ಳನೊಂದಿಗಿನ ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇವರಿಬ್ಬರೂ ನಿರ್ಮಿಸಿದ ಸೀಳುನಾಯಿಗಳನ್ನು ಕುರಿತ ಸಾಕ್ಷ್ಯ ಚಿತ್ರಕ್ಕೆ ಪ್ರತಿಷ್ಠಿತ ಗ್ರೀನ್ ಆಸ್ಕರ್ ಅವಾರ್ಡ್ ಲಭಿಸಿದೆ. ಈ ಪ್ರಶಸ್ತಿಯನ್ನು ಏಷ್ಯಾಖಂಡದಲ್ಲಿ ಪಡೆದ ಮೊದಲಿಗರಿವರು. ಡಾ. ಕೆ. ಪುಟ್ಟಸ್ವಾಮಿ ತಮ್ಮ ‘ಸಿನಿಮಾಯಾನ’ ಕೃತಿಗಾಗಿ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಪಡೆದ ಪ್ರತಿಭಾವಂತರು. ಪ್ರಸ್ತುತ ‘ವಾಲ್‌ಪರೈ: ಅಭಿವೃದ್ಧಿ ತಂದ ದುರಂತ’ ಎಂಬ ಲೇಖನವನ್ನು ಅವರ ‘ಜೀವಜಾಲ’ ಕೃತಿಯಿಂದ ಆಯ್ದುಕೊಳ್ಳಲಾಗಿದೆ.

ಆಕರ: ‘ಜೀವಜಾಲ’.

(ಅ) ಸಾಂದರ್ಭಿಕ ವಿವರಣೆಯನ್ನು ಬಯಸುವ ವಾಕ್ಯಗಳು)

೧. ಈ ಪ್ರದೇಶಕ್ಕೆ ಆಗ ಹೆಸರೇ ಇರಲಿಲ್ಲ.

ಶ್ರೀಯುತರಾದ ಕೃಪಾಕರ ಸೇನಾನಿ ಮತ್ತು ಪುಟ್ಟಸ್ವಾಮಿ ಅವರು ಬರೆದಿರುವ ‘ವಾಲ್‌ಪರೈ: ಅಭಿವೃದ್ಧಿ ತಂದ ದುರಂತ’ ಎಂಬ ಲೇಖನದಲ್ಲಿ ಆರಂಭದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು.

ವಾಲ್‌ಪರೈ ಎಂದು ಹೆಸರಾಗುವ ಮೊದಲು ಅನನ್ಯ ಜೀವ ಸಂಕುಲಗಳಿಂದ ಸಮೃದ್ಧವಾಗಿದ್ದ ಪಶ್ಚಿಮಘಟ್ಟ ಭೇದಿಸಿ ಭೂಸ್ಪರ್ಶ ಮಾಡಲು ಸೂರ್ಯಕಿರಣಗಳು ಸೆಣಸುತ್ತಿದ್ದ ದಟ್ಟವಾದ ಕಾಡಿದ್ದ ಪ್ರದೇಶವಿದಾಗಿತ್ತೆಂದು ಲೇಖಕರು ವಾಲ್‌ ಪರೈ ಭೂಪ್ರದೇಶವನ್ನು ವರ್ಣಿಸಿದ್ದಾರೆ. ಅವರು ನೀಡಿರುವ ಹದಿನೆಂಟನೆ ಶತಮಾನದ ಅಂತ್ಯಭಾಗದ್ದಾಗಿದ್ದು ನಿಧಾನವಾಗಿ ಅಲ್ಲಿನ ಕಾಡು ಕಣ್ಮರೆಯಾದ ಬಗೆಗೆ ಲೇಖಕರು ಗಮನ ಸೆಳೆದಿರುವರು. ಆ ಪ್ರದೇಶಕ್ಕೆ ಹೆಸರಿಲ್ಲದಿರುವುದು ಅಲ್ಲಿ ಜನ ಪ್ರವೇಶಿಸಿರಲಿಲ್ಲವೆಂಬುದಕ್ಕೆ ಸಾಕ್ಷಿಯನ್ನೂ ಹೆಸರು ಬಂದ ನಂತರ ಆ ಪ್ರದೇಶ ಹೊಂದಿದ ಅವನತಿಯನ್ನೂ ಈ ಮೇಲಿನ ವಾಕ್ಯವು ಧ್ವನಿಸಿದೆ.

೨. ಅದು ಅವರು ಆವರೆಗೂ ನೋಡಿರದ ಪ್ರಾಣಿ.

ಕೃಪಾಕರ ಸೇನಾನಿ ಮತ್ತು ಪುಟ್ಟಸ್ವಾಮಿ ಅವರು ಬರೆದಿರುವ ‘ಜೀವಚಾಲ’ ಕೃತಿಯಿಂದಾಯ್ದ ‘ವಾಲ್‌ಪರೈ: ಅಭಿವೃದ್ಧಿ ತಂದ ದುರಂತ’ ಎಂಬ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ.

ವಾಲ್‌ಪರೈ ಕಗ್ಗತ್ತಲ ಅರಣ್ಯ ಪ್ರದೇಶಕ್ಕೆ ಮೊತ್ತಮೊದಲ ಬಾರಿಗೆ ಸಾಹಸಿ ಬ್ರಿಟಿಷ್ ಪ್ರಜೆಯಾದ ಕಾರ್ವೆರ್ ಮಾರ್ಷ್ ಕುದುರೆಯ ಮೇಲೆ ಕುಳಿತು ಬಂದಾಗ ಅವನಿಗೆ ನಾಲ್ಕಾರು ಪುಟ್ಟ ಗುಡಿಸಲುಗಳಿದ್ದ ಹಾದಿ ಕಾಣಿಸಿತು. ಅಲ್ಲಿದ್ದ ಹತ್ತಾರು ಆದಿವಾಸಿಗಳು ಮಾರ್ಷ್‌ನ ಕುದುರೆಯ ಖುರಪುಟದ ಸದ್ದಿಗೆ ದಿಗಿಲುಗೊಳ್ಳುತ್ತಾರೆ, ಏಕೆಂದರೆ ಅವರೆಂದೂ ಕುದುರೆಯನ್ನು ಕಂಡಿರಲಿಲ್ಲ. ಕಾಡಿನ ಪ್ರಾಣಿಗಳನ್ನು ಮಾತ್ರ ಕಂಡಿದ್ದ ಅವರಿಗೆ ಕುದುರೆ ಮತ್ತು ವಿಚಿತ್ರ ಪೋಷಾಕಿನ ಮಾರ್ಷ್‌ನನ್ನು ನೋಡಿ ಭಯವುಂಟಾಗಿ ಮಿಂಚಿನಂತೆ ಅಲ್ಲಿಂದ ಮಾಯವಾದರೆಂಬುದನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ.

೩. ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದವು.

ಕೃಪಾಕರ ಸೇನಾನಿ ಮತ್ತು ಪುಟ್ಟಸ್ವಾಮಿ ಅವರು ಬರೆದಿರುವ ‘ಜೀವಜಾಲ’ ಎಂಬ ಕೃತಿಯಿಂದಾಯ್ದ ‘ವಾಲ್‌ಪಠ್ಯ: ಅಭಿವೃದ್ಧಿ ತಂದ ದುರಂತ’ ಎಂಬ ಲೇಖನದಲ್ಲಿ ಈ ಮೇಲಿನ ವಾಕ್ಯವಿದೆ.

ಪೂಣಚ್ಚಿ ಎಂಬ ಆದಿವಾಸಿ ಒಡನಾಡಿಯ ಸಹಾಯದಿಂದ ಕಾಡನ್ನು ಸುತ್ತಿ ಬಂದ ಮಾರ್ಪ್ ಅಲ್ಲಿನ ಪ್ರಕೃತಿಯನ್ನು ಆಸ್ವಾದಿಸಿ ತಾನು ಅಲ್ಲಿಯೇ ನೆಲೆಸಬೇಕೆಂದು ತೀರ್ಮಾನಿಸಿದ. ಸ್ಥಳೀಯರ ವಿಶ್ವಾಸ ಸಂಪಾದಿಸಿ ಇಡೀ ಪ್ರದೇಶದ ನಕ್ಷೆ ತಯಾರಿಸಿದ. ಇದರ ಜೊತೆಗೆ ಆಗಷ್ಟೆ ಭಾರತ ಪ್ರವೇಶ ಮಾಡಿದ್ದ ಚಹಾ ಗಿಡಗಳನ್ನು ತಂದು ಆ ಪ್ರದೇಶದಲ್ಲಿ ನೆಟ್ಟು ಬೆಳೆಸಿದ. ಈ ಸಂದರ್ಭವನ್ನು ವಿವರಿಸುತ್ತಾ ಲೇಖಕರು “ವಾಲ್‌ಪರೆ ಕಾಡಿನ ಮುಂದಿನ ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದಿದ್ದವು’ ಎಂದು ಹೇಳಿದ್ದಾರೆ.

೪. ಕಾರ್ಮಿಕರು ಕೆಂಪು ಬಾವುಟ ಹಿಡಿದು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಕೃಪಾಕರ ಸೇನಾನಿ ಮತ್ತು ಪುಟ್ಟಸ್ವಾಮಿ ಅವರು ಬರೆದಿರುವ ‘ವಾಲ್‌ಪರೈ: ಅಭಿವೃದ್ಧಿ ತಂದ ದುರಂತ’ ಎಂಬ ಲೇಖನದಿಂದ ಆಯ್ದುಕೊಳ್ಳಲಾಗಿರುವ ವಾಕ್ಯವಿದು.

ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ಶ್ರೀಮಂತ ಪ್ರದೇಶವಾಗಿದ್ದ ವಾಲ್‌ಪರೈ ಅಂತಾರಾಷ್ಟ್ರೀಯ ವಿದ್ಯಮಾನ ಕಾರಣದಿಂದ ಆರ್ಥಿಕವಾಗಿ ಕುಸಿಯಿತು. ಇದಕ್ಕೆ ಮುಖ್ಯ ಕಾರಣ ವಿಶ್ವಮಾರುಕಟ್ಟೆಯಲ್ಲಿ ಚಹಾದ ಬೇಡಿಕೆ ಇಳಿಮುಖವಾಗಿದ್ದು. ಈ ಸಂದರ್ಭದಲ್ಲಿ ತೋಟದ ಮಾಲಿಕರು ಬದುಕುಳಿಯಲು, ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಜನರ ಬದಲಿಗೆ ಯಂತ್ರಗಳನ್ನು ಬಳಸಲಾರಂಭಿಸಿದರು. ನಿರುದ್ಯೋಗಿಗಳಾದ ಕಾರ್ಮಿಕರು ಪ್ರತಿಭಟನೆಗೆ ತೊಡಗಿ, ಕೆಂಪು ಬಾವುಟಗಳನ್ನು ಹಿಡಿದುಕೊಂಡು ಹೋರಾಟದಲ್ಲಿ ತೊಡಗಿದರು. ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಅವರ ಬದುಕು ಹಸನಾಗುವ ಭರವಸೆಗಳಿಲ್ಲ ಎಂಬುದನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮೇಲಿನಂತೆ ಹೇಳಿರುವರು.

೫. ಹಾಡುವುದು ಅವುಗಳಿಗೆ ಅನಿವಾರ್ಯ; ಅವುಗಳ ಕರ್ಮ!

ಕೃಪಾಕರ ಸೇನಾನಿ ಮತ್ತು ಪುಟ್ಟಸ್ವಾಮಿ ಅವರು ರಚಿಸಿರುವ ‘ವಾಲ್‌ಪರೈ: ಅಭಿವೃದ್ಧಿ ತಂದ ದುರಂತ’ ಎಂಬ ಲೇಖನದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು.

ಅಭಿವೃದ್ಧಿ ತಂದ ದುರಂತದ ಫಲವಾಗಿ ವಾಲ್‌ಪರೈನ ಎಷ್ಟೋ ಜೀವವೈವಿಧ್ಯಗಳು ನೆಲೆ ಕಳೆದುಕೊಳ್ಳುವಂತಾಯಿತು. ಅವುಗಳಲ್ಲಿ ವಿಷಲಿಂಗ್ ಭ್ರಷ್‌ಗಳೆಂಬ ಹಾಡುಹಕ್ಕಿಗಳೂ ಸೇರಿವೆ. ಕಾಡು ಕಣ್ಮರೆಯಾದ ಕಾರಣ ಅವೀಗ ಬದುಕುಳಿಯಲು ಕೊಳಚೆ ನೀರಿನ ಚರಂಡಿಗಳಲ್ಲಿ ವಾಸಿಸಬೇಕಾದ ಪರಿಸ್ಥಿತಿಯನ್ನು ವಿವರಿಸುತ್ತಾ ಲೇಖಕರು ನೆಲೆ ಕಳೆದುಕೊಂಡ ನೋವಿನಲ್ಲೂ ಮುಂಜಾನೆ ಬೇಗನೆ ಎದ್ದು ರಾಗವಾಗಿ ಹಾಡುವುದನ್ನು ಬಿಡದ ಹಾಡುಹಕ್ಕಿಗಳ ಬಗ್ಗೆ ವಿವರಿಸುತ್ತಾ “ಹಾಡುವುದು ಅವುಗಳಿಗೆ ಅನಿವಾರ್ಯ; ಅವುಗಳ ಕರ್ಮ” ಎಂದಿದ್ದಾರೆ.

ಹೆಚ್ಚುವರಿ ಪ್ರಶ್ನೆಗಳು:

೬. ಕೋತಿಗಳಿಗೆ ‘ದಯಾಮೃತ್ಯು’ ಕರುಣಿಸಲೂ ಕಾನೂನಿನಲ್ಲಿ ಅವಕಾಶವಿಲ್ಲ.

ಕೃಪಾಕರ ಸೇನಾನಿ ಮತ್ತು ಕೆ. ಪುಟ್ಟಸ್ವಾಮಿಯವರು ರಚಿಸಿರುವ ‘ವಾಲ್‌ಪರೈ: ಅಭಿವೃದ್ಧಿ ತಂದ ದುರಂತ’ ಎಂಬ ಲೇಖನದಲ್ಲಿ ಲೇಖಕರು ಈ ಮಾತನ್ನು ಹೇಳಿರುವರು.

ನಾಗರೀಕ ಬುದ್ದಿಯಿಲ್ಲದ, ನೆಲೆತಪ್ಪಿರುವ ಸಿಂಹಬಾಲದ ಕೋತಿಗಳು ರಸ್ತೆದಾಟುವಾಗ ವಾಹನಕ್ಕೆ ಸಿಕ್ಕಿ ಅಂಗವಿಕಲಗೊಂಡಿದ್ದವು. ಅವುಗಳಿಗೆ ಆಹಾರ ಒದಗಿಸುತ್ತಿದ್ದ ಮರಗಳು ಕ್ಷೀಣಿಸಿದ ಕಾರಣದಿಂದ ಸಿಂಹಬಾಲದ ಕೋತಿಗೆ ಬದುಕು ಇನ್ನಷ್ಟು ಸಂಕಷ್ಟಕ್ಕೊಳಗಾಯಿತು. ಈ ಸಂದರ್ಭವನ್ನು ವಿವರಿಸುತ್ತಾ ಲೇಖಕರು ಕೆಂಪು ಪಟ್ಟಿಗೆ ಸೇರಿದ ಈ ಜೀವಿಗಳಿಗೆ ‘ದಯಾಮೃತ್ಯು’ ಕರುಣಿಸಲೂ ಕಾನೂನಿನಲ್ಲಿ ಅವಕಾಶವಿಲ್ಲ ಎಂದಿದ್ದಾರೆ. ಸಿಂಹಬಾಲದ ಕೋತಿಗಳ ಅಸಹಾಯಕತೆಯನ್ನು ಮನಮುಟ್ಟುವಂತೆ ಇಲ್ಲಿ ಹೇಳಲಾಗಿದೆ.

೭. ವಾಲ್‌ಪರೈ ಅರಣ್ಯದ ಮೇಲಿನ ಅತ್ಯಾಚಾರಕ್ಕೆ ಸರ್ಕಾರ ಉತ್ತೇಜನ ನೀಡಿತು.

ಕೃಪಾಕರ ಸೇನಾನಿ ಮತ್ತು ಕೆ. ಪುಟ್ಟಸ್ವಾಮಿಯವರು ಬರೆದಿರುವ ‘ವಾಲ್‌ಪರೈ: ಅಭಿವೃದ್ಧಿ ತಂದ ದುರಂತ’ ಎಂಬ ಲೇಖನದಿಂದ ಈ ವಾಕ್ಯವನ್ನು ಸ್ವೀಕರಿಸಲಾಗಿದೆ.

ಮಾರ್ಷ್ ವಾಲ್‌ಪರೈನ ಜನನಿದೂರ ಪ್ರದೇಶದಲ್ಲಿ ಚಹಾತೋಟ ಮಾಡಿ ಯಶಸ್ಸನ್ನು ಕಂಡಬಳಿಕ, ಕೈಗಾರಿಕೋದ್ಯಮಿಗಳು ಇಲ್ಲಿಗೆ ದಾಳಿಯಿಟ್ಟರು. ಇವರು ಬಂದನಂತರ ಕಾಡಿನ ಗರ್ಭಪಾತ ಆರಂಭಗೊಂಡಿತು. ನಿರುದ್ಯೋಗ ಸಮಸ್ಯೆಗೆ ಸಂಜೀವಿನಿಯಂತಿದ್ದ ವಾಲ್‌ಪರೈ ಅರಣ್ಯದ ಮೇಲಿನ ಅತ್ಯಾಚಾರಕ್ಕೆ ಸರ್ಕಾರ ಉತ್ತೇಜನ ನೀಡಿತು. ಸರ್ಕಾರವು ಉದ್ಯಮಿಗಳಿಗೆ ಅನುಕೂಲವಾಗುವಂತೆ ವರ್ತಿಸಿದ್ದರಿಂದಾಗಿ ನಿಬಿಡ ಅರಣ್ಯವು ಕಣ್ಮರೆಯಾಗಿ ಅಲ್ಲಿ ಚಹಾ ತೋಟಗಳು ಸಮೃದ್ಧಿಗೊಂಡಿತು. ಈ ಸಂದರ್ಭವನ್ನು ವಿವರಿಸುವಾಗ ಲೇಖಕರೇ ಮೇಲಿನ ಮಾತನ್ನು ಹೇಳಿರುವರು.

೮. ಮಾರ್ಷ್‌ಗೆ ತಾನೊಂದು ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರುವುದು ಆರಿವಾಗುವಾಗ ತಡವಾಗಿತ್ತು.

ಕೃಪಾಕರ ಸೇನಾನಿ ಮತ್ತು ಕೆ. ಪುಟ್ಟಸ್ವಾಮಿಯವರು ಒಟ್ಟಾಗಿ ಬರೆದಿರುವ ‘ವಾಲ್‌ಪರೈ: ಅಭಿವೃದ್ಧಿ ತಂದ ದುರಂತʼ ಎಂಬ ಲೇಖನದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ.

ದಕ್ಷಿಣ ಆಫ್ರಿಕಾದ ಕಗ್ಗತ್ತಲ ಖಂಡವನ್ನು ನೆನಪಿಗೆ ತರುವಂತಿದ್ದ ವಾಲ್‌ರೈಗೆ 1890ರಲ್ಲಿ ಬಂದ ಕಾರ್ವೆರ್ ಮಾರ್ಷ್ ಎಂಬ ಬ್ರಿಟಿಷ್ ಅಧಿಕಾರಿಯು ವಾಲ್‌ರೈನ ನಿಗೂಢವನ್ನು ಭೇದಿಸುವ ಸಾಹಸದಿಂದ ಕುದುರೆಯೇರಿ ಬಂದನು. ಆದರೆ ಕಾಡಿನಲ್ಲಿ ದಿಕ್ಕುತಪ್ಪಿ ಹೋಗಿದ್ದರಿಂದ ಹಿಂತಿರುಗಿ ಬರಲಾಗದ ಚಕ್ರವ್ಯೂಹದೊಳಗೆ ಸಿಕ್ಕಿಬಿದ್ದನು. ತಂದಿದ್ದ ಆಹಾರವೂ ಖಾಲಿಯಾಗಿತ್ತು. ಇವನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮೇಲಿನಂತೆ ಹೇಳಿರುವರು.

(ಆ) ಒಂದು ಅಂಕದ ಪ್ರಶ್ನೆಗಳು (ಒಂದು ವಾಕ್ಯದಲ್ಲಿ ಉತ್ತರಿಸಿ).

೧. ಬ್ರಿಟಿಷರಲ್ಲಿ ಹಾಯ್ದು ಬಂದಿರುವ ಆನುಷಂಗಿಕ ಗುಣ ಯಾವುದು?

ಹೊಸತನ್ನು ಶೋಧಿಸುವ, ಅನ್ವೇಷಿಸುವ ಪ್ರವೃತ್ತಿಗಳು

೨. ವಾಲ್‌ಪರೈಗೆ ಬಂದ ಬ್ರಿಟಿಷ್ ಪ್ರಜೆ ಯಾರು?

ಕಾರ್ವೆರ್ ಮಾರ್ಷ್

೩. ಮಾರ್ಷ್ ವಾಲ್‌ಪರೈಗೆ ಬಂದುದು ಯಾವಾಗ?

1890 ರಲ್ಲಿ

೪. ಮಾರ್ಷನ ಜೊತೆಗಾರನ ಹೆಸರೇನು?

ಪೂಣಚ್ಚಿ

೫. ಕೆಂಪು ಪಟ್ಟಿಗೆ ಸೇರಿದ ಪ್ರಾಣಿ ಯಾವುದು?

ಸಿಂಹ ಬಾಲದ ಕೋತಿ

೬. ವಾಲ್‌ಪರೈನ ದುರಂತದ ಮೂಲ ಬೀಜಗಳು ಯಾವ ರೂಪದಲ್ಲಿ ಬಂದವು?

ಚಹಾಗಿಡಗಳ

ಹೆಚ್ಚುವರಿ ಪ್ರಶ್ನೆಗಳು

೭. ಹಾಡುವ ಹಕ್ಕಿಯ ಹೆಸರೇನು?

ವಿಷಲಿಂಗ್‌ ಥ್ರಷ್

‌೮. ಕಾನೂನಿನಲ್ಲಿ ಯಾವುದಕ್ಕೆ ಅವಕಾಶವಿಲ್ಲ?

ದಯಾಮೃತ್ಯು

೯. ಮಾರ್ಷ್ ನ ಚಹಾ ತೋಟದ ಯಶಸ್ಸು ಸ್ವಾತಂತ್ರೋತ್ತರದಲ್ಲಿ ಭಾರತದ ಆಗ್ರಗಣ್ಯ ಕೈಗಾರಿಕೋದ್ಯಮಿಗಳನ್ನು ಕೈಬೀಸಿ ಕರೆಯಿತು. ಕಾಡಿನ ಗರ್ಭಪಾತಕ್ಕೆ ಮೊದಲಾಯಿತು.

– ಈ ಸಾಲುಗಳು ಏನನ್ನು ಸೂಚಿಸುತ್ತವೆ?

ಕಾಡಿನ ನಾಶ

೧೦. ವಾಲ್ ಪರೈ ಈಗ ಹೇಗೆ ಕಾಣುತ್ತಿದೆ?

ಹಸಿರು ಕಂಬನಿ ಹೊತ್ತು ಮಲಗಿದಂತೆ

೧೧. ಮಾರ್ಷ್‌ನ ಚಹಾ ತೋಟದ ಯಶಸ್ಸು ಯಾರನ್ನು ಕೈಬೀಸಿ ಕರೆಯಿತು?

ಕೈಗಾರಿಕೋದ್ಯಮಿಗಳನ್ನು

೧೨. ಕಗ್ಗತ್ತಲ ಖಂಡ ಯಾವುದು?

ದಕ್ಷಿಣ ಆಫ್ರಿಕಾ

೧೩. ಬದುಕುಳಿಯುವ ಛಲತೊಟ್ಟ ಹಾಡುಹಕ್ಕಿ ಯಾವುದು?

ವಿಷಲಿಂಗ್‌ ಥ್ರಷ್

೧೪. ವಾಲ್‌ಪರೈ ಯಾವ ರಾಜ್ಯದಲ್ಲಿದೆ?

ತಮಿಳುನಾಡು

೧೫. ಮಾರ್ಷ್ ಮೊದಲು ಯಾವ ಆದಿವಾಸಿಯೊಂದಿಗೆ ಸ್ನೇಹ ಸಂಪಾದಿಸಿದನು?

ಪೂಣಚ್ಚಿ

೧೬. “ಈಗ ಇಡೀ ವಾಲ್‌ಪರೈ ಹಸಿರು ಕಂಬಳಿ ಹೊದ್ದು ಮಲಗಿದಂತಿದೆ. ಕಣ್ಣು ಕಾಣುವವರೆಗೂ ಚಹಾ ತೋಟದ ಆನಂತ ಬಯಲು, ದಿಗಂತದಂಚಿನವರೆಗೆ ಮಾಲೆಮಾಲೆಯಾಗಿ ಸಹಸ್ರ ಸಹಸ್ರ ಚದರ ಮೈಲುಗಳವರೆಗೆ ಹರಡಿರುವ ಇದು ಮಾನವ ಸಾಮರ್ಥ್ಯಕ್ಕೆ ದಕ್ಕಿದ ವಿಜಯ ಪತಾಕೆಯಂತಿದೆ.” – ಈ ಮಾತುಗಳು ಏನನ್ನು ಸೂಚಿಸುತ್ತಿವೆ?

ಕಾಡಿನ ಅಭಿವೃದ್ಧಿಗಾಗಿ ಕಾಡಿನ ನಾಶ

೧೭. ಬಂಡೆಗಳಿಂದಾವೃತವಾದ ಕಾಡನ್ನು ತಮಿಳಿನಲ್ಲಿ ವಾಲ್‌ರೆ ಎನ್ನುವರು. ಇಲ್ಲಿ ‘ಪರೆ’ ಎಂಬ ಶಬ್ದವನ್ನು ಹೀಗೆ ಅರ್ಥೈಸಿಕೊಳ್ಳಬಹುದು.

ಬಂಡೆಕಲ್ಲು

(ಇ) ಎರಡು ಅಂಕಗಳ ಪ್ರಶ್ನೆಗಳು (ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ):

೧. ಬ್ರಿಟಿಷರು ಬರುವ ಮೊದಲು ವಾಲ್ಕಕ್ಕೆ ಹೇಗಿತ್ತು?

ಬ್ರಿಟಿಷರು ಬರುವ ಮೊದಲು ವಾಲ್‌ಪರೈನಲ್ಲಿ ಗಗನಚುಂಬಿ ಮರಗಳ ಮೇಲ್ಬಾವಣಿ ಭೇದಿಸಿ ಸೂರ್ಯಕಿರಣಗಳು ಸೆಣಸುವಷ್ಟು ದಟ್ಟವಾದ ಅರಣ್ಯವಿತ್ತು. ನಡುನಡುವೆ ಹುಲ್ಲುಗಾವಲುಗಳ ಅನಂತ ಬಯಲುಗಳ, ಶೋಲಾ ಕಾಡುಗಳು, ಸಾಲುಸಾಲು ಪರ್ವತ ಶ್ರೇಣಿಗಳಿದ್ದವು.

೨. ಮಾರ್ಷ್‌ನನ್ನು ಕಂಡು ಆದಿವಾಸಿಗಳು ಹೇಗೆ ಪ್ರತಿಕ್ರಿಯಿಸಿದರು?

ಮಾರ್ಪ್ ಕಾಡಿಗೆ ಬಂದಾಗ ಅಲ್ಲಿದ್ದ ಆದಿವಾಸಿಗಳು ಮಾರ್ಷ್‌ನ ಕುದುರೆಯ ಖುರಪುಟದ ಸದ್ದಿಗೆ ದಿಗಿಲುಗೊಂಡರು. ಟೋಪಿ ಧರಿಸಿದ ನಾಜೂಕು ಪೋಷಾಕಿನ ಮಾರ್ಷ್ ಮತ್ತು ಅವನ ಕುದುರೆಯನ್ನು ಕಂಡು, ವಿಚಿತ್ರ ಕಂಡವರಂತೆ ಒಮ್ಮೆಲೆ ಹೆದರಿದ ಅವರು ಮಕ್ಕಳನ್ನು ಎಳೆದುಕೊಂಡು ದಟ್ಟಡವಿಯಲ್ಲಿ ಮಿಂಚಿನಂತೆ ಮಾಯವಾದರು.

೩. ಕೈಗಾರಿಕೋದ್ಯಮಿಗಳಿಂದ ಕಾಡು ನಾಶವಾದುದು ಹೇಗೆ?

ಕೈಗಾರಿಕೋದ್ಯಮಿಗಳಿಂದ ಕಾಡಿನ ಗರ್ಭಪಾತಕ್ಕೆ ಮೊದಲಾಯಿತು. ಗಗನಚುಂಬಿ ಮರಗಳು ನೆಲಕ್ಕುರುಳಿದವು. ದಿಮ್ಮಿ ಕೊಳ್ಳಲು ಕಂಟ್ರಾಕ್ಟರ್‌ಗಳು ಆಗಮಿಸಿದರು. ಕಾಡಿನಲ್ಲಿ ರಸ್ತೆ ನಿರ್ಮಾಣವಾಗಿ ವಾಹನಗಳು ಆಗಮಿಸಿ, ಕಾಡಿನ ನೀರವತೆ నారవాయకు.

೪. ಸಿಂಹಬಾಲದ ಕೋತಿಗಳಿಗೆ ಒದಗಿದ ತೊಂದರೆ ಏನು?

ವೃಕ್ಷವಾಸಿಗಳಾದ ಸಿಂಹಬಾಲದ ಕೋತಿಗಳು ನೆಲೆ ಕಳೆದುಕೊಂಡಿವೆ. ಕಾಡಿನ ನಾಶದಿಂದ ಮರದಿಂದ ಮರಕ್ಕೆ ಹಾರುವಂತಿಲ್ಲ. ನೆಲಕ್ಕೆ ಇಳಿದು ರಸ್ತೆ ದಾಟಿ ಮತ್ತೊಂದು ಮರ ಹತ್ತುವಾಗ ವಾಹನಕ್ಕೆ ಸಿಲುಕಿ ಅಂಗವಿಕಲಗೊಂಡಿವೆ. ಕೆಂಪು ಪಟ್ಟಿಯಲ್ಲಿರುವ ಇವು ವಂಶನಾಶದ ಅಂಚಿನಲ್ಲಿವೆ.

ಹೆಚ್ಚುವರಿ ಪ್ರಶ್ನೆಗಳು:

೫. ಈಗ ಹಾಡು ಹಕ್ಕಿಗಳ ನೆಲೆ ಯಾವುದು?

ಝರಿ ಜಲಪಾತ್ರಗಳನ್ನೆಲ್ಲ ಆಕ್ರಮಿಸಿ ಮೆಲ್ಲನೆ ತೆವಳುತ್ತಿರುವ ಕೊಳಚೆ ನೀರಿನ ಚರಂಡಿಗಳೆ ಈಗ ಹಾಡುಹಕ್ಕಿಗಳ ನೆಲೆಯಾಗಿದೆ.

೬. ಹಾಡುಹಕ್ಕಿಗಳ ಬದುಕಿಗೆ ಯಾವುದು ಆಧಾರವಾಗಿತ್ತು?

ಮಿನುಗುವ ಹಸಿರುಪಾಚಿಗಳನ್ನು ಹೊದ್ದು ಮಲಗಿದ ಕಲ್ಲುಬಂಡೆಗಳ ನಡುವೆ ನುಸುಳಿ ಹರಿಯುತ್ತಿದ್ದ ಸ್ವಚ್ಛ ನೀರಿನ ಹಳ್ಳಕೊಳ್ಳಗಳು ಹಾಡುಹಕ್ಕಿಗಳ ಬದುಕಿಗೆ ಆಧಾರವಾಗಿದ್ದವು.

೭. ವಾಲ್‌ಪರೈನ ನೀರವತೆ ಹೇಗೆ ನಾಶವಾಯಿತು?

ಕೈಗಾರಿಕೋದ್ಯಮಿಗಳು ತಂದ ಗಡಗಡ ಸದ್ದುಮಾಡುವ ಲಾರಿ, ಟ್ರಾಕ್ಟರ್ ಮುಂತಾದವುಗಳಿಂದಾಗಿ ವಾಲ್‌ರೈನ ನೀರವತೆ ನಾಶವಾಯಿತು.

(ಈ) ನಾಲ್ಕು ಅಂಕಗಳ ಪ್ರಶ್ನೆಗಳು (ಐದಾರು ವಾಕ್ಯಗಳಲ್ಲಿ ಉತ್ತರಿಸಿ):

1 . ವಾಲ್‌ಪರೈ ಬಂದ ಮಾರ್ಷ್ ಅಲ್ಲಿ ಹೇಗೆ ನೆಲೆಯೂರಿದ? ವಿವರಿಸಿರಿ.

ಕಾರ್ವೆರ್ ಮಾರ್ಷ್ ಎಂಬ ಬ್ರಿಟಿಷಿಗ ವಾಲ್‌ಪರೈಗೆ ಮೊದಲು ನುಸುಳಿ ಬಂದಾಗ ಆತನಿಗೆ ತನ್ನದು ಹುಚ್ಚುಸಾಹಸವೆನ್ನಿಸಿತು. ಆದರೆ ಛಲಬಿಡದ ಮಾರ್ಷ್ ಆದಿವಾಸಿಗಳ ಸ್ನೇಹ ಗಳಿಸಿದ. ಪೂಣಚ್ಚಿಯೆಂಬ ಆದಿವಾಸಿಯನ್ನು ಜೊತೆಗಾರನನ್ನಾಗಿಸಿಕೊಂಡು ಇಡೀ ಪ್ರದೇಶದ ನಕ್ಷೆ ತಯಾರಿಸಿದ. ಆಗಷ್ಟೇ ಭಾರತ ಪ್ರವೇಶ ಮಾಡಿದ್ದ ಚಹಾ ಗಿಡಗಳನ್ನು ತಂದು ನೆಟ್ಟ, ಹೊಸ ಜಾಗದಲ್ಲಿ ಚಹಾ ಗಿಡಗಳನ್ನು ಹುಲುಸಾಗಿ ಬೆಳೆಯಲಾರಂಭಿಸಿದ. ಅಲ್ಲಿಯೇ ನೆಲೆಯೂರಿದ ಮಾರ್ಷ್ ಚಹಾ ಗಿಡಗಳನ್ನು ಬೆಳೆಸುತ್ತಾ, ತೋಟವನ್ನು ವಿಸ್ತರಿಸುತ್ತಾ ಸಮೃದ್ಧಗೊಳಿಸಿದ. ಇವನ ಮೂಲಕ ಚಹಾ ಗಿಡಗಳು ವಾಲ್‌ರೈನಲ್ಲಿ ನೆಲೆಯೂರಿ ಅಲ್ಲಿನ ದುರಂತಕ್ಕೆ ಮುನ್ನುಡಿ ಬರೆದವು.

೨. ಅಂತಾರಾಷ್ಟ್ರೀಯ ವಿದ್ಯಮಾನಗಳಿಂದಾಗಿ ವಾಲ್ ಪರೈಗೆ ಒದಗಿದ ಸಮಸ್ಯೆಗಳೇನು?

ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ಶ್ರೀಮಂತ ಪ್ರದೇಶವೆಂದು ಗುರುತಿಸಿಕೊಂಡಿದ್ದ ವಾಲ್‌ಪರೈ ಅಂತಾರಾಷ್ಟ್ರೀಯ ವಿದ್ಯಮಾನಗಳಿಂದ ತತ್ತರಿಸುವಂತಾಯಿತು. ಈ ಅಂತಾರಾಷ್ಟ್ರೀಯ ವಿದ್ಯಮಾನಗಳು ವಾಲ್‌ಪರೈನ ಆರ್ಥಿಕ ಸ್ಥಿತಿಗೆ ಕುತ್ತು ತಂದವು. ಮುಖ್ಯವಾಗಿ ವಿಶ್ವಮಾರುಕಟ್ಟೆಯಲ್ಲಿ ಚಹಾ ಬೇಡಿಕೆ ಕುಸಿದು, ರಫ್ತು ಇಳಿಮುಖಗೊಂಡು ಚಹಾ ತೋಟಗಳು ನಷ್ಟದ ಹಾದಿ ಹಿಡಿದವು. ಇಂತಹ ಪರಿಸ್ಥಿತಿಯಲ್ಲಿ ಬದುಕುಳಿಯಲು ಚಹಾ ತೋಟದ ಮಾಲೀಕರು ಜನರಿಗೆ ಸಂಬಳ ಕೊಡಲಾಗದೆ ಯಂತ್ರಗಳನ್ನು ಅವಲಂಬಿಸಿದ ಕಾರಣ, ದಿನಗೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು, ಬೀದಿಗಿಳಿದು ಹೋರಾಟ ಮಾಡುವಂತಾಯಿತು.

೩. ಸಿಂಹಬಾಲದ ಕೋತಿಗಳು ಮತ್ತು ಹಾಡುಹಕ್ಕಿಗಳಿಗಾದ ಆನಾನುಕೂಲಗಳಾವುವು? ವಿವರಿಸಿ.

ಅಭಿವೃದ್ಧಿ ಹೆಸರಿನಲ್ಲಿ ವಾಲ್‌ಪರೈನ ಸೊಬಗು, ಅರಣ್ಯ ಸಂಪತ್ತು ನಾಶವಾಗುವುದರ ಜೊತೆಗೆ ಅಲ್ಲಿನ ಜೀವಸಂಕುಲಕ್ಕೆ ಅಪಾರ ಹಾನಿಯಾಯಿತು. ಕಾಲಾಂತರದಿಂದ ಈ ಕಾಡಿನಲ್ಲಿ ವಾಸಿಸಿ, ಸ್ವಚ್ಛಂದವಾಗಿ ಬದುಕುತ್ತಿದ್ದ ಸಿಂಹಬಾಲದ ಕೋತಿಗಳ ನೆಲೆ ಧ್ವಂಸವಾಯಿತು. ಅವುಗಳ ಸಂಖ್ಯೆ ಕ್ಷೀಣಿಸಿ ವಂಶನಾಶದ ಅಂಚಿಗೆ ತಲುಪಿ ಕೆಂಪುಪಟ್ಟಿಗೆ ಸೇರಲ್ಪಟ್ಟವು. ವೃಕ್ಷವಾಸಿಗಳಾದ ಇವು ರಸ್ತೆ ದಾಟುವಾಗ ವಾಹನಗಳಡಿ ಸಿಕ್ಕಿ ಅಂಗವಿಕಲಗೊಂಡವು. ಆಹಾರ ಒದಗಿಸುತ್ತಿದ್ದ ವೃಕ್ಷಗಳ ಆಸರೆ ತಪ್ಪಿ ಅನಾಥವಾದವು. ಸ್ವಚ್ಛ ನೀರಿನಲ್ಲಿ ಬದುಕುತ್ತಿದ್ದ ಹಾಡುಹಕ್ಕಿಗಳು (ವಿಷಲಿಂಗ್ ಥ್ರಷ್) ಕೊಳಚೆ ನೀರಿನ ಚರಂಡಿಗಳಲ್ಲಿ ನೆಲೆಸುವಂತಾಗಿದೆ. ಜಲಮಾಲಿನ್ಯ ಅವುಗಳ ಬದುಕಿಗೆ ಮುಳುವಾಗಿದೆ.

೪. ಅಭಿವೃದ್ಧಿ ತರುವ ಪ್ರಾಕೃತಿಕ ನಾಶದ ಸ್ವರೂಪವನ್ನು ಪಠ್ಯದ ಹಿನ್ನಲೆಯಲ್ಲಿ ಚರ್ಚಿಸಿ

ಸ್ವಾತಂತ್ರೋತ್ತರ ಭಾರತದ ಸಂದರ್ಭದಲ್ಲಿ ಮಾರ್ಷ್‌ನ ಚಹಾ ತೋಟದ ಯಶಸ್ಸಿನಿಂದ ಪ್ರೇರೇಪಿತರಾದ ಭಾರತದ ಆಗ್ರಗಣ್ಯ ಕೈಗಾರಿಕೋದ್ಯಮಿಗಳು ವಾಲ್‌ಪರೈಗೆ ಲಗ್ಗೆಯಿಟ್ಟರು. ಇವರುಗಳಿಂದ ಕಾಡಿನ ಗರ್ಭಪಾತ ಆರಂಭಗೊಂಡಿತು. ಗಗನಚುಂಬಿ ಮರಗಳು ನೆಲಕ್ಕುರುಳಿದವು. ಮರದ ದಿಮ್ಮಿಗಳಿಂದ ಲಾಭ ಪಡೆಯಲು ಗುತ್ತಿಗೆದಾರರು ಬಂದರು. ಜನರ ವ್ಯಾಪಾರಿ ಓಡಾಟದ ಕಾರಣದಿಂದ ಕಾಡಿನ ಮಧ್ಯೆ ರಸ್ತೆ ನಿರ್ಮಾಣಗೊಂಡು ಹೊಗೆಯುಗುಳುವ, ಗಡಗಡ ಸದ್ದು ಮಾಡುವ ಲಾರಿ, ಟ್ರಾಕ್ಟರ್‌ಗಳು ದಾಳಿಯಿಟ್ಟವು. ಕಾಡಿನ ನೀರವತೆ ನಾಶವಾಗಿ, ಕಾಡು ಮಣ್ಣುಪಾಲಾಯಿತು. ಹೀಗೆ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ನಾಶವಾಯಿತು.

ಹೆಚ್ಚುವರಿ ಪ್ರಶ್ನೆಗಳು:

೫. ಹದಿನೆಂಟನೇ ಶತಮಾನದ ಅಂತ್ಯದಲ್ಲಿದ್ದ ವಾಲ್‌ ಪರೈಯನ್ನು ಚಿತ್ರಿಸಿರಿ.

ಹದಿನೆಂಟನೇ ಶತಮಾನದ ಅಂತ್ಯದಲ್ಲಿ ವಾಲ್‌ರೈಗೆ ಈ ಹೆಸರೇ ಇರಲಿಲ್ಲ. ಅನನ್ಯ ಜೀವಸಂಕುಲಗಳಿಂದ ಸಮೃದ್ಧ ವಾಗಿದ್ದ ಪಶ್ಚಿಮಘಟ್ಟ ಶ್ರೇಣಿಯ ಒಂದು ದಟ್ಟ ಅರಣ್ಯ ಪ್ರದೇಶವಿದಾಗಿತ್ತು. ಗಗನಚುಂಬಿ ಮರಗಳ ಮೇಲ್ಪಾವಣಿಯನ್ನು ಭೇದಿಸಿ ಭೂಸ್ಪರ್ಶ ಮಾಡಲು ಸೂರ್ಯಕಿರಣಗಳೂ ಸೆಣಸಬೇಕಾದಂತಹ ದಟ್ಟವಾದ ಕಾಡು, ನಡುನಡುವೆ ಹುಲ್ಲುಗಾವಲುಗಳ ಆನಂತ ಬಯಲು, ಅದರ ಏಕಾತಾನತೆ ಮುರಿಯುವ ಶೋಲಾ ಕಾಡುಗಳು, ಪರ್ವತ ಶ್ರೇಣಿಗಳ ನಡುವೆ ಅಕ್ಷಾಂಶ-ರೇಖಾಂಶಗಳನ್ನು ಬರೆಯುವಂತೆ ಹರಿಯುತ್ತಿದ್ದ ಹಳ್ಳ-ಕೊಳ್ಳಗಳು, ಕಗ್ಗತ್ತಲ ಖಂಡವಾದ ಆಫ್ರಿಕಾವನ್ನು ನೆನಪಿಸುವಂತಿದ್ದ ವಾಲ್‌ಪರೈ ಆಗ ಹೊರಗಿನ ಜನಕ್ಕೆ ಪರಿಚಯವಿಲ್ಲದಂತೆ ನಿಬಿಡ, ನೀರವತೆಯಿಂದ ಕಂಗೊಳಿಸುತ್ತಿತ್ತು.

ಭಾಷಾಭ್ಯಾಸ


೧. ಕಿರುಹಾದಿ, ಹಸಿರುಕಂಬಳಿ, ಸಣ್ಣಕುರುಹು, ಹಾಡುಹಕ್ಕಿ, ಶುದ್ಧನೀರು, ಸ್ವಚ್ಛಸಮುದ್ರ – ಈ ಪದಗಳಲ್ಲಿರುವ ಗುಣವಾಚಕಗಳನ್ನು ಗುರುತಿಸಿ.

ಗುಣವಾಚಕ

ಕಿರುಹಾದಿ – ಕಿರು

ಸಣ್ಣ ಕುರುಹು – ಸಣ್ಣ

ಶುದ್ಧನೀರು – ಶುದ್ಧ

ಹಸಿರು ಕಂಬಳಿ – ಹಸಿರು

ಹಾಡುಹಕ್ಕಿ – ಹಾಡು

ಸ್ವಚ್ಛ ಸಮುದ್ರ – ಸ್ವಚ್ಛ

೨. ಆಗಮಿಸಿದ, ಆನ್ವೇಷಿಸುತ್ತಾ, ಹುಡುಕುವನು, ಹರಿಯುತ್ತಿದ್ದ – ಈ ಕ್ರಿಯಾಪದಗಳ ಕಾಲವನ್ನು ಸೂಚಿಸಿ.

ಆಗಮಿಸಿದ – ಭೂತಕಾಲ

ಹುಡುಕುವನು – ಭವಿಷ್ಯತ್ ಕಾಲ

ಅನ್ವೇಷಿಸುತ್ತಾ – ವರ್ತಮಾನಕಾಲ

ಹರಿಯುತ್ತಿದ್ದ – ವರ್ತಮಾನಕಾಲ

೩. ಮಾರ್ಷ್‌ಗೆ, ಜಾಡನ್ನು, ಗುಡಿಸಿಲಿನಿಂದ, ಮುಖದಲ್ಲಿ, ಕೋತಿಗಳ – ಈ ಪದಗಳಲ್ಲಿ ಬಳಕೆಯಾಗಿರುವ ವಿಭಕ್ತಿ ಪ್ರತ್ಯಯಗಳನ್ನು ಹೆಸರಿಸಿ.

ಮಾರ್ಷ್‌ಗೆ – ಚತುರ್ಥಿ ವಿಭಕ್ತಿ

ಜಾಡನ್ನು – ದ್ವಿತೀಯಾ ವಿಭಕ್ತಿ

ಗುಡಿಸಲಿನಿಂದ – ತೃತೀಯಾ ವಿಭಕ್ತಿ

ಮುಖದಲ್ಲಿ – ಸಪ್ತಮೀ ವಿಭಕ್ತಿ

ಕೋತಿಗಳ – ಷಷ್ಠಿ ವಿಭಕ್ತಿ.

೪) ಹೆಜ್ಜೆಹೆಜ್ಜೆ, ಸಹಸ್ರಸಹಸ್ರ, ಮೆಲ್ಲಮೆಲ್ಲನೆ – ಈ ದ್ವಿರುಕ್ತಿಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

ಹೆಜ್ಜೆಹೆಜ್ಜೆ – ಜೀವನದಲ್ಲಿ ಹೆಜ್ಜೆಹೆಜ್ಜೆಗೂ ಕಷ್ಟಗಳು ಎದುರಾಗುತ್ತವೆ.

ಸಹಸ್ರಸಹಸ್ರ – ಗಾಂಧೀಜಿಯವರ ವಿಚಾರಧಾರೆ ಸಹಸ್ರ ಸಹಸ್ರ ಜನರನ್ನು ತಲುಪಿದ್ದವು.

ಮೆಲ್ಲಮೆಲ್ಲನೆ – ದೂರದ ನಡಿಗೆಯ ಗುರಿಯನ್ನು ಮೆಲ್ಲಮೆಲ್ಲನೆ ಆರಂಭಿಸಬೇಕು.

೫) ಶೋಧಿಸು, ಕಳೆದುಹೋಗು, ಆಸ್ವಾದಿಸು, ಹಾಡುವುದು – ಈ ಕ್ರಿಯಾಪದಗಳ ‘ಧಾತು’ ಗುರುತಿಸಿ.

ಶೋಧಿಸು – ಶೋಧ

ಅಸ್ವಾದಿಸು – ಆಸ್ವಾದ

ಕಳೆದುಹೋಗು – ಕಳೆ

ಹಾಡುವುದು – ಹಾಡು.

ಲೇಖನದ ಸಾರಾಂಶ ಮತ್ತು ವಿಮರ್ಶೆ

‘ವಾಲ್‌ಪರೈ: ಅಭಿವೃದ್ಧಿ ತಂದ ದುರಂತ’ ಎಂಬ ಈ ಲೇಖನವನ್ನು ಕೃಪಾಕರ ಸೇನಾನಿ ಮತ್ತು ಕೆ. ಪುಟ್ಟಸ್ವಾಮಿಯವರ ‘ಜೀವಜಾಲ’ ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಮಾನವ ತನ್ನ ಕಲ್ಯಾಣಕ್ಕಾಗಿ ನಡೆಸುವ ಅಭಿವೃದ್ಧಿ ಕಾವ್ಯಗಳೆಲ್ಲ ಹೇಗೆ ದುರಂತಕ್ಕೆ ಮೂಲವಾಗುತ್ತದೆಂಬ ಸುಡುಸತ್ಯವನ್ನು ಲೇಖಕರು ಇಲ್ಲಿ ತೆರೆದಿಟ್ಟಿದ್ದಾರೆ. ನಾಗರೀಕತೆಯ ಬೆಳವಣಿಗೆಯು ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ನಾಶಮಾಡುವ, ಆ ಮೂಲಕ ಜೀವಸಂಕುಲದ ದುರಂತಕ್ಕೆ ನಾಂದಿ ಹಾಡುವ ವ್ಯಂಗ್ಯವನ್ನು ಲೇಖಕರು ವಾಲ್‌ರೆ ಅರಣ್ಯದ ದುಃಸ್ಥಿತಿಯ ಉದಾಹರಣೆಯೊಂದಿಗೆ ಮೂಡಿಸಿದ್ದಾರೆ.

ವಾಲ್‌ಪರೈ ಇಡೀ ಪಶ್ಚಿಮ ಘಟ್ಟಗಳಲ್ಲೇ ಅತ್ಯಂತ ಶ್ರೀಮಂತವಾಗಿದ್ದ ವಲಯ. ಸೂರನ ಕಿರಣ ಕೂಡ ನೆಲಕ್ಕೆ ಸೋಕದಷ್ಟು ದಟ್ಟವಾಗಿತ್ತು ಇಲ್ಲಿನ ಅರಣ್ಯ ಪ್ರದೇಶ, ಅಲ್ಲಿನ ಪ್ರಕೃತಿ ರಮ್ಮತೆಯು ಆಫ್ರಿಕಾದ ಕಗ್ಗತ್ತಲ ಖಂಡವನ್ನು ನೆನಪಿಗೆ ತರುವಂತಿತ್ತು. ಕೊಯಮುತ್ತೂರಿನ ಹತ್ತಿರದ ಈ ಪ್ರದೇಶ ಸಾಹಸಿಗರಿಗೆ ಸವಾಲೊಡ್ಡಿ ನಿಂತು ನಿಗೂಢವೆನಿಸಿತ್ತು, ಆದರೆ 1890ರಲ್ಲಿ ಕಾರ್ವೆರ್ ಮಾರ್ಷ್ ಎಂಬ ಬ್ರಿಟಿಷ್ ಅಧಿಕಾರಿ ಈ ನಿಗೂಢವನ್ನು ಭೇದಿಸುವ ಸಾಹಸ ಮಾಡಿದ. ಕುದುರೆಯೇರಿ ಅಲ್ಲಿಗೆ ಬಂದ ಆತ ಮೊದಲಿಗೆ ದಿಕ್ಕು ತಪ್ಪಿ ಪರಿತಪಿಸಿದರೂ ಪೂಣಚ್ಚಿ ಎಂಬ ಆದಿವಾಸಿಗಳ ಗೆಳೆತನ ಬೆಳೆಸಿ, ಉಳಿದ ಆದಿವಾಸಿಗಳ ಸಂಪರ್ಕ ಸಾಧಿಸಿದ. ಮಾತ್ರವಲ್ಲ ಅವನ ನೆರವಿನಿಂದ ಇಡೀ ವಾಲ್‌ರೆ ಪ್ರದೇಶವನ್ನು ಪರಿಚಯಿಸಿಕೊಂಡು, ಈ ನಿಬಿಡ ಅರಣ್ಯದಲ್ಲೇ ನೆಲೆಸಲು ನಿರ್ಧರಿಸಿದನು.

ಮಾರ್ಷ್ ವಾಲ್‌ಪರೈಯಲ್ಲಿ ಚಹಾ ಗಿಡಗಳನ್ನು ತಂದು ನೆಟ್ಟಿದ್ದೇ ಅಲ್ಲಿನ ದುರಂತಕ್ಕೆ ಬೀಜವಾಯಿತೆಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಹೊಸಜಾಗದಲ್ಲಿ ಅವನು ನೆಟ್ಟ ಚಹಾ ಗಿಡಗಳು ಹುಲುಸಾದ ತೋಟವಾಗಿ ಬೆಳೆಯಿತು. ಆದರೆ ಮಾರ್ಷ್‌ನ ಟೀತೋಟದಯಶಸ್ಸು ಸ್ವಾತಂತ್ಯೋತ್ತರ ಭಾರತದ ಆಗ್ರಗಣ್ಯಕೈಗಾರಿಕೋದ್ಯಮಿಗಳನ್ನು ಕೈ ಬೀಸಿ ಕರೆಯಿತು. ಅದರ ಪರಿಣಾಮವಾಗಿ ಗಗನಚುಂಬಿ ಮರಗಳೆಲ್ಲ ನೆಲಕ್ಕುರುಳಿ, ಉದ್ಯಮಿಗಳ ನೆಲೆವೀಡಾಯಿತು. ಈಗ ಇಡೀ ವಾಲ್‌ರೆ ಅರಣ್ಯ ಪ್ರದೇಶ ಚಹಾ ತೋಟವಾಗಿ ಮಾರ್ಪಟ್ಟು ಹಸಿರು ಕಂಬಳಿ ಹೊದ್ದು ಮಲಗಿದೆ. ಮನುಷ್ಯ ಪ್ರಕೃತಿಯ ಮೇಲೆ ನಡೆಸಿದ ಅತ್ಯಾಚಾರವಿದು.

ಅಭಿವೃದ್ಧಿ ಹೆಸರಿನಲ್ಲಿ ವಾಲ್‌ಪರೈಗೆ ಕಾಲಿಟ್ಟಿ ನಾಗರಿಕ ಪ್ರಪಂಚ ಅಲ್ಲಿನ ಜೀವಸಂಕುಲವನ್ನು ವಿನಾಶದ ಅಂಚಿಗೆ ತಳ್ಳಿದವು. ಅಲ್ಲಿನ ಸಿಂಹ ಬಾಲದ ವಾನರಗಳು ನೆಲೆ ಕಳೆದುಕೊಂಡು, ಅವುಗಳ ಸಂತತಿ ಕ್ಷೀಣಿಸತೊಡಗಿತು. ಈಗ ನೆಲೆ ತಪ್ಪಿರುವ 30 ಸಿಂಹ ಬಾಲದ ಕೋತಿಗಳು ವಾಲ್‌ ಪರೈನ ಪುದುತೋಟಂ ಎಂಬ ತೋಟದಲ್ಲಿ ಆಶ್ರಯ ಪಡೆದಿವೆ. ವೃಕ್ಷವಾಸಿಗಳಾದ ಈ ಕೋತಿಗಳು ಜೀವಿಸಲು ವೃಕ್ಷಗಳೇ ಇಲ್ಲವಾಗಿದೆ. ನೆಲದ ಮೇಲೆ ಓಡಾಡುವ ಅಭ್ಯಾಸವಿಲ್ಲದ ಈ ಕೋತಿಗಳು ಡಾಂಬರ್ ರಸ್ತೆ ದಾಟುವಾಗ ವಾಹನಕ್ಕೆ ಸಿಕ್ಕು ಅಂಗವಿಕಲಗೊಂಡಿವೆ. ಅವುಗಳನ್ನು ಬೇರೆಡೆ ಸಾಗಿಸುವ ಉಪಾಯ ಕಾಣದೆ ವಿಜ್ಞಾನಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಕೈಕಟ್ಟಿ ಕೂತಿವೆ. ವಾಣಿಜ್ಯ ದೃಷ್ಟಿಯಿಂದ ಶ್ರೀಮಂತವೆನಿಸಿದ್ದ ವಾಲ್‌ರೆ ಪ್ರದೇಶ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಹಾ ಬೇಡಿಕೆ ಕುಸಿದ ಪರಿಣಾಮದಿಂದ ಆರ್ಥಿಕ ಮುಗ್ಗಟ್ಟನ್ನೆದಿರುಸುತ್ತಿದೆ. ಅಲ್ಲಿನ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.

ಈ ಎಲ್ಲಾ ಕಾರಣಗಳಿಂದ ವಾಲ್‌ಪರೈ ತನ್ನ ವೈಭವವನ್ನು ಕಳೆದುಕೊಂಡು ಕಳಾಹೀನವಾಗಿದೆ. ನೀರು ಹರಿವ ಜುಳುಜುಳು ಸದ್ದು, ಹಕ್ಕಿಗಳ ಕಲರವಕ್ಕೆ ಬದಲಾಗಿ ಯಂತ್ರಗಳ ಕರ್ಕಶ ಸದ್ದು ತುಂಬಿಕೊಂಡಿದೆ. ಒಂದು ಕಾಲಕ್ಕೆ ದುರ್ಗಮ ಅರಣ್ಯವಾಗಿದ್ದ ಇಲ್ಲಿ ಲಕ್ಷಕ್ಕೂ ಮೀರಿ ಜನಸಂಖ್ಯೆ ತಮ್ಮದೇ ಸಮಸ್ಯೆಗಳಿಂದ ಜೀವಿಸುತ್ತಿದ್ದಾರೆ. ಮನುಷ್ಯ ಕಾಡಿನೊಳಗೆ ಕಾಲಿಟ್ಟರೆ ಏನೆಲ್ಲ ದುರಂತ ಸಂಭವಿಸುತ್ತದೆಂಬುದಕ್ಕೆ ವಾಲ್‌ಪರೈ ಪ್ರದೇಶ ಜೀವಂತ ಉದಾಹರಣೆಯಾಗಿದೆ. ಆದರೆ ಅಲ್ಲಿನ ಹಾಡುಹಕ್ಕಿಗಳು ಮಾತ್ರ ಹಾಡುವುದನ್ನು ಮರೆತಿಲ್ಲವೆಂದು ಲೇಖಕರು ಹೇಳಿದ್ದಾರೆ.

ಶಬ್ದಾರ್ಥ: ದುರಂತ – ಅಪಾಯ; ಪರಾಕಾಷ್ಠೆ – ತುತ್ತತುದಿ; ವಿರಾಟ್ – ವಿಶ್ವರೂಪ; ಪತನ – ಅವನತಿ; ಸಂಕುಲ – ಗುಂಪು. ಸಮೂಹ; ರೋಚಕ –ಸುಖಕರವಾದ, ಹಿತಕಾರಿ; ಅಧಿಪತ್ಯ – ಯಜಮಾನಿಕೆ, ಒಡೆತನ; ನಿಬಿಡ-ದಟ್ಟವಾದ, ಸಾಂದ್ರವಾದ; ಸಾಂದ್ರತೆ-ದಟ್ಟಣೆ, ಎಡ-ಸ್ಥಳ, ಜಾಗ; ಬಿಡಾರ -ತ ೦ಗುವ ಸ್ಥಳ; ನೀರವತೆ – ಮೌನ, ನಿಶ್ಯಬ್ದ; ಕುಮ್ಮಕ್ಕು – ಸಹಾಯ, ಒತ್ತಾಸೆ; ಏಕಸ್ವಾಮ್ಯತೆ – ಒಬ್ಬರ ಒಡೆತನದಲ್ಲಿರುವ ಕುರುಹು – ಗುರುತು; ಕ್ಷೀಣಿಸು – ಸೊರಗು, ಕ್ಷಯಿಸು; ಅನುರಣಿಸು – ಅನುಸರಿಸಿ ಮುಂದುವರಿದ ಧ್ವನಿ; ಅವನತಿ – ಕೀಳುದೆಸೆ.

ಟಿಪ್ಪಣಿ

೧. ವಾಲ್‌ಪರೈ:

ಇದು ತಮಿಳುನಾಡಿಗೆ ಸೇರಿದ ಕಣಿವೆ ಪ್ರದೇಶ, ‘ಪರೈ’ ಎಂದರೆ ಬಂಡೆಕಲ್ಲು. ಬಂಡೆಗಳಿಂದಾವೃತವಾದ ಕಾಡನ್ನು ತಮಿಳಿನಲ್ಲಿ ವಾಲ್‌ಪರೈ ಎನ್ನುವರು. ಮದುಮಲೈ ಕಾಡಿನ ಸೆರಗಿನಲ್ಲಿರುವ ಒಂದು ಸ್ಥಳ, ಸೂರ್ಯನ ಕಿರಣ ಪ್ರವೇಶಿಸಲೂ ಕಷ್ಟವೆನ್ನುವಷ್ಟು ದಟ್ಟವಾಗಿದ್ದ ಈ ಅರಣ್ಯ ಪ್ರದೇಶವು ಅಭಿವೃದ್ಧಿಯ ಹೆಸರಿನಲ್ಲಿ ಬರಡಾಗಿ ಹೋಗಿದೆ.

ಖಾಲಿ ಬಿಟ್ಟ ಸ್ಥಳಗಳನ್ನು ಭರ್ತಿ ಮಾಡಿರಿ:

೧. ವಾಲ್‌ಪರೈಗೆ ಬಂದ ಬ್ರಿಟಿಷ್ ಪ್ರಜೆ _________________

ಕಾರ್ವೆರ್ ಮಾರ್ಷ್

೨. ಮಾರ್ಷನ್ ಜೊತೆಗಾರನ ಹೆಸರು______________

ಪೂಣಚ್ಚಿ

೩. ಕೆಂಪು ಪಟ್ಟಿಗೆ ಸೇರಿದ ಪ್ರಾಣಿ_______________

ಸಿಂಹಬಾಲದ ಕೋತಿ

೪. ಮಾರ್ಷ್ ಗೆ ಪರಿಚಯವಾದ ಆದಿವಾಸಿ_______________

ಪೂಣಚ್ಚಿ

೫. ಕಗ್ಗತ್ತಲ ಖಂಡ ___________

ದಕ್ಷಿಣ ಆಫ್ರಿಕಾ

೬. ಬದುಕುಳಿಯುವ ಛಲತೊಟ್ಟ ಹಾಡುಹಕ್ಕಿ____________

ವಿಷಲಿಂಗ್ ಥ್ರಷ್

೭. ವಾಲ್‌ಪರೈ ಮಧ್ಯದಲ್ಲಿರುವ ತೋಟ___________

ಪುದುತೋಟಂ

೮. ಸಿಂಹಬಾಲದ ಕೋತಿಗಳಿಗೆ_______________ ಕರುಣಿಸಲೂ ಕಾನೂನಿನಲ್ಲಿ ಅವಕಾಶವಿಲ್ಲ.

ದಯಾಮೃತ್ಯು

೯. ವಾಲ್‌ಪರೈ ಅರಣ್ಯ_________________ಕಾಡಿನ ನಡುವೆ ಇದೆ.

ಪಶ್ಚಿಮ ಘಟ್ಟದ

೧೦. ವಾಲ್‌ಪರೈನ ದುರಂತದ ಮೂಲ ಬೀಜಗಳು____________ರೂಪದಲ್ಲಿ ಬಂದವು.

ಚಹಾ ಗಿಡಗಳ

೧೨. ವಾಲ್‌ಪರೈ ಈಗ_____________ಮಲಗಿದಂತಿದೆ.

ಹಸಿರು ಕಂಬಳಿ ಹೊದ್ದು

Leave a Comment